<p><strong>ಗೋಣಿಕೊಪ್ಪಲು: </strong>ವಿಶ್ವಕನ್ನಡ ಸಮ್ಮೇಳನದ ಕನ್ನಡ ತೇರಿಗೆ ಪಟ್ಟಣದಲ್ಲಿ ಸೋಮವಾರ ಸಂಭ್ರಮದ ಸ್ವಾಗತ ನೀಡಲಾಯಿತು.ವಿರಾಜಪೇಟೆಯಿಂದ ಬೆಳಿಗ್ಗೆ 10ಗಂಟೆಗೆ ಆಗಮಿಸಿದ ರಥವನ್ನು ಪಟ್ಟಣದ ಉಮಾಮಹೇಶ್ವರಿ ದೇವಸ್ಥಾನದ ಬಳಿ ದೇವಸ್ಥಾನ ಸಮಿತಿ ಅಧ್ಯಕ್ಷ ಸಿ.ಟಿ.ದೇವಯ್ಯ ಸ್ವಾಗತಿಸಿದರು.<br /> <br /> ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷಬಿ.ಜಿ.ರಘುನಾಥ್ ನಾಯಕ್, ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಜಿ.ಪಂ. ಉಪಾಧ್ಯಕ್ಷೆ ಕಾವೇರಿ, ಸದಸ್ಯರಾದ ಶಕುಂತಲಾ ರವೀಂದ್ರ, ಬಿ.ಎನ್.ಪೃಥ್ಯೂ, ತಾ.ಪಂ.ಅಧ್ಯಕ್ಷ ಎಚ್.ಕೆ.ದಿನೇಶ್, ಸದಸ್ಯರಾದ ಟಾಟು ಮೊಣ್ಣಪ್ಪ, <br /> <br /> ಸದಸ್ಯೆ ಹಬೀಬುನ್ನೀಸ,ದಯಾಚಂಗಪ್ಪ,ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಚಂಗಪ್ಪ, ಸದಸ್ಯರಾದ ರೀನಾ, ಸುರೇಶ್, ಬೋಜಮ್ಮ,ಪರ್ವಿನ್ ಮೊಣ್ಣಪ್ಪ,ಸಿ.ಕೆ.ಬೋಪಣ್ಣ, ರಾಜೇಶ್, ಸುಮಿತ್ರ, ತಾ.ಪ.ಮಾಜಿ ಸದಸ್ಯ ಶಾಜಿ ಅಚ್ಯುತನ್, ಮುಖಂಡರಾದ ಮಧು ಮಾಚಯ್ಯ, ವಿ.ಟಿ.ವಾಸು ಸುಮಿ ಸುಬ್ಬಯ್ಯ ಮುಂತಾದವರು ಹಾಜರಿದ್ದರು.<br /> <br /> ಪಟ್ಟಣದಲ್ಲಿ ಮೆರವಣಿಗೆ ಮೂಲಕ ಸಾಗಿದ ರಥವನ್ನು ಕೆಲವು ಅಂಗಡಿ ಮಾಲಿಕರು ಹೂಚೆಲ್ಲಿ ಸ್ವಾಗತಿಸಿದರು. ಪಟ್ಟಣದಲ್ಲಿ ಕನ್ನಡ ಧ್ವಜ ಹಾರಾಡುತಿದ್ದವು. ಕೆಲವರು ತಮ್ಮ ಅಂಗಡಿಗಳನ್ನು ತಳಿರು ತೋರಣ ಹಾಗೂ ಹೂಮಾಲೆಗಳಿಂದ ಅಲಂಕರಿಸಿದ್ದರು.<br /> <br /> ಬಳಿಕ ಪೊನ್ನಂಪೇಟೆಗೆ ತೆರಳಿದ ರಥವನ್ನು ಅರುವತ್ತೊಕ್ಕಲು ಸರ್ವದೈವತಾ ಶಾಲೆಯ ವಿದ್ಯಾರ್ಥಿಗಳು ಸ್ವಾಗತಿಸಿದರು. ಪೊನ್ನಂಪೇಟೆಯಲ್ಲಿಯೂ ರಥಕ್ಕೆ ಭವ್ಯ ಸ್ವಾಗತ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಣಿಕೊಪ್ಪಲು: </strong>ವಿಶ್ವಕನ್ನಡ ಸಮ್ಮೇಳನದ ಕನ್ನಡ ತೇರಿಗೆ ಪಟ್ಟಣದಲ್ಲಿ ಸೋಮವಾರ ಸಂಭ್ರಮದ ಸ್ವಾಗತ ನೀಡಲಾಯಿತು.