<p>ಬೈಲಹೊಂಗಲ: ಆಂಗ್ಲರ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕೆ ಕರೆ ನೀಡಿದ, ಪ್ರಪ್ರಥಮ ವೀರರಾಣಿ ಕಿತ್ತೂರ ಚೆನ್ನಮ್ಮಾಜಿಯ `ಕಿತ್ತೂರ ಸಂಸ್ಥಾನ'ದ ಐತಿಹಾಸಿಕ ಹಿನ್ನೆಲೆಯ ದೇಶನೂರು ಗ್ರಾಮ ತಾಲ್ಲೂಕಿನ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿದೆ.<br /> <br /> ಪ್ರೊ.ಸಿ.ವಿ.ಜ್ಯೋತಿ, ಜಾನಪದ ಹಾಗೂ ದೂರದರ್ಶನ ಕಲಾವಿದ ಸಿ.ಕೆ. ಮೆಕ್ಕೇದ ನೇತೃತ್ವದಲ್ಲಿ 1999ರಲ್ಲಿ ತಿರುಳ್ಗನ್ನಡ ನಾಡು ಒಕ್ಕುಂದದಲ್ಲಿ ನಾಲ್ಕನೇ ಜಿಲ್ಲಾ ಸಾಹಿತ್ಯ ಸಮ್ಮೇಳನ, ಡಾ.ಬಸವರಾಜ ಜಗಜಂಪಿ ನೇತೃತ್ವದಲ್ಲಿ ಚನ್ನಮ್ಮನ ಕಿತ್ತೂರಿನಲ್ಲಿ 2011ರಲ್ಲಿ ಏಳನೇ ಜಿಲ್ಲಾ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಜರುಗಿರುವುದು ಸ್ಮರಣೀಯವಾಗಿದೆ. <br /> <br /> ನೇಕಾರಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಅವಲಂಬನೆಯಾಗಿರುವ ಜೊತೆಗೆ ಕೃಷಿ ಅವಲಂಬಿತ ಕುಟುಂಬಗಳನ್ನು ಹೊಂದಿರುವ, ಅಂದಾಜು ಏಳು ಸಾವಿರ ಜನಸಂಖ್ಯೆ, ಗ್ರಾ.ಪಂ. ಆಡಳಿತ ವ್ಯಾಪ್ತಿಯಲ್ಲಿ ದೇಶನೂರ, ಮೊಹರೆ, ಕೊಳಾನಟ್ಟಿ ಗ್ರಾಮಗಳು ಸೇರಿದ್ದು, 2011-12 ನೇ ಸಾಲಿನಲ್ಲಿ `ಸುವರ್ಣ ಗ್ರಾಮ' ಯೋಜನೆಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.<br /> ಸಿದ್ಧಲಿಂಗೇಶ್ವರ ವಿರಕ್ತಮಠ ಆವರಣದಲ್ಲಿ ಬೃಹತ್ ಮಂಟಪ, ಪುಸ್ತಕ ಮಾರಾಟ ಮಳಿಗೆಗಳನ್ನು ನಿರ್ಮಾಣ ಮಡಲಾಗಿದ್ದು, ಆರು ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.<br /> <br /> `ಪ್ರಪ್ರಥಮ ಸಾಹಿತ್ಯ ಸಮ್ಮೇಳನ ದೇಶನೂರಿನಲ್ಲಿ ನಡೆಯುತ್ತಿರುವುದು ಹೆಮ್ಮಯ ವಿಷಯವಾಗಿದ್ದು, ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ಸಿಗಲಿದೆ ಎನ್ನುವ ಭರವಸೆ ಹೊಂದಿದ್ದೇವೆ' ಎಂದು ಪದವೀಧರ ಸಂಜು ಹಡಗಿನಹಾಳ ಹೇಳುತ್ತಾರೆ.<br /> ಸಾಹಿತ್ಯ ಸಮ್ಮೇಳನದಲ್ಲಿ ಚಿತ್ರಕಲಾ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಿರುವುದು ಈ ಭಾಗದ ಚಿತ್ರಕಲಾವಿದರಿಗೆ ಹೆಚ್ಚಿನ ಹುರುಪನ್ನು ತಂದು ಕೊಟ್ಟಿದೆ ಎಂದು ನೇಸರಗಿ ಭಾಗದ ಯುವ ಕಲಾವಿದ ಎಫ್.ಬಿ.ಸೋಮಣ್ಣವರ ಹೆಮ್ಮೆಯಿಂದ ಹೇಳುತ್ತಾರೆ.<br /> ಮಾರ್ಗ ಸೂಚಿ<br /> <br /> ಬೈಲಹೊಂಗಲದಿಂದ 17 ಕಿ.ಮೀ. ನೇಸರಗಿ, ನೇಸರಗಿಯಿಂದ 5ಕಿ.ಮೀ. ದೇಶನೂರ ಗ್ರಾಮವಿದೆ. ಬೆಳಗಾವಿಯಿಂದ ದೇಶನೂರ ಕ್ರಾಸ್ 27 ಕಿ.ಮೀ., ದೇಶನೂರ ಕ್ರಾಸ್ದಿಂದ 3 ಕಿ.ಮೀ. ದೇಶನೂರ. ಬೈಲಹೊಂಗಲ, ನೇಸರಗಿ ಹಾಗೂ ಬೆಳಗಾವಿಯಿಂದ ಸಾರಿಗೆ ಹಾಗೂ ಖಾಸಗಿ ವಾಹನಗಳ ಸೌಲಭ್ಯವಿದ್ದು, ಬನ್ನಿ ಎಲ್ಲರೂ ಸೇರಿ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸೋಣ ಎಂದು ದೇಶನೂರ ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು ಸ್ವಾಗತಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೈಲಹೊಂಗಲ: ಆಂಗ್ಲರ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕೆ ಕರೆ ನೀಡಿದ, ಪ್ರಪ್ರಥಮ ವೀರರಾಣಿ ಕಿತ್ತೂರ ಚೆನ್ನಮ್ಮಾಜಿಯ `ಕಿತ್ತೂರ ಸಂಸ್ಥಾನ'ದ ಐತಿಹಾಸಿಕ ಹಿನ್ನೆಲೆಯ ದೇಶನೂರು ಗ್ರಾಮ ತಾಲ್ಲೂಕಿನ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿದೆ.<br /> <br /> ಪ್ರೊ.ಸಿ.ವಿ.ಜ್ಯೋತಿ, ಜಾನಪದ ಹಾಗೂ ದೂರದರ್ಶನ ಕಲಾವಿದ ಸಿ.ಕೆ. ಮೆಕ್ಕೇದ ನೇತೃತ್ವದಲ್ಲಿ 1999ರಲ್ಲಿ ತಿರುಳ್ಗನ್ನಡ ನಾಡು ಒಕ್ಕುಂದದಲ್ಲಿ ನಾಲ್ಕನೇ ಜಿಲ್ಲಾ ಸಾಹಿತ್ಯ ಸಮ್ಮೇಳನ, ಡಾ.ಬಸವರಾಜ ಜಗಜಂಪಿ ನೇತೃತ್ವದಲ್ಲಿ ಚನ್ನಮ್ಮನ ಕಿತ್ತೂರಿನಲ್ಲಿ 2011ರಲ್ಲಿ ಏಳನೇ ಜಿಲ್ಲಾ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಜರುಗಿರುವುದು ಸ್ಮರಣೀಯವಾಗಿದೆ. <br /> <br /> ನೇಕಾರಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಅವಲಂಬನೆಯಾಗಿರುವ ಜೊತೆಗೆ ಕೃಷಿ ಅವಲಂಬಿತ ಕುಟುಂಬಗಳನ್ನು ಹೊಂದಿರುವ, ಅಂದಾಜು ಏಳು ಸಾವಿರ ಜನಸಂಖ್ಯೆ, ಗ್ರಾ.ಪಂ. ಆಡಳಿತ ವ್ಯಾಪ್ತಿಯಲ್ಲಿ ದೇಶನೂರ, ಮೊಹರೆ, ಕೊಳಾನಟ್ಟಿ ಗ್ರಾಮಗಳು ಸೇರಿದ್ದು, 2011-12 ನೇ ಸಾಲಿನಲ್ಲಿ `ಸುವರ್ಣ ಗ್ರಾಮ' ಯೋಜನೆಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.<br /> ಸಿದ್ಧಲಿಂಗೇಶ್ವರ ವಿರಕ್ತಮಠ ಆವರಣದಲ್ಲಿ ಬೃಹತ್ ಮಂಟಪ, ಪುಸ್ತಕ ಮಾರಾಟ ಮಳಿಗೆಗಳನ್ನು ನಿರ್ಮಾಣ ಮಡಲಾಗಿದ್ದು, ಆರು ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.<br /> <br /> `ಪ್ರಪ್ರಥಮ ಸಾಹಿತ್ಯ ಸಮ್ಮೇಳನ ದೇಶನೂರಿನಲ್ಲಿ ನಡೆಯುತ್ತಿರುವುದು ಹೆಮ್ಮಯ ವಿಷಯವಾಗಿದ್ದು, ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ಸಿಗಲಿದೆ ಎನ್ನುವ ಭರವಸೆ ಹೊಂದಿದ್ದೇವೆ' ಎಂದು ಪದವೀಧರ ಸಂಜು ಹಡಗಿನಹಾಳ ಹೇಳುತ್ತಾರೆ.<br /> ಸಾಹಿತ್ಯ ಸಮ್ಮೇಳನದಲ್ಲಿ ಚಿತ್ರಕಲಾ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಿರುವುದು ಈ ಭಾಗದ ಚಿತ್ರಕಲಾವಿದರಿಗೆ ಹೆಚ್ಚಿನ ಹುರುಪನ್ನು ತಂದು ಕೊಟ್ಟಿದೆ ಎಂದು ನೇಸರಗಿ ಭಾಗದ ಯುವ ಕಲಾವಿದ ಎಫ್.ಬಿ.ಸೋಮಣ್ಣವರ ಹೆಮ್ಮೆಯಿಂದ ಹೇಳುತ್ತಾರೆ.<br /> ಮಾರ್ಗ ಸೂಚಿ<br /> <br /> ಬೈಲಹೊಂಗಲದಿಂದ 17 ಕಿ.ಮೀ. ನೇಸರಗಿ, ನೇಸರಗಿಯಿಂದ 5ಕಿ.ಮೀ. ದೇಶನೂರ ಗ್ರಾಮವಿದೆ. ಬೆಳಗಾವಿಯಿಂದ ದೇಶನೂರ ಕ್ರಾಸ್ 27 ಕಿ.ಮೀ., ದೇಶನೂರ ಕ್ರಾಸ್ದಿಂದ 3 ಕಿ.ಮೀ. ದೇಶನೂರ. ಬೈಲಹೊಂಗಲ, ನೇಸರಗಿ ಹಾಗೂ ಬೆಳಗಾವಿಯಿಂದ ಸಾರಿಗೆ ಹಾಗೂ ಖಾಸಗಿ ವಾಹನಗಳ ಸೌಲಭ್ಯವಿದ್ದು, ಬನ್ನಿ ಎಲ್ಲರೂ ಸೇರಿ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸೋಣ ಎಂದು ದೇಶನೂರ ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು ಸ್ವಾಗತಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>