<p>ಹನುಮಸಾಗರ: ರಾಜ್ಯದ ಎಲ್ಲ ಶಾಲೆಗಳಲ್ಲಿ ಒಂದು ಆಂದೋಲನದ ರೂಪದಲ್ಲಿ ಶಿಕ್ಷಣ ಇಲಾಖೆ ಶಾಲೆಗಾಗಿ ನಾವು-ನೀವು ಎಂಬ ಒಂದು ವಿನೂತನ ಕಾರ್ಯಕ್ರಮ ಹಾಕಿಕೊಂಡಿರುವುದು ಸಾರ್ವಜನಿಕರಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಲು ಇದು ನೆರವಾವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮೀದೇವಿ ಹಳ್ಳೂರ ಹೇಳಿದರು.<br /> <br /> ಗುರುವಾರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರೌಢ ಶಾಲಾ ವಿಭಾಗದಲ್ಲಿ ನಡೆದ ಶಾಲೆಗಾಗಿ ನಾವು-ನೀವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಮಕ್ಕಳ ಶಿಕ್ಷಣ ಹಕ್ಕು ಕುರಿತಂತೆ ಸಮುದಾಯದಲ್ಲಿ ಹೀಗೆ ಜಾಗೃತಿ ಮೂಡಿಸುವುದರಿಂದ ಸರ್ಕಾರ ನೀಡುತ್ತಿರುವ ಉತ್ತೇಜಕಗಳು ಎಷ್ಟರ ಮಟ್ಟಿಗೆ ಫಲಾನುಭವಿಗಳಿಗೆ ತಲುಪಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಇದು ನೆರವಾಗುತ್ತದೆ ಎಂದು ಹೇಳಿದರು.<br /> <br /> ಮಲ್ಲನಗೌಡ ಹಿರೇಗೌಡರ ಮಾತನಾಡಿ, ಏಪ್ರಿಲ್30 ರಂದು ರಾಜ್ಯ ಸರ್ಕಾರ ಮಕ್ಕಳ ಶಿಕ್ಷಣ ಹಕ್ಕಿನ ಸಂವಿಧಾನ ಬದ್ಧತೆಗೆ ಅನುಸಾರವಾಗಿ ಕಾಯ್ದೆ ನಿಯಮಗಳನ್ನು ಅಂಗೀಕರಿಸಿದೆ, ಈ ಕಾಯ್ದೆಯು ಶಿಕ್ಷಣ ಕ್ಷೇತ್ರದ ಬದಲಾವಣೆಗೆ ನಾಂದಿ ಹಾಡಿದಂತಾಗಿದೆ. 6 ರಿಂದ 14ವಯಸ್ಸಿನ ಎಲ್ಲ ಮಕ್ಕಳಿಗೆ ಸಂಪೂರ್ಣ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಸೇರಿದಂತೆ ಸಮುದಾಯಗಳ ಸಹಭಾಗಿತ್ವ ಹೀಗೆ ಅನೇಕ ಉತ್ತಮ ಅಂಶಗಳು ಈ ಕಾರ್ಯಕ್ರಮದ ಮೂಲಕ ಬೆಳಕು ಕಾಣಲಿವೆ ಎಂದು ಹೇಳಿದರು.<br /> <br /> ಬಸವರಾಜ ಹಳ್ಳೂರ ಮಾತನಾಡಿ ಅಭಿವೃದ್ಧಿ ದೃಷ್ಟಿಯಿಂದಾಗಿ ಹಲವಾರು ಕಾಯ್ದೆಗಳನ್ನು ಜಾರಿಗೊಳಿಸುವಾಗ ಅವು ಸಾರ್ವಜನಿಕ ವಲಯದಲ್ಲಿ ಫಲಪ್ರದವಾಗಬೇಕಾದರೆ ಮೊದಲು ಜನಪ್ರತಿನಿಧಿಗಳು ಆ ಕಾಯ್ದೆಗಳಿಗೆ ಮಾದರಿಯಾಗಿರಬೇಕು, ಅಂದಾಗ ಮಾತ್ರ ಕಾಯ್ದೆಗಳ ಮೇಲೆ ಸಾರ್ವಜನಿಕರಲ್ಲಿ ನಂಬಿಕೆ ಮೂಡುತ್ತದೆ ಎಂದು ಹೇಳಿದರು.<br /> <br /> ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಲಾ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷ ಸಂಗಯ್ಯ ವಸ್ತ್ರದ, ಹಿರಿಯ ಶಿಕ್ಷಕ ವಿ.ಬಿ.