<p>ಮಂಡ್ಯ: ಮಡೆ ಮಡೆಸ್ನಾನ, ಬೆತ್ತಲೆ ಸೇವೆಯಂತಹ ಮೌಢ್ಯಗಳಿಂದ ದೂರವಿರಬೇಕು. ಪ್ರಜಾಪ್ರಭುತ್ವ ಉಳಿಯಬೇಕಾದರೆ, ವೈಜ್ಞಾನಿಕ ಚಿಂತನೆಗಳನ್ನು ಬಳಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಬಿ.ಎಸ್. ಚಂದ್ರಶೇಖರ್ ಹೇಳಿದರು.<br /> <br /> ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ಗಾಂಧಿಭವನದಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಆಯೋಜಿಸಿದ್ದ ಮೂಢನಂಬಿಕೆ ಪ್ರತಿಬಂಧಕ ನಿಷೇಧ ಕಾಯ್ದೆ ಜಾರಿ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.<br /> <br /> -ದುರ್ಬಲ ಮನಸ್ಸಿನವರು, ಬಲಹೀನರು ಮೌಢ್ಯತೆಯ ಆಚರಿಸುತ್ತಾರೆ. ಬಲಾಢ್ಯರು ಮೌಢ್ಯವನ್ನು ನಿರಾಕರಿಸಿ ತಮ್ಮ ಮನಸ್ಸಿನ ಮೇಲೆ ನಂಬಿಕೆಯಿಟ್ಟು ಕೆಲಸ ಮಾಡುತ್ತಾರೆ. ಮೂಢನಂಬಿಕೆ ಅಸಮಾನತೆಯನ್ನು ಸೃಷ್ಠಿಸುತ್ತದೆ ಎಂದರು.<br /> <br /> ಪ್ರಗತಿಪರ ಚಿಂತಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿ ಅದಿವೇಶನದಲ್ಲೇ ಈ ವಿಧೇಯಕ ಜಾರಿಗೆ ತರುತ್ತಾರೆ ಎಂದು ನಂಬಿದ್ದೆವು. ಅದು ಹುಸಿಯಾಯಿತು ಎಂದು ವಿಷಾದ ವ್ಯಕ್ತಪಡಿಸಿದರು.<br /> <br /> ಶೇ 90ರಷ್ಟು ಮಹಿಳೆಯರು ಮೂಢನಂಬಿಕೆಗಳನ್ನು ಅನುಸರಿಸುತ್ತಾರೆ. ಜ್ಯೋತಿಷ, ಮೈಮೇಲೆ ದೇವರು, ದೆವ್ವ ಬರುವುದು, ಅಳುವ ಮಕ್ಕಳಿಗೆ ದೃಷ್ಟಿ ತೆಗೆಯುವ ಅರ್ಥವಿಲ್ಲದ ಆಚರಣೆಗಳನ್ನು ಅನುಸರಿಸುತ್ತಾರೆ. ಅವರು ವೈಜ್ಞಾನಿಕ ಅರಿವು ಪಡೆದುಕೊಳ್ಳುವುದು ಅತ್ಯಗತ್ಯ. ಒಳ್ಳೆಯದ್ದು, -ಕೆಟ್ಟದ್ದು ಯಾವುದು ಎಂಬ ವಿಮರ್ಶಾ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.<br /> <br /> ಸಂಘಟನೆಯ ರಾಜ್ಯ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಮೂಢನಂಬಿಕೆ ದುರ್ಬಲರನ್ನು ಶೋಷಣೆ ಮಾಡುವ ಪ್ರಬಲ ಅಸ್ತ್ರವಾಗಿದೆ. ಶೋಷಕರು ಇದನ್ನು ಪೋಷಿಸಿಕೊಂಡು ನಮ್ಮ ಅಜ್ಞಾನದ ಮೇಲೆ ಸವಾರಿ ಮಾಡಲು ಯತ್ನಿಸುತ್ತಾರೆ. ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದರು.<br /> <br /> ಜಿ.ಪಂ.ಮಾಜಿ ಅಧ್ಯಕ್ಷ ಸುರೇಶ ಕಂಠಿ, ಜಿ.ಪಂ.ಉಪಕಾರ್ಯದಶರರ್ಶಿ ಎಸ್.ಸಿ. ಮಹೇಶ್, ರಾಜ್ಯ ಸಂಚಾಲಕ ಬ್ಯಾಡರಹಳ್ಳಿ ಪ್ರಕಾಶ್, ಶಿವು ಗೊಬ್ಬರಗಾಲ, ಎಂ.