<p><strong>ದಾವಣಗೆರೆ: </strong>‘ತೋಟಗಾರಿಕೆ ಹಾಗೂ ಕೃಷಿ ಉತ್ನನ್ನ ಮಾರುಕಟ್ಟೆ ಸಮಿತಿ ಸಚಿವ ಶಾಮನೂರು ಶಿವಶಂಕರಪ್ಪ ಮುಖ್ಯಮಂತ್ರಿಯಾದರೆ ನಾನು ಪಕ್ಷ ತೊರೆದು ಅವರೊಂದಿಗೆ ಬರುತ್ತೇನೆ’ ಎಂದು ಜೆಡಿಎಸ್ ಶಾಸಕ ಎಚ್.ಎಸ್.ಶಿವಶಂಕರ್ ಅಚ್ಚರಿಯ ಹೇಳಿಕೆ ನೀಡಿದರು.<br /> <br /> ಸಾಧು ಸದ್ಧರ್ಮ ವೀರಶೈವ ಸಂಘ ನಗರದಲ್ಲಿ ಶನಿವಾರ ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ‘ಜೆ.ಎಚ್.ಪಟೇಲರ ನಂತರ ಮಧ್ಯ ಕರ್ನಾಟಕದಿಂದ ಯಾರೂ ಮುಖ್ಯಮಂತ್ರಿಯಾಗಿಲ್ಲ. ಈ ಭಾಗದಿಂದ ಮುಖ್ಯಮಂತ್ರಿಯಾಗಬಲ್ಲ ನಾಯಕನಿದ್ದರೆ ಅವರು ಶಾಮನೂರು ಶಿವ-ಶಂಕರಪ್ಪ ಮಾತ್ರ. ಮೃದು ಧೋರಣೆಯ ಸ್ವಭಾವ ಬಿಟ್ಟು ಹೋರಾಟ ಮಾಡಿದರೆ ಮುಖ್ಯಮಂತ್ರಿಯಾಗುವ ಶಕ್ತಿ ಅವರಿಗಿದೆ’ ಎಂದು ಜಿಲ್ಲೆಯ ಏಕೈಕ ಜೆಡಿಎಸ್ ಶಾಸಕ ಶಿವಶಂಕರ್ ಹೇಳಿದರು.<br /> <br /> ‘ನೀವು ಮುನ್ನಗ್ಗಿ, ನಾನು ಜೊತೆಗೆ ಬರುತ್ತೇನೆ. ನಾನೂ ನಿಮ್ಮ ಪುತ್ರನಿದ್ದಂತೆ. ನಿಮ್ಮ ಪುತ್ರ– ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಜೋಡೆತ್ತಿನಂತೆ. ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ. ನಿಮ್ಮೊಂದಿಗೆ ಸದಾ ಕೈಜೋಡಿಸುತ್ತೇವೆ’ ಎಂದು ವೇದಿಕೆಯಲ್ಲಿದ್ದ ಶಿವಶಂಕರಪ್ಪ ಅವರಿಗೆ ತಿಳಿಸಿದರು.<br /> <br /> ಇದಕ್ಕೂ ಮುನ್ನ ಮಾತನಾಡಿದ ಚನ್ನಗಿರಿ ಶಾಸಕ ವಡ್ನಾಳ್ ರಾಜಣ್ಣ, ‘ಶಿವಶಂಕರಪ್ಪ ಅವರಿಗೆ ಎಲ್ಲವೂ ಸಿಕ್ಕಿದೆ. ನನಗೆ ಮುಖ್ಯಮಂತ್ರಿಯಾಗಿ ಅವರನ್ನು ನೋಡಬೇಕು ಅನ್ನೋ ಕನಸಿದೆ. ಅದಕ್ಕೆಲ್ಲ ಬಹಳಷ್ಟು ಅವಕಾಶವೂ ಇದೆ’ ಎಂದರು.<br /> <br /> ‘ಶಾಮನೂರು ಶಿವಶಂಕರಪ್ಪ ಅವರು 15–20 ವರ್ಷದ ಹಿಂದೆಯೇ ಸಚಿವ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಬೇಕಿತ್ತು. ಆಗ ಸಮಾಜ ಇನ್ನಷ್ಟು ಅಭಿವೃದ್ಧಿ ಸಾಧಿಸುತ್ತಿತ್ತು’ ಎಂದು ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>‘ತೋಟಗಾರಿಕೆ ಹಾಗೂ ಕೃಷಿ ಉತ್ನನ್ನ ಮಾರುಕಟ್ಟೆ ಸಮಿತಿ ಸಚಿವ ಶಾಮನೂರು ಶಿವಶಂಕರಪ್ಪ ಮುಖ್ಯಮಂತ್ರಿಯಾದರೆ ನಾನು ಪಕ್ಷ ತೊರೆದು ಅವರೊಂದಿಗೆ ಬರುತ್ತೇನೆ’ ಎಂದು ಜೆಡಿಎಸ್ ಶಾಸಕ ಎಚ್.