<p><strong>ಹೊನ್ನಾಳಿ:</strong> ಪಟ್ಟಣದ ವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದ್ದು, ಸಾರ್ವಜನಿಕರು ರಸ್ತೆಯಲ್ಲಿ ನಡೆದಾಡುವುದೇ ಪ್ರಯಾಸಕರವಾಗಿದೆ.</p>.<p>ಖಾಸಗಿ ಮತ್ತು ಕೆಎಸ್ಸಾರ್ಟಿಸಿ ಬಸ್ಗಳು, ಸರಕು ಸಾಗಾಣಿಕಾ ವಾಹನಗಳು, ವಿವಿಧ ವಾಣಿಜ್ಯ ಚಟುವಟಿಕಾ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ವೃತ್ತದ ಮೂಲಕ ಸಂಚರಿಸುವ ಕಾರಣ ಇತ್ತೀಚೆಗೆ ಇಲ್ಲಿ ಓಡಾಡುವುದೇ ಕಷ್ಟಕರವಾಗಿದೆ.</p>.<p>ಪ್ರತಿದಿನ ಪಟ್ಟಣದ ಮೂಲಕ 280-300 ಕೆಎಸ್ಸಾರ್ಟಿಸಿ, 200 ಖಾಸಗಿ ಬಸ್ಗಳು ಸಂಚರಿಸುತ್ತವೆ. ಪಟ್ಟಣದ ಹೃದಯ ಭಾಗವಾದ ಈ ಪ್ರದೇಶದ ಸುತ್ತ-ಮುತ್ತ ಮೆಡಿಕಲ್ ಶಾಪ್ಗಳು, ತರಕಾರಿ ಅಂಗಡಿಗಳು, ಆಸ್ಪತ್ರೆಗಳು, ಹೋಟೆಲ್ಗಳು ಇತ್ಯಾದಿ ಇವೆ. ಸಾರ್ವಜನಿಕರು ಈ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿದಿನ ಆಗಮಿಸುವುದರಿಂದ ತೀವ್ರ ತೊಂದರೆಯಾಗುತ್ತಿದೆ. ಸಾರ್ವಜನಿಕರ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಇದೆ ಎನ್ನುತ್ತಾರೆ ಹೊಳೆಅರಳಹಳ್ಳಿಯ ನಾಗರಿಕ ಎಚ್.ವಿ. ಬಸವರಾಜ್.</p>.<p>ಈ ವೃತ್ತದ ರಸ್ತೆ ಬದಿ ಮೊಬೈಲ್ ಕಂಪೆನಿಗಳ ಸಿಮ್, ನಂದಿನಿ ಹಾಲು ಉತ್ಪನ್ನಗಳ ಮಾರಾಟ ವಾಹನಗಳು ನಿಂತಿರುತ್ತವೆ. ರಸ್ತೆ ಬದಿ ತರಕಾರಿ ಅಂಗಡಿಗಳೂ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತದೆ ಎಂಬುದು ಸಾರ್ವಜನಿಕರ ದೂರು.</p>.<p>ಆಸ್ಪತ್ರೆಗೆ ಆಗಮಿಸುವ ರೋಗಿಗಳು, ಮೆಡಿಕಲ್ ಶಾಪ್ಗೆ ತೆರಳಬೇಕಾದ ಸಂದರ್ಭದಲ್ಲಿ ವಾಹನ ದಟ್ಟಣೆಯಿಂದಾಗಿ ತೀವ್ರ ತೊಂದರೆ ಅನುಭವಿಸುವಂತಾಗುತ್ತದೆ. ಎಷ್ಟೋ ವೇಳೆ ಕೆಲ ವೃದ್ಧ ರೋಗಿಗಳು ಬಿದ್ದು ಕೈ-ಕಾಲು ಮುರಿದುಕೊಂಡ ಉದಾಹರಣೆಗಳಿವೆ. ಸಾರ್ವಜನಿಕರಿಗೆ ಓಡಾಡಲು ಅನುಕೂಲವಾಗುವಂತೆ ಫುಟ್ಪಾತ್ ನಿರ್ಮಿಸಬೇಕು ಎಂಬುದು ಇದೇ ವೃತ್ತದಲ್ಲಿರುವ ಮೆಡಿಕಲ್ಶಾಪ್ನ ಮಾಲೀಕ ರಾಘವೇಂದ್ರ ಅವರ ಸಲಹೆ.</p>.<p>ವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಮಾಡಬೇಕಿದೆ. ಹೀಗೆ ಮಾಡಿದರೆ, ಸಮಸ್ಯೆ ಕೊಂಚ ಕಡಿಮೆ ಆಗಬಹುದು. ಶೀಘ್ರ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕು ಎಂಬುದು ನಾಗರಿಕರ ಮನವಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾಳಿ:</strong> ಪಟ್ಟಣದ ವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದ್ದು, ಸಾರ್ವಜನಿಕರು ರಸ್ತೆಯಲ್ಲಿ ನಡೆದಾಡುವುದೇ ಪ್ರಯಾಸಕರವಾಗಿದೆ.