<p>ಶಿವಾಜಿನಗರದಲ್ಲಿನ ಬಿಎಂಟಿಸಿ ಬಸ್ ನಿಲ್ದಾಣವು ಅತ್ಯಂತ ದಟ್ಟ ಜನಸಂದಣಿಯ ಕೇಂದ್ರವಾಗಿದೆ. ಈ ಬಸ್ ನಿಲ್ದಾಣದಲ್ಲಿ ಬೆಂಗಳೂರು ಮಹಾನಗರ ಸಂಚಾರಿ ನಿಗಮವು ಹಲವು ಮೂತ್ರಾಲಯಗಳನ್ನು ಸಾರ್ವಜನಿಕರ ಉಪಯೋಗಕ್ಕೆ ನಿರ್ಮಿಸಿದೆ. ಪ್ರಯಾಣಿಕರು ಮೂತ್ರಾಲಯವನ್ನು ಉಚಿತವಾಗಿ ಉಪಯೋಗಿಸಬಹುದೆಂಬ ನಾಮಫಲಕಗಳು ಬಸ್ ನಿಲ್ದಾಣದ ಎಲ್ಲಾ ಕಡೆ ರಾರಾಜಿಸುತ್ತಿವೆ.<br /> <br /> ಆದರೆ ಕೆಲವರು ನಾಮಫಲಕದ ಮೇಲೆ ಇರುವ ಉಚಿತ ಎಂಬ ಪದಗಳ ಮೇಲೆ ಖಾಸಗಿ ಜಾಹೀರಾತು ಚೀಟಿ ಅಂಟಿಸಿ, ಮೂತ್ರಾಲಯವನ್ನು ಉಪಯೋಗಿಸುವವರ ಹತ್ತಿರ ಹಣವನ್ನು ಬಲವಂತವಾಗಿ ವಸೂಲಿ ಮಾಡುತ್ತಿದ್ದಾರೆ.<br /> <br /> ಬಸ್ ನಿಲ್ದಾಣದಲ್ಲಿರುವ ಬಿಎಂಟಿಸಿ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಜಾಣ ಕುರುಡು, ಜಾಣ ಕಿವುಡರಂತೆ ವರ್ತಿಸಿ ಮೂತ್ರಾಲಯ ಮಾಫಿಯಾಗಳ ಹಗಲು ದರೋಡೆಗೆ ಪ್ರೋತ್ಸಾಹಿಸುತ್ತಿದ್ದಾರೆ ಎಂಬ ಅನುಮಾನಕ್ಕೆ ಕಾರಣರಾಗಿದ್ದಾರೆ.<br /> <br /> ಸಾರಿಗೆ ಸಚಿವರು, ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಕೂಡಲೇ ಶಿವಾಜಿನಗರ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಹಗಲು ದರೋಡೆಗೆ ಕಡಿವಾಣ ಹಾಕಿ, ಬಡ, ಅಮಾಯಕ ಪ್ರಯಾಣಿಕರ ಹಿತರಕ್ಷಣೆ ಮಾಡಲಿ.<br /> –</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿವಾಜಿನಗರದಲ್ಲಿನ ಬಿಎಂಟಿಸಿ ಬಸ್ ನಿಲ್ದಾಣವು ಅತ್ಯಂತ ದಟ್ಟ ಜನಸಂದಣಿಯ ಕೇಂದ್ರವಾಗಿದೆ. ಈ ಬಸ್ ನಿಲ್ದಾಣದಲ್ಲಿ ಬೆಂಗಳೂರು ಮಹಾನಗರ ಸಂಚಾರಿ ನಿಗಮವು ಹಲವು ಮೂತ್ರಾಲಯಗಳನ್ನು ಸಾರ್ವಜನಿಕರ ಉಪಯೋಗಕ್ಕೆ ನಿರ್ಮಿಸಿದೆ. ಪ್ರಯಾಣಿಕರು ಮೂತ್ರಾಲಯವನ್ನು ಉಚಿತವಾಗಿ ಉಪಯೋಗಿಸಬಹುದೆಂಬ ನಾಮಫಲಕಗಳು ಬಸ್ ನಿಲ್ದಾಣದ ಎಲ್ಲಾ ಕಡೆ ರಾರಾಜಿಸುತ್ತಿವೆ.<br /> <br /> ಆದರೆ ಕೆಲವರು ನಾಮಫಲಕದ ಮೇಲೆ ಇರುವ ಉಚಿತ ಎಂಬ ಪದಗಳ ಮೇಲೆ ಖಾಸಗಿ ಜಾಹೀರಾತು ಚೀಟಿ ಅಂಟಿಸಿ, ಮೂತ್ರಾಲಯವನ್ನು ಉಪಯೋಗಿಸುವವರ ಹತ್ತಿರ ಹಣವನ್ನು ಬಲವಂತವಾಗಿ ವಸೂಲಿ ಮಾಡುತ್ತಿದ್ದಾರೆ.<br /> <br /> ಬಸ್ ನಿಲ್ದಾಣದಲ್ಲಿರುವ ಬಿಎಂಟಿಸಿ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಜಾಣ ಕುರುಡು, ಜಾಣ ಕಿವುಡರಂತೆ ವರ್ತಿಸಿ ಮೂತ್ರಾಲಯ ಮಾಫಿಯಾಗಳ ಹಗಲು ದರೋಡೆಗೆ ಪ್ರೋತ್ಸಾಹಿಸುತ್ತಿದ್ದಾರೆ ಎಂಬ ಅನುಮಾನಕ್ಕೆ ಕಾರಣರಾಗಿದ್ದಾರೆ.<br /> <br /> ಸಾರಿಗೆ ಸಚಿವರು, ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಕೂಡಲೇ ಶಿವಾಜಿನಗರ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಹಗಲು ದರೋಡೆಗೆ ಕಡಿವಾಣ ಹಾಕಿ, ಬಡ, ಅಮಾಯಕ ಪ್ರಯಾಣಿಕರ ಹಿತರಕ್ಷಣೆ ಮಾಡಲಿ.<br /> –</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>