<p><strong>ಬಳ್ಳಾರಿ: </strong>ಶುಭ ಶುಕ್ರವಾರದ ಅಂಗವಾಗಿ ನಗರದ ಸೇಂಟ್ ಆ್ಯಂಟನಿ ಚರ್ಚ್ ಸೇರಿದಂತೆ ವಿವಿಧ ಚರ್ಚ್ಗಳಲ್ಲಿ ಶುಕ್ರವಾರ ಬೆಳಿಗ್ಗೆ ಸಾವಿರಾರು ಭಕ್ತರು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.<br /> <br /> ಕ್ರೈಸ್ತರು ಉಪವಾಸ ಆಚರಣೆ, ಪ್ರಾರ್ಥನೆ, ದಾನಧರ್ಮ ಪ್ರಕ್ರಿಯೆಯಲ್ಲಿ ತೊಡಗುವುದು ಈದಿನ ವಿಶೇಷವಾಗಿದ್ದು, ಶುಕ್ರವಾರ ಬೆಳಗಿನ ಜಾವವೇ ಚರ್ಚ್ಗಳತ್ತ ಧಾವಿಸಿದ ಭಕ್ತರು, ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೆ ಪ್ರಾರ್ಥನೆಯಲ್ಲಿ ತೊಡಗಿದರು.<br /> <br /> ಶಿಲುಬೆಗೆ ಏರಿಸಿದ ಐತಿಹಾಸಿಕ ಘಟನೆಯೂ ಒಳಗೊಂಡಂತೆ ಏಸು ಕ್ರಿಸ್ತನ ಚರಿತ್ರೆಯನ್ನು ಸಾರುವ ರೂಪಕಗಳ ಪ್ರದರ್ಶನವನ್ನೂ ಕ್ರೈಸ್ತಬಾಂಧವರು ಆಯೋಜಸಿದ್ದರು.<br /> <br /> ಜನರ ಶ್ರೇಯೋಭಿವೃದ್ಧಿಗಾಗಿ ಎಲ್ಲ ಸಂಕಷ್ಟಗಳನ್ನು ಎದುರಿಸಿದ ಯೇಸು, ಯಾತನೆಯನ್ನು ಅನುಭವಿಸಿ ಶಿಲುಬೆಗೆ ಏರಿದ ದುಃಖದಾಯಕ ಪ್ರಸಂಗವನ್ನು ಸೇಂಟ್ ಆ್ಯಂಟನಿ ಚರ್ಚ್ನಲ್ಲಿ ರೂಪಕದ ಮೂಲಕ ಪ್ರದರ್ಶಿಸಿದಾಗ ಅಲ್ಲಿ ನೆರೆದಿದ್ದ ಭಕ್ತರ ಕಣ್ಣಾಲಿಗಳು ತುಂಬಿಬಂದವು.<br /> <br /> ಯೇಸುವಿನ ಬಂಧನ, ಕಿರುಕುಳ, ಚಾಟಿಯೇಟು, ಶಿಲುಬೆಗೆ ಏರಿಸಿದ ಹೃದಯವಿದ್ರಾವಕ ದೃಶ್ಯಾವಳಿಯನ್ನು ಮನೋಜ್ಞವಾಗಿ ಪ್ರದರ್ಶಿಸಿದ ಯುವಕರು ಭಕ್ತರಲ್ಲಿ ದೈವತ್ವದ ಮಹತ್ವ ಪರಿಚಯಿಸಿದರು.<br /> <br /> ಮಕ್ಕಳು, ಮಹಿಳೆಯರು, ವೃದ್ಧರಾದಿಯಾಗಿ ಸಾವಿರಾರು ಭಕ್ತರು ಏಸುವಿನ ಜೀವನ ಚರಿತ್ರೆಯ ದೃಶ್ಯಾವಳಿಯನ್ನು ಕಂಡು ಪುನೀತರಾದರು.<br /> <br /> ಎರಡು ಸಾವಿರ ವರ್ಷಗಳ ಹಿಂದೆ ಇದೇ ಶುಕ್ರವಾರದ ದಿನ ಏಸುಕ್ರಿಸ್ತ ಲೋಕ ಕಲ್ಯಾಣಕ್ಕಾಗಿ ಪ್ರಾಣ ತ್ಯಾಗ ಮಾಡಿ, ’ಇತರರಿಗೆ ಒಳಿತು ಮಾಡಲು ಕಷ್ಟ ಎದುರಿಸಲೂ ಸಿದ್ಧರಿರಬೇಕು’ ಎಂಬುದನ್ನು ಸಾರಿ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಅವರ ದೇಹತ್ಯಾಗದ ದಿನವನ್ನು ’ಶುಭ ಶುಕ್ರವಾರ’ ಎಂದು ಆಚರಿಸಲಾಗುತ್ತಿದೆ. ಮುಂದಿನ ಭಾನುವಾರ ಏಸುವಿನ ಪುನರುತ್ಥಾನ ದಿನವನ್ನಾಗಿ ’ಈಸ್ಟರ್’ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಫಾದರ್ ಆರೋಗ್ಯನಾಥನ್ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ: </strong>ಶುಭ ಶುಕ್ರವಾರದ ಅಂಗವಾಗಿ ನಗರದ ಸೇಂಟ್ ಆ್ಯಂಟನಿ ಚರ್ಚ್ ಸೇರಿದಂತೆ ವಿವಿಧ ಚರ್ಚ್ಗಳಲ್ಲಿ ಶುಕ್ರವಾರ ಬೆಳಿಗ್ಗೆ ಸಾವಿರಾರು ಭಕ್ತರು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.