<p><strong>ನವದೆಹಲಿ (ಪಿಟಿಐ/ಐಎಎನ್ಎಸ್):</strong> ಏರ್ಇಂಡಿಯಾದ ಸುಮಾರು 1600 ಪೈಲಟ್ಗಳು 5ನೇ ದಿನವಾದ ಭಾನುವಾರವೂ ಮುಷ್ಕರ ಮುಂದುವರಿಸಿದ್ದಾರೆ. ಇದರಿಂದ ಸಂಸ್ಥೆಯ ಆಂತರಿಕ ಸೇವೆಯ ಸುಮಾರು ಶೇಕಡಾ 90ರಷ್ಟು ವಿಮಾನಗಳ ಸಂಚಾರ ರದ್ದಾಯಿತು. <br /> <br /> ಆದರೆ ಅಂತರರಾಷ್ಟ್ರೀಯ ವಲಯದಲ್ಲಿ ವಿಮಾನ ಸಂಚಾರ ಎಂದಿನಂತೆ ಇತ್ತು ಎಂದು ಹೇಳಲಾಗಿದೆ.<br /> ಏರ್ಇಂಡಿಯಾ ಆಂತರಿಕ ಸೇವೆಯ 225 ವಿಮಾನಗಳ ಪೈಕಿ ಭಾನುವಾರ 170 ವಿಮಾನಗಳ ಸಂಚಾರ ರದ್ದುಗೊಳಿಸಲಾಯಿತು ಮತ್ತು ಪುನರ್ ನಿಗದಿಗೊಳಿಸಲಾಯಿತು ಎನ್ನಲಾಗಿದೆ.<br /> <br /> ‘ಆಂತರಿಕವಾಗಿ ಕೇವಲ 55 ವಿಮಾನಗಳು ಸಂಚರಿಸುತ್ತಿವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.ಈಗಾಗಲೇ ನಷ್ಟದಲ್ಲಿರುವ ಸಂಸ್ಥೆಗೆ ಮುಷ್ಕರದಿಂದಾಗಿ ಈವರೆಗೆ ರೂ 46 ಕೋಟಿ ನಷ್ಟವಾಗಿದೆ ಎನ್ನಲಾಗಿದೆ.<br /> <br /> <strong>ಪೈಲಟ್ಗಳಿಗೆ ಎಸ್ಎಂಎಸ್:</strong> ಮುಷ್ಕರ ನಡೆಸುತ್ತಿರುವ ಪೈಲಟ್ಗಳ ಮನವೊಲಿಸಿ ಸಂಧಾನ ಮಾತುಕತೆ ಮತ್ತು ಕೆಲಸಕ್ಕೆ ಹಿಂದಿರುಗಿಸುವ ಸಲುವಾಗಿ ಏರ್ಇಂಡಿಯಾದ ಸಿಎಂಡಿ ಅರವಿಂದ್ ಜಾಧವ್ ಎಲ್ಲಾ ಉದ್ಯೋಗಿಗಳಿಗೆ ‘ನಮ್ಮ ವಿಮಾನಯಾನ ಉಳಿಸಿ’ ಎಂಬ ಎಸ್ಎಂಎಸ್ ರವಾನಿಸಿದ್ದಾರೆ.<br /> <br /> ಈ ಬಗ್ಗೆ ಸುಪ್ರೀಂಕೋರ್ನ ನ್ಯಾಯಾಧೀಶರು ಅಧ್ಯಯನ ಮಾಡುತ್ತಿದ್ದಾರೆ. ಇಂತಹ ಏರ್ಲೈನ್ಸ್ ಸಂಕಷ್ಟದಲ್ಲಿರುವ ಸಮಯದಲ್ಲಿ ಮುಷ್ಕರ ಹೂಡುವುದು ಅಪರಾಧವಾಗುತ್ತದೆ. ಸಾರ್ವಜನಿಕ ಜೀವನದಲ್ಲಿನ ಭ್ರಷ್ಟಾಚಾರವನ್ನು ನಾವು ಖಂಡಿಸುತ್ತೇವೆ. ಎಲ್ಲಾ ತಪ್ಪಿತಸ್ಥರಿಗೂ ಶಿಕ್ಷೆಯಾಗುತ್ತದೆ ಎಂದು ಹೇಳಿದ್ದಾರೆ.<br /> <br /> ಹಲವು ವರ್ಷಗಳ ಹಿಂದೆ ನಡೆದ ಘಟನೆಗೆ ಪೈಲಟ್ಗಳು ಮುಷ್ಕರ ನಡೆಸುತ್ತಿದ್ದಾರೆ. ಇದಕ್ಕೆ ಇಂದಿನ ಆಡಳಿತ ವರ್ಗ ಹೊಣೆಗಾರರಾಗುವುದಿಲ್ಲ. ಏರ್ಲೈನ್ಅನ್ನು ಉಳಿಸಲು ಕೆಲಸಕ್ಕೆ ಹಿಂದಿರುಗುವಂತೆ ಮತ್ತು ಚರ್ಚೆಗೆ ಬರುವ ಮೂಲಕ ಸಮಸ್ಯೆ ಬಗೆ ಹರಿಸಬೇಕು ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ/ಐಎಎನ್ಎಸ್):</strong> ಏರ್ಇಂಡಿಯಾದ ಸುಮಾರು 1600 ಪೈಲಟ್ಗಳು 5ನೇ ದಿನವಾದ ಭಾನುವಾರವೂ ಮುಷ್ಕರ ಮುಂದುವರಿಸಿದ್ದಾರೆ. ಇದರಿಂದ ಸಂಸ್ಥೆಯ ಆಂತರಿಕ ಸೇವೆಯ ಸುಮಾರು ಶೇಕಡಾ 90ರಷ್ಟು ವಿಮಾನಗಳ ಸಂಚಾರ ರದ್ದಾಯಿತು. <br /> <br /> ಆದರೆ ಅಂತರರಾಷ್ಟ್ರೀಯ ವಲಯದಲ್ಲಿ ವಿಮಾನ ಸಂಚಾರ ಎಂದಿನಂತೆ ಇತ್ತು ಎಂದು ಹೇಳಲಾಗಿದೆ.<br /> ಏರ್ಇಂಡಿಯಾ ಆಂತರಿಕ ಸೇವೆಯ 225 ವಿಮಾನಗಳ ಪೈಕಿ ಭಾನುವಾರ 170 ವಿಮಾನಗಳ ಸಂಚಾರ ರದ್ದುಗೊಳಿಸಲಾಯಿತು ಮತ್ತು ಪುನರ್ ನಿಗದಿಗೊಳಿಸಲಾಯಿತು ಎನ್ನಲಾಗಿದೆ.<br /> <br /> ‘ಆಂತರಿಕವಾಗಿ ಕೇವಲ 55 ವಿಮಾನಗಳು ಸಂಚರಿಸುತ್ತಿವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.ಈಗಾಗಲೇ ನಷ್ಟದಲ್ಲಿರುವ ಸಂಸ್ಥೆಗೆ ಮುಷ್ಕರದಿಂದಾಗಿ ಈವರೆಗೆ ರೂ 46 ಕೋಟಿ ನಷ್ಟವಾಗಿದೆ ಎನ್ನಲಾಗಿದೆ.<br /> <br /> <strong>ಪೈಲಟ್ಗಳಿಗೆ ಎಸ್ಎಂಎಸ್:</strong> ಮುಷ್ಕರ ನಡೆಸುತ್ತಿರುವ ಪೈಲಟ್ಗಳ ಮನವೊಲಿಸಿ ಸಂಧಾನ ಮಾತುಕತೆ ಮತ್ತು ಕೆಲಸಕ್ಕೆ ಹಿಂದಿರುಗಿಸುವ ಸಲುವಾಗಿ ಏರ್ಇಂಡಿಯಾದ ಸಿಎಂಡಿ ಅರವಿಂದ್ ಜಾಧವ್ ಎಲ್ಲಾ ಉದ್ಯೋಗಿಗಳಿಗೆ ‘ನಮ್ಮ ವಿಮಾನಯಾನ ಉಳಿಸಿ’ ಎಂಬ ಎಸ್ಎಂಎಸ್ ರವಾನಿಸಿದ್ದಾರೆ.<br /> <br /> ಈ ಬಗ್ಗೆ ಸುಪ್ರೀಂಕೋರ್ನ ನ್ಯಾಯಾಧೀಶರು ಅಧ್ಯಯನ ಮಾಡುತ್ತಿದ್ದಾರೆ. ಇಂತಹ ಏರ್ಲೈನ್ಸ್ ಸಂಕಷ್ಟದಲ್ಲಿರುವ ಸಮಯದಲ್ಲಿ ಮುಷ್ಕರ ಹೂಡುವುದು ಅಪರಾಧವಾಗುತ್ತದೆ. ಸಾರ್ವಜನಿಕ ಜೀವನದಲ್ಲಿನ ಭ್ರಷ್ಟಾಚಾರವನ್ನು ನಾವು ಖಂಡಿಸುತ್ತೇವೆ. ಎಲ್ಲಾ ತಪ್ಪಿತಸ್ಥರಿಗೂ ಶಿಕ್ಷೆಯಾಗುತ್ತದೆ ಎಂದು ಹೇಳಿದ್ದಾರೆ.<br /> <br /> ಹಲವು ವರ್ಷಗಳ ಹಿಂದೆ ನಡೆದ ಘಟನೆಗೆ ಪೈಲಟ್ಗಳು ಮುಷ್ಕರ ನಡೆಸುತ್ತಿದ್ದಾರೆ. ಇದಕ್ಕೆ ಇಂದಿನ ಆಡಳಿತ ವರ್ಗ ಹೊಣೆಗಾರರಾಗುವುದಿಲ್ಲ. ಏರ್ಲೈನ್ಅನ್ನು ಉಳಿಸಲು ಕೆಲಸಕ್ಕೆ ಹಿಂದಿರುಗುವಂತೆ ಮತ್ತು ಚರ್ಚೆಗೆ ಬರುವ ಮೂಲಕ ಸಮಸ್ಯೆ ಬಗೆ ಹರಿಸಬೇಕು ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>