<p><strong>ಕೊಪ್ಪಳ: </strong>ಜಿಲ್ಲಾ ವಾರ್ತಾಧಿಕಾರಿ ಬಸವರಾಜ ಆಕಳವಾಡಿ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.<br /> ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ, ಬಸವರಾಜ ಆಕಳವಾಡಿ ಅವರ ನಿವೃತ್ತ ಜೀವನ ಸುಖ-ಸಂತೋಷದಿಂದ ತುಂಬಿರಲಿ ಎಂದು ಹಾರೈಸಿದರು.<br /> <br /> ನಂತರ, ಕೊಪ್ಪಳ ಮೀಡಿಯಾ ಕ್ಲಬ್, ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸವರಾಜ ಆಕಳವಾಡಿ ಅವರು, ತಮ್ಮ 34 ವರ್ಷಗಳ ಸೇವಾವಧಿಯ ದಿನಗಳನ್ನು ನೆನಪಿಸಿಕೊಂಡರು. <br /> <br /> ಪ್ರಭಾರ ವಾರ್ತಾಧಿಕಾರಿ ಬಿ.ವಿ.ತುಕಾರಾಂ, ಪತ್ರಕರ್ತರಾದ ಬಿ.ಎಸ್.ಪಾಟೀಲ, ಸೋಮರಡ್ಡಿ ಅಳವಂಡಿ, ಸಾದಿಕ್ ಅಲಿ, ಬಸವರಾಜ ಆಕಳವಾಡಿ ಪತ್ನಿ ಮಲ್ಲಿಕಾ ಆಕಳವಾಡಿ ವೇದಿಕೆ ಮೇಲೆ ಉಪಸ್ಥಿತರಿದ್ದರು.<br /> ಪತ್ರಕರ್ತರಾದ ಶರಣಪ್ಪ ಬಾಚಲಾಪೂರ, ಸಂತೋಷ ದೇಶಪಾಂಡೆ, ಎನ್.ಎನ್.ಮೂರ್ತಿ ಪ್ಯಾಟಿ, ದೋಡ್ಡೇಶ ಎಲಿಗಾರ, ಶರಣು ಹಂಪಿ, ಗಂಗಾಧರ ಬಂಡಿಹಾಳ, ನಾಭಿರಾಜ, ಸಿದ್ದಪ್ಪ ಹಂಚಿನಾಳ, ಹನುಮಂತ ಹಳ್ಳಿಕೇರಿ ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ: </strong>ಜಿಲ್ಲಾ ವಾರ್ತಾಧಿಕಾರಿ ಬಸವರಾಜ ಆಕಳವಾಡಿ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.<br /> ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ, ಬಸವರಾಜ ಆಕಳವಾಡಿ ಅವರ ನಿವೃತ್ತ ಜೀವನ ಸುಖ-ಸಂತೋಷದಿಂದ ತುಂಬಿರಲಿ ಎಂದು ಹಾರೈಸಿದರು.<br /> <br /> ನಂತರ, ಕೊಪ್ಪಳ ಮೀಡಿಯಾ ಕ್ಲಬ್, ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸವರಾಜ ಆಕಳವಾಡಿ ಅವರು, ತಮ್ಮ 34 ವರ್ಷಗಳ ಸೇವಾವಧಿಯ ದಿನಗಳನ್ನು ನೆನಪಿಸಿಕೊಂಡರು. <br /> <br /> ಪ್ರಭಾರ ವಾರ್ತಾಧಿಕಾರಿ ಬಿ.ವಿ.ತುಕಾರಾಂ, ಪತ್ರಕರ್ತರಾದ ಬಿ.ಎಸ್.ಪಾಟೀಲ, ಸೋಮರಡ್ಡಿ ಅಳವಂಡಿ, ಸಾದಿಕ್ ಅಲಿ, ಬಸವರಾಜ ಆಕಳವಾಡಿ ಪತ್ನಿ ಮಲ್ಲಿಕಾ ಆಕಳವಾಡಿ ವೇದಿಕೆ ಮೇಲೆ ಉಪಸ್ಥಿತರಿದ್ದರು.<br /> ಪತ್ರಕರ್ತರಾದ ಶರಣಪ್ಪ ಬಾಚಲಾಪೂರ, ಸಂತೋಷ ದೇಶಪಾಂಡೆ, ಎನ್.ಎನ್.ಮೂರ್ತಿ ಪ್ಯಾಟಿ, ದೋಡ್ಡೇಶ ಎಲಿಗಾರ, ಶರಣು ಹಂಪಿ, ಗಂಗಾಧರ ಬಂಡಿಹಾಳ, ನಾಭಿರಾಜ, ಸಿದ್ದಪ್ಪ ಹಂಚಿನಾಳ, ಹನುಮಂತ ಹಳ್ಳಿಕೇರಿ ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>