<p><strong>ಭುವನೇಶ್ವರ (ಪಿಟಿಐ): </strong>ಬಿಜೆಡಿ ಶಾಸಕ ಜಿನಾ ಹಿಕಾಕ ಅವರನ್ನು ಅಪಹರಿಸಿರುವ ನಕ್ಸಲರು ಒಡಿಶಾ ಸರ್ಕಾರ ನೀಡಿರುವ ಸಂಧಾನ ಮಾತುಕತೆ ಆಹ್ವಾನವನ್ನು ತಿರಸ್ಕರಿಸಿದ್ದು, ತಮ್ಮ ಬೇಡಿಕೆಗಳ ಈಡೇರಿಕೆಗೆ ಏಪ್ರಿಲ್ 5ರವರೆಗೆ ಗಡುವು ನೀಡಿದ್ದಾರೆ.<br /> <br /> ಶಾಸಕರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಬೇಕಾದರೆ ಇತ್ತೀಚೆಗೆ ಜೈಲಿಗೆ ಕಳುಹಿಸಿರುವ ಮಾವೊವಾದಿಗಳ ಬಿಡುಗಡೆ ಸೇರಿದಂತೆ ಇತರ ಎಲ್ಲಾ ಬೇಡಿಕೆಗಳನ್ನು ಒಡಿಶಾ ಸರ್ಕಾರ ಏಪ್ರಿಲ್ 5 ಒಳಗಾಗಿ ಈಡೇರಿಸಬೇಕು ಎಂದು ಮಾವೊವಾದಿಗಳ ಆಂಧ್ರ-ಒಡಿಶಾ ವಿಶೇಷ ವಲಯ ಸಮಿತಿಯು ಕೆಲವು ಮಾಧ್ಯಮಗಳಿಗೆ ಕಳುಹಿಸಿರುವ ಧ್ವನಿಮುದ್ರಿತ ಸಂದೇಶದಲ್ಲಿ ಹೇಳಿದೆ.<br /> <br /> ಸಂಧಾನ ಮಾತುಕತೆಗೆ ಸರ್ಕಾರ ನೀಡಿರುವ ಆಹ್ವಾನ ಮತ್ತು ಸಂಧಾನಕಾರರ ಹೆಸರು ಸೂಚಿಸುವಂತೆ ಮಾಡಿರುವ ಮನವಿಯನ್ನು ಮಾವೊವಾದಿಗಳು ತಿರಸ್ಕರಿಸಿದ್ದು, ಯಾವುದೇ `ವಿಳಂಬ ತಂತ್ರ~ ಅನುಸರಿಸದೇ ವಿಧಿಸಿರುವ ಗಡುವಿನ ಒಳಗಾಗಿ ಸರ್ಕಾರ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂದೇಶದಲ್ಲಿ ಹೇಳಿದ್ದಾರೆ. <br /> <br /> ಇಟಲಿ ಪ್ರಜೆ ಪೌಲೊ ಬೊಸುಸ್ಕೊ ಅವರನ್ನು ಅಪಹರಿಸಿರುವ ನಕ್ಸಲರು ಕೂಡ ಸೋಮವಾರ ಧ್ವನಿ ಮುದ್ರಿತ ಸಂದೇಶವನ್ನು ರವಾನಿಸಿ, ಒಂದು ವೇಳೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ವಿಳಂಬ ಮಾಡಿದರೆ ಒತ್ತೆ ಇಟ್ಟಿರುವ ಇಟಲಿ ಪ್ರಜೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸೂಚಿಸಿದ್ದರು. <br /> <br /> ಮಾವೊವಾದಿಗಳ ಎರಡು ಗುಂಪುಗಳು ನೀಡಿರುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮಂಗಳವಾರ ಉನ್ನತ ಅಧಿಕಾರಿಗಳ ತುರ್ತು ಸಭೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು ಮಾತ್ರವಲ್ಲದೇ ಬಿಕ್ಕಟ್ಟನ್ನು ಪರಿಹರಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು.<br /> <br /> <strong>ವಿದೇಶಿಯರ ಭೇಟಿ ನಿಷೇಧ</strong><br /> <br /> <strong>ಕೋರಾಪುಟ್ ವರದಿ: </strong>ಒಡಿಶಾದಲ್ಲಿ ನಕ್ಸಲರು ಎರಡು ಅಪಹರಣ ಕೃತ್ಯ ನಡೆಸಿರುವ ಹಿನ್ನೆಲೆಯಲ್ಲಿ ನಕ್ಸಲ್ ಪೀಡಿತ ಕೋರಾಪುಟ್ ಜಿಲ್ಲೆಗೆ ವಿದೇಶಿಯರು ಭೇಟಿ ನೀಡುವುದಕ್ಕೆ ಸರ್ಕಾರ ಸಂಪೂರ್ಣವಾಗಿ ನಿಷೇಧ ಹೇರಿದೆ.<br /> ಜಿಲ್ಲಾಧಿಕಾರಿ ಸಚಿನ್ ಜಾಧವ್ ಈ ಸಂಬಂಧ ಎಲ್ಲಾ ಪ್ರವಾಸ ನಿರ್ವಹಣಾ ಸಂಸ್ಥೆಗಳಿಗೆ ಪತ್ರಗಳನ್ನು ಕಳುಹಿಸಿದ್ದಾರೆ.<br /> <br /> <strong>ಹಿಕಾಕ ಆರೋಗ್ಯ ಸ್ಥಿತಿ: ಸಹೋದ್ಯೋಗಿಗಳಲ್ಲಿ ಆತಂಕ</strong><br /> <br /> <strong>ಭುವನೇಶ್ವರ: </strong>ನಕ್ಸಲರಿಂದ ಅಪಹರಣಕ್ಕೊಳಗಾಗಿರುವ ಬಿಜೆಡಿ ಶಾಸಕ ಜಿನಾ ಹಿಕಾಕ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂದು ಹೇಳಲಾಗಿದ್ದು, ಸಹೋದ್ಯೋಗಿ ಶಾಸಕರು ಹಿಕಾಕ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.<br /> <br /> ಕೋರಟ್ಪುಟ್ ದಟ್ಟ ಅರಣ್ಯಭಾಗದಲ್ಲಿ ನಕ್ಸಲರ ಶಿಬಿರದಲ್ಲಿರುವ ಹಿಕಾಕ ಅವರು ಕಾಯಿಲೆಗೆ ತುತ್ತಾಗಿದ್ದಾರೆ ಎಂದು ಮಾವೊವಾದಿಗಳಿಗೆ ತುಂಬಾ ಆಪ್ತವಾಗಿರುವ ಮೂಲಗಳು ತಿಳಿಸಿವೆ. ಸೋಮವಾರ ಒಡಿಶಾ ವಿಧಾನಸಭೆಯಲ್ಲಿ ಇತರೆ ಶಾಸಕರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. <br /> <br /> ಸಾಮಾನ್ಯವಾಗಿ ನಕ್ಸಲರು ಒತ್ತೆಯಾಳುಗಳನ್ನು ಶಿಬಿರದಿಂದ ಶಿಬಿರದಿಂದ ಬದಲಾಯಿಸುದರಿಂದ ಹಾಗೂ ಸಾಕಷ್ಟು ದೂರ ನಡಿಗೆ ಮೂಲಕವೇ ಕರೆದೊಯ್ಯುವುದರಿಂದ ಆರೋಗ್ಯದಲ್ಲಿ ಏರು ಪೇರು ಉಂಟಾಗಿರಬಹುದು ಎಂದು ಹೇಳಲಾಗಿದೆ. <br /> <br /> ನಕ್ಸಲರು ಹಿಕಾಕ ಅವರನ್ನು ಅಪಹರಿಸಿ ಒಂದು ವಾರ ಕಳೆದಿರುವುದರಿಂದ ಈ ವಾದಕ್ಕೆ ಮತ್ತಷ್ಟು ಪುಷ್ಟಿ ದೊರೆತಿದೆ. ಮಾರ್ಚ್ 24ರಂದು ಅವರು ಅಪಹರಣಕ್ಕೊಳಗಾಗಿದ್ದರು. ಎರಡು ದಿನಗಳ ಹಿಂದೆ ಹಿಕಾಕ ಅವರಲ್ಲಿ ಜ್ವರ ಹಾಗೂ ವಾಂತಿ ಕಾಣಿಸಿಕೊಂಡಿದೆ ಎಂದು ಮಾವೊವಾದಿಗಳ ಆಪ್ತ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ (ಪಿಟಿಐ): </strong>ಬಿಜೆಡಿ ಶಾಸಕ ಜಿನಾ ಹಿಕಾಕ ಅವರನ್ನು ಅಪಹರಿಸಿರುವ ನಕ್ಸಲರು ಒಡಿಶಾ ಸರ್ಕಾರ ನೀಡಿರುವ ಸಂಧಾನ ಮಾತುಕತೆ ಆಹ್ವಾನವನ್ನು ತಿರಸ್ಕರಿಸಿದ್ದು, ತಮ್ಮ ಬೇಡಿಕೆಗಳ ಈಡೇರಿಕೆಗೆ ಏಪ್ರಿಲ್ 5ರವರೆಗೆ ಗಡುವು ನೀಡಿದ್ದಾರೆ.