<p><strong>ಹುಬ್ಬಳ್ಳಿ: </strong>ಇಲ್ಲಿ ಈಗ ಎಲ್ಲರ ಮುಖದಲ್ಲೂ ಸಂತಸ ಮನೆ ಮಾಡಿದೆ. ಗುರುವಾರದ `ಆ~ ಮಧುರ ಕ್ಷಣಕ್ಕಾಗಿ ಅವರು ಕಾಯುತ್ತಿದ್ದಾರೆ. ಸಂಭ್ರಮಾಚರಣೆಗೆ ಸಕಲ ಸಿದ್ಧತೆ ನಡೆದಿದೆ.<br /> <br /> ಇದು ಜಗದೀಶ ಶಟ್ಟರ್ ಅವರು ಓದಿದ ನಗರದ ಬಾಸೆಲ್ ಮಿಷನ್ ಶಾಲೆ. ಮೂರನೇ ಇಯತ್ತೆಯಿಂದ ಎಸ್ಸೆಸ್ಸೆಲ್ಸಿವರೆಗೆ ಈ ಶಾಲೆಯಲ್ಲಿ ಓದಿದ `ಹುಬ್ಬಳ್ಳಿಯಾಂವ~ ಈಗ ರಾಜ್ಯದ ಮುಖ್ಯಮಂತ್ರಿ ಗದ್ದುಗೆ ಏರುತ್ತಿದ್ದಾರೆ. <br /> <br /> ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಶಾಲೆಯಲ್ಲಿ ಕಾರ್ಯಕ್ರಮವೊಂದು ನಡೆಯಲಿದೆ. ಶೆಟ್ಟರ್ ಅವರಿಗೆ ಪಾಠ ಮಾಡಿದ ಗುರುಗಳು ಈ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ.<br /> <br /> 60 ವಸಂತಗಳನ್ನು ಪೂರೈಸಲು ಸಿದ್ಧವಾಗಿರುವ ಬಾಸೆಲ್ ಮಿಷನ್ ಶಾಲೆ ಆ ಸಂಭ್ರಮದ ಕ್ಷಣಕ್ಕಾಗಿ ಕಾಯುತ್ತಿದ್ದಾಗಲೇ ಇಲ್ಲಿ ಓದಿದ ಶೆಟ್ಟರ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರ ಸಂತಸ ದ್ವಿಗುಣಗೊಂಡಿದೆ. ಎಂಟು ವರ್ಷ ಈ ಶಾಲೆಯಲ್ಲಿ ಕಲಿತ ಶೆಟ್ಟರ್ 1972ರಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ ಹೋಗಿದ್ದರು. <br /> <br /> ಅನಂತರ ಕಾಲೇಜು ಮೆಟ್ಟಿಲೇರಿ, ವಕೀಲರಾಗಿ, ರಾಜಕಾರಣಿಯಾಗಿ ಒಂದೊಂದೇ ಹೆಜ್ಜೆ ಏರಿದ ಅವರು ಈಗ ರಾಜ್ಯದ ಮುಖ್ಯಮಂತ್ರಿ. ಹೀಗಾಗಿಯೇ ಶಾಲೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ನೌಕರರು ಖುಷಿಯಾಗಿದ್ದಾರೆ.<br /> <br /> ಶಾಲೆಗೆ ಅನೇಕ ಬಾರಿ ಭೇಟಿ ನೀಡಿದ್ದ ಶೆಟ್ಟರ್, ಮುಖ್ಯಮಂತ್ರಿಯಾದ ನಂತರ ಶಾಲಾಭಿವೃದ್ಧಿಗೆ ನೆರವಾಗಲಿದ್ದಾರೆ ಎಂಬ ನಿರೀಕ್ಷೆ ಕೂಡ ಅವರಲ್ಲಿ ಹುಟ್ಟಿದೆ. ತಮ್ಮ ಸಂತಸವನ್ನು ಬುಧವಾರ `ಪ್ರಜಾವಾಣಿ~ ಜೊತೆ ಹಂಚಿಕೊಂಡ ಶಾಲೆಯ ಮುಖ್ಯ ಶಿಕ್ಷಕ ಆರ್.