<p>ಬೀದರ್: `ಪ್ರಕೃತಿಯನ್ನು ಸಂಸ್ಕೃತಿಯಾಗಿ ಪರಿವರ್ತಿಸಿಕೊಂಡು ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ~ ಎಂದು ಬಿ.ವಿ.ಬಿ. ಕಾಲೇಜಿನ ಪ್ರಾಚಾರ್ಯ ಡಾ. ಸಿ.ಎಸ್. ಪಾಟೀಲ್ ಅಭಿಪ್ರಾಯಪಟ್ಟರು.<br /> ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯು ನಗರದ ಬಿ.ವಿ.ಬಿ. ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಪ್ರಕೃತಿಯನ್ನು ಯಾವುದೇ ಕಾರಣಕ್ಕೂ ವಿಕೃತಿಗೊಳಿಸದೆ, ಅದನ್ನು ಸಂಸ್ಕೃತಿಯಾಗಿ ಬದಲಾಯಿಸಿಕೊಂಡ ರಕ್ಷಣೆ ಮಾಡಲು ಯುವಕರು ಶ್ರಮಿಸಬೇಕು ಎಂದು ತಿಳಿಸಿದರು.<br /> <br /> ವಿಶ್ವ ಪರಂಪರೆ ಕಾಪಾಡಲು ಇತಿಹಾಸ ತಾಯಿಬೇರು. ನಾಡಿನ ಕಲೆ, ಸಾಹಿತ್ಯ ಸಂಸ್ಕೃತಿಯೊಂದಿಗೆ ವಿಶ್ವ ಪರಂಪರೆ ರಕ್ಷಣೆ ಮಾಡಲು ಇತಿಹಾಸ ಸಹಕಾರಿಯಾಗಿದೆ ಎಂದು ಹೇಳಿದರು.<br /> <br /> ವಿಶ್ವ ಪರಂಪರೆಗೆ ಭಾರತದ ಇತಿಹಾಸ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಕರ್ನಾಟಕ ಸಂಸ್ಕೃತಿಗೆ ಕಲ್ಯಾಣಿ ಚಾಲುಕ್ಯರ ಕೊಡುಗೆ ವಿಷಯ ಕುರಿತು ಉಪನ್ಯಾಸ ನೀಡಿದ ಜಗನ್ನಾಥ ಮೂಲಗೆ ನುಡಿದರು.<br /> <br /> ವಿಶ್ವದ ಐತಿಹಾಸಿಕ ಹಾಗೂ ಸಾಹಿತ್ಯ ಪಂಡಿತರ ಅಧ್ಯಯನಕ್ಕಿಂತ ಮೊದಲು ಭಾರತೀಯ ಐತಿಹಾಸಿಕ ಪುಟಗಳಲ್ಲಿ ಖ್ಯಾತಿ ಪಡೆದ ಸಾಹಿತಿಗಳ ಬಗ್ಗೆ ಅರಿತುಕೊಳ್ಳಬೇಕು ಎಂದು ಹೇಳಿದರು.<br /> <br /> ಕಲ್ಯಾಣಿ ನಾಡಿನಲ್ಲಿ ಆಳ್ವಿಕೆ ನಡೆಸಿದ ಕಲ್ಯಾಣಿ ಚಾಲುಕ್ಯರ ಕಾಲ ಸುವರ್ಣ ಕಾಲವಾಗಿತ್ತು. 6ನೇ ವಿಕ್ರಮಾಧಿತ್ಯನ ಕುರಿತು ಬಿಲ್ಲಣ ಕವಿ ಬರೆದ `ವಿಕ್ರಮಾಂಕ ಚರಿತ್ರೆ~ ಕೃತಿಯು ವ್ಯಕ್ತಿಗಿಂತ ಸಾಹಿತ್ಯದ ಬಗ್ಗೆ ಹೆಚ್ಚು ವಿವರ ನೀಡುತ್ತದೆ ಎಂದು ತಿಳಿಸಿದರು.<br /> <br /> ಪ್ರಾಚಾರ್ಯ ಪ್ರೊ. ಬಿ.ಎಸ್. ಸಜ್ಜನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಂಪರೆ ಕೂಟದ ಸಂಚಾಲಕಿ ಪ್ರೊ. ಎನ್.ಟಿ. ಗಂಗಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಬಸವರಾಜ ಬಿರಾದಾರ ಸ್ವಾಗತಿಸಿದರು. ಪ್ರೊ. ಅನೀಲಕುಮಾರ ಆಣದೂರೆ ನಿರೂಪಿಸಿದರು. ಪ್ರೊ. ವಿಜಯಕುಮಾರ ಪಾಂಚಾಳ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀದರ್: `ಪ್ರಕೃತಿಯನ್ನು ಸಂಸ್ಕೃತಿಯಾಗಿ ಪರಿವರ್ತಿಸಿಕೊಂಡು ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ~ ಎಂದು ಬಿ.