<br /> <br /> ಶಾಸಕರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಬೇಕಾದರೆ ಇತ್ತೀಚೆಗೆ ಜೈಲಿಗೆ ಕಳುಹಿಸಿರುವ ಮಾವೊವಾದಿಗಳ ಬಿಡುಗಡೆ ಸೇರಿದಂತೆ ಇತರ ಎಲ್ಲಾ ಬೇಡಿಕೆಗಳನ್ನು ಒಡಿಶಾ ಸರ್ಕಾರ ಏಪ್ರಿಲ್ 5 ಒಳಗಾಗಿ ಈಡೇರಿಸಬೇಕು ಎಂದು ಮಾವೊವಾದಿಗಳ ಆಂಧ್ರ-ಒಡಿಶಾ ವಿಶೇಷ ವಲಯ ಸಮಿತಿಯು ಕೆಲವು ಮಾಧ್ಯಮಗಳಿಗೆ ಕಳುಹಿಸಿರುವ ಧ್ವನಿಮುದ್ರಿತ ಸಂದೇಶದಲ್ಲಿ ಹೇಳಿದೆ.<br /> <br /> ಸಂಧಾನ ಮಾತುಕತೆಗೆ ಸರ್ಕಾರ ನೀಡಿರುವ ಆಹ್ವಾನ ಮತ್ತು ಸಂಧಾನಕಾರರ ಹೆಸರು ಸೂಚಿಸುವಂತೆ ಮಾಡಿರುವ ಮನವಿಯನ್ನು ಮಾವೊವಾದಿಗಳು ತಿರಸ್ಕರಿಸಿದ್ದು, ಯಾವುದೇ `ವಿಳಂಬ ತಂತ್ರ~ ಅನುಸರಿಸದೇ ವಿಧಿಸಿರುವ ಗಡುವಿನ ಒಳಗಾಗಿ ಸರ್ಕಾರ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂದೇಶದಲ್ಲಿ ಹೇಳಿದ್ದಾರೆ. <br /> <br /> ಇಟಲಿ ಪ್ರಜೆ ಪೌಲೊ ಬೊಸುಸ್ಕೊ ಅವರನ್ನು ಅಪಹರಿಸಿರುವ ನಕ್ಸಲರು ಕೂಡ ಸೋಮವಾರ ಧ್ವನಿ ಮುದ್ರಿತ ಸಂದೇಶವನ್ನು ರವಾನಿಸಿ, ಒಂದು ವೇಳೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ವಿಳಂಬ ಮಾಡಿದರೆ ಒತ್ತೆ ಇಟ್ಟಿರುವ ಇಟಲಿ ಪ್ರಜೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸೂಚಿಸಿದ್ದರು. <br /> <br /> ಮಾವೊವಾದಿಗಳ ಎರಡು ಗುಂಪುಗಳು ನೀಡಿರುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮಂಗಳವಾರ ಉನ್ನತ ಅಧಿಕಾರಿಗಳ ತುರ್ತು ಸಭೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು ಮಾತ್ರವಲ್ಲದೇ ಬಿಕ್ಕಟ್ಟನ್ನು ಪರಿಹರಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು.<br /> <br /> <strong>ವಿದೇಶಿಯರ ಭೇಟಿ ನಿಷೇಧ</strong><br /> <br /> <strong>ಕೋರಾಪುಟ್ ವರದಿ: </strong>ಒಡಿಶಾದಲ್ಲಿ ನಕ್ಸಲರು ಎರಡು ಅಪಹರಣ ಕೃತ್ಯ ನಡೆಸಿರುವ ಹಿನ್ನೆಲೆಯಲ್ಲಿ ನಕ್ಸಲ್ ಪೀಡಿತ ಕೋರಾಪುಟ್ ಜಿಲ್ಲೆಗೆ ವಿದೇಶಿಯರು ಭೇಟಿ ನೀಡುವುದಕ್ಕೆ ಸರ್ಕಾರ ಸಂಪೂರ್ಣವಾಗಿ ನಿಷೇಧ ಹೇರಿದೆ.<br /> ಜಿಲ್ಲಾಧಿಕಾರಿ ಸಚಿನ್ ಜಾಧವ್ ಈ ಸಂಬಂಧ ಎಲ್ಲಾ ಪ್ರವಾಸ ನಿರ್ವಹಣಾ ಸಂಸ್ಥೆಗಳಿಗೆ ಪತ್ರಗಳನ್ನು ಕಳುಹಿಸಿದ್ದಾರೆ.<br /> <br /> <strong>ಹಿಕಾಕ ಆರೋಗ್ಯ ಸ್ಥಿತಿ: ಸಹೋದ್ಯೋಗಿಗಳಲ್ಲಿ ಆತಂಕ</strong><br /> <br /> <strong>ಭುವನೇಶ್ವರ: </strong>ನಕ್ಸಲರಿಂದ ಅಪಹರಣಕ್ಕೊಳಗಾಗಿರುವ ಬಿಜೆಡಿ ಶಾಸಕ ಜಿನಾ ಹಿಕಾಕ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂದು ಹೇಳಲಾಗಿದ್ದು, ಸಹೋದ್ಯೋಗಿ ಶಾಸಕರು ಹಿಕಾಕ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.<br /> <br /> ಕೋರಟ್ಪುಟ್ ದಟ್ಟ ಅರಣ್ಯಭಾಗದಲ್ಲಿ ನಕ್ಸಲರ ಶಿಬಿರದಲ್ಲಿರುವ ಹಿಕಾಕ ಅವರು ಕಾಯಿಲೆಗೆ ತುತ್ತಾಗಿದ್ದಾರೆ ಎಂದು ಮಾವೊವಾದಿಗಳಿಗೆ ತುಂಬಾ ಆಪ್ತವಾಗಿರುವ ಮೂಲಗಳು ತಿಳಿಸಿವೆ. ಸೋಮವಾರ ಒಡಿಶಾ ವಿಧಾನಸಭೆಯಲ್ಲಿ ಇತರೆ ಶಾಸಕರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. <br /> <br /> ಸಾಮಾನ್ಯವಾಗಿ ನಕ್ಸಲರು ಒತ್ತೆಯಾಳುಗಳನ್ನು ಶಿಬಿರದಿಂದ ಶಿಬಿರದಿಂದ ಬದಲಾಯಿಸುದರಿಂದ ಹಾಗೂ ಸಾಕಷ್ಟು ದೂರ ನಡಿಗೆ ಮೂಲಕವೇ ಕರೆದೊಯ್ಯುವುದರಿಂದ ಆರೋಗ್ಯದಲ್ಲಿ ಏರು ಪೇರು ಉಂಟಾಗಿರಬಹುದು ಎಂದು ಹೇಳಲಾಗಿದೆ. <br /> <br /> ನಕ್ಸಲರು ಹಿಕಾಕ ಅವರನ್ನು ಅಪಹರಿಸಿ ಒಂದು ವಾರ ಕಳೆದಿರುವುದರಿಂದ ಈ ವಾದಕ್ಕೆ ಮತ್ತಷ್ಟು ಪುಷ್ಟಿ ದೊರೆತಿದೆ. ಮಾರ್ಚ್ 24ರಂದು ಅವರು ಅಪಹರಣಕ್ಕೊಳಗಾಗಿದ್ದರು. ಎರಡು ದಿನಗಳ ಹಿಂದೆ ಹಿಕಾಕ ಅವರಲ್ಲಿ ಜ್ವರ ಹಾಗೂ ವಾಂತಿ ಕಾಣಿಸಿಕೊಂಡಿದೆ ಎಂದು ಮಾವೊವಾದಿಗಳ ಆಪ್ತ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>