ಎಸ್.ಸಕ್ಕರಿ, `ನಮ್ಮ ಶಾಲೆಯಲ್ಲಿ ಓದಿದ್ದ ಅವರು ಈಗ ಮುಖ್ಯಮಂತ್ರಿ ಕುರ್ಚಿ ಅಲಂಕರಿಸುತ್ತಿರುವುದು ಖುಷಿ ತಂದಿದೆ. ಇದು ನಮಗೆ ಹೆಮ್ಮೆಯ ವಿಷಯ. ಉತ್ತರ ಕರ್ನಾಟಕ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಿತ ಶಾಲೆಯನ್ನು ಅಭಿವೃದ್ಧಿಪಡಿಸಲು ಗಮನ ನೀಡಲಿದ್ದಾರೆ ಎಂಬ ಭರವಸೆ ಇದೆ~ ಎಂದು ಹೇಳಿದರು.<br /> <br /> `ಜಗದೀಶ ಶೆಟ್ಟರ್ ಅವರ ಗುರುಗಳೊಂದಿಗೆ ಸಹೋದ್ಯೋಗಿಯಾಗಿ ಕೆಲಸ ಮಾಡಿದ್ದೇನೆ. ಅವರಿಂದ ಶೆಟ್ಟರ್ ವ್ಯಕ್ತಿತ್ವದ ಬಗ್ಗೆ ತಿಳಿದುಕೊಂಡಿದ್ದೇನೆ. ಅವರನ್ನೇ ಕರೆಸಿ ಗುರುವಾರ ವಿಜೃಂಭಣೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು~ ಎಂದು ಅವರು ತಿಳಿಸಿದರು.<br /> <br /> `ಶೆಟ್ಟರ್ ಕಾರ್ಯವೈಖರಿ ನೋಡಿ ಅವರು ಒಂದಲ್ಲ ಒಂದು ದಿನ ಸಿಎಂ ಆಗುತ್ತಾರೆ ಎಂಬ ನಿರೀಕ್ಷೆ ಇತ್ತು. ಅದು ಈಗ ನಿಜವಾಗಿದೆ. ಶಾಲಾ ಸಂಸತ್ತಿನಲ್ಲಿ ಪ್ರತಿ ಸಲ ಶೆಟ್ಟರ್ ಬಗ್ಗೆ ತಿಳಿಸುತ್ತಿದ್ದೆವು. ಶ್ರಮದ ಹಾದಿಯಲ್ಲಿ ನಡೆಯಲು ಮಕ್ಕಳಿಗೆ ಈಗ ಇನ್ನಷ್ಟು ಉತ್ಸಾಹ ಹೆಚ್ಚಾಗಲಿದೆ~ ಎಂದು ಶಾಲೆಯ ಶಿಕ್ಷಕಿಯರಾದ ಐ.ಎಂ. ನಿರಂಜನ ಹಾಗೂ ಟಿ.ಜೆ. ನಿರಂಜನ ಹೇಳಿದರು.<br /> <br /> `ಶೆಟ್ಟರ್ ಸರ್ ನಮ್ಮ ಶಾಲೆಯಲ್ಲಿ ಓದಿದವರು ಎಂದು ಗೊತ್ತಿತ್ತು. ಅವರ ಹಾಗೆಯೇ ಸಾಧನೆ ಮಾಡಬೇಕು ಎಂಬ ಆಸೆ ಇದೆ. ನಮ್ಮದು ಹಳೆಯ ಶಾಲೆ. ಇಲ್ಲಿ ಓದಿ ಮುಂದೆ ಬಂದ ಅವರು ಸಮಾಜಕ್ಕಾಗಿ ದುಡಿಯಲು ನಮಗೆ ಈಗ ಆದರ್ಶವಾಗಿದ್ದಾರೆ~ ಎಂದು 10ನೇ ತರಗತಿ ವಿದ್ಯಾರ್ಥಿಗಳಾದ ಸಚಿನ್ ಕಾಂಬ್ಳೆ ಹಾಗೂ ಅಭಿಷೇಕ ವೆಂಕಟೇಶ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಇಲ್ಲಿ ಈಗ ಎಲ್ಲರ ಮುಖದಲ್ಲೂ ಸಂತಸ ಮನೆ ಮಾಡಿದೆ. ಗುರುವಾರದ `ಆ~ ಮಧುರ ಕ್ಷಣಕ್ಕಾಗಿ ಅವರು ಕಾಯುತ್ತಿದ್ದಾರೆ. ಸಂಭ್ರಮಾಚರಣೆಗೆ ಸಕಲ ಸಿದ್ಧತೆ ನಡೆದಿದೆ.