<p><strong>ಟ್ಯಾಂಕರ್ ಮುಷ್ಕರ ಅಂತ್ಯ<br /> ಚೆನ್ನೈ: </strong>ಸರ್ಕಾರದ ಪ್ರತಿನಿಧಿಗಳು ಮತ್ತು ಟ್ಯಾಂಕರ್ ಮಾಲೀಕರ ಸಂಘದ ನಡುವೆ ನಡೆದ ಮಾತುಕತೆ ಯಶಸ್ವಿಯಾಗಿದ್ದು, ಏಳು ದಿನಗಳಿಂದ ನಡೆಯುತ್ತಿದ್ದ ಅಡುಗೆ ಅನಿಲ ಸಾಗಾಟ ಟ್ಯಾಂಕರ್ಗಳ ಮುಷ್ಕರವನ್ನು ತಕ್ಷಣದಿಂದಲೇ ಹಿಂದಕ್ಕೆ ಪಡೆಯಲಾಗಿದೆ. ಇದರಿಂದ ಅಡುಗೆ ಅನಿಲ ತೊಂದರೆ ಅನುಭವಿಸುತ್ತಿದ್ದವರು ಸಮಾಧಾನ ಪಡುವಂತಾಗಿದೆ.<br /> <br /> <strong>ಆಂಧ್ರ: `ಪ್ರಜಾ ರಾಜ್ಯಂ~ನ ಇಬ್ಬರಿಗೆ ಸಚಿವ ಪಟ್ಟ <br /> ಹೈದರಾಬಾದ್ (ಐಎಎನ್ಎಸ್):</strong> ಆಂಧ್ರಪ್ರದೇಶ ಸಚಿವ ಸಂಪುಟವನ್ನು ವಿಸ್ತರಿಸಲಾಗಿದ್ದು ನಟ ಚಿರಂಜೀವಿ ನೇತೃತ್ವದ ಪ್ರಜಾ ರಾಜ್ಯಂ ಪಕ್ಷಕ್ಕೆ ಸೇರಿದ ಇಬ್ಬರು ಶಾಸಕರನ್ನು ಸಚಿವರಾಗಿ ನೇಮಿಸಲಾಗಿದೆ. ಪ್ರಜಾರಾಜ್ಯಂ ಕಳೆದ ವರ್ಷ ಕಾಂಗ್ರೆಸ್ನೊಂದಿಗೆ ವಿಲೀನಗೊಂಡಿತ್ತು.<br /> <br /> <strong>ಗುಂಡಿನ ಕಾಳಗ: ಉಗ್ರನ ಸಾವು<br /> ಪೂಂಚ್ (ಪಿಟಿಐ):</strong> ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗುರುವಾರ ಗಡಿ ನಿಯಂತ್ರಣ ರೇಖೆಯ ಬಳಿ ಉಗ್ರರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಉಗ್ರನೊಬ್ಬ ಮೃತಪಟ್ಟಿದ್ದಾನೆ.<br /> <br /> <strong>ಮಾವೊವಾದಿಗಳಿಂದ ಆದಿವಾಸಿ ಹತ್ಯೆ<br /> ಮಲ್ಕನ್ಗಿರಿ (ಪಿಟಿಐ): </strong>ಒಡಿಶಾದ ಮಲ್ಕನ್ಗಿರಿ ಜಿಲ್ಲೆಯಲ್ಲಿ ಪೊಲೀಸ್ ಮಾಹಿತಿದಾರನೆಂದು ಶಂಕಿಸಿ ಮಾವೊವಾದಿಗಳು ಆದಿವಾಸಿಯೊಬ್ಬನನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.<br /> <br /> ಮಲ್ಕನ್ಗಿರಿಯಿಂದ 90 ಕಿ.ಮೀ. ದೂರದಲ್ಲಿರುವ ತಂಕಮುನಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗುರು ಕಿಲಾ ಎಂಬಾತದ ಕೊರಳು ಸಿಗಿದು ಕೊಂದು ಹಾಕಿರುವ ಮಾವೋವಾದಿಗಳು ಆತನ ಶವವನ್ನು ಗ್ರಾಮದ ಬಳಿ ಎಸೆದು ಹೋಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಟ್ಯಾಂಕರ್ ಮುಷ್ಕರ ಅಂತ್ಯ<br /> ಚೆನ್ನೈ: </strong>ಸರ್ಕಾರದ ಪ್ರತಿನಿಧಿಗಳು ಮತ್ತು ಟ್ಯಾಂಕರ್ ಮಾಲೀಕರ ಸಂಘದ ನಡುವೆ ನಡೆದ ಮಾತುಕತೆ ಯಶಸ್ವಿಯಾಗಿದ್ದು, ಏಳು ದಿನಗಳಿಂದ ನಡೆಯುತ್ತಿದ್ದ ಅಡುಗೆ ಅನಿಲ ಸಾಗಾಟ ಟ್ಯಾಂಕರ್ಗಳ ಮುಷ್ಕರವನ್ನು ತಕ್ಷಣದಿಂದಲೇ ಹಿಂದಕ್ಕೆ ಪಡೆಯಲಾಗಿದೆ. ಇದರಿಂದ ಅಡುಗೆ ಅನಿಲ ತೊಂದರೆ ಅನುಭವಿಸುತ್ತಿದ್ದವರು ಸಮಾಧಾನ ಪಡುವಂತಾಗಿದೆ.<br /> <br /> <strong>ಆಂಧ್ರ: `ಪ್ರಜಾ ರಾಜ್ಯಂ~ನ ಇಬ್ಬರಿಗೆ ಸಚಿವ ಪಟ್ಟ <br /> ಹೈದರಾಬಾದ್ (ಐಎಎನ್ಎಸ್):</strong> ಆಂಧ್ರಪ್ರದೇಶ ಸಚಿವ ಸಂಪುಟವನ್ನು ವಿಸ್ತರಿಸಲಾಗಿದ್ದು ನಟ ಚಿರಂಜೀವಿ ನೇತೃತ್ವದ ಪ್ರಜಾ ರಾಜ್ಯಂ ಪಕ್ಷಕ್ಕೆ ಸೇರಿದ ಇಬ್ಬರು ಶಾಸಕರನ್ನು ಸಚಿವರಾಗಿ ನೇಮಿಸಲಾಗಿದೆ. ಪ್ರಜಾರಾಜ್ಯಂ ಕಳೆದ ವರ್ಷ ಕಾಂಗ್ರೆಸ್ನೊಂದಿಗೆ ವಿಲೀನಗೊಂಡಿತ್ತು.<br /> <br /> <strong>ಗುಂಡಿನ ಕಾಳಗ: ಉಗ್ರನ ಸಾವು<br /> ಪೂಂಚ್ (ಪಿಟಿಐ):</strong> ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗುರುವಾರ ಗಡಿ ನಿಯಂತ್ರಣ ರೇಖೆಯ ಬಳಿ ಉಗ್ರರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಉಗ್ರನೊಬ್ಬ ಮೃತಪಟ್ಟಿದ್ದಾನೆ.<br /> <br /> <strong>ಮಾವೊವಾದಿಗಳಿಂದ ಆದಿವಾಸಿ ಹತ್ಯೆ<br /> ಮಲ್ಕನ್ಗಿರಿ (ಪಿಟಿಐ): </strong>ಒಡಿಶಾದ ಮಲ್ಕನ್ಗಿರಿ ಜಿಲ್ಲೆಯಲ್ಲಿ ಪೊಲೀಸ್ ಮಾಹಿತಿದಾರನೆಂದು ಶಂಕಿಸಿ ಮಾವೊವಾದಿಗಳು ಆದಿವಾಸಿಯೊಬ್ಬನನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.<br /> <br /> ಮಲ್ಕನ್ಗಿರಿಯಿಂದ 90 ಕಿ.ಮೀ. ದೂರದಲ್ಲಿರುವ ತಂಕಮುನಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗುರು ಕಿಲಾ ಎಂಬಾತದ ಕೊರಳು ಸಿಗಿದು ಕೊಂದು ಹಾಕಿರುವ ಮಾವೋವಾದಿಗಳು ಆತನ ಶವವನ್ನು ಗ್ರಾಮದ ಬಳಿ ಎಸೆದು ಹೋಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>