<p><strong>ಕಂಪ್ಲಿ: </strong>ಜಾತಿ ವ್ಯವಸ್ಥೆಯನ್ನು ವಚನಗಳ ಮೂಲಕ ಕಟುವಾಗಿ ಖಂಡಿಸಿ ಸಮಾನತೆ ಗಾಗಿ ಬಂಡಾಯ ತೋರಿದ ಶರಣರಲ್ಲಿ ಮಾದಾರ ಚನ್ನಯ್ಯ ಮೊಟ್ಟ ಮೊದಲಿಗರು ಎಂದು ಲೇಖಕ ಪರಮೇಶ್ವರಯ್ಯ ಸೊಪ್ಪಿನಮಠ ಅಭಿಪ್ರಾಯಪಟ್ಟರು.<br /> <br /> ಪಟ್ಟಣದ 4ನೇ ವಾರ್ಡ್ ಹರಿಜಕೇರಿ ಕೆಂಚಮ್ಮನಗುಡಿಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಜಿ. ಗಂಗಪ್ಪ ಮತ್ತು ಜಿ. ಗಾಳೆಮ್ಮ ಜ್ಞಾನ ದಾಸೋಹದಡಿ ಬುಧವಾರ ಹಮ್ಮಿಕೊಂಡಿದ್ದ 19 ನೇ ಮಹಾಮನೆ ಕಾರ್ಯಕ್ರಮದಲ್ಲಿ ಮಾತನಾಡಿದರು.<br /> <br /> ಮಾದಾರ ಚೆನ್ನಯ್ಯ ಸಮಾಜದಲ್ಲಿ ಅಖಂಡತೆ, ಲಿಂಗ, ಆರ್ಥಿಕ ಸಮಾನತೆ ಗಾಗಿ ಹೋರಾಡಿದವರು. ತಮಿಳು ನಾಡಿನ ಮಾದಾರ ಚನ್ನಯ್ಯ ಕನ್ನಡದಲ್ಲಿ ವಚನ ರಚಿಸಿ ಗಮನ ಸೆಳೆದಿದ್ದಾರೆ ಎಂದು ವಿವರಿಸಿದರು.<br /> <br /> ಅಖಿಲ ಕರ್ನಾಟಕ ಬಸವ ಮಾದಾರ ಚನ್ನಯ್ಯ ಸಂಘದ ಅಧ್ಯಕ್ಷ ಜಿ. ರಾಮಣ್ಣ ಮಾತನಾಡಿ, ಮಾದಾರ ಚನ್ನಯ್ಯ ಅವರ ವಚನ ಸಂಗ್ರಹ, ಸಂಶೋಧನೆ ಅಗತ್ಯ ವಿದೆ. ಈ ನಿಟ್ಟಿನಲ್ಲಿ ಕನ್ನಡ ವಿಶ್ವ ವಿದ್ಯಾಲಯ ಸೇರಿದಂತೆ ಸರ್ಕಾರ ಸಮಗ್ರ ಮಾಹಿತಿಗೆ ಚಿಂತನೆ ನಡೆಸುವಂತೆ ಮನವಿ ಮಾಡಿದರು.<br /> <br /> ಪುರಸಭೆ ಮಾಜಿ ಅಧ್ಯಕ್ಷ ಟಿ. ಲಿಂಗಾರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.<br /> ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಿ. ಸಿದ್ದಪ್ಪ, ವಿ. ವೆಂಕಟರಮಣ, ಸಿ. ವೆಂಕಟೇಶ್, ವಕೀಲ ಎಚ್. ಹುಲುಗಪ್ಪ, ಸಣ್ಣ ಮಾರೆಪ್ಪ, ಎಚ್. ಕೊರಪ್ಪ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಿ. ಪ್ರಕಾಶ್, ಪದಾಧಿಕಾರಿಗಳು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಪ್ಲಿ: </strong>ಜಾತಿ ವ್ಯವಸ್ಥೆಯನ್ನು ವಚನಗಳ ಮೂಲಕ ಕಟುವಾಗಿ ಖಂಡಿಸಿ ಸಮಾನತೆ ಗಾಗಿ ಬಂಡಾಯ ತೋರಿದ ಶರಣರಲ್ಲಿ ಮಾದಾರ ಚನ್ನಯ್ಯ ಮೊಟ್ಟ ಮೊದಲಿಗರು ಎಂದು ಲೇಖಕ ಪರಮೇಶ್ವರಯ್ಯ ಸೊಪ್ಪಿನಮಠ ಅಭಿಪ್ರಾಯಪಟ್ಟರು.<br /> <br /> ಪಟ್ಟಣದ 4ನೇ ವಾರ್ಡ್ ಹರಿಜಕೇರಿ ಕೆಂಚಮ್ಮನಗುಡಿಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಜಿ. ಗಂಗಪ್ಪ ಮತ್ತು ಜಿ. ಗಾಳೆಮ್ಮ ಜ್ಞಾನ ದಾಸೋಹದಡಿ ಬುಧವಾರ ಹಮ್ಮಿಕೊಂಡಿದ್ದ 19 ನೇ ಮಹಾಮನೆ ಕಾರ್ಯಕ್ರಮದಲ್ಲಿ ಮಾತನಾಡಿದರು.<br /> <br /> ಮಾದಾರ ಚೆನ್ನಯ್ಯ ಸಮಾಜದಲ್ಲಿ ಅಖಂಡತೆ, ಲಿಂಗ, ಆರ್ಥಿಕ ಸಮಾನತೆ ಗಾಗಿ ಹೋರಾಡಿದವರು. ತಮಿಳು ನಾಡಿನ ಮಾದಾರ ಚನ್ನಯ್ಯ ಕನ್ನಡದಲ್ಲಿ ವಚನ ರಚಿಸಿ ಗಮನ ಸೆಳೆದಿದ್ದಾರೆ ಎಂದು ವಿವರಿಸಿದರು.<br /> <br /> ಅಖಿಲ ಕರ್ನಾಟಕ ಬಸವ ಮಾದಾರ ಚನ್ನಯ್ಯ ಸಂಘದ ಅಧ್ಯಕ್ಷ ಜಿ. ರಾಮಣ್ಣ ಮಾತನಾಡಿ, ಮಾದಾರ ಚನ್ನಯ್ಯ ಅವರ ವಚನ ಸಂಗ್ರಹ, ಸಂಶೋಧನೆ ಅಗತ್ಯ ವಿದೆ. ಈ ನಿಟ್ಟಿನಲ್ಲಿ ಕನ್ನಡ ವಿಶ್ವ ವಿದ್ಯಾಲಯ ಸೇರಿದಂತೆ ಸರ್ಕಾರ ಸಮಗ್ರ ಮಾಹಿತಿಗೆ ಚಿಂತನೆ ನಡೆಸುವಂತೆ ಮನವಿ ಮಾಡಿದರು.<br /> <br /> ಪುರಸಭೆ ಮಾಜಿ ಅಧ್ಯಕ್ಷ ಟಿ. ಲಿಂಗಾರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.<br /> ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಿ. ಸಿದ್ದಪ್ಪ, ವಿ. ವೆಂಕಟರಮಣ, ಸಿ. ವೆಂಕಟೇಶ್, ವಕೀಲ ಎಚ್. ಹುಲುಗಪ್ಪ, ಸಣ್ಣ ಮಾರೆಪ್ಪ, ಎಚ್. ಕೊರಪ್ಪ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಿ. ಪ್ರಕಾಶ್, ಪದಾಧಿಕಾರಿಗಳು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>