<p><strong>ಕುಶಾಲನಗರ:</strong> ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಲಯಾಳಿ ಭಾಷಿಕರು `ತಿರು ಓಣಂ~ ಹಬ್ಬವನ್ನು ಶುಕ್ರವಾರ ಸಂಭ್ರಮ, ಸಡಗರದಿಂದ ಆಚರಿಸಿದರು.ಈ ಸಂದರ್ಭದಲ್ಲಿ ಮಲೆಯಾಳಿ ಭಾಷೆಯನ್ನಾಡುವ ಹಿಂದೂ, ಮುಸ್ಲಿಂ, ಕ್ರೈಸ್ತರು ಪರಸ್ಪರ ಒಟ್ಟಿಗೆ ಸೇರಿ `ಓಣಂ~ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಂತಸಪಟ್ಟರು.<br /> <br /> ಹಬ್ಬದ ಸಂದರ್ಭದಲ್ಲಿ ಹೊಸ ಉಡುಗೆ, ತೊಡುಗೆ ತೊಟ್ಟ ಮಹಿಳೆಯರು, ಮಕ್ಕಳು ಒಟ್ಟಿಗೆ ಸೇರಿ ತಮ್ಮ ಮನೆಯಂಗಳದಲ್ಲಿ `ಓಣಂ~ನ ವೈಶಿಷ್ಟ್ಯವೆನಿಸಿದ `ಪುಷ್ಪ ರಂಗವಲ್ಲಿ~ (ಪೊಳಕಂ) ಬಿಡಿಸಿದ್ದು ಗಮನ ಸೆಳೆಯಿತು. ಮನೆಯಂಗಳವನ್ನು ಸಿಂಗರಿಸಿದ ಮಹಿಳೆಯರು ಕೇರಳ ನಾಡಿನ ಸಂಸ್ಕೃತಿ ಪ್ರತಿಬಿಂಬಿಸುವ ಸಾಂಪ್ರದಾಯಿಕ ಸೀರೆ ಧರಿಸಿ ಪುಷ್ಪ ರಂಗವಲ್ಲಿ ಮಧ್ಯೆ ದೀಪವನ್ನಿಟ್ಟು ಬೆಳಗಿಸಿದರು. ರಂಗವಲ್ಲಿ ಸುತ್ತ ಮನೆ ಮಂದಿ, ನೆರೆ ಹೊರೆಯವರು, ನೆಂಟರಿಷ್ಟರ್ಲ್ಲೆಲ ಸೇರಿ ಹಬ್ಬವನ್ನು ಆಚರಿಸಿದರು.<br /> <br /> ಹಬ್ಬದ ಅಂಗವಾಗಿ ವಿಶೇಷವಾಗಿ ತಯಾರಿಸಿದ್ದ `ಓಣಂ ಸದ್ಯ~ ಎಂಬ ವಿಶೇಷ ಭೋಜನವನ್ನು ಎಲ್ಲರೂ ಒಟ್ಟಿಗೆ ಸೇರಿ ಸವಿದರು. ಕುಶಾಲನಗರದಲ್ಲಿ ಕೇರಳ ಶೈಲಿಯ ಅತಿಥಿ ಹೋಟೆಲ್ನಲ್ಲಿ ಓಣಂ ಅಂಗವಾಗಿ ಬಿಡಿಸಿದ್ದ ಪುಷ್ಪ ರಂಗವಲ್ಲಿ ಮತ್ತು ಓಣಂನ ವಿಶೇಷ ಖಾದ್ಯ `ಓಣಂ ಸದ್ಯ~ ಪ್ರವಾಸಿಗರನ್ನು ಆಕರ್ಷಿಸಿತು. <br /> <br /> ಮಲೆಯಾಳಿ ಭಾಷಿಕರು ಜಾತಿ-ಮತ, ಭೇದ-ಭಾವವಿಲ್ಲದೆ `ಓಣಂ~ ಹಬ್ಬವನ್ನು ಕೂಡಿಗೆ, ಏಳನೇ ಹೊಸಕೋಟೆ, ಸುಂಟಿಕೊಪ್ಪ, ಮಾದಾಪುರ, ಗುಡ್ಡೆಹೊಸೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಂಭ್ರಮದಿಂದ ಆಚರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಶಾಲನಗರ:</strong> ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಲಯಾಳಿ ಭಾಷಿಕರು `ತಿರು ಓಣಂ~ ಹಬ್ಬವನ್ನು ಶುಕ್ರವಾರ ಸಂಭ್ರಮ, ಸಡಗರದಿಂದ ಆಚರಿಸಿದರು.