<p><strong>ದಾವಣಗೆರೆ: </strong>`ವೈದ್ಯರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ರೋಗಿಗಳಿಗೆ ನ್ಯಾಯ ಒದಗಿಸಬೇಕು~ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಕರೆ ನೀಡಿದರು.ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಗುರುವಾರ ನವೀಕೃತ `ಶಿವಪಾರ್ವತಿ~ ನವಜಾತ ಶಿಶು ವಿಭಾಗ (ಎನ್ಐಸಿಯು)ದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.<br /> <br /> ಬಾಪೂಜಿ ಮಕ್ಕಳ ಆಸ್ಪತ್ರೆಯ ಸಿಬ್ಬಂದಿಗೆ ಇಂದು ಅತ್ಯಂತ ಸಂತಸದ ದಿನ. ರೂ 3 ಕೋಟಿ ವೆಚ್ಚದಲ್ಲಿ ಮಕ್ಕಳ ವಿಭಾಗವನ್ನು ನವೀಕರಿಸಲಾಗಿದೆ. ರಾಜ್ಯದ ಯಾವುದೇ ಮಕ್ಕಳ ಆಸ್ಪತ್ರೆಯಲ್ಲಿ ದೊರೆಯದ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಇಲ್ಲಿದೆ. <br /> <br /> 50 ಇಂಟೆನ್ಸಿವ್ ಕೇರ್ ಸೌಲಭ್ಯ ಸೇರಿದಂತೆ ಮಕ್ಕಳ ಜೀವರಕ್ಷಣೆಗೆ ಬೇಕಾದ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಬ್ರೆಜಿಲ್ನಿಂದ ತರಿಸಲಾಗಿದೆ. ಯಾವುದೇ ಮಗು ಇಲ್ಲಿ ದಾಖಲಾದಾಗ ಚಿಕಿತ್ಸೆಗಾಗಿ ಇತರ ಆಸ್ಪತ್ರೆಯನ್ನು ಅವಲಂಬಿಸದಿರಲಿ ಎನ್ನುವ ಉದ್ದೇಶದಿಂದ ವಿಭಾಗವನ್ನು ನವೀಕರಣಗೊಳಿಸಲಾಗಿದೆ ಎಂದು ವಿವರಿಸಿದರು.<br /> <br /> ದಾವಣಗೆರೆ ಸೇರಿದಂತೆ ಸುತ್ತಮುತ್ತಲ 8-10 ಜಿಲ್ಲೆಗಳ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಆಗಲೆಂದು ಬಾಪೂಜಿ ಆಸ್ಪತ್ರೆಯ ವಿವಿಧ ವಿಭಾಗಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಈಗಾಗಲೇ ಎಂಆರ್ಐ, ರೇಡಿಯೋಲಾಜಿ ವಿಭಾಗವನ್ನು ರೂ 6ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ವೈದ್ಯರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ರೋಗಿಗಳಿಗೆ ನ್ಯಾಯ ಒದಗಿಸಬೇಕು ಎಂದು ಸಲಹೆ ನೀಡಿದರು.<br /> <br /> ಶೀಘ್ರದಲ್ಲೇ ಪಿಐಸಿಯು (ಪೋಸ್ಟ್ನೇಟಲ್ ತೀವ್ರ ನಿಗಾ ಘಟಕ) ಆರಂಭಿಸಲಾಗುವುದು. ಇದಕ್ಕೆ ಬೇಕಾದ ಉಪಕರಣ ಮತ್ತು ಸೌಲಭ್ಯದ ಕುರಿತು ವೈದ್ಯರು ಕ್ರಿಯಾಯೋಜನೆ ತಯಾರಿಸಿ, ಸಲ್ಲಿಸಿದಲ್ಲಿ. ಆ ಕೇಂದ್ರವನ್ನೂ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.