<p><strong>ಯಳಂದೂರು: </strong>ತಾಲ್ಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಸರ್ಕಾರಿ ಖರಾಬ್ ಜಾಗವನ್ನು ಶಾಲೆಗೆ ಬಿಟ್ಟುಕೊಡ ಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ತರಗತಿ ಬಹಿಷ್ಕರಿಸಿದ ಘಟನೆ ಸೋಮವಾರ ಜರುಗಿದೆ. <br /> <br /> ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗೆ ಒಟ್ಟು 113 ವಿದ್ಯಾರ್ಥಿಗಳು ವ್ಯಾಸಂಗ ಮಾಡು ತ್ತಿದ್ದಾರೆ. ಆದರೆ ಸೋಮವಾರ ತರಗತಿಗೆ ಹಾಜರಾದ ಶಿಕ್ಷಕರು ವಿದ್ಯಾರ್ಥಿಗಳು ಬಾರದೇ ಇದ್ದುದನ್ನು ಗಮನಿಸಿ ವಿಚಾರಿಸಿದಾಗ ತರಗತಿ ಬಹಿಷ್ಕಾರದ ಅಂಶ ಗಮನಕ್ಕೆ ಬಂದಿದೆ. <br /> <br /> ಸರ್ವೇ ನಂ. 691 ರಲ್ಲಿರುವ 1.11 ಎಕರೆ ಜಮೀನನ್ನು ಸರ್ಕಾರಿ ಖರಾಬ್ ಜಮೀನಾಗಿದೆ. ಈ ಜಾಗವನ್ನು ಶಾಲೆಗೆ ಬಿಟ್ಟುಕೊಡಬೇಕು ಎಂಬುದು ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ಬಗ್ಗೆ ತಹಶೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನೂ ಮಾಡಲಾಗಿತ್ತು. <br /> <br /> ಆದರೆ ಸರ್ಕಾರದಿಂದ ಕೇವಲ 8 ಗುಂಟೆ ಜಮೀನು ಮಾತ್ರ ಶಾಲೆಗೆ ಬಿಡಲಾಗ್ದ್ದಿದು, ಇನ್ನುಳಿದ ಜಮೀನು ಖಾಸಗಿ ವ್ಯಕ್ತಿಯೊಬ್ಬರು ಅನುಭವಿಸಿಕೊಂಡು ಬರುತ್ತಿದ್ದಾರೆ. ಇದೂ ಸಹ ಶಾಲೆಗೆ ಸೇರಬೇಕು ಎಂಬುದು ಇಲ್ಲಿನ ವಾಸಿಗಳ ಬೇಡಿಕೆ.<br /> <br /> ಹಾಗಾಗಿ ಜಮೀನಿನ ವಿಚಾರ ತೀರ್ಮಾನವಾಗು ವವರೆಗೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.ಶಾಲೆಗೆ ವಿದ್ಯಾರ್ಥಿಗಳು ಸಾಮೂಹಿಕವಾಗಿ ಗೈರು ಹಾಜರಾದ ಹಿನ್ನೆಲೆಯಲ್ಲಿ ಇಲ್ಲಿನ ಶಿಕ್ಷಕರು ಸುಮ್ಮನೇ ಕುಳಿತೇ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿತ್ತು.<br /> <br /> <strong>ಅಂಗನವಾಡಿಯಲ್ಲೂ ಕಾಣ ಸಿಗದ ಚಿಣ್ಣರು:</strong> ಇದೇ ಶಾಲೆಯ ಆವರಣದಲ್ಲೇ ಅಂಗನವಾಡಿ ಕೇಂದ್ರವಿದೆ, ಇಲ್ಲಿ 19 ಮಕ್ಕಳು ಬರುತ್ತಾರೆ. ಇದಲ್ಲದೆ ಖಾಸಗಿ ಕಟ್ಟಡದಲ್ಲೂ ಅಂಗನವಾಡಿ ಕೇಂದ್ರ ನಡೆಯುತ್ತದೆ. ಇಲ್ಲೂ ಸಹ 15 ಮಕ್ಕಳು ಬರುತ್ತಾರೆ. ಆದರೆ ಸೋಮವಾರ ಮಾತ್ರ ಇಲ್ಲಿಗೂ ಸಹ ಯಾರೊಬ್ಬರೂ ಬಂದಿರಲಿಲ್ಲ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು: </strong>ತಾಲ್ಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಸರ್ಕಾರಿ ಖರಾಬ್ ಜಾಗವನ್ನು ಶಾಲೆಗೆ ಬಿಟ್ಟುಕೊಡ ಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ತರಗತಿ ಬಹಿಷ್ಕರಿಸಿದ ಘಟನೆ ಸೋಮವಾರ ಜರುಗಿದೆ. <br /> <br /> ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗೆ ಒಟ್ಟು 113 ವಿದ್ಯಾರ್ಥಿಗಳು ವ್ಯಾಸಂಗ ಮಾಡು ತ್ತಿದ್ದಾರೆ. ಆದರೆ ಸೋಮವಾರ ತರಗತಿಗೆ ಹಾಜರಾದ ಶಿಕ್ಷಕರು ವಿದ್ಯಾರ್ಥಿಗಳು ಬಾರದೇ ಇದ್ದುದನ್ನು ಗಮನಿಸಿ ವಿಚಾರಿಸಿದಾಗ ತರಗತಿ ಬಹಿಷ್ಕಾರದ ಅಂಶ ಗಮನಕ್ಕೆ ಬಂದಿದೆ. <br /> <br /> ಸರ್ವೇ ನಂ. 691 ರಲ್ಲಿರುವ 1.11 ಎಕರೆ ಜಮೀನನ್ನು ಸರ್ಕಾರಿ ಖರಾಬ್ ಜಮೀನಾಗಿದೆ. ಈ ಜಾಗವನ್ನು ಶಾಲೆಗೆ ಬಿಟ್ಟುಕೊಡಬೇಕು ಎಂಬುದು ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ಬಗ್ಗೆ ತಹಶೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನೂ ಮಾಡಲಾಗಿತ್ತು. <br /> <br /> ಆದರೆ ಸರ್ಕಾರದಿಂದ ಕೇವಲ 8 ಗುಂಟೆ ಜಮೀನು ಮಾತ್ರ ಶಾಲೆಗೆ ಬಿಡಲಾಗ್ದ್ದಿದು, ಇನ್ನುಳಿದ ಜಮೀನು ಖಾಸಗಿ ವ್ಯಕ್ತಿಯೊಬ್ಬರು ಅನುಭವಿಸಿಕೊಂಡು ಬರುತ್ತಿದ್ದಾರೆ. ಇದೂ ಸಹ ಶಾಲೆಗೆ ಸೇರಬೇಕು ಎಂಬುದು ಇಲ್ಲಿನ ವಾಸಿಗಳ ಬೇಡಿಕೆ.<br /> <br /> ಹಾಗಾಗಿ ಜಮೀನಿನ ವಿಚಾರ ತೀರ್ಮಾನವಾಗು ವವರೆಗೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.ಶಾಲೆಗೆ ವಿದ್ಯಾರ್ಥಿಗಳು ಸಾಮೂಹಿಕವಾಗಿ ಗೈರು ಹಾಜರಾದ ಹಿನ್ನೆಲೆಯಲ್ಲಿ ಇಲ್ಲಿನ ಶಿಕ್ಷಕರು ಸುಮ್ಮನೇ ಕುಳಿತೇ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿತ್ತು.<br /> <br /> <strong>ಅಂಗನವಾಡಿಯಲ್ಲೂ ಕಾಣ ಸಿಗದ ಚಿಣ್ಣರು:</strong> ಇದೇ ಶಾಲೆಯ ಆವರಣದಲ್ಲೇ ಅಂಗನವಾಡಿ ಕೇಂದ್ರವಿದೆ, ಇಲ್ಲಿ 19 ಮಕ್ಕಳು ಬರುತ್ತಾರೆ. ಇದಲ್ಲದೆ ಖಾಸಗಿ ಕಟ್ಟಡದಲ್ಲೂ ಅಂಗನವಾಡಿ ಕೇಂದ್ರ ನಡೆಯುತ್ತದೆ. ಇಲ್ಲೂ ಸಹ 15 ಮಕ್ಕಳು ಬರುತ್ತಾರೆ. ಆದರೆ ಸೋಮವಾರ ಮಾತ್ರ ಇಲ್ಲಿಗೂ ಸಹ ಯಾರೊಬ್ಬರೂ ಬಂದಿರಲಿಲ್ಲ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>