<p><strong>ಶನಿವಾರಸಂತೆ:</strong> ಉಳಿತಾಯದ ಮನೋಭಾವ ಮಾನವನಲ್ಲಿ ಮಾತ್ರವಲ್ಲ, ಪ್ರಾಣಿ, ಪಕ್ಷಿಗಳಲ್ಲೂ ಕಂಡು ಬರುತ್ತದೆ ಎಂದು ಬೆಂಗಳೂರಿನ ದಕ್ಷಿಣ ಕರ್ನಾಟಕ ವಲಯ ಅಂಚೆ ಸೇವೆಗಳ ಸಹಾಯಕ ನಿರ್ದೇಶಕ ವೇಣುಗೋಪಾಲ್ ಹೇಳಿದರು.<br /> <br /> ಕೊಡಗು ಅಂಚೆ ವಿಭಾಗ ಮತ್ತು ಸೋಮವಾರಪೇಟೆ ಅಂಚೆ ಉಪವಿಭಾಗದ ವತಿಯಿಂದ ಶುಕ್ರವಾರ ಶನಿವಾರಸಂತೆಯ ಬಸಪ್ಪ ಸಭಾಂಗಣದಲ್ಲಿ ನಡೆದ `ಶನಿವಾರಸಂತೆ ಸಂಪೂರ್ಣ ಅಂಚೆ ಉಳಿತಾಯ ಹೋಬಳಿ~ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.<br /> <br /> ಮನೆ-ಮನೆಗಳಲ್ಲೂ ಉಳಿತಾಯ ಮಾಡಬೇಕು. ಮಕ್ಕಳಲ್ಲೇ ಉಳಿತಾಯದ ಮನೋಭಾವ ಬೆಳೆಸಬೇಕು. ಅಂಚೆ ಇಲಾಖೆಯ ಮೂಲಕ ಮಾಡುವ ಉಳಿತಾಯ ಭವಿಷ್ಯಕ್ಕೆ ಸಹಾಯಕ ಎಂದು ಕರೆ ನೀಡಿದರು.<br /> <br /> ಅಂಚೆ ನಿರೀಕ್ಷಕ ಎಸ್.ವಿ.ಮಂಜುನಾಥ್ ಮಾತನಾಡಿ, 13 ಸಾವಿರ ಉಳಿತಾಯ ಖಾತೆಗಳನ್ನು ತೆರೆಯುವ ಮೂಲಕ ಅಧಿಕ ಉಳಿತಾಯ ಮಾಡಿದ ಶನಿವಾರಸಂತೆ ಅಂಚೆ ಕಚೇರಿ ಜಿಲ್ಲೆಯಲ್ಲೇ ಪ್ರಥಮವೆನಿಸಿ ಅತ್ಯುತ್ತಮ ಸಾಧನೆ ಮಾಡಿದೆ ಎಂದರು.<br /> <br /> ಕಂದಾಯ ಇಲಾಖೆ ಉಪತಹಶೀಲ್ದಾರ್ ಚಂದ್ರಮೌಳಿ ಮಾತನಾಡಿ, ಜೀವನದಲ್ಲಿ ಉಳಿತಾಯ ಮಾಡುವುದು ಉತ್ತಮ ವ್ಯವಸ್ಥೆ. ಉಳಿತಾಯ ಸದ್ವಿನಿಯೋಗವಾಗಬೇಕು. <br /> <br /> ಕಾರ್ಯಕ್ರಮ ಉದ್ಘಾಟಿಸಿದ ಪಿಎಸ್ಐ ಮಹದೇವಯ್ಯ, ಜಿಲ್ಲಾ ಅಂಚೆ ವಿಭಾಗದ ಸಹಾಯಕ ನಿರ್ದೇಶಕ ರಾಜಶೇಖರಯ್ಯ, ಸಹಾಯಕ ಉಪ ಅಧೀಕ್ಷಕ ಕೆ.ವೀರಣ್ಣ ಮಾತನಾಡಿ, ಅಂಚೆ ಇಲಾಖೆಯಲ್ಲಿ ವಂಚನೆಯಿಲ್ಲ. ಪ್ರತಿ ಮನೆಯಲ್ಲೊಂದು ಉಳಿತಾಯದ ಖಾತೆ ತೆರೆಯಬೇಕೆಂಬ ಯೋಜನೆ ಹಮ್ಮಿಕೊಂಡಿದ್ದು ಯಶಸ್ವಿಯಾಗಿದೆ ಎಂದರು.<br /> <br /> ಅಧ್ಯಕ್ಷತೆ ವಹಿಸಿದ್ದ ಕೊಡಗು ಅಂಚೆ ವಿಭಾಗ ಅಧೀಕ್ಷಕ ಕೆ.