<br /> <br /> ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮಾತನಾಡಿ, ಎನ್ಐಸಿಯು ಅತ್ಯಾಧುನಿಕ ಸೌಲಭ್ಯಗಳಿಂದ ನವೀಕರಣಗೊಂಡಿದೆ. ದಾವಣಗೆರೆಯಂತಹ ಪ್ರದೇಶಗಳಲ್ಲಿ ಇಂತಹ ವಿಭಾಗದ ಆವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ಕೇಂದ್ರದ ಕಾರ್ಯ ಶ್ಲಾಘನೀಯ. <br /> <br /> ವೈದ್ಯರು ಖಾಸಗಿ ಪ್ರಾಕ್ಟೀಸ್ ಬಿಟ್ಟು, ಆಸ್ಪತ್ರೆಯಲ್ಲೇ ಸೇವೆ ಸಲ್ಲಿಸಿ ರೋಗಿಗಳಿಗೆ ಸಹಕಾರ ನೀಡಬೇಕು ಎಂದು ಕಿವಿಮಾತು ಹೇಳಿದರು.ಡಾ.ಜಿ. ಗುರುಪ್ರಸಾದ್ ವಿಭಾಗದ ಪರಿಚಯ ಮಾಡಿಕೊಟ್ಟರು. ಕೇಂದ್ರದ ಕಾರ್ಯ ಕುರಿತ ಸಿ.ಡಿ.ಯನ್ನು ಡಾ.ನಿರ್ಮಲಾ ಕೇಸರಿ ಬಿಡುಗಡೆ ಮಾಡಿದರು. <br /> <br /> ಕಾಸಲ್ ಎಸ್. ವಿಠ್ಠಲ್, ಎ.ಎಸ್. ವೀರಣ್ಣ, ಎ.ಸಿ. ಜಯಣ್ಣ, ಆರ್. ರಮಾನಂದ, ಬ್ರೆಜಿಲ್ನ ಡಾ.ಕರೇನ್, ಡಾ.ಸಿಸಿರೋ, ಮಕ್ಕಳ ವಿಭಾಗ ತಜ್ಞವೈದ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು. <br /> <br /> ಸಿಯಾನಿ ಪ್ರಾರ್ಥಿಸಿದರು. ಜೆಜೆಎಂಸಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಆರ್. ಚಂದ್ರಶೇಖರ ಸ್ವಾಗತಿಸಿದರು. ಡಾ.ಪಿ.ಎಸ್. ಸುರೇಶ್ಬಾಬು ಕಾರ್ಯಕ್ರಮ ನಿರೂಪಿಸಿದರು. ಡಾ.ಸಿ.ಆರ್. ಬಾಣಾಪುರಮಠ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>`ವೈದ್ಯರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ರೋಗಿಗಳಿಗೆ ನ್ಯಾಯ ಒದಗಿಸಬೇಕು~ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಕರೆ ನೀಡಿದರು.ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಗುರುವಾರ ನವೀಕೃತ `ಶಿವಪಾರ್ವತಿ~ ನವಜಾತ ಶಿಶು ವಿಭಾಗ (ಎನ್ಐಸಿಯು)ದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.<br /> <br /> ಬಾಪೂಜಿ ಮಕ್ಕಳ ಆಸ್ಪತ್ರೆಯ ಸಿಬ್ಬಂದಿಗೆ ಇಂದು ಅತ್ಯಂತ ಸಂತಸದ ದಿನ. ರೂ 3 ಕೋಟಿ ವೆಚ್ಚದಲ್ಲಿ ಮಕ್ಕಳ ವಿಭಾಗವನ್ನು ನವೀಕರಿಸಲಾಗಿದೆ. ರಾಜ್ಯದ ಯಾವುದೇ ಮಕ್ಕಳ ಆಸ್ಪತ್ರೆಯಲ್ಲಿ ದೊರೆಯದ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಇಲ್ಲಿದೆ. <br /> <br /> 50 ಇಂಟೆನ್ಸಿವ್ ಕೇರ್ ಸೌಲಭ್ಯ ಸೇರಿದಂತೆ ಮಕ್ಕಳ ಜೀವರಕ್ಷಣೆಗೆ ಬೇಕಾದ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಬ್ರೆಜಿಲ್ನಿಂದ ತರಿಸಲಾಗಿದೆ. ಯಾವುದೇ ಮಗು ಇಲ್ಲಿ ದಾಖಲಾದಾಗ ಚಿಕಿತ್ಸೆಗಾಗಿ ಇತರ ಆಸ್ಪತ್ರೆಯನ್ನು ಅವಲಂಬಿಸದಿರಲಿ ಎನ್ನುವ ಉದ್ದೇಶದಿಂದ ವಿಭಾಗವನ್ನು ನವೀಕರಣಗೊಳಿಸಲಾಗಿದೆ ಎಂದು ವಿವರಿಸಿದರು.