<p><strong>ನವದೆಹಲಿ (ಪಿಟಿಐ):</strong> ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ‘ವಿಶೇಷವಾಗಿ ಬಿಂಬಿಸುವ’ ಉದ್ದೇಶದಿಂದಲೇ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಕಾರ್ಯಕ್ರಮ ಪ್ರಸಾರ ಮಾಡಿದ ಸುದ್ದಿ ವಾಹಿನಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.<br /> <br /> ‘ಹಿಂದೂಗಳಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮೂಲಕ ಮೋದಿ ಅವರನ್ನು ಬಿಂಬಿಸುವುದಕ್ಕಾಗಿಯೇ ಉದ್ದೇಶಪೂರ್ವಕವಾಗಿ ಈ ಕಾರ್ಯಕ್ರಮ ಪ್ರಸಾರ ಮಾಡಲಾಗಿತ್ತು’ ಎಂದು ಕಾಂಗ್ರೆಸ್ ಕಾನೂನು ಘಟಕದ ಕಾರ್ಯದರ್ಶಿ ಕೆ.ಸಿ. ಮಿತ್ತಲ್ ಆರೋಪಿಸಿದ್ದಾರೆ.<br /> <br /> ‘ಚುನಾವಣೆಗೆ ದಿನಾಂಕ ಘೋಷಣೆಯಾಗಿರುವುದರಿಂದ ಈ ಕಥೆಯನ್ನು ಉದ್ದೇಶಪೂರ್ವಕವಾಗಿ ಹೆಣೆಯಲಾಗಿದೆ ಎಂಬುದು ಸುಸ್ಪಷ್ಟ. ಇದರೊಂದಿಗೆ ವಾಹಿನಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ’ ಎಂದು ಆಯೋಗಕ್ಕೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.<br /> <br /> <strong>ಗೋವಾ ಮತದಾನ ದಿನಾಂಕ ಬದಲು<br /> ನವದೆಹಲಿ (ಪಿಟಿಐ):</strong> ಧಾರ್ಮಿಕ ಹಬ್ಬಗಳ ಕಾರಣದಿಂದ ಚುನಾವಣಾ ದಿನಾಂಕ ಬದಲಾಯಿಸಬೇಕು ಎಂಬ ಬೇಡಿಕೆಗೆ ಸ್ಪಂದಿಸಿರುವ ಚುನಾವಣಾ ಆಯೋಗ, ಗೋವಾ ಮತ್ತು ಜಾರ್ಖಂಡ್ನ ಒಂದು ಕ್ಷೇತ್ರದ ಮತದಾನ ದಿನಾಂಕವನ್ನು ಬದಲಾಯಿಸಿದೆ.<br /> <br /> ಗೋವಾದ ಎರಡು ಕ್ಷೇತ್ರಗಳಲ್ಲಿ ಏಪ್ರಿಲ್ 17ರ ಬದಲಿಗೆ 12ರಂದೇ ಮತದಾನ ನಡೆಯಲಿದೆ. ಹಾಗೆಯೇ ಜಾರ್ಖಂಡ್ನ ಹಜಾರಿಬಾಗ್ ಕ್ಷೇತ್ರದ ಮತದಾನವನ್ನು ಏಪ್ರಿಲ್ 10ರ ಬದಲಿಗೆ 17ಕ್ಕೆ ಮುಂದೂಡಲಾಗಿದೆ.<br /> <br /> <strong>ಪ್ರಧಾನಿ ಅಭ್ಯರ್ಥಿ ಘೋಷಣೆ ಅಸಾಂವಿಧಾನಿಕ<br /> ಭೋಪಾಲ್ (ಪಿಟಿಐ):</strong> ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಪ್ರಧಾನಿಯಾಗಲು ಅತ್ಯುತ್ತಮ ಆಯ್ಕೆ ಆಗಿದ್ದರೂ ಪಕ್ಷ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ, ಮುಂಬೈ ಈಶಾನ್ಯ ಕ್ಷೇತ್ರದ ಅಭ್ಯರ್ಥಿ ಮೇಧಾ ಪಾಟ್ಕರ್ ಹೇಳಿದರು.