<br /> <br /> ಕ್ರೈಸ್ತರು ಉಪವಾಸ ಆಚರಣೆ, ಪ್ರಾರ್ಥನೆ, ದಾನಧರ್ಮ ಪ್ರಕ್ರಿಯೆಯಲ್ಲಿ ತೊಡಗುವುದು ಈದಿನ ವಿಶೇಷವಾಗಿದ್ದು, ಶುಕ್ರವಾರ ಬೆಳಗಿನ ಜಾವವೇ ಚರ್ಚ್ಗಳತ್ತ ಧಾವಿಸಿದ ಭಕ್ತರು, ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೆ ಪ್ರಾರ್ಥನೆಯಲ್ಲಿ ತೊಡಗಿದರು.<br /> <br /> ಶಿಲುಬೆಗೆ ಏರಿಸಿದ ಐತಿಹಾಸಿಕ ಘಟನೆಯೂ ಒಳಗೊಂಡಂತೆ ಏಸು ಕ್ರಿಸ್ತನ ಚರಿತ್ರೆಯನ್ನು ಸಾರುವ ರೂಪಕಗಳ ಪ್ರದರ್ಶನವನ್ನೂ ಕ್ರೈಸ್ತಬಾಂಧವರು ಆಯೋಜಸಿದ್ದರು.<br /> <br /> ಜನರ ಶ್ರೇಯೋಭಿವೃದ್ಧಿಗಾಗಿ ಎಲ್ಲ ಸಂಕಷ್ಟಗಳನ್ನು ಎದುರಿಸಿದ ಯೇಸು, ಯಾತನೆಯನ್ನು ಅನುಭವಿಸಿ ಶಿಲುಬೆಗೆ ಏರಿದ ದುಃಖದಾಯಕ ಪ್ರಸಂಗವನ್ನು ಸೇಂಟ್ ಆ್ಯಂಟನಿ ಚರ್ಚ್ನಲ್ಲಿ ರೂಪಕದ ಮೂಲಕ ಪ್ರದರ್ಶಿಸಿದಾಗ ಅಲ್ಲಿ ನೆರೆದಿದ್ದ ಭಕ್ತರ ಕಣ್ಣಾಲಿಗಳು ತುಂಬಿಬಂದವು.<br /> <br /> ಯೇಸುವಿನ ಬಂಧನ, ಕಿರುಕುಳ, ಚಾಟಿಯೇಟು, ಶಿಲುಬೆಗೆ ಏರಿಸಿದ ಹೃದಯವಿದ್ರಾವಕ ದೃಶ್ಯಾವಳಿಯನ್ನು ಮನೋಜ್ಞವಾಗಿ ಪ್ರದರ್ಶಿಸಿದ ಯುವಕರು ಭಕ್ತರಲ್ಲಿ ದೈವತ್ವದ ಮಹತ್ವ ಪರಿಚಯಿಸಿದರು.<br /> <br /> ಮಕ್ಕಳು, ಮಹಿಳೆಯರು, ವೃದ್ಧರಾದಿಯಾಗಿ ಸಾವಿರಾರು ಭಕ್ತರು ಏಸುವಿನ ಜೀವನ ಚರಿತ್ರೆಯ ದೃಶ್ಯಾವಳಿಯನ್ನು ಕಂಡು ಪುನೀತರಾದರು.<br /> <br /> ಎರಡು ಸಾವಿರ ವರ್ಷಗಳ ಹಿಂದೆ ಇದೇ ಶುಕ್ರವಾರದ ದಿನ ಏಸುಕ್ರಿಸ್ತ ಲೋಕ ಕಲ್ಯಾಣಕ್ಕಾಗಿ ಪ್ರಾಣ ತ್ಯಾಗ ಮಾಡಿ, ’ಇತರರಿಗೆ ಒಳಿತು ಮಾಡಲು ಕಷ್ಟ ಎದುರಿಸಲೂ ಸಿದ್ಧರಿರಬೇಕು’ ಎಂಬುದನ್ನು ಸಾರಿ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಅವರ ದೇಹತ್ಯಾಗದ ದಿನವನ್ನು ’ಶುಭ ಶುಕ್ರವಾರ’ ಎಂದು ಆಚರಿಸಲಾಗುತ್ತಿದೆ. ಮುಂದಿನ ಭಾನುವಾರ ಏಸುವಿನ ಪುನರುತ್ಥಾನ ದಿನವನ್ನಾಗಿ ’ಈಸ್ಟರ್’ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಫಾದರ್ ಆರೋಗ್ಯನಾಥನ್ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>