<p><strong>ಮುಳಬಾಗಲು:</strong> ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ಅನುಕೂಲ ಸಿಗಬೇಕು. ಇದಕ್ಕೆ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ ಮಾನದಂಡ ಆಗಬಾರದು ಎಂಬ ಕಾರಣಕ್ಕಾಗಿ ಉಚಿತ ಕಾನೂನು ನೆರವು ಯೋಜನೆ ಸರ್ಕಾರ ಜಾರಿಗೆ ತಂದಿದೆ ಎಂದು ಮುಳಬಾಗಲು ಜೆಎಂಎಫ್ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಕೆಂಗಾಬಾಲಯ್ಯ ಹೇಳಿದರು.<br /> <br /> ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಆಡಳಿತದ ವತಿಯಿಂದ ಸೊನ್ನವಾಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಸೋಮವಾರ ನಡೆದ ಕಾನೂನು ಸಾಕ್ಷರತಾ ರಥ ಯಾತ್ರೆಯ ಸಮಾರೋಪ ಹಾಗೂ ಕಾನೂನು ಸಾಕ್ಷರತಾ ಸಮಾರಂಭದಲ್ಲಿ ಅವರು ಮಾತನಾಡಿದರು. <br /> <br /> ಗ್ರಾಮಗಳಲ್ಲಿ ಪರಿಹರಿಸಬಹುದಾದ ಸಣ್ಣ-ಪುಟ್ಟ ಮನಸ್ತಾಪಗಳಿಗೂ ನ್ಯಾಯಾಲಯದ ಮೆಟ್ಟಿಲೇರುವುದು ಗಮನಿಸಿದರೆ, ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಆತಂಕವಾಗುತ್ತದೆ.<br /> <br /> ಕುಟುಂಬ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಾಗಿ ಕಾನೂನು ಸಮಸ್ಯೆಗಳು ಎದುರಾಗುತ್ತಿವೆ. ಸಂಕಷ್ಟದಲ್ಲಿರುವವರು ಕಾನೂನು ನೆರವು ಪಡೆಯಿರಿ. ಕಾನೂನು ಎಂಬುದು ಹುಡುಗಾಟದ ಪುಸ್ತಕವಲ್ಲ, ಅದರ ದುರುಪಯೋಗ ಸಲ್ಲದು ಎಂದರು.<br /> <br /> ಉದ್ಯೋಗ ಖಾತ್ರಿ ಯೋಜನೆ ಕುರಿತು ಡಾ.ವೆಂಕಟಸ್ವಾಮಿ ಮಾತನಾಡಿದರು. ಜೆಎಂಎಫ್ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಓಂಕಾರ್ಮೂರ್ತಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎನ್.ರಾಜು, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ರಾಜಣ್ಣ, ಮಾಜಿ ಅಧ್ಯಕ್ಷ ಕೆ.ಟಿ.ವೆಂಕಟರವಣಪ್ಪ, ವಕೀಲರಾದ ಎಂ.ವರದರೆಡ್ಡಿ, <br /> <br /> ಎಂ.ವೆಂಕಟರವಣ, ಜಯಪ್ಪ, ಕೆ.ನಾಗರಾಜ್. ಗ್ರಾಮ ಪಂಚಾಯಿತಿ ಸದಸ್ಯರಾದ ಸಂಗಂಡ್ಲಹಳ್ಳಿ ನಾರಾಯಣಪ್ಪ, ಚಿಕ್ಕಬಂಡಹಳ್ಳಿ ಸೀನಪ್ಪ, ಖಾದ್ರಿಪುರ ಶಂಕರಪ್ಪ. ಗುಮ್ಮಳಾಪುರ ಸುಬ್ರಮಣ್ಯಂ, ಮಾಜಿ ಸದಸ್ಯರಾದ ತಿಪ್ಪನ್ನ, ಖಲೀಂಸಾಬ್, ಅಬ್ದುಲ್ರಷೀದ್ ಭಾಗವಹಿಸಿದ್ದರು. ವಕೀಲ ಎಂ.ಎಸ್.