<p><strong>ಭದ್ರಾವತಿ</strong>: ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರ ಜತೆ ಅನುಚಿತ ವರ್ತನೆ ನಡೆಸಿ ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಎಂಬ ಆರೋಪದ ಮೇಲೆ ಶಾಸಕ ಬಿ.ಕೆ. ಸಂಗಮೇಶ್ವರ ವಿರುದ್ಧ ಹಳೇನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.<br /> <br /> ಗ್ರಾಮಾಂತರ ಪೊಲೀಸರು ಮಂಗಳವಾರ ಸಂಜೆ ಹಲವು ಗ್ರಾಮದ ಮನೆಗಳ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸಿ ಠಾಣೆಗೆ ತಂದಿದ್ದರು.<br /> <br /> ಇದರ ಕುರಿತು ವಿಚಾರ ಮಾಡಲು ಠಾಣೆಗೆ ಆಗಮಿಸಿದ ಶಾಸಕ ಬಿ.ಕೆ. ಸಂಗಮೇಶ್ವರ ಹಾಗೂ ಅವರ ಬೆಂಬಲಿಗರು ಪಿಎಸ್ಐ ತಿಮ್ಮಪ್ಪ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಇರುವಾಗಲೇ ಸಿಪಿಐ ಪರಶುರಾಮಪ್ಪ ಅವರ ಜತೆ ಮಾತಿನ ಚಕಮಕಿ ನಡೆಸಿದರು.<br /> <br /> ಈ ಘಟನೆ ಕುರಿತಂತೆ ಮೇಲಧಿಕಾರಿಗಳ ಜತೆ ಚರ್ಚೆ ನಡೆಸಿದ ಸಿಪಿಐ ಪರಶುರಾಮಪ್ಪ ಅವರು ಬುಧವಾರ ಬೆಳಗಿನ ಜಾವ ಹಳೇನಗರ ಠಾಣೆಯಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ, ತಾ.ಪಂ ಉಪಾಧ್ಯಕ್ಷ ಶಾಂತಕುಮಾರ್ ಸೇರಿದಂತೆ 15ರಿಂದ 20ಮಂದಿಯ ವಿರುದ್ಧ ದೂರು ದಾಖಲಿಸಿದ್ದರು.<br /> <br /> <strong>ನ್ಯಾಯಾಲಯಕ್ಕೆ ಹಾಜರು<br /> </strong>ಸದರಿ ದೂರಿನ ಮೇಲೆ ಹಳೇನಗರ ಠಾಣೆಯಲ್ಲಿ ಪ್ರಕರಣ ದಾಖಲಾದ ವಿಚಾರ ತಿಳಿದು ಶಾಸಕ ಬಿ.ಕೆ. ಸಂಗಮೇಶ್ವರ ಬುಧವಾರ ವಕೀಲರೊಂದಿಗೆ ಸ್ವತಃ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಅರ್ಜಿ ಸಲ್ಲಿಸಿದರು.<br /> <br /> ಇದನ್ನು ಸ್ವೀಕರಿಸಿದ ನ್ಯಾಯಾಲಯ ಮಧ್ಯಾಹ್ನ ಹಾಜರಾಗುವಂತೆ ಸೂಚನೆ ನೀಡಿತು. ಇದರ ನಂತರ ಶಾಸಕರು ಮೊದಲೇ ನಿಗದಿಯಾಗಿದ್ದ ರಸ್ತೆ ಅಭಿವೃದ್ಧಿಯ ಗುದ್ದಲಿಪೂಜೆ ಸಮಾರಂಭದಲ್ಲಿ ಭಾಗವಹಿಸಲು ತೆರಳಿದರು.<br /> <br /> ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರಾದ ಸಂದರ್ಭದಲ್ಲಿ ಸರ್ಕಾರಿ ವಕೀಲರಾದ ಎಚ್.ಡಿ. ಆನಂದಕುಮಾರ್ ಶಾಸಕರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದರು. ಈ ಹಂತದಲ್ಲಿ ಎರಡೂ ಕಡೆಯ ವಾದ ಕೇಳಿದ ನ್ಯಾಯಾಧೀಶ ಗಿರೀಶ್ ಭಟ್ ಅರ್ಜಿ ಮೇಲಿನ ಆದೇಶವನ್ನು ಗುರುವಾರಕ್ಕೆ ನಿಗದಿಪಡಿಸಿ ಆರೋಪಿಯು ಅಂದು ಹಾಜರಿರುವಂತೆ ಆದೇಶಿಸಿದರು.