ಉಪ್ಪಿನ ಹಾಗೂ ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕದ ಖಜಾಂಚಿ ಮಹಾಂತೇಶ ಗೋನಾಳ ಮಾತನಾಡಿದರು. <br /> <br /> ಎನ್.ಈರೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಪೂರ್ವದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು. ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದ ಈ ನಿಯೋಗ ಪಾಲಕರಿಗ ಮನವರಿಕೆ ಮಾಡಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆ ತರುವಲ್ಲಿ ಯಶಸ್ವಿಯಾದರು.<br /> ಸಂಗಯ್ಯ ವಸ್ತ್ರದ ಪ್ರಮಾಣ ವಚನ ಬೋಧಿಸಿದರು.<br /> <br /> ಗ್ರಾಮ ಪಂಚಾಯಿತಿ ಸದಸ್ಯರಾದ ಶಿವು ಸಂಗಮದ. ಶಿಪುತ್ರಪ್ಪ ಕೋಳೂರ, ಡಾ.ಬಸವರಾಜ ಅಕ್ಕಿ, ಎಪಿಎಂಸಿ ಸದಸ್ಯ ಮಾರುತಿ ಭಜಂತ್ರಿ, ಚಂದಪ್ಪ ವಾಲ್ಮೀಕಿ, ಹನುಮಂತಪ್ಪ ಬಿಂಗಿ, ಲೀಲಾ ಎಸ್. ಶೆಟ್ಟರ್ ಇತರರು ಇದ್ದರು.<br /> <br /> ರಾಜಶೇಖರ ಕೊಪ್ಪಳ ಪ್ರಾರ್ಥಿಸಿದರು. ವಿ.ಬಿ.ಉಪ್ಪಿನ ಸ್ವಾಗತಿಸಿದರು. ಮಲ್ಲಿಕಾರ್ಜುನ ಮ್ಯಾಗೇರಿ ಕಾರ್ಯಕ್ರಮ ನಿರೂಪಿಸಿದರು. ರಾಜಾಭಕ್ಷಾರ ಪೆಂಡಾರಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹನುಮಸಾಗರ: ರಾಜ್ಯದ ಎಲ್ಲ ಶಾಲೆಗಳಲ್ಲಿ ಒಂದು ಆಂದೋಲನದ ರೂಪದಲ್ಲಿ ಶಿಕ್ಷಣ ಇಲಾಖೆ ಶಾಲೆಗಾಗಿ ನಾವು-ನೀವು ಎಂಬ ಒಂದು ವಿನೂತನ ಕಾರ್ಯಕ್ರಮ ಹಾಕಿಕೊಂಡಿರುವುದು ಸಾರ್ವಜನಿಕರಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಲು ಇದು ನೆರವಾವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮೀದೇವಿ ಹಳ್ಳೂರ ಹೇಳಿದರು.<br /> <br /> ಗುರುವಾರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರೌಢ ಶಾಲಾ ವಿಭಾಗದಲ್ಲಿ ನಡೆದ ಶಾಲೆಗಾಗಿ ನಾವು-ನೀವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಮಕ್ಕಳ ಶಿಕ್ಷಣ ಹಕ್ಕು ಕುರಿತಂತೆ ಸಮುದಾಯದಲ್ಲಿ ಹೀಗೆ ಜಾಗೃತಿ ಮೂಡಿಸುವುದರಿಂದ ಸರ್ಕಾರ ನೀಡುತ್ತಿರುವ ಉತ್ತೇಜಕಗಳು ಎಷ್ಟರ ಮಟ್ಟಿಗೆ ಫಲಾನುಭವಿಗಳಿಗೆ ತಲುಪಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಇದು ನೆರವಾಗುತ್ತದೆ ಎಂದು ಹೇಳಿದರು.