<p><strong>ಕೃಷ್ಣರಾಜಪುರ:</strong> ಕೌದೇನಹಳ್ಳಿಯಲ್ಲಿ ಒತ್ತುವರಿಯಾಗಿದ್ದ ಜಮೀನನ್ನು (ಸರ್ವೆ ಸಂಖ್ಯೆ 95/3) ಹಲವು ವರ್ಷಗಳ ಹೋರಾಟದ ನಂತರ ತೆರವುಗೊಳಿಸಲಾಗಿದೆ. ಈಗ ಬಿಬಿಎಂಪಿ ಸುಪರ್ದಿಯಲ್ಲಿರುವ ಈ ಜಮೀನಿನಲ್ಲಿ ಸರ್ಕಾರಿ ಕಾಲೇಜು ನಿರ್ಮಾಣ ಮಾಡಬೇಕು ಎಂದು ರಾಮಮೂರ್ತಿನಗರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಆಂಜಿನಪ್ಪ ಶಾಸಕರಿಗೆ ಒತ್ತಾಯಿಸಿದರು.<br /> <br /> ವಾರ್ಡ್ ಸಭೆಯಲ್ಲಿ ಅವರು ಮಾತನಾಡಿದರು. ಶಾಸಕ ಎನ್.ಎಸ್.ನಂದೀಶ ರೆಡ್ಡಿ ಮಾತನಾಡಿ, ಸರ್ಕಾರಿ ಸ್ವತ್ತನ್ನು ಸಾರ್ವಜನಿಕರ ಬಳಕೆಗೆ ಮೀಸಲಿಡಲಾಗುವುದು. ಜನೋಪಯೋಗಿ ಬಳಕೆಗೆ ಸಂಬಂಧಿಸಿದಂತೆ ವಾರ್ಡ್ ಅಧ್ಯಕ್ಷರು ಮತ್ತು ಬಿಬಿಎಂಪಿ ಸದಸ್ಯರ ಸಭೆಯಲ್ಲಿ ಚರ್ಚಿಸಿ ನಿರ್ಧರಿಸುವಂತೆ ಸಂಘದ ಪದಾಧಿಕಾರಿಗಳಿಗೆ ಸೂಚಿಸಿದರು.<br /> <br /> ತೂಗು ಸೇತುವೆಯ ಕೆಳ ಸೇತುವೆ ಮಾರ್ಗ ಅತ್ಯಂತ ಕಿರಿದಾಗಿದ್ದು ತೊಂದರೆ ಆಗುತ್ತಿದೆ. ಇದನ್ನು ಹಾಗೆಯೇ ಉಳಿಸಿಕೊಂಡು ಮಹದೇವಪುರ ವರ್ತುಲ ರಸ್ತೆಯಿಂದ ಕೆ.ಆರ್. ಪುರದ ಐಟಿಐ ಮುಖ್ಯ ದ್ವಾರದ ವರೆಗೆ ಎರಡು ಪಥಗಳ ಕೆಳ ಸೇತುವೆ ಮಾರ್ಗವನ್ನು ನಿರ್ಮಿಸಲಾಗುವುದು ಎಂದರು.<br /> <br /> ವೇಣುಗೋಪಾಲ್, ಶಿವಕುಮಾರ್, ಶ್ರಿನಿವಾಸ ರೆಡ್ಡಿ, ಕೃಷ್ಣಮೂರ್ತಿ , ಸುಕುಮಾರ್, ಬಾಕ್ಸರ್ ನಾಗರಾಜ್, ಶಾಂತರಾಜ ಅರಸ್, ಬಿ.ಹೆಚ್ ಗಣೇಶ ರೆಡ್ಡಿ, ಸಹಾಯರಾಜ್, ಶಿವರಾಜ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೃಷ್ಣರಾಜಪುರ:</strong> ಕೌದೇನಹಳ್ಳಿಯಲ್ಲಿ ಒತ್ತುವರಿಯಾಗಿದ್ದ ಜಮೀನನ್ನು (ಸರ್ವೆ ಸಂಖ್ಯೆ 95/3) ಹಲವು ವರ್ಷಗಳ ಹೋರಾಟದ ನಂತರ ತೆರವುಗೊಳಿಸಲಾಗಿದೆ. ಈಗ ಬಿಬಿಎಂಪಿ ಸುಪರ್ದಿಯಲ್ಲಿರುವ ಈ ಜಮೀನಿನಲ್ಲಿ ಸರ್ಕಾರಿ ಕಾಲೇಜು ನಿರ್ಮಾಣ ಮಾಡಬೇಕು ಎಂದು ರಾಮಮೂರ್ತಿನಗರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಆಂಜಿನಪ್ಪ ಶಾಸಕರಿಗೆ ಒತ್ತಾಯಿಸಿದರು.<br /> <br /> ವಾರ್ಡ್ ಸಭೆಯಲ್ಲಿ ಅವರು ಮಾತನಾಡಿದರು. ಶಾಸಕ ಎನ್.ಎಸ್.ನಂದೀಶ ರೆಡ್ಡಿ ಮಾತನಾಡಿ, ಸರ್ಕಾರಿ ಸ್ವತ್ತನ್ನು ಸಾರ್ವಜನಿಕರ ಬಳಕೆಗೆ ಮೀಸಲಿಡಲಾಗುವುದು. ಜನೋಪಯೋಗಿ ಬಳಕೆಗೆ ಸಂಬಂಧಿಸಿದಂತೆ ವಾರ್ಡ್ ಅಧ್ಯಕ್ಷರು ಮತ್ತು ಬಿಬಿಎಂಪಿ ಸದಸ್ಯರ ಸಭೆಯಲ್ಲಿ ಚರ್ಚಿಸಿ ನಿರ್ಧರಿಸುವಂತೆ ಸಂಘದ ಪದಾಧಿಕಾರಿಗಳಿಗೆ ಸೂಚಿಸಿದರು.<br /> <br /> ತೂಗು ಸೇತುವೆಯ ಕೆಳ ಸೇತುವೆ ಮಾರ್ಗ ಅತ್ಯಂತ ಕಿರಿದಾಗಿದ್ದು ತೊಂದರೆ ಆಗುತ್ತಿದೆ. ಇದನ್ನು ಹಾಗೆಯೇ ಉಳಿಸಿಕೊಂಡು ಮಹದೇವಪುರ ವರ್ತುಲ ರಸ್ತೆಯಿಂದ ಕೆ.ಆರ್. ಪುರದ ಐಟಿಐ ಮುಖ್ಯ ದ್ವಾರದ ವರೆಗೆ ಎರಡು ಪಥಗಳ ಕೆಳ ಸೇತುವೆ ಮಾರ್ಗವನ್ನು ನಿರ್ಮಿಸಲಾಗುವುದು ಎಂದರು.<br /> <br /> ವೇಣುಗೋಪಾಲ್, ಶಿವಕುಮಾರ್, ಶ್ರಿನಿವಾಸ ರೆಡ್ಡಿ, ಕೃಷ್ಣಮೂರ್ತಿ , ಸುಕುಮಾರ್, ಬಾಕ್ಸರ್ ನಾಗರಾಜ್, ಶಾಂತರಾಜ ಅರಸ್, ಬಿ.ಹೆಚ್ ಗಣೇಶ ರೆಡ್ಡಿ, ಸಹಾಯರಾಜ್, ಶಿವರಾಜ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>