<p><strong>ಬೆಂಗಳೂರು:</strong> ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಪ್ರದರ್ಶನ ಮೇಳಗಳಿಗೆ ಹೋಗಿ ಆಭರಣ ಕಳವು ಮಾಡುತ್ತಿದ್ದ ಕಲ್ಪನಾ (51) ಎಂಬ ವೈದ್ಯೆ ಪೊಲೀಸ್ ಬಲೆಗೆ ಬಿದ್ದಿದ್ದಾಳೆ.<br /> <br /> ಎಂಬಿಬಿಎಸ್ ಪದವೀಧರೆಯಾದ ಕಲ್ಪನಾ, ಬಸವೇಶ್ವರನಗರದಲ್ಲಿ ವಾಸವಾಗಿದ್ದಾರೆ. ಮನೆ ಸಮೀಪವೇ ಸ್ವಂತ ಕ್ಲಿನಿಕ್ ನಡೆಸುತ್ತಿದ್ದ ಅವರು, ಕೆಲ ತಿಂಗಳಿಂದ ವೈದ್ಯ ವೃತ್ತಿಯಿಂದ ಹಿಂದೆ ಸರಿದಿದ್ದರು. ಅವರ ಪತಿ ಖಾಸಗಿ ಸೆಕ್ಯುರಿಟಿ ಏಜೆನ್ಸಿಯೊಂದರಲ್ಲಿ ವ್ಯವಸ್ಥಾಪಕರಾಗಿದ್ದಾರೆ.<br /> <br /> ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ.<br /> <br /> ಇತ್ತೀಚೆಗೆ ಸುಬ್ರಹ್ಮಣ್ಯನಗರದ ಶೆರಟನ್ ಹೋಟೆಲ್ನಲ್ಲಿ ಆಯೋಜಿಸಿದ್ದ ಚಿನ್ನಾಭರಣ ಪ್ರದರ್ಶನ ಮೇಳದಲ್ಲಿ ಕಲ್ಪನಾ ತನ್ನ ಕೈಚಳಕ ತೋರಲೆತ್ನಿಸಿದ್ದಳು. ಆಗ ಮಫ್ತಿಯಲ್ಲಿದ್ದ ಪೊಲೀಸರು ಆಕೆಯನ್ನು ಬಂಧಿಸಿ, ₨ 32 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.<br /> <br /> 2008ರಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆಕೆಯನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದ ಕಲ್ಪನಾ, ಪುನಃ ತನ್ನ ಕೃತ್ಯವನ್ನು ಮುಂದುವರಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.<br /> <br /> ಇದೇ ಫೆಬ್ರುವರಿ ತಿಂಗಳಲ್ಲಿ ಜಯಮಹಲ್ ಪ್ಯಾಲೆಸ್ ಹೋಟೆಲ್ನಲ್ಲಿ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮೇಳ ನಡೆದಿತ್ತು. ಅಲ್ಲಿಗೆ ಹೋಗಿದ್ದ ಕಲ್ಪನಾ, ವ್ಯಾಪಾರಿಯ ಗಮನ ಬೇರೆಡೆ ಸೆಳೆದು 75 ಗ್ರಾಂ ತೂಕದ ಚಿನ್ನದ ಸರ ಕದ್ದು ಪರಾರಿಯಾಗಿದ್ದಳು. ಈ ಸಂಬಂಧ ವ್ಯಾಪಾರಿ ಜೆ.ಸಿ.ನಗರ ಠಾಣೆಗೆ ದೂರು ಕೊಟ್ಟಿದ್ದರು.<br /> <br /> ತನಿಖೆ ಕೈಗೆತ್ತಿಕೊಂಡ ಉತ್ತರ ವಿಭಾಗದ ಪೊಲೀಸರು, ಹೋಟೆಲ್ನಲ್ಲಿ ಅಳವಡಿಸಿದ್ದ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿ ಮಹಿಳೆ ಎಂದು ತಿಳಿದಿತ್ತು. ಆದರೆ, ಚಹರೆ ಸ್ಪಷ್ಟವಾಗಿ ಕಾಣದ ಕಾರಣ ಆಕೆ ಕಲ್ಪನಾ ಎಂದು ಸ್ಪಷ್ಟವಾಗಿ ಗೊತ್ತಾಗಿರಲಿಲ್ಲ.