<br /> <br /> ಮಲ್ಲನಗೌಡ ಹಿರೇಗೌಡರ ಮಾತನಾಡಿ, ಏಪ್ರಿಲ್30 ರಂದು ರಾಜ್ಯ ಸರ್ಕಾರ ಮಕ್ಕಳ ಶಿಕ್ಷಣ ಹಕ್ಕಿನ ಸಂವಿಧಾನ ಬದ್ಧತೆಗೆ ಅನುಸಾರವಾಗಿ ಕಾಯ್ದೆ ನಿಯಮಗಳನ್ನು ಅಂಗೀಕರಿಸಿದೆ, ಈ ಕಾಯ್ದೆಯು ಶಿಕ್ಷಣ ಕ್ಷೇತ್ರದ ಬದಲಾವಣೆಗೆ ನಾಂದಿ ಹಾಡಿದಂತಾಗಿದೆ. 6 ರಿಂದ 14ವಯಸ್ಸಿನ ಎಲ್ಲ ಮಕ್ಕಳಿಗೆ ಸಂಪೂರ್ಣ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಸೇರಿದಂತೆ ಸಮುದಾಯಗಳ ಸಹಭಾಗಿತ್ವ ಹೀಗೆ ಅನೇಕ ಉತ್ತಮ ಅಂಶಗಳು ಈ ಕಾರ್ಯಕ್ರಮದ ಮೂಲಕ ಬೆಳಕು ಕಾಣಲಿವೆ ಎಂದು ಹೇಳಿದರು.<br /> <br /> ಬಸವರಾಜ ಹಳ್ಳೂರ ಮಾತನಾಡಿ ಅಭಿವೃದ್ಧಿ ದೃಷ್ಟಿಯಿಂದಾಗಿ ಹಲವಾರು ಕಾಯ್ದೆಗಳನ್ನು ಜಾರಿಗೊಳಿಸುವಾಗ ಅವು ಸಾರ್ವಜನಿಕ ವಲಯದಲ್ಲಿ ಫಲಪ್ರದವಾಗಬೇಕಾದರೆ ಮೊದಲು ಜನಪ್ರತಿನಿಧಿಗಳು ಆ ಕಾಯ್ದೆಗಳಿಗೆ ಮಾದರಿಯಾಗಿರಬೇಕು, ಅಂದಾಗ ಮಾತ್ರ ಕಾಯ್ದೆಗಳ ಮೇಲೆ ಸಾರ್ವಜನಿಕರಲ್ಲಿ ನಂಬಿಕೆ ಮೂಡುತ್ತದೆ ಎಂದು ಹೇಳಿದರು.<br /> <br /> ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಲಾ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷ ಸಂಗಯ್ಯ ವಸ್ತ್ರದ, ಹಿರಿಯ ಶಿಕ್ಷಕ ವಿ.ಬಿ.ಉಪ್ಪಿನ ಹಾಗೂ ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕದ ಖಜಾಂಚಿ ಮಹಾಂತೇಶ ಗೋನಾಳ ಮಾತನಾಡಿದರು. <br /> <br /> ಎನ್.ಈರೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಪೂರ್ವದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು. ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದ ಈ ನಿಯೋಗ ಪಾಲಕರಿಗ ಮನವರಿಕೆ ಮಾಡಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆ ತರುವಲ್ಲಿ ಯಶಸ್ವಿಯಾದರು.<br /> ಸಂಗಯ್ಯ ವಸ್ತ್ರದ ಪ್ರಮಾಣ ವಚನ ಬೋಧಿಸಿದರು.<br /> <br /> ಗ್ರಾಮ ಪಂಚಾಯಿತಿ ಸದಸ್ಯರಾದ ಶಿವು ಸಂಗಮದ. ಶಿಪುತ್ರಪ್ಪ ಕೋಳೂರ, ಡಾ.ಬಸವರಾಜ ಅಕ್ಕಿ, ಎಪಿಎಂಸಿ ಸದಸ್ಯ ಮಾರುತಿ ಭಜಂತ್ರಿ, ಚಂದಪ್ಪ ವಾಲ್ಮೀಕಿ, ಹನುಮಂತಪ್ಪ ಬಿಂಗಿ, ಲೀಲಾ ಎಸ್. ಶೆಟ್ಟರ್ ಇತರರು ಇದ್ದರು.<br /> <br /> ರಾಜಶೇಖರ ಕೊಪ್ಪಳ ಪ್ರಾರ್ಥಿಸಿದರು. ವಿ.ಬಿ.ಉಪ್ಪಿನ ಸ್ವಾಗತಿಸಿದರು. ಮಲ್ಲಿಕಾರ್ಜುನ ಮ್ಯಾಗೇರಿ ಕಾರ್ಯಕ್ರಮ ನಿರೂಪಿಸಿದರು. ರಾಜಾಭಕ್ಷಾರ ಪೆಂಡಾರಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>