<p>ಯಳಂದೂರು: `ರಾಷ್ಟ್ರೀಯ ಸ್ವಯಂ ಸೇವಾ ಸಂಘವು ಸದೃಢ ಭಾರತ ನಿರ್ಮಾಣದ ಗುರಿ ಹೊಂದಿದೆ. ಇದರಲ್ಲಿ ಇರುವರೆಲ್ಲರೂ ರಾಷ್ಟ್ರಪ್ರೇಮಿಗಳೇ ಆಗಿರುವುದರಿಂದ ಇದಕ್ಕೆ ಯಾವುದೇ ರಾಜಕೀಯ ಬೇಕಿಲ್ಲ~ ಎಂದು ಸ್ವಯಂ ಸೇವಕ ಸುಬ್ರಹ್ಮಣ್ಯಭಟ್ ತಿಳಿಸಿದರು.<br /> <br /> ಪಟ್ಟಣದ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಘದ ಪರಿಚಯದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. <br /> <br /> ಕೆಲವರು ಸಂಘ ಪರಿವಾರದ ಮೇಲೆ ಇಲ್ಲಸಲ್ಲದ ಗೂಬೆ ಕೂರಿಸುತ್ತಿದ್ದಾರೆ. ಇದು ಸಜ್ಜನಿಕೆಯಲ್ಲ. ಈ ಸೇವಾ ಸಂಸ್ಥೆಯು ಬಲಿಷ್ಠ ಭಾರತ ನಿರ್ಮಾಣಕ್ಕೆ ಟೊಂಕ ಕಟ್ಟಿದೆಯೇ ವಿನಾ ಯಾರೊಬ್ಬರನ್ನೂ ವಿರೋಧಿಸುವುದಿಲ್ಲ. ಹಿಂದೂಸ್ಥಾನದಲ್ಲಿ ವಾಸಿಸುವ ಯಾವ ಧರ್ಮದವರಾಗಲೀ ಇದರ ಸೇವಕರಾಗಬಹುದು ಎಂದರು. <br /> <br /> ಭಾರತದಲ್ಲಿ ಪ್ರಾಕೃತಿಕವಾಗಿಯೇ ರಕ್ಷಣೆ ನೀಡುವ ಸರಹದ್ದುಗಳಿವೆ. ಇದರ ಜೊತೆಗೆ ಆಂತರಿಕವಾಗಿ ಇರುವ ದುಷ್ಟ ಶಕ್ತಿಗಳನ್ನು ನಿಗ್ರಹಿಸುವ ಕೆಲಸಕ್ಕೆ, ರಾಷ್ಟ್ರರಕ್ಷಣೆಗೆ ಸಂಸ್ಥೆಯ ಸೇವಕರು ಕಂಕಣಬದ್ಧರಾಗಿ ನಿಲ್ಲಬೇಕು. ಇದಕ್ಕಾಗಿ ಸಂಸ್ಥೆಗೆ ಶಾಖೆಗಳನ್ನು ಹೋಬಳಿ ಹಾಗೂ ಗ್ರಾಮೀಣ ಮಟ್ಟದಲ್ಲಿ ಹೆಚ್ಚಿಸುವ ಜವಾಬ್ಧಾರಿ ಇದೆ. ಈ ಮೂಲಕ ಪರಿವಾರಕ್ಕೆ ಶಕ್ತಿ ತುಂಬುವ ಕೆಲಸವಾಗಬೇಕಿದೆ ಎಂದರು.<br /> <br /> ಸಚ್ಚಾರಿತ್ರ್ಯವುಳ್ಳ ಸಂಘಟನೆಗಳಿಗೆ ಸುಸಂಸ್ಕ್ರತ, ಸುಶೀಲ, ಸುಸಂಘಟಿತ, ಸಕ್ರೀಯ ಕಾರ್ಯಕರ್ತರ ಅವಶ್ಯಕತೆ ಹೆಚ್ಚಾಗಿದೆ. ಹಾಗಾಗಿ ಇಲ್ಲಿಗೆ ಸೇವಕ ರಾಗಲು ಬರುವವರಿಗೆ ಯಾವುದೇ ಜಾತಿ, ವೃತ್ತಿ, ವಯಸ್ಸು, ಹಣದ ಅವಶ್ಯಕತೆ ಇಲ್ಲ. ತಾನು ಒಬ್ಬ ಹಿಂದೂ ಎಂಬ ವಿಶಾಲ ಮನೋಭಾವದವರು ಸೇರಿಕೊಳ್ಳಬಹುದು ಎಂದು ತಿಳಿಸಿದರು.