ಈ ಸಂದರ್ಭದಲ್ಲಿ ಮಲೆಯಾಳಿ ಭಾಷೆಯನ್ನಾಡುವ ಹಿಂದೂ, ಮುಸ್ಲಿಂ, ಕ್ರೈಸ್ತರು ಪರಸ್ಪರ ಒಟ್ಟಿಗೆ ಸೇರಿ `ಓಣಂ~ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಂತಸಪಟ್ಟರು.<br /> <br /> ಹಬ್ಬದ ಸಂದರ್ಭದಲ್ಲಿ ಹೊಸ ಉಡುಗೆ, ತೊಡುಗೆ ತೊಟ್ಟ ಮಹಿಳೆಯರು, ಮಕ್ಕಳು ಒಟ್ಟಿಗೆ ಸೇರಿ ತಮ್ಮ ಮನೆಯಂಗಳದಲ್ಲಿ `ಓಣಂ~ನ ವೈಶಿಷ್ಟ್ಯವೆನಿಸಿದ `ಪುಷ್ಪ ರಂಗವಲ್ಲಿ~ (ಪೊಳಕಂ) ಬಿಡಿಸಿದ್ದು ಗಮನ ಸೆಳೆಯಿತು. ಮನೆಯಂಗಳವನ್ನು ಸಿಂಗರಿಸಿದ ಮಹಿಳೆಯರು ಕೇರಳ ನಾಡಿನ ಸಂಸ್ಕೃತಿ ಪ್ರತಿಬಿಂಬಿಸುವ ಸಾಂಪ್ರದಾಯಿಕ ಸೀರೆ ಧರಿಸಿ ಪುಷ್ಪ ರಂಗವಲ್ಲಿ ಮಧ್ಯೆ ದೀಪವನ್ನಿಟ್ಟು ಬೆಳಗಿಸಿದರು. ರಂಗವಲ್ಲಿ ಸುತ್ತ ಮನೆ ಮಂದಿ, ನೆರೆ ಹೊರೆಯವರು, ನೆಂಟರಿಷ್ಟರ್ಲ್ಲೆಲ ಸೇರಿ ಹಬ್ಬವನ್ನು ಆಚರಿಸಿದರು.<br /> <br /> ಹಬ್ಬದ ಅಂಗವಾಗಿ ವಿಶೇಷವಾಗಿ ತಯಾರಿಸಿದ್ದ `ಓಣಂ ಸದ್ಯ~ ಎಂಬ ವಿಶೇಷ ಭೋಜನವನ್ನು ಎಲ್ಲರೂ ಒಟ್ಟಿಗೆ ಸೇರಿ ಸವಿದರು. ಕುಶಾಲನಗರದಲ್ಲಿ ಕೇರಳ ಶೈಲಿಯ ಅತಿಥಿ ಹೋಟೆಲ್ನಲ್ಲಿ ಓಣಂ ಅಂಗವಾಗಿ ಬಿಡಿಸಿದ್ದ ಪುಷ್ಪ ರಂಗವಲ್ಲಿ ಮತ್ತು ಓಣಂನ ವಿಶೇಷ ಖಾದ್ಯ `ಓಣಂ ಸದ್ಯ~ ಪ್ರವಾಸಿಗರನ್ನು ಆಕರ್ಷಿಸಿತು. <br /> <br /> ಮಲೆಯಾಳಿ ಭಾಷಿಕರು ಜಾತಿ-ಮತ, ಭೇದ-ಭಾವವಿಲ್ಲದೆ `ಓಣಂ~ ಹಬ್ಬವನ್ನು ಕೂಡಿಗೆ, ಏಳನೇ ಹೊಸಕೋಟೆ, ಸುಂಟಿಕೊಪ್ಪ, ಮಾದಾಪುರ, ಗುಡ್ಡೆಹೊಸೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಂಭ್ರಮದಿಂದ ಆಚರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>