<br /> <br /> ಇದು ಜಗದೀಶ ಶಟ್ಟರ್ ಅವರು ಓದಿದ ನಗರದ ಬಾಸೆಲ್ ಮಿಷನ್ ಶಾಲೆ. ಮೂರನೇ ಇಯತ್ತೆಯಿಂದ ಎಸ್ಸೆಸ್ಸೆಲ್ಸಿವರೆಗೆ ಈ ಶಾಲೆಯಲ್ಲಿ ಓದಿದ `ಹುಬ್ಬಳ್ಳಿಯಾಂವ~ ಈಗ ರಾಜ್ಯದ ಮುಖ್ಯಮಂತ್ರಿ ಗದ್ದುಗೆ ಏರುತ್ತಿದ್ದಾರೆ. <br /> <br /> ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಶಾಲೆಯಲ್ಲಿ ಕಾರ್ಯಕ್ರಮವೊಂದು ನಡೆಯಲಿದೆ. ಶೆಟ್ಟರ್ ಅವರಿಗೆ ಪಾಠ ಮಾಡಿದ ಗುರುಗಳು ಈ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ.<br /> <br /> 60 ವಸಂತಗಳನ್ನು ಪೂರೈಸಲು ಸಿದ್ಧವಾಗಿರುವ ಬಾಸೆಲ್ ಮಿಷನ್ ಶಾಲೆ ಆ ಸಂಭ್ರಮದ ಕ್ಷಣಕ್ಕಾಗಿ ಕಾಯುತ್ತಿದ್ದಾಗಲೇ ಇಲ್ಲಿ ಓದಿದ ಶೆಟ್ಟರ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರ ಸಂತಸ ದ್ವಿಗುಣಗೊಂಡಿದೆ. ಎಂಟು ವರ್ಷ ಈ ಶಾಲೆಯಲ್ಲಿ ಕಲಿತ ಶೆಟ್ಟರ್ 1972ರಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ ಹೋಗಿದ್ದರು. <br /> <br /> ಅನಂತರ ಕಾಲೇಜು ಮೆಟ್ಟಿಲೇರಿ, ವಕೀಲರಾಗಿ, ರಾಜಕಾರಣಿಯಾಗಿ ಒಂದೊಂದೇ ಹೆಜ್ಜೆ ಏರಿದ ಅವರು ಈಗ ರಾಜ್ಯದ ಮುಖ್ಯಮಂತ್ರಿ. ಹೀಗಾಗಿಯೇ ಶಾಲೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ನೌಕರರು ಖುಷಿಯಾಗಿದ್ದಾರೆ.<br /> <br /> ಶಾಲೆಗೆ ಅನೇಕ ಬಾರಿ ಭೇಟಿ ನೀಡಿದ್ದ ಶೆಟ್ಟರ್, ಮುಖ್ಯಮಂತ್ರಿಯಾದ ನಂತರ ಶಾಲಾಭಿವೃದ್ಧಿಗೆ ನೆರವಾಗಲಿದ್ದಾರೆ ಎಂಬ ನಿರೀಕ್ಷೆ ಕೂಡ ಅವರಲ್ಲಿ ಹುಟ್ಟಿದೆ. ತಮ್ಮ ಸಂತಸವನ್ನು ಬುಧವಾರ `ಪ್ರಜಾವಾಣಿ~ ಜೊತೆ ಹಂಚಿಕೊಂಡ ಶಾಲೆಯ ಮುಖ್ಯ ಶಿಕ್ಷಕ ಆರ್.