<br /> <br /> ಚುನಾವಣೆಗೆ ಮೊದಲೇ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವುದು ಅಸಾಂವಿಧಾನಿಕ ಎಂದು ಹೇಳಿದರು<br /> ‘ಪ್ರಧಾನಿಯನ್ನು ಆಯ್ಕೆ ಮಾಡುವುದು ಚುನಾಯಿತ ಸಂಸದರ ಹಕ್ಕು. ಯಾರಾದರೂ ಚುನಾವಣೆಗೆ ಮೊದಲೇ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿದರೆ ಅದು ಜನಪ್ರತಿನಿಧಿಗಳ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ’ ಎಂದು ಮೇಧಾ ಹೇಳಿದರು.<br /> <br /> <strong>ಕಿರಣ್ ಪಕ್ಷ ‘ಜೈ ಸಮೈಕ್ಯ ಆಂಧ್ರ’<br /> ಹೈದರಾಬಾದ್ (ಐಎಎನ್ಎಸ್):</strong> ‘ಜೈ ಸಮೈಕ್ಯ ಆಂಧ್ರ’ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರ</p>.<p> ನೂತನ ರಾಜಕೀಯ ಪಕ್ಷದ ಹೆಸರು.<br /> <br /> ‘ಜೈ ಸಮೈಕ್ಯ ಆಂಧ್ರ ಅಥವಾ ಸಂಯುಕ್ತ ಆಂಧ್ರ’ ಆಂಧ್ರ ಪ್ರದೇಶ ವಿಭಜನೆಯನ್ನು ವಿರೋಧಿಸುತ್ತಿದ್ದವರ ಘೋಷವಾಕ್ಯವಾಗಿತ್ತು. ‘ತೆಲುಗು ಜನರು ಅಥವಾ ಭಾಷಿಕರ ಆತ್ಮಗೌರವ-ಕ್ಕಾಗಿ ತಮ್ಮ ಪಕ್ಷ ಹೋರಾಟ ನಡೆಸಲಿದೆ’ ಎಂದು ಕಿರಣ್ ಕುಮಾರ್ ರೆಡ್ಡಿ ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ‘ವಿಶೇಷವಾಗಿ ಬಿಂಬಿಸುವ’ ಉದ್ದೇಶದಿಂದಲೇ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಕಾರ್ಯಕ್ರಮ ಪ್ರಸಾರ ಮಾಡಿದ ಸುದ್ದಿ ವಾಹಿನಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.<br /> <br /> ‘ಹಿಂದೂಗಳಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮೂಲಕ ಮೋದಿ ಅವರನ್ನು ಬಿಂಬಿಸುವುದಕ್ಕಾಗಿಯೇ ಉದ್ದೇಶಪೂರ್ವಕವಾಗಿ ಈ ಕಾರ್ಯಕ್ರಮ ಪ್ರಸಾರ ಮಾಡಲಾಗಿತ್ತು’ ಎಂದು ಕಾಂಗ್ರೆಸ್ ಕಾನೂನು ಘಟಕದ ಕಾರ್ಯದರ್ಶಿ ಕೆ.ಸಿ. ಮಿತ್ತಲ್ ಆರೋಪಿಸಿದ್ದಾರೆ.<br /> <br /> ‘ಚುನಾವಣೆಗೆ ದಿನಾಂಕ ಘೋಷಣೆಯಾಗಿರುವುದರಿಂದ ಈ ಕಥೆಯನ್ನು ಉದ್ದೇಶಪೂರ್ವಕವಾಗಿ ಹೆಣೆಯಲಾಗಿದೆ ಎಂಬುದು ಸುಸ್ಪಷ್ಟ. ಇದರೊಂದಿಗೆ ವಾಹಿನಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ’ ಎಂದು ಆಯೋಗಕ್ಕೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.