<p>ಯಲಹಂಕ: ಶ್ರೀ ಹರಿದಾಸ ಸಂಘ ಹಾಗೂ ಶ್ರೀವಾರಿ ಫೌಂಡೇಷನ್ ಸಂಸ್ಥೆಯ ಸಹಯೋಗದೊಂದಿಗೆ ಇಲ್ಲಿನ ಬಜಾರ್ ರಸ್ತೆಯ ಆನಂದರಾಮ ಕಲ್ಯಾಣ ಮಂಟಪದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಮಾರಂಭ ವಿಜೃಂಭಣೆಯಿಂದ ನೆರವೇರಿತು.<br /> <br /> ಮಹೋತ್ಸವ ಅಂಗವಾಗಿ ಬೆಳಗ್ಗೆ 10.45 ಗಂಟೆಗೆ ಶ್ರೀನಿವಾಸ ದೇವರ ಮಹಾ ಅಭಿಷೇಕ, ಮಹಾಪೂಜೆ, ಶ್ರೀ ವಿಷ್ಣುಸಹಸ್ರನಾಮ ಹೋಮ, ಪೂರ್ಣಾಹುತಿ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. <br /> ಸಂಜೆ 4.30 ಗಂಟೆಗೆ ಪಟ್ಟಣದ ರಾಜಬೀದಿಗಳಲ್ಲಿ ಶ್ರೀನಿವಾಸ ದೇವರ ಉತ್ಸವ ನಡೆಯಿತು. <br /> <br /> ಸಾಂಪ್ರದಾಯಕ ಉಡುಪನ್ನು ಧರಿಸಿದ್ದ ಊರಿನ ಗಣ್ಯರು `ಅಕ್ಷರ ಬ್ರಹ್ಮ ಗೋವಿಂದನಾಮ~ ಹೇಳಿಕೊಂಡು ಹಾಗೂ ಮಹಿಳೆಯರು `ಬಾರಯ್ಯ ಶ್ರೀನಿವಾಸ~ ಎಂಬ ಭಜನೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.<br /> <br /> ಉತ್ಸವದ ನಂತರ ಸಂಜೆ 7 ಗಂಟೆಗೆ ಶ್ರೀ ಹರಿದಾಸ ಸಂಘದ ಸಂಸ್ಥಾಪಕರಾದ ಹ.ರಾ.ನಾಗರಾಜಾಚಾರ್ಯ ಅವರು, ಶ್ರೀನಿವಾಸ ಕಲ್ಯಾಣ ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ಪ್ರವಚನ ನೀಡಿದರು. ಕಲ್ಯಾಣ ಮಹೋತ್ಸವದ ನೇತೃತ್ವ ವಹಿಸಿದ್ದ ಶ್ರೀವಾರಿ ಫೌಂಡೇಷನ್ ಸಂಸ್ಥೆಯ ಎಸ್.ವೆಂಕಟೇಶಮೂರ್ತಿ ಅವರು, ಮಹೋತ್ಸವದ ಉದ್ದೇಶವನ್ನು ತಿಳಿಸಿದರು. <br /> <br /> ಕರ್ನಾಟಕ ಹರಿದಾಸರ ಹಾಡುಗಳ ಆಧಾರದ ಮೇಲೆ ನೃತ್ಯ ಗೀತನದೊಂದಿಗೆ ಶ್ರೀನಿವಾಸ ಕಲ್ಯಾಣ ನೆರವೇರಿಸಲಾಯಿತು.<br /> <br /> ತಿರುಪತಿಯ ಪಂಡಿತರಾದ ಶ್ರೀ ಶ್ರೀಕಾಂತ ಆಚಾರ್ಯ ಅವರು, ಕಲ್ಯಾಣ ಮಹೋತ್ಸವದ ಸಂಕಲ್ಪ ಮಾಡಿಸಿ ದರು. ಮಾಜಿ ನಗರಸಭಾ ಅಧ್ಯಕ್ಷ ಮು.ಕೃಷ್ಣಮೂರ್ತಿ ಮತ್ತು ಸಂಗಡಿಗರು ಈ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.<br /> <br /> ಶಾಸಕ ಎಸ್.ಆರ್.ವಿಶ್ವನಾಥ್, ಬಿಬಿಎಂಪಿ ಸದಸ್ಯ ವೈ.ಎನ್.ಅಶ್ವಥ್, ಯಲಹಂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ.