<p>ಮಡಿಕೇರಿ: ಮಹಿಳೆಯರು ಮನಸ್ಸು ಮಾಡಿದಾಗ ಮಾತ್ರ ಸಮಾಜದಲ್ಲಿರುವ ವರದಕ್ಷಿಣೆಯಂತಹ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಲು ಸಾಧ್ಯ ಎಂದು ನ್ಯಾಷನಲ್ ವಿಮೆನ್ ಫ್ರಂಟ್ನ ರಾಜ್ಯ ಕಾರ್ಯದರ್ಶಿ ಫಾತಿಮ ನಸೀಮಾ ಹೇಳಿದರು. <br /> <br /> ನಗರದ ಕಮ್ಯುನಿಟಿ ಹಾಲ್ನಲ್ಲಿ ಬುಧವಾರ ನ್ಯಾಷನಲ್ ವಿಮೆನ್ ಫ್ರಂಟ್ ಹಮ್ಮಿಕೊಂಡ ವರದಕ್ಷಿಣೆ ವಿರೋಧಿ ಜನಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು. <br /> <br /> ಇಸ್ಲಾಂ ಧರ್ಮದಲ್ಲಿ ವರದಕ್ಷಿಣೆ ಎನ್ನುವುದು ಇಲ್ಲ. ಇದು ಹೊರಗಡೆಯಿಂದ ಬಂದಿರುವಂತಹ ಅನಿಷ್ಟ ಪದ್ಧತಿಯಾಗಿದೆ.<br /> <br /> ಇಂತಹ ಅನಿಷ್ಟ ಪದ್ಧತಿಯಿಂದಾಗಿ ಬಡ ಕುಟುಂಬಗಳ ಯುವತಿಯರಿಗೆ ಮದುವೆ ಹೊರೆಯಾಗಿ ಪರಿಣಮಿಸಿದೆ. ಇದರ ವಿರುದ್ಧ ಪುರುಷರು- ಮಹಿಳೆಯರು ಎಲ್ಲರೂ ಸೇರಿ ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಎಂದು ಅವರು ಕರೆ ನೀಡಿದರು. <br /> <br /> ಮೂಲತಃ ಇಸ್ಲಾಂ ಧರ್ಮದಲ್ಲಿ ಹೆಣ್ಣಿಗೆ ಅತ್ಯಂತ ಎತ್ತರದ ಸ್ಥಾನ ನೀಡಲಾಗಿದೆ. ಆದರೆ, ಇಂದು ಹೆಣ್ಣನ್ನು ಸಮಾಜವು ಮಾರಾಟದ ವಸ್ತುವನ್ನಾಗಿ ನೋಡುತ್ತಿದೆ.<br /> <br /> ಸಿಮೆಂಟ್ ಕಂಪೆನಿಯೊಂದರ ಜಾಹೀರಾತಿನಲ್ಲಿಯೂ ಯುವತಿಯರನ್ನು ತೋರಿಸಲಾಗುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.<br /> <br /> ಸಭೆಯಲ್ಲಿ ಶಿಕ್ಷಕಿ ನಿಶಾತ್ ಸುಲ್ತಾನ್, ಫ್ರಂಟ್ನ ಕೊಡಗು ಜಿಲ್ಲಾ ಕಾರ್ಯದರ್ಶಿ ಜಾಕಿಯಾ, ಆಶಿಕಾ, ಮೈಮುನಾ, ಸೇರಿದಂತೆ ಇತರರು ಭಾಗವಹಿಸಿದ್ದರು. ಜನಜಾಗೃತಿ ಅಭಿಯಾನದಲ್ಲಿ ಹಲವು ಮಹಿಳೆಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಡಿಕೇರಿ: ಮಹಿಳೆಯರು ಮನಸ್ಸು ಮಾಡಿದಾಗ ಮಾತ್ರ ಸಮಾಜದಲ್ಲಿರುವ ವರದಕ್ಷಿಣೆಯಂತಹ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಲು ಸಾಧ್ಯ ಎಂದು ನ್ಯಾಷನಲ್ ವಿಮೆನ್ ಫ್ರಂಟ್ನ ರಾಜ್ಯ ಕಾರ್ಯದರ್ಶಿ ಫಾತಿಮ ನಸೀಮಾ ಹೇಳಿದರು. <br /> <br /> ನಗರದ ಕಮ್ಯುನಿಟಿ ಹಾಲ್ನಲ್ಲಿ ಬುಧವಾರ ನ್ಯಾಷನಲ್ ವಿಮೆನ್ ಫ್ರಂಟ್ ಹಮ್ಮಿಕೊಂಡ ವರದಕ್ಷಿಣೆ ವಿರೋಧಿ ಜನಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು. <br /> <br /> ಇಸ್ಲಾಂ ಧರ್ಮದಲ್ಲಿ ವರದಕ್ಷಿಣೆ ಎನ್ನುವುದು ಇಲ್ಲ. ಇದು ಹೊರಗಡೆಯಿಂದ ಬಂದಿರುವಂತಹ ಅನಿಷ್ಟ ಪದ್ಧತಿಯಾಗಿದೆ.<br /> <br /> ಇಂತಹ ಅನಿಷ್ಟ ಪದ್ಧತಿಯಿಂದಾಗಿ ಬಡ ಕುಟುಂಬಗಳ ಯುವತಿಯರಿಗೆ ಮದುವೆ ಹೊರೆಯಾಗಿ ಪರಿಣಮಿಸಿದೆ. ಇದರ ವಿರುದ್ಧ ಪುರುಷರು- ಮಹಿಳೆಯರು ಎಲ್ಲರೂ ಸೇರಿ ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಎಂದು ಅವರು ಕರೆ ನೀಡಿದರು. <br /> <br /> ಮೂಲತಃ ಇಸ್ಲಾಂ ಧರ್ಮದಲ್ಲಿ ಹೆಣ್ಣಿಗೆ ಅತ್ಯಂತ ಎತ್ತರದ ಸ್ಥಾನ ನೀಡಲಾಗಿದೆ. ಆದರೆ, ಇಂದು ಹೆಣ್ಣನ್ನು ಸಮಾಜವು ಮಾರಾಟದ ವಸ್ತುವನ್ನಾಗಿ ನೋಡುತ್ತಿದೆ.<br /> <br /> ಸಿಮೆಂಟ್ ಕಂಪೆನಿಯೊಂದರ ಜಾಹೀರಾತಿನಲ್ಲಿಯೂ ಯುವತಿಯರನ್ನು ತೋರಿಸಲಾಗುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.<br /> <br /> ಸಭೆಯಲ್ಲಿ ಶಿಕ್ಷಕಿ ನಿಶಾತ್ ಸುಲ್ತಾನ್, ಫ್ರಂಟ್ನ ಕೊಡಗು ಜಿಲ್ಲಾ ಕಾರ್ಯದರ್ಶಿ ಜಾಕಿಯಾ, ಆಶಿಕಾ, ಮೈಮುನಾ, ಸೇರಿದಂತೆ ಇತರರು ಭಾಗವಹಿಸಿದ್ದರು. ಜನಜಾಗೃತಿ ಅಭಿಯಾನದಲ್ಲಿ ಹಲವು ಮಹಿಳೆಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>