<br /> <br /> <strong>ಗೋವಾ ಮತದಾನ ದಿನಾಂಕ ಬದಲು<br /> ನವದೆಹಲಿ (ಪಿಟಿಐ):</strong> ಧಾರ್ಮಿಕ ಹಬ್ಬಗಳ ಕಾರಣದಿಂದ ಚುನಾವಣಾ ದಿನಾಂಕ ಬದಲಾಯಿಸಬೇಕು ಎಂಬ ಬೇಡಿಕೆಗೆ ಸ್ಪಂದಿಸಿರುವ ಚುನಾವಣಾ ಆಯೋಗ, ಗೋವಾ ಮತ್ತು ಜಾರ್ಖಂಡ್ನ ಒಂದು ಕ್ಷೇತ್ರದ ಮತದಾನ ದಿನಾಂಕವನ್ನು ಬದಲಾಯಿಸಿದೆ.<br /> <br /> ಗೋವಾದ ಎರಡು ಕ್ಷೇತ್ರಗಳಲ್ಲಿ ಏಪ್ರಿಲ್ 17ರ ಬದಲಿಗೆ 12ರಂದೇ ಮತದಾನ ನಡೆಯಲಿದೆ. ಹಾಗೆಯೇ ಜಾರ್ಖಂಡ್ನ ಹಜಾರಿಬಾಗ್ ಕ್ಷೇತ್ರದ ಮತದಾನವನ್ನು ಏಪ್ರಿಲ್ 10ರ ಬದಲಿಗೆ 17ಕ್ಕೆ ಮುಂದೂಡಲಾಗಿದೆ.<br /> <br /> <strong>ಪ್ರಧಾನಿ ಅಭ್ಯರ್ಥಿ ಘೋಷಣೆ ಅಸಾಂವಿಧಾನಿಕ<br /> ಭೋಪಾಲ್ (ಪಿಟಿಐ):</strong> ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಪ್ರಧಾನಿಯಾಗಲು ಅತ್ಯುತ್ತಮ ಆಯ್ಕೆ ಆಗಿದ್ದರೂ ಪಕ್ಷ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ, ಮುಂಬೈ ಈಶಾನ್ಯ ಕ್ಷೇತ್ರದ ಅಭ್ಯರ್ಥಿ ಮೇಧಾ ಪಾಟ್ಕರ್ ಹೇಳಿದರು.<br /> <br /> ಚುನಾವಣೆಗೆ ಮೊದಲೇ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವುದು ಅಸಾಂವಿಧಾನಿಕ ಎಂದು ಹೇಳಿದರು<br /> ‘ಪ್ರಧಾನಿಯನ್ನು ಆಯ್ಕೆ ಮಾಡುವುದು ಚುನಾಯಿತ ಸಂಸದರ ಹಕ್ಕು. ಯಾರಾದರೂ ಚುನಾವಣೆಗೆ ಮೊದಲೇ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿದರೆ ಅದು ಜನಪ್ರತಿನಿಧಿಗಳ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ’ ಎಂದು ಮೇಧಾ ಹೇಳಿದರು.<br /> <br /> <strong>ಕಿರಣ್ ಪಕ್ಷ ‘ಜೈ ಸಮೈಕ್ಯ ಆಂಧ್ರ’<br /> ಹೈದರಾಬಾದ್ (ಐಎಎನ್ಎಸ್):</strong> ‘ಜೈ ಸಮೈಕ್ಯ ಆಂಧ್ರ’ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರ</p>.<p> ನೂತನ ರಾಜಕೀಯ ಪಕ್ಷದ ಹೆಸರು.<br /> <br /> ‘ಜೈ ಸಮೈಕ್ಯ ಆಂಧ್ರ ಅಥವಾ ಸಂಯುಕ್ತ ಆಂಧ್ರ’ ಆಂಧ್ರ ಪ್ರದೇಶ ವಿಭಜನೆಯನ್ನು ವಿರೋಧಿಸುತ್ತಿದ್ದವರ ಘೋಷವಾಕ್ಯವಾಗಿತ್ತು. ‘ತೆಲುಗು ಜನರು ಅಥವಾ ಭಾಷಿಕರ ಆತ್ಮಗೌರವ-ಕ್ಕಾಗಿ ತಮ್ಮ ಪಕ್ಷ ಹೋರಾಟ ನಡೆಸಲಿದೆ’ ಎಂದು ಕಿರಣ್ ಕುಮಾರ್ ರೆಡ್ಡಿ ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>