ರಾಮಲಿಂಗಯ್ಯ ಮಾತನಾಡಿ, ಉಳಿತಾಯದಲ್ಲೂ ವೈವಿಧ್ಯತೆ ಇದೆ. ಕಷ್ಟ ಕಾಲಕ್ಕಾಗಿ ಉಳಿತಾಯ ಮಾಡುವುದು ಅಗತ್ಯ. <br /> <br /> ಸಮಸ್ಯೆಗಳಿಗೆ ಸ್ಪಂದಿಸುತ್ತ ಅಂಚೆ ಇಲಾಖೆಯವರು ಗ್ರಾಹಕರ ಮನವೊಲಿಸಿ ಉಳಿತಾಯ ಮಾಡಿಸಬೇಕು ಎಂದರು. ಈ ಸಂದರ್ಭದಲ್ಲಿ ಸಣ್ಣ ಉಳಿತಾಯ ಖಾತೆದಾರರಿಗೆ ಪಾಸ್ ಪುಸ್ತಕ ಹಾಗೂ ಸಿಬ್ಬಂದಿ ವರ್ಗದವರಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. <br /> <br /> ಸೋಮವಾರಪೇಟೆ ಉಪವಿಭಾಗದ ಅಂಚೆ ನಿರೀಕ್ಷಕ ಎಚ್.ಜೆ.ಸೋಮಯ್ಯ, ಶನಿವಾರಸಂತೆ ಉಪ ಅಂಚೆ ಪಾಲಕ ಎಚ್.ಎ.ರಾಮಣ್ಣ, ಶನಿವಾರಸಂತೆ ಅಂಚೆ ಕಚೇರಿ ಹಾಗೂ ಹೋಬಳಿಯ ವಿವಿಧ ಗ್ರಾಮಗಳ ಅಂಚೆ ಕಚೇರಿಗಳ ಅಧಿಕಾರಿಗಳು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.<br /> <br /> ಅಂಚೆ ನಿರೀಕ್ಷಕ ಎಚ್.ಜೆ.ಸೋಮಯ್ಯ ಸ್ವಾಗತಿಸಿದರು. ಟಿ.ಪಿ.ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು. <br /> ಅಂಚೆ ನಿರೀಕ್ಷಕ ಚೇತನ್ಉತ್ತಯ್ಯ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ರಸ್ತೆಯಲ್ಲಿ ಮೆರವಣಿಗೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶನಿವಾರಸಂತೆ:</strong> ಉಳಿತಾಯದ ಮನೋಭಾವ ಮಾನವನಲ್ಲಿ ಮಾತ್ರವಲ್ಲ, ಪ್ರಾಣಿ, ಪಕ್ಷಿಗಳಲ್ಲೂ ಕಂಡು ಬರುತ್ತದೆ ಎಂದು ಬೆಂಗಳೂರಿನ ದಕ್ಷಿಣ ಕರ್ನಾಟಕ ವಲಯ ಅಂಚೆ ಸೇವೆಗಳ ಸಹಾಯಕ ನಿರ್ದೇಶಕ ವೇಣುಗೋಪಾಲ್ ಹೇಳಿದರು.<br /> <br /> ಕೊಡಗು ಅಂಚೆ ವಿಭಾಗ ಮತ್ತು ಸೋಮವಾರಪೇಟೆ ಅಂಚೆ ಉಪವಿಭಾಗದ ವತಿಯಿಂದ ಶುಕ್ರವಾರ ಶನಿವಾರಸಂತೆಯ ಬಸಪ್ಪ ಸಭಾಂಗಣದಲ್ಲಿ ನಡೆದ `ಶನಿವಾರಸಂತೆ ಸಂಪೂರ್ಣ ಅಂಚೆ ಉಳಿತಾಯ ಹೋಬಳಿ~ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.<br /> <br /> ಮನೆ-ಮನೆಗಳಲ್ಲೂ ಉಳಿತಾಯ ಮಾಡಬೇಕು. ಮಕ್ಕಳಲ್ಲೇ ಉಳಿತಾಯದ ಮನೋಭಾವ ಬೆಳೆಸಬೇಕು. ಅಂಚೆ ಇಲಾಖೆಯ ಮೂಲಕ ಮಾಡುವ ಉಳಿತಾಯ ಭವಿಷ್ಯಕ್ಕೆ ಸಹಾಯಕ ಎಂದು ಕರೆ ನೀಡಿದರು.<br /> <br /> ಅಂಚೆ ನಿರೀಕ್ಷಕ ಎಸ್.ವಿ.ಮಂಜುನಾಥ್ ಮಾತನಾಡಿ, 13 ಸಾವಿರ ಉಳಿತಾಯ ಖಾತೆಗಳನ್ನು ತೆರೆಯುವ ಮೂಲಕ ಅಧಿಕ ಉಳಿತಾಯ ಮಾಡಿದ ಶನಿವಾರಸಂತೆ ಅಂಚೆ ಕಚೇರಿ ಜಿಲ್ಲೆಯಲ್ಲೇ ಪ್ರಥಮವೆನಿಸಿ ಅತ್ಯುತ್ತಮ ಸಾಧನೆ ಮಾಡಿದೆ ಎಂದರು.