<p><strong>ಬೀಚ್ ಗೇಮ್ಸ: ಭಾರತ ತಂಡಕ್ಕೆ ಅಗ್ರಸ್ಥಾನ<br /> ಹಂಬಂಟೋಟಾ, ಶ್ರೀಲಂಕಾ (ಪಿಟಿಐ): </strong>ಪ್ರಭಾವಿ ಪ್ರದರ್ಶನ ನೀಡಿದ ಭಾರತ ತಂಡದವರು ಇಲ್ಲಿ ಕೊನೆಗೊಂಡ ಚೊಚ್ಚಲ ಸೌತ್ ಏಷ್ಯನ್ ಬೀಚ್ ಕ್ರೀಡಾಕೂಟದಲ್ಲಿ ಹೆಚ್ಚು ಪದಕಗಳನ್ನು ಜಯಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು.<br /> <br /> ಕೂಟದ ಕೊನೆಯ ದಿನವಾದ ಶುಕ್ರವಾರ ಭಾರತದ ಸ್ಪರ್ಧಿಗಳು ತಮ್ಮ ಪ್ರಾಬಲ್ಯ ಮುಂದುವರಿಸಿದರು. ವಿವಿಧ ಸ್ಪರ್ಧೆಗಳಲ್ಲಿ 11 ಚಿನ್ನ, ಒಂಬತ್ತು ಬೆಳ್ಳಿ ಹಾಗೂ ಏಳು ಕಂಚು ಸೇರಿದಂತೆ ಒಟ್ಟು 27 ಪದಕಗಳು ಭಾರತದ ಮಡಿಲು ಸೇರಿದವು.<br /> <br /> ಆತಿಥೇಯ ಶ್ರೀಲಂಕಾದ ಸ್ಪರ್ಧಿಗಳು ದ್ವಿತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದ ನೆಟ್ಬಾಲ್ ಸ್ಪರ್ಧೆಯಲ್ಲಿ ಲಂಕಾ 24-17 ಪಾಯಿಂಟ್ಸ್ಗಳನ್ನು ಕಲೆ ಹಾಕಿ ಭಾರತ ತಂಡವನ್ನು ಮಣಿಸಿತು. ಈ ಮೂಲಕ ಕೂಟದಲ್ಲಿ ಕೊನೆಯ ಚಿನ್ನವನ್ನು ತನ್ನದಾಗಿಸಿಕೊಂಡಿತು. ಮೊದಲಾರ್ಧದಲ್ಲಿ ವಿಜಯಿ ತಂಡ 13-7ರಲ್ಲಿ ಮುನ್ನಡೆಯಲ್ಲಿತ್ತು. ಈ ತಂಡ ಒಂಬತ್ತು ಚಿನ್ನ, ಒಂಬತ್ತು ಬೆಳ್ಳಿ ಹಾಗೂ ಏಳು ಕಂಚು ಸೇರಿದಂತೆ 25 ಪದಕ ಜಯಿಸಿತು. <br /> <br /> <strong>ಟೆನಿಸ್: ಫೈನಲ್ಗೆ ರುತುಜಾ<br /> ನವದೆಹಲಿ (ಪಿಟಿಐ):</strong> ಉತ್ತಮ ಪ್ರದರ್ಶನ ನೀಡಿದ ಪುಣೆಯ ರುತುಜಾ ಬೋಸಲೆ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಓಪನ್ ಟೆನಿಸ್ ಚಾಂಪಿಯನ್ಷಿಪ್ನ ಬಾಲಕಿಯರ ವಿಭಾಗದ ಸಿಂಗಲ್ಸ್ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.<br /> <br /> ಇಲ್ಲಿನ ಲಾನ್ ಟೆನಿಸ್ ಸಂಸ್ಥೆಯ ಕೋರ್ಟ್ನಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ರುತುಜಾ 6-4, 6-4ರ ನೇರ ಸೆಟ್ಗಳಿಂದ ಪ್ರಶಸ್ತಿಯ ಭರವಸೆ ಎನ್ನಿಸಿದ್ದ ರುಷ್ಮಿ ಚಕ್ರವರ್ತಿ ಅವರನ್ನು ಸೋಲಿಸಿ ಅಚ್ಚರಿ ಮೂಡಿಸಿದರು. ಫೈನಲ್ನಲ್ಲಿ ರುತುಜಾ ಅವರು ಇಶಾ ಲಖಾನಿ ವಿರುದ್ಧ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. <br /> <br /> ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಇಶಾ 6-4, 6-2ರಲ್ಲಿ ಸುಜನಾ ಭಾವಿಶೆಟ್ಟಿ ವಿರುದ್ಧ ಗೆಲುವು ಸಾಧಿಸಿ ಫೈನಲ್ಗೆ ಲಗ್ಗೆ ಇಟ್ಟರು. ಫೈನಲ್ ಪ್ರವೇಶಿಸಿರುವುದು ಖುಷಿ ನೀಡಿದೆ ಎಂದು ರುತುಜಾ ಪ್ರತಿಕ್ರಿಯಿಸಿದರು.