<p>ಚನ್ನಗಿರಿ: ಯಾವುದೇ ಕಾರ್ಯ ಮಾಡಬೇಕಾದರೂ ಗುರಿ ಮತ್ತು ಛಲ ಹೊಂದಿರಬೇಕು. ಓದಬೇಕು ಎಂಬ ಛಲ ಹೊಂದಿದ ಪಟ್ಟಣದ ಯುವಕನೊಬ್ಬ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಬಸ್ನಿಲ್ದಾಣದಲ್ಲಿ ಬೆಳಗಿನಜಾವ ಕಾಫಿ-ಟೀ ಮಾರಿ ಅದರಿಂದ ಬಂದ ಆದಾಯದಲ್ಲಿ ಕಾಲೇಜಿಗೆ ಸೇರಿ ಅಭ್ಯಾಸ ಮಾಡುತ್ತಿದ್ದಾನೆ.<br /> <br /> ಪಟ್ಟಣದ ಕುಂಬಾರಬೀದಿ ವಾಸಿ ಕೆ.ಆರ್. ನಾಗೇಶ್ ಎಂಬ ಯುವಕ ಕಳೆದ 9 ವರ್ಷದಿಂದ ನಿರಂತರವಾಗಿ ನಿಲ್ದಾಣದಲ್ಲಿ ಕಾಫಿ-ಟೀ ಮಾರಿ ಕಾಲೇಜಿಗೆ ಹೋಗಿ ಅಭ್ಯಾಸ ಮಾಡುತ್ತಿದ್ದಾನೆ. ಶಿವಲಿಂಗೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ತೃತೀಯ ಪದವಿ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. <br /> <br /> ಕಾಲೇಜಿಗೆ ಸೇರಬೇಕೆಂದು ಕೇಳಿದರೆ ಹಣ ಇಲ್ಲ ಎನ್ನುವ ಮಾತು. ಮನೆಯಲ್ಲಿ ಎಲ್ಲರೂ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಆದರೆ, ಈ ಯುವಕ ಹೇಗಾದರೂ ಪದವಿ ಪಡೆಯಬೇಕು ಎಂದು ನಿಶ್ವಯಿಸಿ ಬಸ್ನಿಲ್ದಾಣದಲ್ಲಿ ಕಾಫಿ-ಟೀ ಮಾರಲು ನಿರ್ಧರಿಸಿ ಪ್ರತಿದಿನ ಈ ಕಾಯಕ ಮುಂದುವರಿಸಿಕೊಂಡು ಅದರಿಂದ ಬಂದ ಆದಾಯದಲ್ಲಿ ಕಾಲೇಜಿಗೆ ಹೋಗುತ್ತಿದ್ದಾನೆ.<br /> <br /> ಪ್ರತಿದಿನ ಬೆಳಿಗ್ಗೆ 5ಕ್ಕೆ ಬಸ್ನಿಲ್ದಾಣಕ್ಕೆ ಬಂದು ಇಲ್ಲಿ ನಿಲ್ಲುವ ಬಸ್ಗಳಲ್ಲಿ ಹೋಗಿ ಪ್ರಯಾಣಿಕರು, ಬಸ್ ಚಾಲಕರು, ನಿರ್ವಾಹಕರಿಗೆ ತಾಜಾ ಕಾಫಿ-ಟೀ ಯನ್ನು ಕೊಡುವುದು ನಿತ್ಯದ ಕಾಯಕವಾಗಿದೆ. ಕನಿಷ್ಠ 150ರಿಂದ 200 ಕಾಫಿ-ಟೀ ಮಾರಾಟ ಮಾಡುತ್ತಿದ್ದು, ಒಂದು ಕಪ್ ಕಾಫಿ-ಟೀಗೆ ್ಙ 3 ದರವನ್ನು ನಿಗದಿಪಡಿಸಿದ್ದು, ಅದರಿಂದ ಬಂದ ಲಾಭದಿಂದ ತನ್ನ ಓದು ಹಾಗೂ ಕುಟುಂಬದ ನಿರ್ವಹಣೆ ಮಾಡುತ್ತಿದ್ದಾನೆ.<br /> <br /> `ಹೇಗಾದರೂ ಓದಬೇಕು ಎಂದು ನಿಶ್ಚಯಿಸಿ ನಾನು ಕಾಫಿ-ಟೀ ಮಾರಲು ನಿಶ್ವಯಿಸಿದೆ. ಇದರಿಂದ ಬಂದ ಆದಾಯದಿಂದ ನನ್ನ ಕಾಲೇಜು ಅಭ್ಯಾಸಕ್ಕೆ ಹಾಗೂ ತಮ್ಮನ ಅಭ್ಯಾಸಕ್ಕೆ ಮತ್ತು ಮನೆಯವರಿಗೆ ಕೂಡಾ ನೆರವಾಗಿದೆ. <br /> <br /> ಬಡತನ ಎಂದು ಮನೆಯಲ್ಲಿ ಕುಳಿತುಕೊಂಡಿದ್ದರೆ ಓದುವುದು ಸಾಧ್ಯವಾಗುತ್ತಿರಲಿಲ್ಲ. ಪದವಿ ಮುಗಿದ ಮೇಲೆ ಸ್ನಾತಕೋತ್ತರ ಪದವಿ ಮಾಡಿ ಒಳ್ಳೆಯ ಕೆಲಸಕ್ಕೆಸೇರಬೇಕೆಂಬುದು ನನ್ನ ಮಹಾದಾಸೆಯಾಗಿದೆ~ ಎಂಬುದು ನಾಗೇಶ್ನ ಮನದಾಳದಮಾತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚನ್ನಗಿರಿ: ಯಾವುದೇ ಕಾರ್ಯ ಮಾಡಬೇಕಾದರೂ ಗುರಿ ಮತ್ತು ಛಲ ಹೊಂದಿರಬೇಕು. ಓದಬೇಕು ಎಂಬ ಛಲ ಹೊಂದಿದ ಪಟ್ಟಣದ ಯುವಕನೊಬ್ಬ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಬಸ್ನಿಲ್ದಾಣದಲ್ಲಿ ಬೆಳಗಿನಜಾವ ಕಾಫಿ-ಟೀ ಮಾರಿ ಅದರಿಂದ ಬಂದ ಆದಾಯದಲ್ಲಿ ಕಾಲೇಜಿಗೆ ಸೇರಿ ಅಭ್ಯಾಸ ಮಾಡುತ್ತಿದ್ದಾನೆ.<br /> <br /> ಪಟ್ಟಣದ ಕುಂಬಾರಬೀದಿ ವಾಸಿ ಕೆ.ಆರ್. ನಾಗೇಶ್ ಎಂಬ ಯುವಕ ಕಳೆದ 9 ವರ್ಷದಿಂದ ನಿರಂತರವಾಗಿ ನಿಲ್ದಾಣದಲ್ಲಿ ಕಾಫಿ-ಟೀ ಮಾರಿ ಕಾಲೇಜಿಗೆ ಹೋಗಿ ಅಭ್ಯಾಸ ಮಾಡುತ್ತಿದ್ದಾನೆ. ಶಿವಲಿಂಗೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ತೃತೀಯ ಪದವಿ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. <br /> <br /> ಕಾಲೇಜಿಗೆ ಸೇರಬೇಕೆಂದು ಕೇಳಿದರೆ ಹಣ ಇಲ್ಲ ಎನ್ನುವ ಮಾತು. ಮನೆಯಲ್ಲಿ ಎಲ್ಲರೂ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಆದರೆ, ಈ ಯುವಕ ಹೇಗಾದರೂ ಪದವಿ ಪಡೆಯಬೇಕು ಎಂದು ನಿಶ್ವಯಿಸಿ ಬಸ್ನಿಲ್ದಾಣದಲ್ಲಿ ಕಾಫಿ-ಟೀ ಮಾರಲು ನಿರ್ಧರಿಸಿ ಪ್ರತಿದಿನ ಈ ಕಾಯಕ ಮುಂದುವರಿಸಿಕೊಂಡು ಅದರಿಂದ ಬಂದ ಆದಾಯದಲ್ಲಿ ಕಾಲೇಜಿಗೆ ಹೋಗುತ್ತಿದ್ದಾನೆ.<br /> <br /> ಪ್ರತಿದಿನ ಬೆಳಿಗ್ಗೆ 5ಕ್ಕೆ ಬಸ್ನಿಲ್ದಾಣಕ್ಕೆ ಬಂದು ಇಲ್ಲಿ ನಿಲ್ಲುವ ಬಸ್ಗಳಲ್ಲಿ ಹೋಗಿ ಪ್ರಯಾಣಿಕರು, ಬಸ್ ಚಾಲಕರು, ನಿರ್ವಾಹಕರಿಗೆ ತಾಜಾ ಕಾಫಿ-ಟೀ ಯನ್ನು ಕೊಡುವುದು ನಿತ್ಯದ ಕಾಯಕವಾಗಿದೆ. ಕನಿಷ್ಠ 150ರಿಂದ 200 ಕಾಫಿ-ಟೀ ಮಾರಾಟ ಮಾಡುತ್ತಿದ್ದು, ಒಂದು ಕಪ್ ಕಾಫಿ-ಟೀಗೆ ್ಙ 3 ದರವನ್ನು ನಿಗದಿಪಡಿಸಿದ್ದು, ಅದರಿಂದ ಬಂದ ಲಾಭದಿಂದ ತನ್ನ ಓದು ಹಾಗೂ ಕುಟುಂಬದ ನಿರ್ವಹಣೆ ಮಾಡುತ್ತಿದ್ದಾನೆ.<br /> <br /> `ಹೇಗಾದರೂ ಓದಬೇಕು ಎಂದು ನಿಶ್ಚಯಿಸಿ ನಾನು ಕಾಫಿ-ಟೀ ಮಾರಲು ನಿಶ್ವಯಿಸಿದೆ. ಇದರಿಂದ ಬಂದ ಆದಾಯದಿಂದ ನನ್ನ ಕಾಲೇಜು ಅಭ್ಯಾಸಕ್ಕೆ ಹಾಗೂ ತಮ್ಮನ ಅಭ್ಯಾಸಕ್ಕೆ ಮತ್ತು ಮನೆಯವರಿಗೆ ಕೂಡಾ ನೆರವಾಗಿದೆ. <br /> <br /> ಬಡತನ ಎಂದು ಮನೆಯಲ್ಲಿ ಕುಳಿತುಕೊಂಡಿದ್ದರೆ ಓದುವುದು ಸಾಧ್ಯವಾಗುತ್ತಿರಲಿಲ್ಲ. ಪದವಿ ಮುಗಿದ ಮೇಲೆ ಸ್ನಾತಕೋತ್ತರ ಪದವಿ ಮಾಡಿ ಒಳ್ಳೆಯ ಕೆಲಸಕ್ಕೆಸೇರಬೇಕೆಂಬುದು ನನ್ನ ಮಹಾದಾಸೆಯಾಗಿದೆ~ ಎಂಬುದು ನಾಗೇಶ್ನ ಮನದಾಳದಮಾತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>