<br /> <br /> ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ನೆರೆದಿದ್ದ ಶಾಸಕರ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ನಿರಾಳರಾಗಿ ಕೋರ್ಟ್ ಆವರಣದಿಂದ ಹೊರ ಹೋದ ದೃಶ್ಯ ಒಂದೆಡೆ ಕಂಡುಬಂದರೆ, ಮತ್ತೊಂದೆಡೆ ಗುರುವಾರದ ಆದೇಶ ಕುರಿತಂತೆ ಕೆಲವರು ವಕೀಲರ ಜತೆ ಚರ್ಚೆ ನಡೆಸಿದರು.<br /> <br /> <strong>ಪೊಲೀಸ್ ದರ್ಬಾರ್</strong><br /> `ಕ್ಷೇತ್ರದಲ್ಲಿ ಪೊಲೀಸರ ದರ್ಪ, ದೌರ್ಜನ್ಯ, ದರ್ಬಾರು ಹೆಚ್ಚಿದೆ. ಸಾಮಾನ್ಯ ನಾಗರಿಕರು, ಠಾಣೆಗೆ ಹೋಗುವುದೇ ದುಸ್ತರವಾಗಿದೆ. ಇದನ್ನು ಕೇಳಲು ಹೋದರೆ ನಮ್ಮ ಮೇಲೆ ಪ್ರಕರಣ ದಾಖಲು ಮಾಡುತ್ತಾರೆ~ ಎಂದು ಶಾಸಕ ಬಿ.ಕೆ. ಸಂಗಮೇಶ್ವರ ಮಾಧ್ಯಮದವರ ಮುಂದೆ ದೂರಿದರು.<br /> <br /> ನ್ಯಾಯಾಲಯಕ್ಕೆ ಹಾಜರಾದ ವೇಳೆ ಎದುರಾದ ಪತ್ರಕರ್ತರ ಜತೆ ಮಾತನಾಡಿದ ಅವರು, `ನಾನು ಯಾವುದೇ ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿಲ್ಲ. ನಾಗರಿಕರ ರಕ್ಷಣೆಗೆ ಬದ್ಧವಾಗಿ ಅವರ ಹಿತ ಕಾಪಾಡಲು ಠಾಣೆಗೆ ತೆರಳಿದ್ದು ಇಷ್ಟೆಲ್ಲಾ ಘಟನೆಗೆ ಕಾರಣವಾಗಿದೆ. ಇದರ ಹೊರತು ನಾನು ಯಾವುದೇ ಕರ್ತವ್ಯಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ</strong>: ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರ ಜತೆ ಅನುಚಿತ ವರ್ತನೆ ನಡೆಸಿ ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಎಂಬ ಆರೋಪದ ಮೇಲೆ ಶಾಸಕ ಬಿ.ಕೆ. ಸಂಗಮೇಶ್ವರ ವಿರುದ್ಧ ಹಳೇನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.<br /> <br /> ಗ್ರಾಮಾಂತರ ಪೊಲೀಸರು ಮಂಗಳವಾರ ಸಂಜೆ ಹಲವು ಗ್ರಾಮದ ಮನೆಗಳ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸಿ ಠಾಣೆಗೆ ತಂದಿದ್ದರು.<br /> <br /> ಇದರ ಕುರಿತು ವಿಚಾರ ಮಾಡಲು ಠಾಣೆಗೆ ಆಗಮಿಸಿದ ಶಾಸಕ ಬಿ.ಕೆ. ಸಂಗಮೇಶ್ವರ ಹಾಗೂ ಅವರ ಬೆಂಬಲಿಗರು ಪಿಎಸ್ಐ ತಿಮ್ಮಪ್ಪ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಇರುವಾಗಲೇ ಸಿಪಿಐ ಪರಶುರಾಮಪ್ಪ ಅವರ ಜತೆ ಮಾತಿನ ಚಕಮಕಿ ನಡೆಸಿದರು.<br /> <br /> ಈ ಘಟನೆ ಕುರಿತಂತೆ ಮೇಲಧಿಕಾರಿಗಳ ಜತೆ ಚರ್ಚೆ ನಡೆಸಿದ ಸಿಪಿಐ ಪರಶುರಾಮಪ್ಪ ಅವರು ಬುಧವಾರ ಬೆಳಗಿನ ಜಾವ ಹಳೇನಗರ ಠಾಣೆಯಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ, ತಾ.