<p><strong>ದೊಡ್ಡಬಳ್ಳಾಪುರ:</strong> ವೃದ್ಧೆಯೊಬ್ಬರು ಕಾಣೆಯಾಗಿರುವುದನ್ನೇ ನೆಪವಾಗಿಟ್ಟುಕೊಂಡು ಕುಟುಂಬದವರಿಂದ ್ಙ 30 ಸಾವಿರ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.<br /> <br /> ಘಟನೆ ಹಿನ್ನೆಲೆ: ನಗರದ ಚೈತನ್ಯ ನಗರದ ನಿವಾಸಿ ಅಶ್ವತ್ಥಮ್ಮ ಕುಟುಂಬದವರೊಂದಿಗೆ ಕಳೆದ ಮೇ. 27ರಂದು ತಿರುಪತಿಗೆ ಹೋಗಿದ್ದರು. ಮೇ.28 ರಂದು ದೇವರ ದರ್ಶನಕ್ಕೆಂದು ಬೆಟ್ಟಕ್ಕೆ ಹೋಗಿದ್ದಾರೆ. ಅಂದೇ ಸಂಜೆ 5 ಗಂಟೆ ಸುಮಾರಿಗೆ ಅವರು ಕಾಣೆಯಾಗಿದ್ದಾರೆ. ಅಶ್ವತ್ಥಮ್ಮ ನಾಪತ್ತೆಯಾಗಿದ್ದರಿಂದ ಕಂಗಾಲಾದ ಕುಟುಂಬದವರು ತಿರುಮಲದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಟ್ಟದ ಹಲವೆಡೆ ಪೋಸ್ಟರ್ಗಳನ್ನು ಹಾಕಿ ಮೊಬೈಲ್ ನಂಬರ್ಗಳನ್ನು ಸಹಾ ಹಾಕಿದ್ದಾರೆ. ಇದನ್ನು ಗಮನಿಸಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಜೂ. 4 ರಂದು ಪೋಸ್ಟರ್ಗಳಲ್ಲಿದ್ದ ಮೊಬೈಲ್ ಸಂಖ್ಯೆಗೆ ಫೋನ್ ಮಾಡಿ ನೀವು ಹುಡುಕುತ್ತಿರುವ ಮಹಿಳೆ ನಮ್ಮ ಬಳಿಯಿದ್ದಾರೆ. ನಮ್ಮ ಕಷ್ಟಗಳಿಗೆ ಸ್ಪಂದಿಸಿ ್ಙ 30 ಸಾವಿರ ನೀಡಿ ಅಜ್ಜಿಯನ್ನು ಒಪ್ಪಿಸುತ್ತೇವೆ ಎಂದು ಹೇಳಿದ್ದಾರೆ.<br /> <br /> ಅಶ್ವತ್ಥಮ್ಮ ಅವರ ಪತಿ ಲಕ್ಷ್ಮೀನಾರಾಯಣ ಹಾಗೂ ಮಗ ಪುಟ್ಟರಾಜು ಒಪ್ಪಿಕೊಂಡು ಅಪರಿಚಿತರಿಗೆ ಹಣ ನೀಡಿದ್ದಾರೆ. ಅಶ್ವತ್ಥಮ್ಮ ಎಲ್ಲಿ ಎಂದು ಕೇಳಿದಾಗ ಪ್ರಸಾದ ನೀಡುವ ಸ್ಥಳದಲ್ಲಿ ಕೂರಿಸಿದ್ದೇವೆ ಕರೆದುಕೊಂಡು ಹೋಗಿ ಎಂದಿದ್ದಾರೆ.<br /> <br /> ವಂಚನೆ ಬಯಲು: ಅಶ್ವತ್ಥಮ್ಮ ಸಿಕ್ಕೇ ಬಿಟ್ಟರು ಎನ್ನುವ ಸಂತಸದಿಂದ ಅಪರಿಚಿತರು ಹೇಳಿದ ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ಅವರು ಇರಲಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬದವರು ಪರಿಶೀಲಿಸಿದಾಗ ಅಪರಿಚಿತರು ವಂಚಿಸಿರುವುದು ತಿಳಿದಿದೆ.<br /> <br /> ಮತ್ತೇ ಬಂದ ಫೋನ್: ನಂತರ ಜೂ. 7ರಂದು ಮತ್ತೇ ಅಪರಿಚಿತರು ಕರೆ ಮಾಡಿ ರೂ 50 ಸಾವಿರ ನೀಡಿದರೆ ಅಜ್ಜಿ ಸಿಗುತ್ತಾರೆ ಎಂದು ಹೇಳಿದ್ದಾರೆ. ಈ ಬಾರಿ ಜಾಗೃತಗೊಂಡ ಕುಟುಂಬದ ಸದಸ್ಯರು ದೊಡ್ಡಬಳ್ಳಾಪುರ ಪೊಲೀಸರ ನೆರವಿನೊಂದಿಗೆ ಹಣ ತೆಗೆದುಕೊಂಡು ಹೋಗಿದ್ದಾರೆ. ಹಾಸನದ ಬೆಳ್ಳೂರು ಕ್ರಾಸ್ ಬಳಿ ವಂಚಿಸುತ್ತಿದ್ದವರ ಪೈಕಿ ಓರ್ವ ಮಹಿಳೆ ಸಿಕ್ಕಿದ್ದಾಳೆ. ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.