<p><strong>ಶಿವಮೊಗ್ಗ: </strong>ಎಲ್ಲಿ ನೋಡಿದರೂ ಜನ ಸಮೂಹ. ಕೇಕೆ ಹಾಗೂ ಸಿಳ್ಳೆ ಹೊಡೆಯುವುದರಲ್ಲಿ ನಿರತವಾಗಿದ್ದ ಸಮೂಹ. ಗೆಲ್ಲುತ್ತೇವೆಂಬ ವಿಶ್ವಾಸದಿಂದ ಬೀಗುತ್ತಿದ್ದ ಟಗರು ಮಾಲೀಕರು.<br /> <br /> ನಗರದ ಸೈನ್ಸ್ ಮೈದಾನದಲ್ಲಿ ಭಾನುವಾರ ಕೋಟೆ ಮಾರಿಕಾಂಬ ಸೇವಾ ಸಮಿತಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮೂರನೇ ಟಗರು ಕಾಳಗದ ಸಂದರ್ಭದಲ್ಲಿ ಕಂಡುಬಂದ ದೃಶ್ಯ.<br /> <br /> ಟಗರು ಕಾಳಗ ಪ್ರಾರಂಭವಾದ ತಕ್ಷಣ ಪ್ರತಿಯೊಬ್ಬರು ಸಿಳ್ಳೆ ಹೊಡೆಯುವುದರ ಮೂಲಕ ತಮ್ಮ ನೆಚ್ಚಿನ ಟಗರಿಗೆ ಬೆಂಬಲ ವ್ಯಕ್ತಪಡಿಸುತ್ತಿದುದು ಸಾಮಾನ್ಯವಾಗಿತ್ತು. ಆಗೊಮ್ಮೆ, ಈಗೊಮ್ಮೆ ನೂಕು ನುಗ್ಗಲಿನಿಂದ ಸಾರ್ವಜನಿಕರು ಪರದಾಡುವಂತಾಯಿತು.<br /> ಟಗರು ಕಾಳಗದಲ್ಲಿ ರಾಜ್ಯದ ಸುಮಾರು 200ಕುರಿಗಳು ಭಾಗವಹಿಸಿದ್ದವು.<br /> <br /> ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೇ, ಉತ್ತರ ಕರ್ನಾಟಕದ ಗದಗ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ, ಹಾವೇರಿ ಮುಂತಾದ ಜಿಲ್ಲೆಗಳ ಕುರಿಗಳು ಕಾಳಗದಲ್ಲಿ ಭಾಗವಹಿಸಿದ್ದುದು ವಿಶೇಷವಾಗಿತ್ತು.<br /> <br /> ಎಂಟು ಹಲ್ಲಿನ ಟಗರು ವಿಭಾಗದಲ್ಲಿ ಶಿವಮೊಗ್ಗ ನಗರದ ಮಚ್ಚಾ ‘ಎ’ (ಪ್ರಥಮ), ಮಚ್ಚಾ ‘ಬಿ’ (ದ್ವಿತೀಯ), ನಾಲ್ಕು ಹಲ್ಲಿನ ಟಗರು ವಿಭಾಗದಲ್ಲಿ ಶಿವಮೊಗ್ಗದ ಕೆಂಪರಾಜ ಪ್ರಸನ್ನ (ಪ್ರಥಮ), ರಾಣೆಬೆನ್ನೂರಿನ ಗಜಕೇಸರಿ (ದ್ವಿತೀಯ), ಎರಡು ಹಲ್ಲಿನ ಟಗರು ವಿಭಾಗದಲ್ಲಿ ವಿದ್ಯಾನಗರದ ಜಗದಾಂಬ ಪ್ರಸನ್ನ (ಪ್ರಥಮ) ಹಾಗೂ ಬಜರಂಗಿ (ದ್ವಿತೀಯ) ಸ್ಥಾನಗಳನ್ನು ಪಡೆದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>ಎಲ್ಲಿ ನೋಡಿದರೂ ಜನ ಸಮೂಹ. ಕೇಕೆ ಹಾಗೂ ಸಿಳ್ಳೆ ಹೊಡೆಯುವುದರಲ್ಲಿ ನಿರತವಾಗಿದ್ದ ಸಮೂಹ. ಗೆಲ್ಲುತ್ತೇವೆಂಬ ವಿಶ್ವಾಸದಿಂದ ಬೀಗುತ್ತಿದ್ದ ಟಗರು ಮಾಲೀಕರು.<br /> <br /> ನಗರದ ಸೈನ್ಸ್ ಮೈದಾನದಲ್ಲಿ ಭಾನುವಾರ ಕೋಟೆ ಮಾರಿಕಾಂಬ ಸೇವಾ ಸಮಿತಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮೂರನೇ ಟಗರು ಕಾಳಗದ ಸಂದರ್ಭದಲ್ಲಿ ಕಂಡುಬಂದ ದೃಶ್ಯ.<br /> <br /> ಟಗರು ಕಾಳಗ ಪ್ರಾರಂಭವಾದ ತಕ್ಷಣ ಪ್ರತಿಯೊಬ್ಬರು ಸಿಳ್ಳೆ ಹೊಡೆಯುವುದರ ಮೂಲಕ ತಮ್ಮ ನೆಚ್ಚಿನ ಟಗರಿಗೆ ಬೆಂಬಲ ವ್ಯಕ್ತಪಡಿಸುತ್ತಿದುದು ಸಾಮಾನ್ಯವಾಗಿತ್ತು. ಆಗೊಮ್ಮೆ, ಈಗೊಮ್ಮೆ ನೂಕು ನುಗ್ಗಲಿನಿಂದ ಸಾರ್ವಜನಿಕರು ಪರದಾಡುವಂತಾಯಿತು.<br /> ಟಗರು ಕಾಳಗದಲ್ಲಿ ರಾಜ್ಯದ ಸುಮಾರು 200ಕುರಿಗಳು ಭಾಗವಹಿಸಿದ್ದವು.<br /> <br /> ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೇ, ಉತ್ತರ ಕರ್ನಾಟಕದ ಗದಗ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ, ಹಾವೇರಿ ಮುಂತಾದ ಜಿಲ್ಲೆಗಳ ಕುರಿಗಳು ಕಾಳಗದಲ್ಲಿ ಭಾಗವಹಿಸಿದ್ದುದು ವಿಶೇಷವಾಗಿತ್ತು.<br /> <br /> ಎಂಟು ಹಲ್ಲಿನ ಟಗರು ವಿಭಾಗದಲ್ಲಿ ಶಿವಮೊಗ್ಗ ನಗರದ ಮಚ್ಚಾ ‘ಎ’ (ಪ್ರಥಮ), ಮಚ್ಚಾ ‘ಬಿ’ (ದ್ವಿತೀಯ), ನಾಲ್ಕು ಹಲ್ಲಿನ ಟಗರು ವಿಭಾಗದಲ್ಲಿ ಶಿವಮೊಗ್ಗದ ಕೆಂಪರಾಜ ಪ್ರಸನ್ನ (ಪ್ರಥಮ), ರಾಣೆಬೆನ್ನೂರಿನ ಗಜಕೇಸರಿ (ದ್ವಿತೀಯ), ಎರಡು ಹಲ್ಲಿನ ಟಗರು ವಿಭಾಗದಲ್ಲಿ ವಿದ್ಯಾನಗರದ ಜಗದಾಂಬ ಪ್ರಸನ್ನ (ಪ್ರಥಮ) ಹಾಗೂ ಬಜರಂಗಿ (ದ್ವಿತೀಯ) ಸ್ಥಾನಗಳನ್ನು ಪಡೆದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>