ಎಸ್.ಸಕ್ಕರಿ, `ನಮ್ಮ ಶಾಲೆಯಲ್ಲಿ ಓದಿದ್ದ ಅವರು ಈಗ ಮುಖ್ಯಮಂತ್ರಿ ಕುರ್ಚಿ ಅಲಂಕರಿಸುತ್ತಿರುವುದು ಖುಷಿ ತಂದಿದೆ. ಇದು ನಮಗೆ ಹೆಮ್ಮೆಯ ವಿಷಯ. ಉತ್ತರ ಕರ್ನಾಟಕ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಿತ ಶಾಲೆಯನ್ನು ಅಭಿವೃದ್ಧಿಪಡಿಸಲು ಗಮನ ನೀಡಲಿದ್ದಾರೆ ಎಂಬ ಭರವಸೆ ಇದೆ~ ಎಂದು ಹೇಳಿದರು.<br /> <br /> `ಜಗದೀಶ ಶೆಟ್ಟರ್ ಅವರ ಗುರುಗಳೊಂದಿಗೆ ಸಹೋದ್ಯೋಗಿಯಾಗಿ ಕೆಲಸ ಮಾಡಿದ್ದೇನೆ. ಅವರಿಂದ ಶೆಟ್ಟರ್ ವ್ಯಕ್ತಿತ್ವದ ಬಗ್ಗೆ ತಿಳಿದುಕೊಂಡಿದ್ದೇನೆ. ಅವರನ್ನೇ ಕರೆಸಿ ಗುರುವಾರ ವಿಜೃಂಭಣೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು~ ಎಂದು ಅವರು ತಿಳಿಸಿದರು.<br /> <br /> `ಶೆಟ್ಟರ್ ಕಾರ್ಯವೈಖರಿ ನೋಡಿ ಅವರು ಒಂದಲ್ಲ ಒಂದು ದಿನ ಸಿಎಂ ಆಗುತ್ತಾರೆ ಎಂಬ ನಿರೀಕ್ಷೆ ಇತ್ತು. ಅದು ಈಗ ನಿಜವಾಗಿದೆ. ಶಾಲಾ ಸಂಸತ್ತಿನಲ್ಲಿ ಪ್ರತಿ ಸಲ ಶೆಟ್ಟರ್ ಬಗ್ಗೆ ತಿಳಿಸುತ್ತಿದ್ದೆವು. ಶ್ರಮದ ಹಾದಿಯಲ್ಲಿ ನಡೆಯಲು ಮಕ್ಕಳಿಗೆ ಈಗ ಇನ್ನಷ್ಟು ಉತ್ಸಾಹ ಹೆಚ್ಚಾಗಲಿದೆ~ ಎಂದು ಶಾಲೆಯ ಶಿಕ್ಷಕಿಯರಾದ ಐ.ಎಂ. ನಿರಂಜನ ಹಾಗೂ ಟಿ.ಜೆ. ನಿರಂಜನ ಹೇಳಿದರು.<br /> <br /> `ಶೆಟ್ಟರ್ ಸರ್ ನಮ್ಮ ಶಾಲೆಯಲ್ಲಿ ಓದಿದವರು ಎಂದು ಗೊತ್ತಿತ್ತು. ಅವರ ಹಾಗೆಯೇ ಸಾಧನೆ ಮಾಡಬೇಕು ಎಂಬ ಆಸೆ ಇದೆ. ನಮ್ಮದು ಹಳೆಯ ಶಾಲೆ. ಇಲ್ಲಿ ಓದಿ ಮುಂದೆ ಬಂದ ಅವರು ಸಮಾಜಕ್ಕಾಗಿ ದುಡಿಯಲು ನಮಗೆ ಈಗ ಆದರ್ಶವಾಗಿದ್ದಾರೆ~ ಎಂದು 10ನೇ ತರಗತಿ ವಿದ್ಯಾರ್ಥಿಗಳಾದ ಸಚಿನ್ ಕಾಂಬ್ಳೆ ಹಾಗೂ ಅಭಿಷೇಕ ವೆಂಕಟೇಶ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>