ಬಾಷಾ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಲಹಂಕ: ಶ್ರೀ ಹರಿದಾಸ ಸಂಘ ಹಾಗೂ ಶ್ರೀವಾರಿ ಫೌಂಡೇಷನ್ ಸಂಸ್ಥೆಯ ಸಹಯೋಗದೊಂದಿಗೆ ಇಲ್ಲಿನ ಬಜಾರ್ ರಸ್ತೆಯ ಆನಂದರಾಮ ಕಲ್ಯಾಣ ಮಂಟಪದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಮಾರಂಭ ವಿಜೃಂಭಣೆಯಿಂದ ನೆರವೇರಿತು.<br /> <br /> ಮಹೋತ್ಸವ ಅಂಗವಾಗಿ ಬೆಳಗ್ಗೆ 10.45 ಗಂಟೆಗೆ ಶ್ರೀನಿವಾಸ ದೇವರ ಮಹಾ ಅಭಿಷೇಕ, ಮಹಾಪೂಜೆ, ಶ್ರೀ ವಿಷ್ಣುಸಹಸ್ರನಾಮ ಹೋಮ, ಪೂರ್ಣಾಹುತಿ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. <br /> ಸಂಜೆ 4.30 ಗಂಟೆಗೆ ಪಟ್ಟಣದ ರಾಜಬೀದಿಗಳಲ್ಲಿ ಶ್ರೀನಿವಾಸ ದೇವರ ಉತ್ಸವ ನಡೆಯಿತು. <br /> <br /> ಸಾಂಪ್ರದಾಯಕ ಉಡುಪನ್ನು ಧರಿಸಿದ್ದ ಊರಿನ ಗಣ್ಯರು `ಅಕ್ಷರ ಬ್ರಹ್ಮ ಗೋವಿಂದನಾಮ~ ಹೇಳಿಕೊಂಡು ಹಾಗೂ ಮಹಿಳೆಯರು `ಬಾರಯ್ಯ ಶ್ರೀನಿವಾಸ~ ಎಂಬ ಭಜನೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.<br /> <br /> ಉತ್ಸವದ ನಂತರ ಸಂಜೆ 7 ಗಂಟೆಗೆ ಶ್ರೀ ಹರಿದಾಸ ಸಂಘದ ಸಂಸ್ಥಾಪಕರಾದ ಹ.ರಾ.ನಾಗರಾಜಾಚಾರ್ಯ ಅವರು, ಶ್ರೀನಿವಾಸ ಕಲ್ಯಾಣ ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ಪ್ರವಚನ ನೀಡಿದರು. ಕಲ್ಯಾಣ ಮಹೋತ್ಸವದ ನೇತೃತ್ವ ವಹಿಸಿದ್ದ ಶ್ರೀವಾರಿ ಫೌಂಡೇಷನ್ ಸಂಸ್ಥೆಯ ಎಸ್.ವೆಂಕಟೇಶಮೂರ್ತಿ ಅವರು, ಮಹೋತ್ಸವದ ಉದ್ದೇಶವನ್ನು ತಿಳಿಸಿದರು. <br /> <br /> ಕರ್ನಾಟಕ ಹರಿದಾಸರ ಹಾಡುಗಳ ಆಧಾರದ ಮೇಲೆ ನೃತ್ಯ ಗೀತನದೊಂದಿಗೆ ಶ್ರೀನಿವಾಸ ಕಲ್ಯಾಣ ನೆರವೇರಿಸಲಾಯಿತು.<br /> <br /> ತಿರುಪತಿಯ ಪಂಡಿತರಾದ ಶ್ರೀ ಶ್ರೀಕಾಂತ ಆಚಾರ್ಯ ಅವರು, ಕಲ್ಯಾಣ ಮಹೋತ್ಸವದ ಸಂಕಲ್ಪ ಮಾಡಿಸಿ ದರು. ಮಾಜಿ ನಗರಸಭಾ ಅಧ್ಯಕ್ಷ ಮು.ಕೃಷ್ಣಮೂರ್ತಿ ಮತ್ತು ಸಂಗಡಿಗರು ಈ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.<br /> <br /> ಶಾಸಕ ಎಸ್.ಆರ್.ವಿಶ್ವನಾಥ್, ಬಿಬಿಎಂಪಿ ಸದಸ್ಯ ವೈ.ಎನ್.ಅಶ್ವಥ್, ಯಲಹಂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ.ಬಾಷಾ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>