<br /> <br /> ದಾವಣಗೆರೆ ಸೇರಿದಂತೆ ಸುತ್ತಮುತ್ತಲ 8-10 ಜಿಲ್ಲೆಗಳ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಆಗಲೆಂದು ಬಾಪೂಜಿ ಆಸ್ಪತ್ರೆಯ ವಿವಿಧ ವಿಭಾಗಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಈಗಾಗಲೇ ಎಂಆರ್ಐ, ರೇಡಿಯೋಲಾಜಿ ವಿಭಾಗವನ್ನು ರೂ 6ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ವೈದ್ಯರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ರೋಗಿಗಳಿಗೆ ನ್ಯಾಯ ಒದಗಿಸಬೇಕು ಎಂದು ಸಲಹೆ ನೀಡಿದರು.<br /> <br /> ಶೀಘ್ರದಲ್ಲೇ ಪಿಐಸಿಯು (ಪೋಸ್ಟ್ನೇಟಲ್ ತೀವ್ರ ನಿಗಾ ಘಟಕ) ಆರಂಭಿಸಲಾಗುವುದು. ಇದಕ್ಕೆ ಬೇಕಾದ ಉಪಕರಣ ಮತ್ತು ಸೌಲಭ್ಯದ ಕುರಿತು ವೈದ್ಯರು ಕ್ರಿಯಾಯೋಜನೆ ತಯಾರಿಸಿ, ಸಲ್ಲಿಸಿದಲ್ಲಿ. ಆ ಕೇಂದ್ರವನ್ನೂ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.<br /> <br /> ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮಾತನಾಡಿ, ಎನ್ಐಸಿಯು ಅತ್ಯಾಧುನಿಕ ಸೌಲಭ್ಯಗಳಿಂದ ನವೀಕರಣಗೊಂಡಿದೆ. ದಾವಣಗೆರೆಯಂತಹ ಪ್ರದೇಶಗಳಲ್ಲಿ ಇಂತಹ ವಿಭಾಗದ ಆವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ಕೇಂದ್ರದ ಕಾರ್ಯ ಶ್ಲಾಘನೀಯ. <br /> <br /> ವೈದ್ಯರು ಖಾಸಗಿ ಪ್ರಾಕ್ಟೀಸ್ ಬಿಟ್ಟು, ಆಸ್ಪತ್ರೆಯಲ್ಲೇ ಸೇವೆ ಸಲ್ಲಿಸಿ ರೋಗಿಗಳಿಗೆ ಸಹಕಾರ ನೀಡಬೇಕು ಎಂದು ಕಿವಿಮಾತು ಹೇಳಿದರು.ಡಾ.ಜಿ. ಗುರುಪ್ರಸಾದ್ ವಿಭಾಗದ ಪರಿಚಯ ಮಾಡಿಕೊಟ್ಟರು. ಕೇಂದ್ರದ ಕಾರ್ಯ ಕುರಿತ ಸಿ.ಡಿ.ಯನ್ನು ಡಾ.ನಿರ್ಮಲಾ ಕೇಸರಿ ಬಿಡುಗಡೆ ಮಾಡಿದರು. <br /> <br /> ಕಾಸಲ್ ಎಸ್. ವಿಠ್ಠಲ್, ಎ.ಎಸ್. ವೀರಣ್ಣ, ಎ.ಸಿ. ಜಯಣ್ಣ, ಆರ್. ರಮಾನಂದ, ಬ್ರೆಜಿಲ್ನ ಡಾ.ಕರೇನ್, ಡಾ.ಸಿಸಿರೋ, ಮಕ್ಕಳ ವಿಭಾಗ ತಜ್ಞವೈದ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು. <br /> <br /> ಸಿಯಾನಿ ಪ್ರಾರ್ಥಿಸಿದರು. ಜೆಜೆಎಂಸಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಆರ್. ಚಂದ್ರಶೇಖರ ಸ್ವಾಗತಿಸಿದರು. ಡಾ.ಪಿ.ಎಸ್. ಸುರೇಶ್ಬಾಬು ಕಾರ್ಯಕ್ರಮ ನಿರೂಪಿಸಿದರು. ಡಾ.ಸಿ.ಆರ್. ಬಾಣಾಪುರಮಠ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>