ಪಂ ಉಪಾಧ್ಯಕ್ಷ ಶಾಂತಕುಮಾರ್ ಸೇರಿದಂತೆ 15ರಿಂದ 20ಮಂದಿಯ ವಿರುದ್ಧ ದೂರು ದಾಖಲಿಸಿದ್ದರು.<br /> <br /> <strong>ನ್ಯಾಯಾಲಯಕ್ಕೆ ಹಾಜರು<br /> </strong>ಸದರಿ ದೂರಿನ ಮೇಲೆ ಹಳೇನಗರ ಠಾಣೆಯಲ್ಲಿ ಪ್ರಕರಣ ದಾಖಲಾದ ವಿಚಾರ ತಿಳಿದು ಶಾಸಕ ಬಿ.ಕೆ. ಸಂಗಮೇಶ್ವರ ಬುಧವಾರ ವಕೀಲರೊಂದಿಗೆ ಸ್ವತಃ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಅರ್ಜಿ ಸಲ್ಲಿಸಿದರು.<br /> <br /> ಇದನ್ನು ಸ್ವೀಕರಿಸಿದ ನ್ಯಾಯಾಲಯ ಮಧ್ಯಾಹ್ನ ಹಾಜರಾಗುವಂತೆ ಸೂಚನೆ ನೀಡಿತು. ಇದರ ನಂತರ ಶಾಸಕರು ಮೊದಲೇ ನಿಗದಿಯಾಗಿದ್ದ ರಸ್ತೆ ಅಭಿವೃದ್ಧಿಯ ಗುದ್ದಲಿಪೂಜೆ ಸಮಾರಂಭದಲ್ಲಿ ಭಾಗವಹಿಸಲು ತೆರಳಿದರು.<br /> <br /> ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರಾದ ಸಂದರ್ಭದಲ್ಲಿ ಸರ್ಕಾರಿ ವಕೀಲರಾದ ಎಚ್.ಡಿ. ಆನಂದಕುಮಾರ್ ಶಾಸಕರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದರು. ಈ ಹಂತದಲ್ಲಿ ಎರಡೂ ಕಡೆಯ ವಾದ ಕೇಳಿದ ನ್ಯಾಯಾಧೀಶ ಗಿರೀಶ್ ಭಟ್ ಅರ್ಜಿ ಮೇಲಿನ ಆದೇಶವನ್ನು ಗುರುವಾರಕ್ಕೆ ನಿಗದಿಪಡಿಸಿ ಆರೋಪಿಯು ಅಂದು ಹಾಜರಿರುವಂತೆ ಆದೇಶಿಸಿದರು.<br /> <br /> ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ನೆರೆದಿದ್ದ ಶಾಸಕರ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ನಿರಾಳರಾಗಿ ಕೋರ್ಟ್ ಆವರಣದಿಂದ ಹೊರ ಹೋದ ದೃಶ್ಯ ಒಂದೆಡೆ ಕಂಡುಬಂದರೆ, ಮತ್ತೊಂದೆಡೆ ಗುರುವಾರದ ಆದೇಶ ಕುರಿತಂತೆ ಕೆಲವರು ವಕೀಲರ ಜತೆ ಚರ್ಚೆ ನಡೆಸಿದರು.<br /> <br /> <strong>ಪೊಲೀಸ್ ದರ್ಬಾರ್</strong><br /> `ಕ್ಷೇತ್ರದಲ್ಲಿ ಪೊಲೀಸರ ದರ್ಪ, ದೌರ್ಜನ್ಯ, ದರ್ಬಾರು ಹೆಚ್ಚಿದೆ. ಸಾಮಾನ್ಯ ನಾಗರಿಕರು, ಠಾಣೆಗೆ ಹೋಗುವುದೇ ದುಸ್ತರವಾಗಿದೆ. ಇದನ್ನು ಕೇಳಲು ಹೋದರೆ ನಮ್ಮ ಮೇಲೆ ಪ್ರಕರಣ ದಾಖಲು ಮಾಡುತ್ತಾರೆ~ ಎಂದು ಶಾಸಕ ಬಿ.ಕೆ. ಸಂಗಮೇಶ್ವರ ಮಾಧ್ಯಮದವರ ಮುಂದೆ ದೂರಿದರು.<br /> <br /> ನ್ಯಾಯಾಲಯಕ್ಕೆ ಹಾಜರಾದ ವೇಳೆ ಎದುರಾದ ಪತ್ರಕರ್ತರ ಜತೆ ಮಾತನಾಡಿದ ಅವರು, `ನಾನು ಯಾವುದೇ ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿಲ್ಲ. ನಾಗರಿಕರ ರಕ್ಷಣೆಗೆ ಬದ್ಧವಾಗಿ ಅವರ ಹಿತ ಕಾಪಾಡಲು ಠಾಣೆಗೆ ತೆರಳಿದ್ದು ಇಷ್ಟೆಲ್ಲಾ ಘಟನೆಗೆ ಕಾರಣವಾಗಿದೆ. ಇದರ ಹೊರತು ನಾನು ಯಾವುದೇ ಕರ್ತವ್ಯಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>