<br /> <br /> <strong>ರಾಷ್ಟ್ರೀಯ ಟೂರ್ನಿಗೆ ಹ್ಯಾಂಡ್ಬಾಲ್ ತಂಡ<br /> ಬೆಂಗಳೂರು: </strong>ಚತ್ತೀಸಗಡದಲ್ಲಿ ಅಕ್ಟೋಬರ್ 16ರಿಂದ 21ರ ವರೆಗೆ ನಡೆಯಲಿರುವ 40ನೇ ಸೀನಿಯರ್ ರಾಷ್ಟ್ರೀಯ ಹ್ಯಾಂಡ್ಬಾಲ್ ಚಾಂಪಿಯನ್ಷಿಪ್ಗೆ ಕರ್ನಾಟಕ ಪುರುಷರ ತಂಡವನ್ನು ಕರ್ನಾಟಕ ಹ್ಯಾಂಡ್ ಬಾಲ್ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ.<br /> <br /> ತಂಡ ಇಂತಿದೆ: ಜಿ. ಭಾಸ್ಕರ್ (ನಾಯಕ), ಎಂ. ಶ್ರೀನಿವಾಸನ್, ಪ್ರೇಮನಾಥ್, ಅಸ್ಟಿನ್ ಜೋಯ್ಫುಲ್ ಇಕ್ಬಾಲ್ ಸಿಂಗ್, ಜಗದೀಶ್, ಸಿದ್ಧಾರ್ಥ, ವಾಜೀದ್, ಆದಿತ್ಯ, ಸಿ.ಎಸ್ ಜಿತಿನ್, ಮೋಹನ್ ಲಾಲ್, ರಘು ಕುಮಾರ, ಮಣಿಕಂದನ್, ಮಹಾದೇವನ್, ಮನು, ಮಧು, ಎ. ಕುಮಾರ್ (ಕೋಚ್) ಹಾಗೂ ರಾಘವೇಂದ್ರ (ಮ್ಯಾನೇನರ್).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀಚ್ ಗೇಮ್ಸ: ಭಾರತ ತಂಡಕ್ಕೆ ಅಗ್ರಸ್ಥಾನ<br /> ಹಂಬಂಟೋಟಾ, ಶ್ರೀಲಂಕಾ (ಪಿಟಿಐ): </strong>ಪ್ರಭಾವಿ ಪ್ರದರ್ಶನ ನೀಡಿದ ಭಾರತ ತಂಡದವರು ಇಲ್ಲಿ ಕೊನೆಗೊಂಡ ಚೊಚ್ಚಲ ಸೌತ್ ಏಷ್ಯನ್ ಬೀಚ್ ಕ್ರೀಡಾಕೂಟದಲ್ಲಿ ಹೆಚ್ಚು ಪದಕಗಳನ್ನು ಜಯಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು.<br /> <br /> ಕೂಟದ ಕೊನೆಯ ದಿನವಾದ ಶುಕ್ರವಾರ ಭಾರತದ ಸ್ಪರ್ಧಿಗಳು ತಮ್ಮ ಪ್ರಾಬಲ್ಯ ಮುಂದುವರಿಸಿದರು. ವಿವಿಧ ಸ್ಪರ್ಧೆಗಳಲ್ಲಿ 11 ಚಿನ್ನ, ಒಂಬತ್ತು ಬೆಳ್ಳಿ ಹಾಗೂ ಏಳು ಕಂಚು ಸೇರಿದಂತೆ ಒಟ್ಟು 27 ಪದಕಗಳು ಭಾರತದ ಮಡಿಲು ಸೇರಿದವು.<br /> <br /> ಆತಿಥೇಯ ಶ್ರೀಲಂಕಾದ ಸ್ಪರ್ಧಿಗಳು ದ್ವಿತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದ ನೆಟ್ಬಾಲ್ ಸ್ಪರ್ಧೆಯಲ್ಲಿ ಲಂಕಾ 24-17 ಪಾಯಿಂಟ್ಸ್ಗಳನ್ನು ಕಲೆ ಹಾಕಿ ಭಾರತ ತಂಡವನ್ನು ಮಣಿಸಿತು. ಈ ಮೂಲಕ ಕೂಟದಲ್ಲಿ ಕೊನೆಯ ಚಿನ್ನವನ್ನು ತನ್ನದಾಗಿಸಿಕೊಂಡಿತು. ಮೊದಲಾರ್ಧದಲ್ಲಿ ವಿಜಯಿ ತಂಡ 13-7ರಲ್ಲಿ ಮುನ್ನಡೆಯಲ್ಲಿತ್ತು. ಈ ತಂಡ ಒಂಬತ್ತು ಚಿನ್ನ, ಒಂಬತ್ತು ಬೆಳ್ಳಿ ಹಾಗೂ ಏಳು ಕಂಚು ಸೇರಿದಂತೆ 25 ಪದಕ ಜಯಿಸಿತು. <br /> <br /> <strong>ಟೆನಿಸ್: ಫೈನಲ್ಗೆ ರುತುಜಾ<br /> ನವದೆಹಲಿ (ಪಿಟಿಐ):</strong> ಉತ್ತಮ ಪ್ರದರ್ಶನ ನೀಡಿದ ಪುಣೆಯ ರುತುಜಾ ಬೋಸಲೆ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಓಪನ್ ಟೆನಿಸ್ ಚಾಂಪಿಯನ್ಷಿಪ್ನ ಬಾಲಕಿಯರ ವಿಭಾಗದ ಸಿಂಗಲ್ಸ್ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.<br /> <br /> ಇಲ್ಲಿನ ಲಾನ್ ಟೆನಿಸ್ ಸಂಸ್ಥೆಯ ಕೋರ್ಟ್ನಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ರುತುಜಾ 6-4, 6-4ರ ನೇರ ಸೆಟ್ಗಳಿಂದ ಪ್ರಶಸ್ತಿಯ ಭರವಸೆ ಎನ್ನಿಸಿದ್ದ ರುಷ್ಮಿ ಚಕ್ರವರ್ತಿ ಅವರನ್ನು ಸೋಲಿಸಿ ಅಚ್ಚರಿ ಮೂಡಿಸಿದರು. ಫೈನಲ್ನಲ್ಲಿ ರುತುಜಾ ಅವರು ಇಶಾ ಲಖಾನಿ ವಿರುದ್ಧ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. <br /> <br /> ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಇಶಾ 6-4, 6-2ರಲ್ಲಿ ಸುಜನಾ ಭಾವಿಶೆಟ್ಟಿ ವಿರುದ್ಧ ಗೆಲುವು ಸಾಧಿಸಿ ಫೈನಲ್ಗೆ ಲಗ್ಗೆ ಇಟ್ಟರು. ಫೈನಲ್ ಪ್ರವೇಶಿಸಿರುವುದು ಖುಷಿ ನೀಡಿದೆ ಎಂದು ರುತುಜಾ ಪ್ರತಿಕ್ರಿಯಿಸಿದರು.<br /> <br /> <strong>ರಾಷ್ಟ್ರೀಯ ಟೂರ್ನಿಗೆ ಹ್ಯಾಂಡ್ಬಾಲ್ ತಂಡ<br /> ಬೆಂಗಳೂರು: </strong>ಚತ್ತೀಸಗಡದಲ್ಲಿ ಅಕ್ಟೋಬರ್ 16ರಿಂದ 21ರ ವರೆಗೆ ನಡೆಯಲಿರುವ 40ನೇ ಸೀನಿಯರ್ ರಾಷ್ಟ್ರೀಯ ಹ್ಯಾಂಡ್ಬಾಲ್ ಚಾಂಪಿಯನ್ಷಿಪ್ಗೆ ಕರ್ನಾಟಕ ಪುರುಷರ ತಂಡವನ್ನು ಕರ್ನಾಟಕ ಹ್ಯಾಂಡ್ ಬಾಲ್ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ.<br /> <br /> ತಂಡ ಇಂತಿದೆ: ಜಿ. ಭಾಸ್ಕರ್ (ನಾಯಕ), ಎಂ. ಶ್ರೀನಿವಾಸನ್, ಪ್ರೇಮನಾಥ್, ಅಸ್ಟಿನ್ ಜೋಯ್ಫುಲ್ ಇಕ್ಬಾಲ್ ಸಿಂಗ್, ಜಗದೀಶ್, ಸಿದ್ಧಾರ್ಥ, ವಾಜೀದ್, ಆದಿತ್ಯ, ಸಿ.ಎಸ್ ಜಿತಿನ್, ಮೋಹನ್ ಲಾಲ್, ರಘು ಕುಮಾರ, ಮಣಿಕಂದನ್, ಮಹಾದೇವನ್, ಮನು, ಮಧು, ಎ. ಕುಮಾರ್ (ಕೋಚ್) ಹಾಗೂ ರಾಘವೇಂದ್ರ (ಮ್ಯಾನೇನರ್).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>