ಯುವಕ ನಾಪತ್ತೆಯಾಗಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೊಡ್ಡಬಳ್ಳಾಪುರ:</strong> ವೃದ್ಧೆಯೊಬ್ಬರು ಕಾಣೆಯಾಗಿರುವುದನ್ನೇ ನೆಪವಾಗಿಟ್ಟುಕೊಂಡು ಕುಟುಂಬದವರಿಂದ ್ಙ 30 ಸಾವಿರ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.<br /> <br /> ಘಟನೆ ಹಿನ್ನೆಲೆ: ನಗರದ ಚೈತನ್ಯ ನಗರದ ನಿವಾಸಿ ಅಶ್ವತ್ಥಮ್ಮ ಕುಟುಂಬದವರೊಂದಿಗೆ ಕಳೆದ ಮೇ. 27ರಂದು ತಿರುಪತಿಗೆ ಹೋಗಿದ್ದರು. ಮೇ.28 ರಂದು ದೇವರ ದರ್ಶನಕ್ಕೆಂದು ಬೆಟ್ಟಕ್ಕೆ ಹೋಗಿದ್ದಾರೆ. ಅಂದೇ ಸಂಜೆ 5 ಗಂಟೆ ಸುಮಾರಿಗೆ ಅವರು ಕಾಣೆಯಾಗಿದ್ದಾರೆ. ಅಶ್ವತ್ಥಮ್ಮ ನಾಪತ್ತೆಯಾಗಿದ್ದರಿಂದ ಕಂಗಾಲಾದ ಕುಟುಂಬದವರು ತಿರುಮಲದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಟ್ಟದ ಹಲವೆಡೆ ಪೋಸ್ಟರ್ಗಳನ್ನು ಹಾಕಿ ಮೊಬೈಲ್ ನಂಬರ್ಗಳನ್ನು ಸಹಾ ಹಾಕಿದ್ದಾರೆ. ಇದನ್ನು ಗಮನಿಸಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಜೂ. 4 ರಂದು ಪೋಸ್ಟರ್ಗಳಲ್ಲಿದ್ದ ಮೊಬೈಲ್ ಸಂಖ್ಯೆಗೆ ಫೋನ್ ಮಾಡಿ ನೀವು ಹುಡುಕುತ್ತಿರುವ ಮಹಿಳೆ ನಮ್ಮ ಬಳಿಯಿದ್ದಾರೆ. ನಮ್ಮ ಕಷ್ಟಗಳಿಗೆ ಸ್ಪಂದಿಸಿ ್ಙ 30 ಸಾವಿರ ನೀಡಿ ಅಜ್ಜಿಯನ್ನು ಒಪ್ಪಿಸುತ್ತೇವೆ ಎಂದು ಹೇಳಿದ್ದಾರೆ.<br /> <br /> ಅಶ್ವತ್ಥಮ್ಮ ಅವರ ಪತಿ ಲಕ್ಷ್ಮೀನಾರಾಯಣ ಹಾಗೂ ಮಗ ಪುಟ್ಟರಾಜು ಒಪ್ಪಿಕೊಂಡು ಅಪರಿಚಿತರಿಗೆ ಹಣ ನೀಡಿದ್ದಾರೆ. ಅಶ್ವತ್ಥಮ್ಮ ಎಲ್ಲಿ ಎಂದು ಕೇಳಿದಾಗ ಪ್ರಸಾದ ನೀಡುವ ಸ್ಥಳದಲ್ಲಿ ಕೂರಿಸಿದ್ದೇವೆ ಕರೆದುಕೊಂಡು ಹೋಗಿ ಎಂದಿದ್ದಾರೆ.<br /> <br /> ವಂಚನೆ ಬಯಲು: ಅಶ್ವತ್ಥಮ್ಮ ಸಿಕ್ಕೇ ಬಿಟ್ಟರು ಎನ್ನುವ ಸಂತಸದಿಂದ ಅಪರಿಚಿತರು ಹೇಳಿದ ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ಅವರು ಇರಲಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬದವರು ಪರಿಶೀಲಿಸಿದಾಗ ಅಪರಿಚಿತರು ವಂಚಿಸಿರುವುದು ತಿಳಿದಿದೆ.<br /> <br /> ಮತ್ತೇ ಬಂದ ಫೋನ್: ನಂತರ ಜೂ. 7ರಂದು ಮತ್ತೇ ಅಪರಿಚಿತರು ಕರೆ ಮಾಡಿ ರೂ 50 ಸಾವಿರ ನೀಡಿದರೆ ಅಜ್ಜಿ ಸಿಗುತ್ತಾರೆ ಎಂದು ಹೇಳಿದ್ದಾರೆ. ಈ ಬಾರಿ ಜಾಗೃತಗೊಂಡ ಕುಟುಂಬದ ಸದಸ್ಯರು ದೊಡ್ಡಬಳ್ಳಾಪುರ ಪೊಲೀಸರ ನೆರವಿನೊಂದಿಗೆ ಹಣ ತೆಗೆದುಕೊಂಡು ಹೋಗಿದ್ದಾರೆ. ಹಾಸನದ ಬೆಳ್ಳೂರು ಕ್ರಾಸ್ ಬಳಿ ವಂಚಿಸುತ್ತಿದ್ದವರ ಪೈಕಿ ಓರ್ವ ಮಹಿಳೆ ಸಿಕ್ಕಿದ್ದಾಳೆ. ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.ಯುವಕ ನಾಪತ್ತೆಯಾಗಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>