<br /> <br /> ಕಂದಾಯ ಇಲಾಖೆ ಉಪತಹಶೀಲ್ದಾರ್ ಚಂದ್ರಮೌಳಿ ಮಾತನಾಡಿ, ಜೀವನದಲ್ಲಿ ಉಳಿತಾಯ ಮಾಡುವುದು ಉತ್ತಮ ವ್ಯವಸ್ಥೆ. ಉಳಿತಾಯ ಸದ್ವಿನಿಯೋಗವಾಗಬೇಕು. <br /> <br /> ಕಾರ್ಯಕ್ರಮ ಉದ್ಘಾಟಿಸಿದ ಪಿಎಸ್ಐ ಮಹದೇವಯ್ಯ, ಜಿಲ್ಲಾ ಅಂಚೆ ವಿಭಾಗದ ಸಹಾಯಕ ನಿರ್ದೇಶಕ ರಾಜಶೇಖರಯ್ಯ, ಸಹಾಯಕ ಉಪ ಅಧೀಕ್ಷಕ ಕೆ.ವೀರಣ್ಣ ಮಾತನಾಡಿ, ಅಂಚೆ ಇಲಾಖೆಯಲ್ಲಿ ವಂಚನೆಯಿಲ್ಲ. ಪ್ರತಿ ಮನೆಯಲ್ಲೊಂದು ಉಳಿತಾಯದ ಖಾತೆ ತೆರೆಯಬೇಕೆಂಬ ಯೋಜನೆ ಹಮ್ಮಿಕೊಂಡಿದ್ದು ಯಶಸ್ವಿಯಾಗಿದೆ ಎಂದರು.<br /> <br /> ಅಧ್ಯಕ್ಷತೆ ವಹಿಸಿದ್ದ ಕೊಡಗು ಅಂಚೆ ವಿಭಾಗ ಅಧೀಕ್ಷಕ ಕೆ.ರಾಮಲಿಂಗಯ್ಯ ಮಾತನಾಡಿ, ಉಳಿತಾಯದಲ್ಲೂ ವೈವಿಧ್ಯತೆ ಇದೆ. ಕಷ್ಟ ಕಾಲಕ್ಕಾಗಿ ಉಳಿತಾಯ ಮಾಡುವುದು ಅಗತ್ಯ. <br /> <br /> ಸಮಸ್ಯೆಗಳಿಗೆ ಸ್ಪಂದಿಸುತ್ತ ಅಂಚೆ ಇಲಾಖೆಯವರು ಗ್ರಾಹಕರ ಮನವೊಲಿಸಿ ಉಳಿತಾಯ ಮಾಡಿಸಬೇಕು ಎಂದರು. ಈ ಸಂದರ್ಭದಲ್ಲಿ ಸಣ್ಣ ಉಳಿತಾಯ ಖಾತೆದಾರರಿಗೆ ಪಾಸ್ ಪುಸ್ತಕ ಹಾಗೂ ಸಿಬ್ಬಂದಿ ವರ್ಗದವರಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. <br /> <br /> ಸೋಮವಾರಪೇಟೆ ಉಪವಿಭಾಗದ ಅಂಚೆ ನಿರೀಕ್ಷಕ ಎಚ್.ಜೆ.ಸೋಮಯ್ಯ, ಶನಿವಾರಸಂತೆ ಉಪ ಅಂಚೆ ಪಾಲಕ ಎಚ್.ಎ.ರಾಮಣ್ಣ, ಶನಿವಾರಸಂತೆ ಅಂಚೆ ಕಚೇರಿ ಹಾಗೂ ಹೋಬಳಿಯ ವಿವಿಧ ಗ್ರಾಮಗಳ ಅಂಚೆ ಕಚೇರಿಗಳ ಅಧಿಕಾರಿಗಳು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.<br /> <br /> ಅಂಚೆ ನಿರೀಕ್ಷಕ ಎಚ್.ಜೆ.ಸೋಮಯ್ಯ ಸ್ವಾಗತಿಸಿದರು. ಟಿ.ಪಿ.ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು. <br /> ಅಂಚೆ ನಿರೀಕ್ಷಕ ಚೇತನ್ಉತ್ತಯ್ಯ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ರಸ್ತೆಯಲ್ಲಿ ಮೆರವಣಿಗೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>