<br /> <br /> ಈ ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲಿ ಶೆರಟನ್ ಹೋಟೆಲ್ನಲ್ಲಿ ಮತ್ತೊಂದು ಮೇಳ ನಡೆಯಿತು. ಈ ಮಾಹಿತಿ ಪಡೆದ ತನಿಖಾಧಿಕಾರಿಗಳು, ಆಕೆ ಕಳವು ಮಾಡಲು ಅಲ್ಲಿಗೂ ಹೋಗಬಹುದು ಎಂದು ಶಂಕಿಸಿದ್ದಾರೆ. ನಂತರ ಮಫ್ತಿಯಲ್ಲಿ ಮೇಳಕ್ಕೆ ಹೋದಾಗ ಕಲ್ಪನಾ ಅಲ್ಲಿಗೆ ಬಂದಿದ್ದಾಳೆ. ಕೂಡಲೇ ಪೊಲೀಸ್ ಸಿಬ್ಬಂದಿ ಆಕೆಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.<br /> ‘ಆಭರಣ ಕಳವು ಮಾಡುವ ಉದ್ದೇಶದಿಂದ ಮೇಳಕ್ಕೆ ಬಂದಿದ್ದಾಗಿ ಆಕೆ ಹೇಳಿಕೆ ಕೊಟ್ಟಿದ್ದಾಳೆ.<br /> <br /> ಅಲ್ಲದೆ, ಜೆ.ಸಿ.ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.<br /> <br /> <strong>ವಿನ್ಯಾಸದ ಒಡವೆ ತೊಡುವ ಖಯಾಲಿ</strong><br /> ‘ಬಳೆ, ನಕ್ಲೆಸ್ ಸೇರಿದಂತೆ ಹೊಸ ವಿನ್ಯಾಸದ ಆಭರಣಗಳನ್ನು ತೊಟ್ಟು ಶೋಕಿ ಮಾಡುವುದು ಕಲ್ಪನಾಳ ಖಯಾಲಿ. ಹೀಗಾಗಿ ಮನೆಯಲ್ಲಿ ಸಾಕಷ್ಟು ಆಭರಣ ಇದ್ದರೂ, ನಗರದಲ್ಲಿ ನಡೆಯುವ ಚಿನ್ನಾಭರಣ ಪ್ರದರ್ಶನ ಮೇಳಗಳಿಗೆ ಗ್ರಾಹಕರ ಸೋಗಿನಲ್ಲಿ ಹೋಗುತ್ತಿದ್ದಳು. ನಂತರ ಅಲ್ಲಿನ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ತನಗೆ ಬೇಕೆನಿಸಿದ ಆಭರಣವನ್ನು ಮಾತ್ರ ದೋಚುತ್ತಿದ್ದಳು’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಪ್ರದರ್ಶನ ಮೇಳಗಳಿಗೆ ಹೋಗಿ ಆಭರಣ ಕಳವು ಮಾಡುತ್ತಿದ್ದ ಕಲ್ಪನಾ (51) ಎಂಬ ವೈದ್ಯೆ ಪೊಲೀಸ್ ಬಲೆಗೆ ಬಿದ್ದಿದ್ದಾಳೆ.<br /> <br /> ಎಂಬಿಬಿಎಸ್ ಪದವೀಧರೆಯಾದ ಕಲ್ಪನಾ, ಬಸವೇಶ್ವರನಗರದಲ್ಲಿ ವಾಸವಾಗಿದ್ದಾರೆ. ಮನೆ ಸಮೀಪವೇ ಸ್ವಂತ ಕ್ಲಿನಿಕ್ ನಡೆಸುತ್ತಿದ್ದ ಅವರು, ಕೆಲ ತಿಂಗಳಿಂದ ವೈದ್ಯ ವೃತ್ತಿಯಿಂದ ಹಿಂದೆ ಸರಿದಿದ್ದರು. ಅವರ ಪತಿ ಖಾಸಗಿ ಸೆಕ್ಯುರಿಟಿ ಏಜೆನ್ಸಿಯೊಂದರಲ್ಲಿ ವ್ಯವಸ್ಥಾಪಕರಾಗಿದ್ದಾರೆ.<br /> <br /> ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ.<br /> <br /> ಇತ್ತೀಚೆಗೆ ಸುಬ್ರಹ್ಮಣ್ಯನಗರದ ಶೆರಟನ್ ಹೋಟೆಲ್ನಲ್ಲಿ ಆಯೋಜಿಸಿದ್ದ ಚಿನ್ನಾಭರಣ ಪ್ರದರ್ಶನ ಮೇಳದಲ್ಲಿ ಕಲ್ಪನಾ ತನ್ನ ಕೈಚಳಕ ತೋರಲೆತ್ನಿಸಿದ್ದಳು. ಆಗ ಮಫ್ತಿಯಲ್ಲಿದ್ದ ಪೊಲೀಸರು ಆಕೆಯನ್ನು ಬಂಧಿಸಿ, ₨ 32 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.