ಎಚ್. ಗೀತಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಡ್ಯ: ಮಡೆ ಮಡೆಸ್ನಾನ, ಬೆತ್ತಲೆ ಸೇವೆಯಂತಹ ಮೌಢ್ಯಗಳಿಂದ ದೂರವಿರಬೇಕು. ಪ್ರಜಾಪ್ರಭುತ್ವ ಉಳಿಯಬೇಕಾದರೆ, ವೈಜ್ಞಾನಿಕ ಚಿಂತನೆಗಳನ್ನು ಬಳಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಬಿ.ಎಸ್. ಚಂದ್ರಶೇಖರ್ ಹೇಳಿದರು.<br /> <br /> ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ಗಾಂಧಿಭವನದಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಆಯೋಜಿಸಿದ್ದ ಮೂಢನಂಬಿಕೆ ಪ್ರತಿಬಂಧಕ ನಿಷೇಧ ಕಾಯ್ದೆ ಜಾರಿ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.<br /> <br /> -ದುರ್ಬಲ ಮನಸ್ಸಿನವರು, ಬಲಹೀನರು ಮೌಢ್ಯತೆಯ ಆಚರಿಸುತ್ತಾರೆ. ಬಲಾಢ್ಯರು ಮೌಢ್ಯವನ್ನು ನಿರಾಕರಿಸಿ ತಮ್ಮ ಮನಸ್ಸಿನ ಮೇಲೆ ನಂಬಿಕೆಯಿಟ್ಟು ಕೆಲಸ ಮಾಡುತ್ತಾರೆ. ಮೂಢನಂಬಿಕೆ ಅಸಮಾನತೆಯನ್ನು ಸೃಷ್ಠಿಸುತ್ತದೆ ಎಂದರು.<br /> <br /> ಪ್ರಗತಿಪರ ಚಿಂತಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿ ಅದಿವೇಶನದಲ್ಲೇ ಈ ವಿಧೇಯಕ ಜಾರಿಗೆ ತರುತ್ತಾರೆ ಎಂದು ನಂಬಿದ್ದೆವು. ಅದು ಹುಸಿಯಾಯಿತು ಎಂದು ವಿಷಾದ ವ್ಯಕ್ತಪಡಿಸಿದರು.<br /> <br /> ಶೇ 90ರಷ್ಟು ಮಹಿಳೆಯರು ಮೂಢನಂಬಿಕೆಗಳನ್ನು ಅನುಸರಿಸುತ್ತಾರೆ. ಜ್ಯೋತಿಷ, ಮೈಮೇಲೆ ದೇವರು, ದೆವ್ವ ಬರುವುದು, ಅಳುವ ಮಕ್ಕಳಿಗೆ ದೃಷ್ಟಿ ತೆಗೆಯುವ ಅರ್ಥವಿಲ್ಲದ ಆಚರಣೆಗಳನ್ನು ಅನುಸರಿಸುತ್ತಾರೆ. ಅವರು ವೈಜ್ಞಾನಿಕ ಅರಿವು ಪಡೆದುಕೊಳ್ಳುವುದು ಅತ್ಯಗತ್ಯ. ಒಳ್ಳೆಯದ್ದು, -ಕೆಟ್ಟದ್ದು ಯಾವುದು ಎಂಬ ವಿಮರ್ಶಾ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.<br /> <br /> ಸಂಘಟನೆಯ ರಾಜ್ಯ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಮೂಢನಂಬಿಕೆ ದುರ್ಬಲರನ್ನು ಶೋಷಣೆ ಮಾಡುವ ಪ್ರಬಲ ಅಸ್ತ್ರವಾಗಿದೆ. ಶೋಷಕರು ಇದನ್ನು ಪೋಷಿಸಿಕೊಂಡು ನಮ್ಮ ಅಜ್ಞಾನದ ಮೇಲೆ ಸವಾರಿ ಮಾಡಲು ಯತ್ನಿಸುತ್ತಾರೆ. ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದರು.<br /> <br /> ಜಿ.ಪಂ.ಮಾಜಿ ಅಧ್ಯಕ್ಷ ಸುರೇಶ ಕಂಠಿ, ಜಿ.ಪಂ.ಉಪಕಾರ್ಯದಶರರ್ಶಿ ಎಸ್.ಸಿ. ಮಹೇಶ್, ರಾಜ್ಯ ಸಂಚಾಲಕ ಬ್ಯಾಡರಹಳ್ಳಿ ಪ್ರಕಾಶ್, ಶಿವು ಗೊಬ್ಬರಗಾಲ, ಎಂ.ಎಚ್. ಗೀತಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>