ಎಸ್.ಶಿವಶಂಕರ್ ಅಚ್ಚರಿಯ ಹೇಳಿಕೆ ನೀಡಿದರು.<br /> <br /> ಸಾಧು ಸದ್ಧರ್ಮ ವೀರಶೈವ ಸಂಘ ನಗರದಲ್ಲಿ ಶನಿವಾರ ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ‘ಜೆ.ಎಚ್.ಪಟೇಲರ ನಂತರ ಮಧ್ಯ ಕರ್ನಾಟಕದಿಂದ ಯಾರೂ ಮುಖ್ಯಮಂತ್ರಿಯಾಗಿಲ್ಲ. ಈ ಭಾಗದಿಂದ ಮುಖ್ಯಮಂತ್ರಿಯಾಗಬಲ್ಲ ನಾಯಕನಿದ್ದರೆ ಅವರು ಶಾಮನೂರು ಶಿವ-ಶಂಕರಪ್ಪ ಮಾತ್ರ. ಮೃದು ಧೋರಣೆಯ ಸ್ವಭಾವ ಬಿಟ್ಟು ಹೋರಾಟ ಮಾಡಿದರೆ ಮುಖ್ಯಮಂತ್ರಿಯಾಗುವ ಶಕ್ತಿ ಅವರಿಗಿದೆ’ ಎಂದು ಜಿಲ್ಲೆಯ ಏಕೈಕ ಜೆಡಿಎಸ್ ಶಾಸಕ ಶಿವಶಂಕರ್ ಹೇಳಿದರು.<br /> <br /> ‘ನೀವು ಮುನ್ನಗ್ಗಿ, ನಾನು ಜೊತೆಗೆ ಬರುತ್ತೇನೆ. ನಾನೂ ನಿಮ್ಮ ಪುತ್ರನಿದ್ದಂತೆ. ನಿಮ್ಮ ಪುತ್ರ– ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಜೋಡೆತ್ತಿನಂತೆ. ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ. ನಿಮ್ಮೊಂದಿಗೆ ಸದಾ ಕೈಜೋಡಿಸುತ್ತೇವೆ’ ಎಂದು ವೇದಿಕೆಯಲ್ಲಿದ್ದ ಶಿವಶಂಕರಪ್ಪ ಅವರಿಗೆ ತಿಳಿಸಿದರು.<br /> <br /> ಇದಕ್ಕೂ ಮುನ್ನ ಮಾತನಾಡಿದ ಚನ್ನಗಿರಿ ಶಾಸಕ ವಡ್ನಾಳ್ ರಾಜಣ್ಣ, ‘ಶಿವಶಂಕರಪ್ಪ ಅವರಿಗೆ ಎಲ್ಲವೂ ಸಿಕ್ಕಿದೆ. ನನಗೆ ಮುಖ್ಯಮಂತ್ರಿಯಾಗಿ ಅವರನ್ನು ನೋಡಬೇಕು ಅನ್ನೋ ಕನಸಿದೆ. ಅದಕ್ಕೆಲ್ಲ ಬಹಳಷ್ಟು ಅವಕಾಶವೂ ಇದೆ’ ಎಂದರು.<br /> <br /> ‘ಶಾಮನೂರು ಶಿವಶಂಕರಪ್ಪ ಅವರು 15–20 ವರ್ಷದ ಹಿಂದೆಯೇ ಸಚಿವ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಬೇಕಿತ್ತು. ಆಗ ಸಮಾಜ ಇನ್ನಷ್ಟು ಅಭಿವೃದ್ಧಿ ಸಾಧಿಸುತ್ತಿತ್ತು’ ಎಂದು ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>