<br /> <br /> ಸಂಘದ ಮತ್ತೊಬ್ಬ ಸ್ವಯಂ ಸೇವಕ ಮಾದಪ್ಪ ಮಾತನಾಡಿದರು. ಇದೇ ವೇಳೆ ಪಟ್ಟಣದ ಪ್ರಮುಖ ಬೀದಿಗಳನ್ನು ಸ್ವಯಂಸೇವಕರು ಪಥ ಸಂಚಲನ ನಡೆಸಿದರು. ನಂತರ ಕಾಲೇಜಿನ ಆವರಣದಲ್ಲಿ ಸೂರ್ಯ ನಮಸ್ಕಾರ ಹಾಗೂ ಇತರೆ ಚಟುವಟಿಕೆ ನಡೆದವು. <br /> <br /> ಶಾಸಕ ಜಿ.ಎನ್. ನಂಜುಂಡಸ್ವಾಮಿ, ವಿಧಾನಪರಿಷತ್ ಸದಸ್ಯ ಪ್ರೊ. ಮಲ್ಲಿಕಾರ್ಜುನಪ್ಪ, ಪರಿವಾರದ ವಾಮನ್ರಾವ್ಬಾಪಟ್, ಬಸವ ರಾಜಪ್ಪ, ವೆಂಕಟರಾಮು, ಡಿ.ಪಿ. ಶಿವಕುಮಾರ್, ತಾ.ಪಂ. ಸದಸ್ಯ ಕೆ.ಪಿ. ಶಿವಣ್ಣ, ಕೆ.ಪಿ. ಮಹಾದೇವಸ್ವಾಮಿ, ಸರ್ವೇಶ್, ಆರ್.ಗೋಪಾಲ್, ನಾಗರಾಜು, ಗೋವಿಂದರಾಜು, ಚೈತ್ರಮಣಿ ಇತರರು ಇದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಳಂದೂರು: `ರಾಷ್ಟ್ರೀಯ ಸ್ವಯಂ ಸೇವಾ ಸಂಘವು ಸದೃಢ ಭಾರತ ನಿರ್ಮಾಣದ ಗುರಿ ಹೊಂದಿದೆ. ಇದರಲ್ಲಿ ಇರುವರೆಲ್ಲರೂ ರಾಷ್ಟ್ರಪ್ರೇಮಿಗಳೇ ಆಗಿರುವುದರಿಂದ ಇದಕ್ಕೆ ಯಾವುದೇ ರಾಜಕೀಯ ಬೇಕಿಲ್ಲ~ ಎಂದು ಸ್ವಯಂ ಸೇವಕ ಸುಬ್ರಹ್ಮಣ್ಯಭಟ್ ತಿಳಿಸಿದರು.<br /> <br /> ಪಟ್ಟಣದ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಘದ ಪರಿಚಯದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. <br /> <br /> ಕೆಲವರು ಸಂಘ ಪರಿವಾರದ ಮೇಲೆ ಇಲ್ಲಸಲ್ಲದ ಗೂಬೆ ಕೂರಿಸುತ್ತಿದ್ದಾರೆ. ಇದು ಸಜ್ಜನಿಕೆಯಲ್ಲ. ಈ ಸೇವಾ ಸಂಸ್ಥೆಯು ಬಲಿಷ್ಠ ಭಾರತ ನಿರ್ಮಾಣಕ್ಕೆ ಟೊಂಕ ಕಟ್ಟಿದೆಯೇ ವಿನಾ ಯಾರೊಬ್ಬರನ್ನೂ ವಿರೋಧಿಸುವುದಿಲ್ಲ. ಹಿಂದೂಸ್ಥಾನದಲ್ಲಿ ವಾಸಿಸುವ ಯಾವ ಧರ್ಮದವರಾಗಲೀ ಇದರ ಸೇವಕರಾಗಬಹುದು ಎಂದರು. <br /> <br /> ಭಾರತದಲ್ಲಿ ಪ್ರಾಕೃತಿಕವಾಗಿಯೇ ರಕ್ಷಣೆ ನೀಡುವ ಸರಹದ್ದುಗಳಿವೆ. ಇದರ ಜೊತೆಗೆ ಆಂತರಿಕವಾಗಿ ಇರುವ ದುಷ್ಟ ಶಕ್ತಿಗಳನ್ನು ನಿಗ್ರಹಿಸುವ ಕೆಲಸಕ್ಕೆ, ರಾಷ್ಟ್ರರಕ್ಷಣೆಗೆ ಸಂಸ್ಥೆಯ ಸೇವಕರು ಕಂಕಣಬದ್ಧರಾಗಿ ನಿಲ್ಲಬೇಕು. ಇದಕ್ಕಾಗಿ ಸಂಸ್ಥೆಗೆ ಶಾಖೆಗಳನ್ನು ಹೋಬಳಿ ಹಾಗೂ ಗ್ರಾಮೀಣ ಮಟ್ಟದಲ್ಲಿ ಹೆಚ್ಚಿಸುವ ಜವಾಬ್ಧಾರಿ ಇದೆ. ಈ ಮೂಲಕ ಪರಿವಾರಕ್ಕೆ ಶಕ್ತಿ ತುಂಬುವ ಕೆಲಸವಾಗಬೇಕಿದೆ ಎಂದರು.<br /> <br /> ಸಚ್ಚಾರಿತ್ರ್ಯವುಳ್ಳ ಸಂಘಟನೆಗಳಿಗೆ ಸುಸಂಸ್ಕ್ರತ, ಸುಶೀಲ, ಸುಸಂಘಟಿತ, ಸಕ್ರೀಯ ಕಾರ್ಯಕರ್ತರ ಅವಶ್ಯಕತೆ ಹೆಚ್ಚಾಗಿದೆ. ಹಾಗಾಗಿ ಇಲ್ಲಿಗೆ ಸೇವಕ ರಾಗಲು ಬರುವವರಿಗೆ ಯಾವುದೇ ಜಾತಿ, ವೃತ್ತಿ, ವಯಸ್ಸು, ಹಣದ ಅವಶ್ಯಕತೆ ಇಲ್ಲ. ತಾನು ಒಬ್ಬ ಹಿಂದೂ ಎಂಬ ವಿಶಾಲ ಮನೋಭಾವದವರು ಸೇರಿಕೊಳ್ಳಬಹುದು ಎಂದು ತಿಳಿಸಿದರು.<br /> <br /> ಸಂಘದ ಮತ್ತೊಬ್ಬ ಸ್ವಯಂ ಸೇವಕ ಮಾದಪ್ಪ ಮಾತನಾಡಿದರು. ಇದೇ ವೇಳೆ ಪಟ್ಟಣದ ಪ್ರಮುಖ ಬೀದಿಗಳನ್ನು ಸ್ವಯಂಸೇವಕರು ಪಥ ಸಂಚಲನ ನಡೆಸಿದರು. ನಂತರ ಕಾಲೇಜಿನ ಆವರಣದಲ್ಲಿ ಸೂರ್ಯ ನಮಸ್ಕಾರ ಹಾಗೂ ಇತರೆ ಚಟುವಟಿಕೆ ನಡೆದವು. <br /> <br /> ಶಾಸಕ ಜಿ.ಎನ್. ನಂಜುಂಡಸ್ವಾಮಿ, ವಿಧಾನಪರಿಷತ್ ಸದಸ್ಯ ಪ್ರೊ. ಮಲ್ಲಿಕಾರ್ಜುನಪ್ಪ, ಪರಿವಾರದ ವಾಮನ್ರಾವ್ಬಾಪಟ್, ಬಸವ ರಾಜಪ್ಪ, ವೆಂಕಟರಾಮು, ಡಿ.ಪಿ. ಶಿವಕುಮಾರ್, ತಾ.ಪಂ. ಸದಸ್ಯ ಕೆ.ಪಿ. ಶಿವಣ್ಣ, ಕೆ.ಪಿ. ಮಹಾದೇವಸ್ವಾಮಿ, ಸರ್ವೇಶ್, ಆರ್.ಗೋಪಾಲ್, ನಾಗರಾಜು, ಗೋವಿಂದರಾಜು, ಚೈತ್ರಮಣಿ ಇತರರು ಇದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>