ಶ್ರೀನಿವಾಸರೆಡ್ಡಿ ವಂದಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಲು:</strong> ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ಅನುಕೂಲ ಸಿಗಬೇಕು. ಇದಕ್ಕೆ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ ಮಾನದಂಡ ಆಗಬಾರದು ಎಂಬ ಕಾರಣಕ್ಕಾಗಿ ಉಚಿತ ಕಾನೂನು ನೆರವು ಯೋಜನೆ ಸರ್ಕಾರ ಜಾರಿಗೆ ತಂದಿದೆ ಎಂದು ಮುಳಬಾಗಲು ಜೆಎಂಎಫ್ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಕೆಂಗಾಬಾಲಯ್ಯ ಹೇಳಿದರು.<br /> <br /> ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಆಡಳಿತದ ವತಿಯಿಂದ ಸೊನ್ನವಾಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಸೋಮವಾರ ನಡೆದ ಕಾನೂನು ಸಾಕ್ಷರತಾ ರಥ ಯಾತ್ರೆಯ ಸಮಾರೋಪ ಹಾಗೂ ಕಾನೂನು ಸಾಕ್ಷರತಾ ಸಮಾರಂಭದಲ್ಲಿ ಅವರು ಮಾತನಾಡಿದರು. <br /> <br /> ಗ್ರಾಮಗಳಲ್ಲಿ ಪರಿಹರಿಸಬಹುದಾದ ಸಣ್ಣ-ಪುಟ್ಟ ಮನಸ್ತಾಪಗಳಿಗೂ ನ್ಯಾಯಾಲಯದ ಮೆಟ್ಟಿಲೇರುವುದು ಗಮನಿಸಿದರೆ, ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಆತಂಕವಾಗುತ್ತದೆ.<br /> <br /> ಕುಟುಂಬ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಾಗಿ ಕಾನೂನು ಸಮಸ್ಯೆಗಳು ಎದುರಾಗುತ್ತಿವೆ. ಸಂಕಷ್ಟದಲ್ಲಿರುವವರು ಕಾನೂನು ನೆರವು ಪಡೆಯಿರಿ. ಕಾನೂನು ಎಂಬುದು ಹುಡುಗಾಟದ ಪುಸ್ತಕವಲ್ಲ, ಅದರ ದುರುಪಯೋಗ ಸಲ್ಲದು ಎಂದರು.<br /> <br /> ಉದ್ಯೋಗ ಖಾತ್ರಿ ಯೋಜನೆ ಕುರಿತು ಡಾ.ವೆಂಕಟಸ್ವಾಮಿ ಮಾತನಾಡಿದರು. ಜೆಎಂಎಫ್ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಓಂಕಾರ್ಮೂರ್ತಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎನ್.ರಾಜು, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ರಾಜಣ್ಣ, ಮಾಜಿ ಅಧ್ಯಕ್ಷ ಕೆ.ಟಿ.ವೆಂಕಟರವಣಪ್ಪ, ವಕೀಲರಾದ ಎಂ.ವರದರೆಡ್ಡಿ, <br /> <br /> ಎಂ.ವೆಂಕಟರವಣ, ಜಯಪ್ಪ, ಕೆ.ನಾಗರಾಜ್. ಗ್ರಾಮ ಪಂಚಾಯಿತಿ ಸದಸ್ಯರಾದ ಸಂಗಂಡ್ಲಹಳ್ಳಿ ನಾರಾಯಣಪ್ಪ, ಚಿಕ್ಕಬಂಡಹಳ್ಳಿ ಸೀನಪ್ಪ, ಖಾದ್ರಿಪುರ ಶಂಕರಪ್ಪ. ಗುಮ್ಮಳಾಪುರ ಸುಬ್ರಮಣ್ಯಂ, ಮಾಜಿ ಸದಸ್ಯರಾದ ತಿಪ್ಪನ್ನ, ಖಲೀಂಸಾಬ್, ಅಬ್ದುಲ್ರಷೀದ್ ಭಾಗವಹಿಸಿದ್ದರು. ವಕೀಲ ಎಂ.ಎಸ್.ಶ್ರೀನಿವಾಸರೆಡ್ಡಿ ವಂದಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>