<p><strong>ಕಮಲಾಪುರ: </strong>ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ ಸರಿಯಾಗಿ 10 ಗಂಟೆಯೂ ವಿದ್ಯುತ್ ಪೂರೈಸುತ್ತಿಲ್ಲವೆಂದು ದೂರಿ, ರೈತರಿಗೆ ರಾತ್ರಿಯಲ್ಲಿ ವಿದ್ಯುತ್ ಪೂರೈಸದೆ ಹಗಲು ಪೂರೈಸಲು ಆಗ್ರಹಿಸಿ ಜೆಸ್ಕಾಂ ಕಚೇರಿ ಎದುರು ಬುಧವಾರ ತಾಲ್ಲೂಕು ಪಂಚಾಯಿತಿ ಸದಸ್ಯ ಅಮೃತ ಗೌರೆ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.<br /> <br /> ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಬೇಕಾದ ಸಮಯಕ್ಕೆ ವಿದ್ಯುತ್ ನೀಡಲಾಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಮನವಿ ಸ್ವಿಕರಿಸಿದ ಜೆಸ್ಕಾಂ ಅಧಿಕಾರಿ ರಾಜೇಶ ಹಿಪ್ಪರಗಿ, `ಇದು ನಮ್ಮ ನಿಮ್ಮ ಸಮಸ್ಯೆಯಲ್ಲ. ರಾಜ್ಯದಲ್ಲಿ ಮಳೆಯ ಅಭಾವದಿಂದ ಉಂಟಾಗಿರುವ ಸಮಸ್ಯೆ. ಸರ್ಕಾರದ ಆದೇಶದಂತೆ 3 ಫೇಸ್ ಹಗಲು ನಾಲ್ಕು ಗಂಟೆ, ರಾತ್ರಿಯಲ್ಲಿ ಎರಡು ಗಂಟೆ, ಸಿಂಗಲ್ ಫೇಸ್ ದಿನಕ್ಕೆ 6 ಗಂಟೆ ನೀಡುತ್ತೇವೆ~ ಎಂದು ಸಮಜಾಯಿಷಿ ನೀಡಿದರು.<br /> <br /> ಗ್ರಾಮ ಪಂಚಾಯಿತಿ ಸದಸ್ಯ ದಾಸಿಮಯ, ಪುಂಡಲೀಕರಾವ ಚಿರಡೆ, ಯೋಗಪ್ಪ ಮಾಸ್ಟರ್, ಗುರುಸಿದ್ದಪ್ಪ ಮಾಡಗಿ, ರಬಿಯಾ ಬೇಗಂ, ವಿಜಯಲಕ್ಷ್ಮಿ ನಾಗೂರ, ಸುತ್ತಲಿನ ಹಳ್ಳಿಯ ರೈತರು ಪಾಲ್ಗೊಂಡಿದ್ದರು. ಕಮಲಾಪುರ ಸಬ್ ಇನ್ಸ್ಪೆಕ್ಟರ್ ಪಿ. ಬಿ. ಶಾಂತಿನಾಥ ಹಾಗೂ ಸಿಬ್ಬಂದಿ ಸೇರಿ ಬಂದೋಬಸ್ತ್ ಮಾಡಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲಾಪುರ: </strong>ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ ಸರಿಯಾಗಿ 10 ಗಂಟೆಯೂ ವಿದ್ಯುತ್ ಪೂರೈಸುತ್ತಿಲ್ಲವೆಂದು ದೂರಿ, ರೈತರಿಗೆ ರಾತ್ರಿಯಲ್ಲಿ ವಿದ್ಯುತ್ ಪೂರೈಸದೆ ಹಗಲು ಪೂರೈಸಲು ಆಗ್ರಹಿಸಿ ಜೆಸ್ಕಾಂ ಕಚೇರಿ ಎದುರು ಬುಧವಾರ ತಾಲ್ಲೂಕು ಪಂಚಾಯಿತಿ ಸದಸ್ಯ ಅಮೃತ ಗೌರೆ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.<br /> <br /> ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಬೇಕಾದ ಸಮಯಕ್ಕೆ ವಿದ್ಯುತ್ ನೀಡಲಾಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಮನವಿ ಸ್ವಿಕರಿಸಿದ ಜೆಸ್ಕಾಂ ಅಧಿಕಾರಿ ರಾಜೇಶ ಹಿಪ್ಪರಗಿ, `ಇದು ನಮ್ಮ ನಿಮ್ಮ ಸಮಸ್ಯೆಯಲ್ಲ. ರಾಜ್ಯದಲ್ಲಿ ಮಳೆಯ ಅಭಾವದಿಂದ ಉಂಟಾಗಿರುವ ಸಮಸ್ಯೆ. ಸರ್ಕಾರದ ಆದೇಶದಂತೆ 3 ಫೇಸ್ ಹಗಲು ನಾಲ್ಕು ಗಂಟೆ, ರಾತ್ರಿಯಲ್ಲಿ ಎರಡು ಗಂಟೆ, ಸಿಂಗಲ್ ಫೇಸ್ ದಿನಕ್ಕೆ 6 ಗಂಟೆ ನೀಡುತ್ತೇವೆ~ ಎಂದು ಸಮಜಾಯಿಷಿ ನೀಡಿದರು.<br /> <br /> ಗ್ರಾಮ ಪಂಚಾಯಿತಿ ಸದಸ್ಯ ದಾಸಿಮಯ, ಪುಂಡಲೀಕರಾವ ಚಿರಡೆ, ಯೋಗಪ್ಪ ಮಾಸ್ಟರ್, ಗುರುಸಿದ್ದಪ್ಪ ಮಾಡಗಿ, ರಬಿಯಾ ಬೇಗಂ, ವಿಜಯಲಕ್ಷ್ಮಿ ನಾಗೂರ, ಸುತ್ತಲಿನ ಹಳ್ಳಿಯ ರೈತರು ಪಾಲ್ಗೊಂಡಿದ್ದರು. ಕಮಲಾಪುರ ಸಬ್ ಇನ್ಸ್ಪೆಕ್ಟರ್ ಪಿ. ಬಿ. ಶಾಂತಿನಾಥ ಹಾಗೂ ಸಿಬ್ಬಂದಿ ಸೇರಿ ಬಂದೋಬಸ್ತ್ ಮಾಡಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>