</p>.<p>ಖಾಸಗಿ ಮತ್ತು ಕೆಎಸ್ಸಾರ್ಟಿಸಿ ಬಸ್ಗಳು, ಸರಕು ಸಾಗಾಣಿಕಾ ವಾಹನಗಳು, ವಿವಿಧ ವಾಣಿಜ್ಯ ಚಟುವಟಿಕಾ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ವೃತ್ತದ ಮೂಲಕ ಸಂಚರಿಸುವ ಕಾರಣ ಇತ್ತೀಚೆಗೆ ಇಲ್ಲಿ ಓಡಾಡುವುದೇ ಕಷ್ಟಕರವಾಗಿದೆ.</p>.<p>ಪ್ರತಿದಿನ ಪಟ್ಟಣದ ಮೂಲಕ 280-300 ಕೆಎಸ್ಸಾರ್ಟಿಸಿ, 200 ಖಾಸಗಿ ಬಸ್ಗಳು ಸಂಚರಿಸುತ್ತವೆ. ಪಟ್ಟಣದ ಹೃದಯ ಭಾಗವಾದ ಈ ಪ್ರದೇಶದ ಸುತ್ತ-ಮುತ್ತ ಮೆಡಿಕಲ್ ಶಾಪ್ಗಳು, ತರಕಾರಿ ಅಂಗಡಿಗಳು, ಆಸ್ಪತ್ರೆಗಳು, ಹೋಟೆಲ್ಗಳು ಇತ್ಯಾದಿ ಇವೆ. ಸಾರ್ವಜನಿಕರು ಈ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿದಿನ ಆಗಮಿಸುವುದರಿಂದ ತೀವ್ರ ತೊಂದರೆಯಾಗುತ್ತಿದೆ. ಸಾರ್ವಜನಿಕರ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಇದೆ ಎನ್ನುತ್ತಾರೆ ಹೊಳೆಅರಳಹಳ್ಳಿಯ ನಾಗರಿಕ ಎಚ್.ವಿ. ಬಸವರಾಜ್.</p>.<p>ಈ ವೃತ್ತದ ರಸ್ತೆ ಬದಿ ಮೊಬೈಲ್ ಕಂಪೆನಿಗಳ ಸಿಮ್, ನಂದಿನಿ ಹಾಲು ಉತ್ಪನ್ನಗಳ ಮಾರಾಟ ವಾಹನಗಳು ನಿಂತಿರುತ್ತವೆ. ರಸ್ತೆ ಬದಿ ತರಕಾರಿ ಅಂಗಡಿಗಳೂ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತದೆ ಎಂಬುದು ಸಾರ್ವಜನಿಕರ ದೂರು.</p>.<p>ಆಸ್ಪತ್ರೆಗೆ ಆಗಮಿಸುವ ರೋಗಿಗಳು, ಮೆಡಿಕಲ್ ಶಾಪ್ಗೆ ತೆರಳಬೇಕಾದ ಸಂದರ್ಭದಲ್ಲಿ ವಾಹನ ದಟ್ಟಣೆಯಿಂದಾಗಿ ತೀವ್ರ ತೊಂದರೆ ಅನುಭವಿಸುವಂತಾಗುತ್ತದೆ. ಎಷ್ಟೋ ವೇಳೆ ಕೆಲ ವೃದ್ಧ ರೋಗಿಗಳು ಬಿದ್ದು ಕೈ-ಕಾಲು ಮುರಿದುಕೊಂಡ ಉದಾಹರಣೆಗಳಿವೆ. ಸಾರ್ವಜನಿಕರಿಗೆ ಓಡಾಡಲು ಅನುಕೂಲವಾಗುವಂತೆ ಫುಟ್ಪಾತ್ ನಿರ್ಮಿಸಬೇಕು ಎಂಬುದು ಇದೇ ವೃತ್ತದಲ್ಲಿರುವ ಮೆಡಿಕಲ್ಶಾಪ್ನ ಮಾಲೀಕ ರಾಘವೇಂದ್ರ ಅವರ ಸಲಹೆ.</p>.<p>ವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಮಾಡಬೇಕಿದೆ. ಹೀಗೆ ಮಾಡಿದರೆ, ಸಮಸ್ಯೆ ಕೊಂಚ ಕಡಿಮೆ ಆಗಬಹುದು. ಶೀಘ್ರ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕು ಎಂಬುದು ನಾಗರಿಕರ ಮನವಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>