<p>ಭಾರತ ಸಂವಿಧಾನದ ಕರಡು ರೂಪಿಸಿದ ಡಾ. ಅಂಬೇಡ್ಕರ್ ಅವರ ಪರಿಶ್ರಮವನ್ನು ಅಲ್ಲಗಳೆಯುವ ಹುನ್ನಾರ ನಡೆಯುತ್ತಿರುವ ಬಗ್ಗೆ ಡಾ. ಸಿ.ಎಸ್. ದ್ವಾರಕಾನಾಥ್ (ಸಂಗತ -ಪ್ರ ವಾ ಮಾರ್ಚ್ 1) ಅವರು ಎಚ್ಚರಿಸಿದ್ದಾರೆ.<br /> <br /> `ಸಂವಿಧಾನದ ಕರಡು ಪ್ರತಿಯನ್ನು ಬಿ.ಎನ್. ರಾವ್ ಅವರು ರಚಿಸಿದರು. ಅಂಬೇಡ್ಕರ್ ಅವರು ಓದಿದರು~ ಎಂಬ ವಾಕ್ಯಗಳು ಸಂವಿಧಾನ ಕರ್ತೃವಿನ ಪರಿಶ್ರಮವನ್ನು ಅಣಕಿಸುವ ಪ್ರಯತ್ನ. ಅವರ ಪರಿಶ್ರಮವನ್ನು ಹೀಗೆ ಲೇವಡಿ ಮಾಡುವವರದು ನೀಚ ಮನಸ್ಸು. <br /> <br /> ನಮ್ಮ ದೇಶದ ಒಂದು ವರ್ಗ ಇಂತಹ ಕುತಂತ್ರವನ್ನು ಬಹಳ ಹಿಂದಿನಿಂದ ಮಾಡುತ್ತ ಬಂದಿದೆ. ಸಂವಿಧಾನದ ಇತಿಹಾಸವನ್ನೇ ತಿರುಚುವ ಈ ಕೃತ್ಯವನ್ನು ಎಲ್ಲರೂ ಖಂಡಿಸಬೇಕು.<br /> <br /> ಸಂವಿಧಾನದಿಂದ ಅಂಬೇಡ್ಕರ್ ಅವರನ್ನು ಪ್ರತ್ಯೇಕಿಸುವ ಹುನ್ನಾರದ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು.ತರಬೇತಿಗಾಗಿ ಸಿದ್ಧಪಡಿಸಿದ ಕೈಪಿಡಿಯನ್ನು ಸರ್ಕಾರ ತಕ್ಷಣವೇ ಹಿಂದಕ್ಕೆ ಪಡೆಯಬೇಕು. ಅಂಬೇಡ್ಕರ್ ಅವರ ಪರಿಶ್ರಮವನ್ನು ಮರೆಮಾಚುವುದರ ಹಿಂದೆ ಒಳ್ಳೆಯ ಉದ್ದೇಶ ಇರಲಾರದು.<br /> <br /> ಕೈಪಿಡಿ ಸಿದ್ಧಪಡಿಸಿದ ವ್ಯಕ್ತಿಗಳನ್ನು ಗುರುತಿಸಿ ಅವರ ವಿರುದ್ಧ ಸುಳ್ಳು ಮಾಹಿತಿ ನೀಡಿದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಬೇಕು. ಇಂತಹ ಅಹಿತಕರ ಪ್ರಸಂಗಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾರತ ಸಂವಿಧಾನದ ಕರಡು ರೂಪಿಸಿದ ಡಾ. ಅಂಬೇಡ್ಕರ್ ಅವರ ಪರಿಶ್ರಮವನ್ನು ಅಲ್ಲಗಳೆಯುವ ಹುನ್ನಾರ ನಡೆಯುತ್ತಿರುವ ಬಗ್ಗೆ ಡಾ. ಸಿ.ಎಸ್. ದ್ವಾರಕಾನಾಥ್ (ಸಂಗತ -ಪ್ರ ವಾ ಮಾರ್ಚ್ 1) ಅವರು ಎಚ್ಚರಿಸಿದ್ದಾರೆ.<br /> <br /> `ಸಂವಿಧಾನದ ಕರಡು ಪ್ರತಿಯನ್ನು ಬಿ.ಎನ್. ರಾವ್ ಅವರು ರಚಿಸಿದರು. ಅಂಬೇಡ್ಕರ್ ಅವರು ಓದಿದರು~ ಎಂಬ ವಾಕ್ಯಗಳು ಸಂವಿಧಾನ ಕರ್ತೃವಿನ ಪರಿಶ್ರಮವನ್ನು ಅಣಕಿಸುವ ಪ್ರಯತ್ನ. ಅವರ ಪರಿಶ್ರಮವನ್ನು ಹೀಗೆ ಲೇವಡಿ ಮಾಡುವವರದು ನೀಚ ಮನಸ್ಸು. <br /> <br /> ನಮ್ಮ ದೇಶದ ಒಂದು ವರ್ಗ ಇಂತಹ ಕುತಂತ್ರವನ್ನು ಬಹಳ ಹಿಂದಿನಿಂದ ಮಾಡುತ್ತ ಬಂದಿದೆ. ಸಂವಿಧಾನದ ಇತಿಹಾಸವನ್ನೇ ತಿರುಚುವ ಈ ಕೃತ್ಯವನ್ನು ಎಲ್ಲರೂ ಖಂಡಿಸಬೇಕು.<br /> <br /> ಸಂವಿಧಾನದಿಂದ ಅಂಬೇಡ್ಕರ್ ಅವರನ್ನು ಪ್ರತ್ಯೇಕಿಸುವ ಹುನ್ನಾರದ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು.ತರಬೇತಿಗಾಗಿ ಸಿದ್ಧಪಡಿಸಿದ ಕೈಪಿಡಿಯನ್ನು ಸರ್ಕಾರ ತಕ್ಷಣವೇ ಹಿಂದಕ್ಕೆ ಪಡೆಯಬೇಕು. ಅಂಬೇಡ್ಕರ್ ಅವರ ಪರಿಶ್ರಮವನ್ನು ಮರೆಮಾಚುವುದರ ಹಿಂದೆ ಒಳ್ಳೆಯ ಉದ್ದೇಶ ಇರಲಾರದು.<br /> <br /> ಕೈಪಿಡಿ ಸಿದ್ಧಪಡಿಸಿದ ವ್ಯಕ್ತಿಗಳನ್ನು ಗುರುತಿಸಿ ಅವರ ವಿರುದ್ಧ ಸುಳ್ಳು ಮಾಹಿತಿ ನೀಡಿದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಬೇಕು. ಇಂತಹ ಅಹಿತಕರ ಪ್ರಸಂಗಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>