<p><span style="font-size: 26px;"><strong>ಮಳವಳ್ಳಿ:</strong> ಐದು ತಿಂಗಳಿನಿಂದ ವೇತನ ನೀಡಿಲ್ಲ ಎಂದು ಕಾವೇರಿ ನಿಗಮದಲ್ಲಿ ದಿನಗೂಲಿ ನೌಕರರಾಗಿರುವ ಸೌಡಿಗಳು ಸೋಮವಾರ ತಾಲ್ಲೂಕಿನ ಕಾಗೆಪುರ ಬಳಿಯಿರುವ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.</span><br /> <br /> ಕಚೇರಿ ಪ್ರತಿಭಟನೆ ನಡೆಸಿದ ಸೌಡಿಗಳು ಕೆ.ಆರ್.ಎಸ್. ನಾಲಾ ಆಧುನೀಕರಣ, ನೀರು ನಿರ್ವಹಣೆ ಸೇರಿದಂತೆ ತಳಗವಾದಿ, ಕಿರುಗಾವಲು, ಭಾರತೀನಗರದ ವ್ಯಾಪ್ತಿಯಲ್ಲಿ 115 ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದು 5 ತಿಂಗಳಿನಿಂದ ವೇತನ ಇಲ್ಲದೆ ಜೀವನ ನಡೆಸುವುದು ದುಸ್ತರ ವಾಗಿದೆ.ಕೂಡಲೇ ಹಣ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಪ್ರತಿಭಟನೆ ಮುಂದುವರಿಸುವುದ್ದಾಗಿ ಹೇಳಿದರು.<br /> <br /> ಸ್ಥಳಕ್ಕೆ ಆಗಮಿಸಿದ ಕಾರ್ಯನಿರ್ವಾಹಕ ಎಂಜಿನಿಯರ್ ಪರಶಿವಮೂರ್ತಿ ಅವರು ವೇತನ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದ್ದಾಗಿ ತಿಳಿಸಿದರು. ಇದಕ್ಕೆ ಒಪ್ಪದ ನೌಕರರು ಈ ಬಗೆ ಹಿಂದೆ ಸಹ ಪ್ರತಿಭಟನೆ ವೇಳೆ ಇದೇ ರೀತಿಯ ಭರವಸೆಯನ್ನು ನೀಡಲಾಗಿತ್ತು, ಆದರೆ ವೇತನ ಮಾತ್ರ ಬರಲಿಲ್ಲ ಎಂದು ಹೇಳಿದ ಪ್ರತಿಭಟನಾಕಾರರು ಈಗ ಸಂಪೂರ್ಣ ಬಿಡುಗಡೆ ಆಗುವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದರು.<br /> <br /> ಕಾರ್ಯನಿರ್ವಾಹಕ ಎಂಜಿನಿ ಯರ್ ಅವರು ಮಾತನಾಡಿ ಮೊದಲು ಕೆಲವು ಮುಖಂಡರು ಬನ್ನಿ ಮುಖ್ಯ ಎಂಜಿನಿಯರ್ ಜತೆ ಅವರೊಡನೆ ಮಾತನಾಡೋಣ ನಂತರ ಮುಂದಿನ ಕ್ರಮದ ಚರ್ಚೆ ಮಾಡುವುದಾಗಿ ತಿಳಿಸಿದ ನಂತರ ಪ್ರತಿಭಟನೆ ಅಂತ್ಯಗೊಳಿಸಿದರು.<br /> ಉಪಾಧ್ಯಕ್ಷ ಬೋರೇಗೌಡ, ಮಾದೇಗೌಡ, ಕೃಷ್ಣ, ನಾಗೇಂದ್ರ, ವಿಘ್ನೇಶ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಮಳವಳ್ಳಿ:</strong> ಐದು ತಿಂಗಳಿನಿಂದ ವೇತನ ನೀಡಿಲ್ಲ ಎಂದು ಕಾವೇರಿ ನಿಗಮದಲ್ಲಿ ದಿನಗೂಲಿ ನೌಕರರಾಗಿರುವ ಸೌಡಿಗಳು ಸೋಮವಾರ ತಾಲ್ಲೂಕಿನ ಕಾಗೆಪುರ ಬಳಿಯಿರುವ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.</span><br /> <br /> ಕಚೇರಿ ಪ್ರತಿಭಟನೆ ನಡೆಸಿದ ಸೌಡಿಗಳು ಕೆ.ಆರ್.ಎಸ್. ನಾಲಾ ಆಧುನೀಕರಣ, ನೀರು ನಿರ್ವಹಣೆ ಸೇರಿದಂತೆ ತಳಗವಾದಿ, ಕಿರುಗಾವಲು, ಭಾರತೀನಗರದ ವ್ಯಾಪ್ತಿಯಲ್ಲಿ 115 ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದು 5 ತಿಂಗಳಿನಿಂದ ವೇತನ ಇಲ್ಲದೆ ಜೀವನ ನಡೆಸುವುದು ದುಸ್ತರ ವಾಗಿದೆ.ಕೂಡಲೇ ಹಣ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಪ್ರತಿಭಟನೆ ಮುಂದುವರಿಸುವುದ್ದಾಗಿ ಹೇಳಿದರು.<br /> <br /> ಸ್ಥಳಕ್ಕೆ ಆಗಮಿಸಿದ ಕಾರ್ಯನಿರ್ವಾಹಕ ಎಂಜಿನಿಯರ್ ಪರಶಿವಮೂರ್ತಿ ಅವರು ವೇತನ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದ್ದಾಗಿ ತಿಳಿಸಿದರು. ಇದಕ್ಕೆ ಒಪ್ಪದ ನೌಕರರು ಈ ಬಗೆ ಹಿಂದೆ ಸಹ ಪ್ರತಿಭಟನೆ ವೇಳೆ ಇದೇ ರೀತಿಯ ಭರವಸೆಯನ್ನು ನೀಡಲಾಗಿತ್ತು, ಆದರೆ ವೇತನ ಮಾತ್ರ ಬರಲಿಲ್ಲ ಎಂದು ಹೇಳಿದ ಪ್ರತಿಭಟನಾಕಾರರು ಈಗ ಸಂಪೂರ್ಣ ಬಿಡುಗಡೆ ಆಗುವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದರು.<br /> <br /> ಕಾರ್ಯನಿರ್ವಾಹಕ ಎಂಜಿನಿ ಯರ್ ಅವರು ಮಾತನಾಡಿ ಮೊದಲು ಕೆಲವು ಮುಖಂಡರು ಬನ್ನಿ ಮುಖ್ಯ ಎಂಜಿನಿಯರ್ ಜತೆ ಅವರೊಡನೆ ಮಾತನಾಡೋಣ ನಂತರ ಮುಂದಿನ ಕ್ರಮದ ಚರ್ಚೆ ಮಾಡುವುದಾಗಿ ತಿಳಿಸಿದ ನಂತರ ಪ್ರತಿಭಟನೆ ಅಂತ್ಯಗೊಳಿಸಿದರು.<br /> ಉಪಾಧ್ಯಕ್ಷ ಬೋರೇಗೌಡ, ಮಾದೇಗೌಡ, ಕೃಷ್ಣ, ನಾಗೇಂದ್ರ, ವಿಘ್ನೇಶ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>