ವಿರಾಜಪೇಟೆಯಿಂದ ಬೆಳಿಗ್ಗೆ 10ಗಂಟೆಗೆ ಆಗಮಿಸಿದ ರಥವನ್ನು ಪಟ್ಟಣದ ಉಮಾಮಹೇಶ್ವರಿ ದೇವಸ್ಥಾನದ ಬಳಿ ದೇವಸ್ಥಾನ ಸಮಿತಿ ಅಧ್ಯಕ್ಷ ಸಿ.ಟಿ.ದೇವಯ್ಯ ಸ್ವಾಗತಿಸಿದರು.<br /> <br /> ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷಬಿ.ಜಿ.ರಘುನಾಥ್ ನಾಯಕ್, ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಜಿ.ಪಂ. ಉಪಾಧ್ಯಕ್ಷೆ ಕಾವೇರಿ, ಸದಸ್ಯರಾದ ಶಕುಂತಲಾ ರವೀಂದ್ರ, ಬಿ.ಎನ್.ಪೃಥ್ಯೂ, ತಾ.ಪಂ.ಅಧ್ಯಕ್ಷ ಎಚ್.ಕೆ.ದಿನೇಶ್, ಸದಸ್ಯರಾದ ಟಾಟು ಮೊಣ್ಣಪ್ಪ, <br /> <br /> ಸದಸ್ಯೆ ಹಬೀಬುನ್ನೀಸ,ದಯಾಚಂಗಪ್ಪ,ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಚಂಗಪ್ಪ, ಸದಸ್ಯರಾದ ರೀನಾ, ಸುರೇಶ್, ಬೋಜಮ್ಮ,ಪರ್ವಿನ್ ಮೊಣ್ಣಪ್ಪ,ಸಿ.ಕೆ.ಬೋಪಣ್ಣ, ರಾಜೇಶ್, ಸುಮಿತ್ರ, ತಾ.ಪ.ಮಾಜಿ ಸದಸ್ಯ ಶಾಜಿ ಅಚ್ಯುತನ್, ಮುಖಂಡರಾದ ಮಧು ಮಾಚಯ್ಯ, ವಿ.ಟಿ.ವಾಸು ಸುಮಿ ಸುಬ್ಬಯ್ಯ ಮುಂತಾದವರು ಹಾಜರಿದ್ದರು.<br /> <br /> ಪಟ್ಟಣದಲ್ಲಿ ಮೆರವಣಿಗೆ ಮೂಲಕ ಸಾಗಿದ ರಥವನ್ನು ಕೆಲವು ಅಂಗಡಿ ಮಾಲಿಕರು ಹೂಚೆಲ್ಲಿ ಸ್ವಾಗತಿಸಿದರು. ಪಟ್ಟಣದಲ್ಲಿ ಕನ್ನಡ ಧ್ವಜ ಹಾರಾಡುತಿದ್ದವು. ಕೆಲವರು ತಮ್ಮ ಅಂಗಡಿಗಳನ್ನು ತಳಿರು ತೋರಣ ಹಾಗೂ ಹೂಮಾಲೆಗಳಿಂದ ಅಲಂಕರಿಸಿದ್ದರು.<br /> <br /> ಬಳಿಕ ಪೊನ್ನಂಪೇಟೆಗೆ ತೆರಳಿದ ರಥವನ್ನು ಅರುವತ್ತೊಕ್ಕಲು ಸರ್ವದೈವತಾ ಶಾಲೆಯ ವಿದ್ಯಾರ್ಥಿಗಳು ಸ್ವಾಗತಿಸಿದರು. ಪೊನ್ನಂಪೇಟೆಯಲ್ಲಿಯೂ ರಥಕ್ಕೆ ಭವ್ಯ ಸ್ವಾಗತ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>