<br /> <br /> 2008ರಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆಕೆಯನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದ ಕಲ್ಪನಾ, ಪುನಃ ತನ್ನ ಕೃತ್ಯವನ್ನು ಮುಂದುವರಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.<br /> <br /> ಇದೇ ಫೆಬ್ರುವರಿ ತಿಂಗಳಲ್ಲಿ ಜಯಮಹಲ್ ಪ್ಯಾಲೆಸ್ ಹೋಟೆಲ್ನಲ್ಲಿ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮೇಳ ನಡೆದಿತ್ತು. ಅಲ್ಲಿಗೆ ಹೋಗಿದ್ದ ಕಲ್ಪನಾ, ವ್ಯಾಪಾರಿಯ ಗಮನ ಬೇರೆಡೆ ಸೆಳೆದು 75 ಗ್ರಾಂ ತೂಕದ ಚಿನ್ನದ ಸರ ಕದ್ದು ಪರಾರಿಯಾಗಿದ್ದಳು. ಈ ಸಂಬಂಧ ವ್ಯಾಪಾರಿ ಜೆ.ಸಿ.ನಗರ ಠಾಣೆಗೆ ದೂರು ಕೊಟ್ಟಿದ್ದರು.<br /> <br /> ತನಿಖೆ ಕೈಗೆತ್ತಿಕೊಂಡ ಉತ್ತರ ವಿಭಾಗದ ಪೊಲೀಸರು, ಹೋಟೆಲ್ನಲ್ಲಿ ಅಳವಡಿಸಿದ್ದ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿ ಮಹಿಳೆ ಎಂದು ತಿಳಿದಿತ್ತು. ಆದರೆ, ಚಹರೆ ಸ್ಪಷ್ಟವಾಗಿ ಕಾಣದ ಕಾರಣ ಆಕೆ ಕಲ್ಪನಾ ಎಂದು ಸ್ಪಷ್ಟವಾಗಿ ಗೊತ್ತಾಗಿರಲಿಲ್ಲ.<br /> <br /> ಈ ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲಿ ಶೆರಟನ್ ಹೋಟೆಲ್ನಲ್ಲಿ ಮತ್ತೊಂದು ಮೇಳ ನಡೆಯಿತು. ಈ ಮಾಹಿತಿ ಪಡೆದ ತನಿಖಾಧಿಕಾರಿಗಳು, ಆಕೆ ಕಳವು ಮಾಡಲು ಅಲ್ಲಿಗೂ ಹೋಗಬಹುದು ಎಂದು ಶಂಕಿಸಿದ್ದಾರೆ. ನಂತರ ಮಫ್ತಿಯಲ್ಲಿ ಮೇಳಕ್ಕೆ ಹೋದಾಗ ಕಲ್ಪನಾ ಅಲ್ಲಿಗೆ ಬಂದಿದ್ದಾಳೆ. ಕೂಡಲೇ ಪೊಲೀಸ್ ಸಿಬ್ಬಂದಿ ಆಕೆಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.<br /> ‘ಆಭರಣ ಕಳವು ಮಾಡುವ ಉದ್ದೇಶದಿಂದ ಮೇಳಕ್ಕೆ ಬಂದಿದ್ದಾಗಿ ಆಕೆ ಹೇಳಿಕೆ ಕೊಟ್ಟಿದ್ದಾಳೆ.<br /> <br /> ಅಲ್ಲದೆ, ಜೆ.ಸಿ.ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.<br /> <br /> <strong>ವಿನ್ಯಾಸದ ಒಡವೆ ತೊಡುವ ಖಯಾಲಿ</strong><br /> ‘ಬಳೆ, ನಕ್ಲೆಸ್ ಸೇರಿದಂತೆ ಹೊಸ ವಿನ್ಯಾಸದ ಆಭರಣಗಳನ್ನು ತೊಟ್ಟು ಶೋಕಿ ಮಾಡುವುದು ಕಲ್ಪನಾಳ ಖಯಾಲಿ. ಹೀಗಾಗಿ ಮನೆಯಲ್ಲಿ ಸಾಕಷ್ಟು ಆಭರಣ ಇದ್ದರೂ, ನಗರದಲ್ಲಿ ನಡೆಯುವ ಚಿನ್ನಾಭರಣ ಪ್ರದರ್ಶನ ಮೇಳಗಳಿಗೆ ಗ್ರಾಹಕರ ಸೋಗಿನಲ್ಲಿ ಹೋಗುತ್ತಿದ್ದಳು. ನಂತರ ಅಲ್ಲಿನ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ತನಗೆ ಬೇಕೆನಿಸಿದ ಆಭರಣವನ್ನು ಮಾತ್ರ ದೋಚುತ್ತಿದ್ದಳು’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>