ವಿ.ಬಿ. ಕಾಲೇಜಿನ ಪ್ರಾಚಾರ್ಯ ಡಾ. ಸಿ.ಎಸ್. ಪಾಟೀಲ್ ಅಭಿಪ್ರಾಯಪಟ್ಟರು.<br /> ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯು ನಗರದ ಬಿ.ವಿ.ಬಿ. ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಪ್ರಕೃತಿಯನ್ನು ಯಾವುದೇ ಕಾರಣಕ್ಕೂ ವಿಕೃತಿಗೊಳಿಸದೆ, ಅದನ್ನು ಸಂಸ್ಕೃತಿಯಾಗಿ ಬದಲಾಯಿಸಿಕೊಂಡ ರಕ್ಷಣೆ ಮಾಡಲು ಯುವಕರು ಶ್ರಮಿಸಬೇಕು ಎಂದು ತಿಳಿಸಿದರು.<br /> <br /> ವಿಶ್ವ ಪರಂಪರೆ ಕಾಪಾಡಲು ಇತಿಹಾಸ ತಾಯಿಬೇರು. ನಾಡಿನ ಕಲೆ, ಸಾಹಿತ್ಯ ಸಂಸ್ಕೃತಿಯೊಂದಿಗೆ ವಿಶ್ವ ಪರಂಪರೆ ರಕ್ಷಣೆ ಮಾಡಲು ಇತಿಹಾಸ ಸಹಕಾರಿಯಾಗಿದೆ ಎಂದು ಹೇಳಿದರು.<br /> <br /> ವಿಶ್ವ ಪರಂಪರೆಗೆ ಭಾರತದ ಇತಿಹಾಸ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಕರ್ನಾಟಕ ಸಂಸ್ಕೃತಿಗೆ ಕಲ್ಯಾಣಿ ಚಾಲುಕ್ಯರ ಕೊಡುಗೆ ವಿಷಯ ಕುರಿತು ಉಪನ್ಯಾಸ ನೀಡಿದ ಜಗನ್ನಾಥ ಮೂಲಗೆ ನುಡಿದರು.<br /> <br /> ವಿಶ್ವದ ಐತಿಹಾಸಿಕ ಹಾಗೂ ಸಾಹಿತ್ಯ ಪಂಡಿತರ ಅಧ್ಯಯನಕ್ಕಿಂತ ಮೊದಲು ಭಾರತೀಯ ಐತಿಹಾಸಿಕ ಪುಟಗಳಲ್ಲಿ ಖ್ಯಾತಿ ಪಡೆದ ಸಾಹಿತಿಗಳ ಬಗ್ಗೆ ಅರಿತುಕೊಳ್ಳಬೇಕು ಎಂದು ಹೇಳಿದರು.<br /> <br /> ಕಲ್ಯಾಣಿ ನಾಡಿನಲ್ಲಿ ಆಳ್ವಿಕೆ ನಡೆಸಿದ ಕಲ್ಯಾಣಿ ಚಾಲುಕ್ಯರ ಕಾಲ ಸುವರ್ಣ ಕಾಲವಾಗಿತ್ತು. 6ನೇ ವಿಕ್ರಮಾಧಿತ್ಯನ ಕುರಿತು ಬಿಲ್ಲಣ ಕವಿ ಬರೆದ `ವಿಕ್ರಮಾಂಕ ಚರಿತ್ರೆ~ ಕೃತಿಯು ವ್ಯಕ್ತಿಗಿಂತ ಸಾಹಿತ್ಯದ ಬಗ್ಗೆ ಹೆಚ್ಚು ವಿವರ ನೀಡುತ್ತದೆ ಎಂದು ತಿಳಿಸಿದರು.<br /> <br /> ಪ್ರಾಚಾರ್ಯ ಪ್ರೊ. ಬಿ.ಎಸ್. ಸಜ್ಜನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಂಪರೆ ಕೂಟದ ಸಂಚಾಲಕಿ ಪ್ರೊ. ಎನ್.ಟಿ. ಗಂಗಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಬಸವರಾಜ ಬಿರಾದಾರ ಸ್ವಾಗತಿಸಿದರು. ಪ್ರೊ. ಅನೀಲಕುಮಾರ ಆಣದೂರೆ ನಿರೂಪಿಸಿದರು. ಪ್ರೊ. ವಿಜಯಕುಮಾರ ಪಾಂಚಾಳ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>