<p><strong>ಪಡುಬಿದ್ರಿ: </strong>ನಿರೀಕ್ಷೆಗಿಂತ ಸುಲಭವಾಗಿ ಹರ್ಯಾಣದ ಎಚ್ಎಸ್ಐಡಿಸಿ ತಂಡವನ್ನು ನೇರ ಸೆಟ್ಗಳಲ್ಲಿ ಹಿಮ್ಮೆಟ್ಟಿಸಿದ ಚೆನ್ನೈನ ಇಂಡಿಯನ್ ಓವರ್ಸೀಸ್ ಬ್ಯಾಂಕ್ ತಂಡ, ಇಲ್ಲಿಗೆ ಸಮೀಪದ ಎಲ್ಲೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಆಹ್ವಾನ ವಾಲಿಬಾಲ್ ಟೂರ್ನಿಯ ಫೈನಲ್ ತಲುಪಿತು.<br /> <br /> ಎಲ್ಲೂರು ಶ್ರೀವಿಶ್ವೇಶ್ವರ ದೇವಸ್ಥಾನದ ಮುಂಭಾಗ, ಯುವಕ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಶನಿವಾರ ಬ್ಯಾಂಕ್ ತಂಡದವರು 25-20, 25-20, 25-23ರಲ್ಲಿ ಹರ್ಯಾಣ ವಿರುದ್ಧ ಗೆಲ್ಲಲು ಒಂದು ಗಂಟೆ ತೆಗೆದುಕೊಂಡರು. ರಾಷ್ಟ್ರೀಯ ತಂಡದ ಆಟಗಾರ ಉಕ್ಕರಪಾಂಡ್ಯನ್ `ಸೆಟ್ಟರ್~ ಪಾತ್ರದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಹರ್ಯಾಣ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ (ಎಚ್ಎಸ್ಐಡಿಸಿ) ತಂಡದ ಪರ ಸುರ್ಜಿತ್ ಸಿಂಗ್ ಗಮನ ಸೆಳೆದರು.<br /> <br /> ಕೆಎಸ್ಪಿ ಮುನ್ನಡೆ: ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಬೆಂಗಳೂರಿನ ಕರ್ನಾಟಕ ಪೊಲೀಸ್ ತಂಡ 25-20, 27-29, 22-25, 25-21, 15-13ರಲ್ಲಿ 3-2 ಸೆಟ್ಗಳಿಂದ ಬೆಂಗಳೂರಿನ ಬಿಎಸ್ಎನ್ಎಲ್ ತಂಡವನ್ನು ಸೋಲಿಸಿ ಸೆಮಿಫೈನಲ್ ತಲುಪಿತು.<br /> <br /> ಪಂದ್ಯಾವಳಿಯಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ಕರ್ನಾಟಕ ಯೂತ್ ತಂಡ, `ಬಿ~ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಕೊನೆಗೂ ಜಯದ ರುಚಿಕಂಡಿತು. ಎಲ್ಲಾ ಪಂದ್ಯಗಳಲ್ಲಿ ಹೋರಾಟ ತೋರಿದ್ದ ಕರ್ನಾಟಕ ಯೂತ್ತಂಡ 28-26, 19-25, 26-22, 22-25, 16-14 ಅಂಕಗಳಿಂದ ಮುಂಬೈಯ ಆರ್ಸಿಎಫ್ ತಂಡವನ್ನು ಸೋಲಿಸಿತು. ಕರ್ನಾಟಕದ ವಿನಾಯಕ್, ಆರ್ಸಿಎಫ್ನ ವಿಕ್ಕಿ ಪೂಜಾರಿ ಅವರ ಆಟ ಪ್ರೇಕ್ಷಕರ ಮೆಚ್ಚಗೆಗೆ ಪಾತ್ರವಾಯಿತು. ಈ ಪಂದ್ಯ ಎರಡೂ ತಂಡಗಳಿಗೆ ಅಷ್ಟೇನೂ ಮಹತ್ವದ್ದಾಗಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಡುಬಿದ್ರಿ: </strong>ನಿರೀಕ್ಷೆಗಿಂತ ಸುಲಭವಾಗಿ ಹರ್ಯಾಣದ ಎಚ್ಎಸ್ಐಡಿಸಿ ತಂಡವನ್ನು ನೇರ ಸೆಟ್ಗಳಲ್ಲಿ ಹಿಮ್ಮೆಟ್ಟಿಸಿದ ಚೆನ್ನೈನ ಇಂಡಿಯನ್ ಓವರ್ಸೀಸ್ ಬ್ಯಾಂಕ್ ತಂಡ, ಇಲ್ಲಿಗೆ ಸಮೀಪದ ಎಲ್ಲೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಆಹ್ವಾನ ವಾಲಿಬಾಲ್ ಟೂರ್ನಿಯ ಫೈನಲ್ ತಲುಪಿತು.<br /> <br /> ಎಲ್ಲೂರು ಶ್ರೀವಿಶ್ವೇಶ್ವರ ದೇವಸ್ಥಾನದ ಮುಂಭಾಗ, ಯುವಕ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಶನಿವಾರ ಬ್ಯಾಂಕ್ ತಂಡದವರು 25-20, 25-20, 25-23ರಲ್ಲಿ ಹರ್ಯಾಣ ವಿರುದ್ಧ ಗೆಲ್ಲಲು ಒಂದು ಗಂಟೆ ತೆಗೆದುಕೊಂಡರು. ರಾಷ್ಟ್ರೀಯ ತಂಡದ ಆಟಗಾರ ಉಕ್ಕರಪಾಂಡ್ಯನ್ `ಸೆಟ್ಟರ್~ ಪಾತ್ರದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಹರ್ಯಾಣ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ (ಎಚ್ಎಸ್ಐಡಿಸಿ) ತಂಡದ ಪರ ಸುರ್ಜಿತ್ ಸಿಂಗ್ ಗಮನ ಸೆಳೆದರು.<br /> <br /> ಕೆಎಸ್ಪಿ ಮುನ್ನಡೆ: ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಬೆಂಗಳೂರಿನ ಕರ್ನಾಟಕ ಪೊಲೀಸ್ ತಂಡ 25-20, 27-29, 22-25, 25-21, 15-13ರಲ್ಲಿ 3-2 ಸೆಟ್ಗಳಿಂದ ಬೆಂಗಳೂರಿನ ಬಿಎಸ್ಎನ್ಎಲ್ ತಂಡವನ್ನು ಸೋಲಿಸಿ ಸೆಮಿಫೈನಲ್ ತಲುಪಿತು.<br /> <br /> ಪಂದ್ಯಾವಳಿಯಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ಕರ್ನಾಟಕ ಯೂತ್ ತಂಡ, `ಬಿ~ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಕೊನೆಗೂ ಜಯದ ರುಚಿಕಂಡಿತು. ಎಲ್ಲಾ ಪಂದ್ಯಗಳಲ್ಲಿ ಹೋರಾಟ ತೋರಿದ್ದ ಕರ್ನಾಟಕ ಯೂತ್ತಂಡ 28-26, 19-25, 26-22, 22-25, 16-14 ಅಂಕಗಳಿಂದ ಮುಂಬೈಯ ಆರ್ಸಿಎಫ್ ತಂಡವನ್ನು ಸೋಲಿಸಿತು. ಕರ್ನಾಟಕದ ವಿನಾಯಕ್, ಆರ್ಸಿಎಫ್ನ ವಿಕ್ಕಿ ಪೂಜಾರಿ ಅವರ ಆಟ ಪ್ರೇಕ್ಷಕರ ಮೆಚ್ಚಗೆಗೆ ಪಾತ್ರವಾಯಿತು. ಈ ಪಂದ್ಯ ಎರಡೂ ತಂಡಗಳಿಗೆ ಅಷ್ಟೇನೂ ಮಹತ್ವದ್ದಾಗಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>