<p>ಅರಸೀಕೆರೆ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮೆರೆಯುತ್ತಿದ್ದಾರೆ ಎಂದು ಕಲ್ಪತರು ಕಾವೇರಿ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷೆ ಟಿ.ಎಲ್. ಅಂಬುಜಾಕ್ಷಿ ಅಭಿಪ್ರಾಯಪಟ್ಟರು. <br /> <br /> ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ಬೆಳಗುಂಬ ಶಾಖೆಯ ಕಲ್ಪತರು ಕಾವೇರಿ ಗ್ರಾಮೀಣ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಅಂತಾ ರಾಷ್ಟ್ರೀಯ ಮಹಿಳಾ ವರ್ಷದ ಅಂಗವಾಗಿ ಈಚೆಗೆ ಆಯೋಜಿಸಿದ್ದ `ಸಂಪೂರ್ಣ ಗ್ರಾಮ~ ನಾಮಫಲಕ ಉದ್ಘಾಟಿಸಿ ಅಚರು ಮಾತನಾಡಿದರು. ಮಹಿಳೆಯರು ಜಾಗೃತರಾಗಿ ಸರ್ವ ರಂಗಗಳಲ್ಲಿಯೂ ದಾಪುಗಾಲು ಇಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.<br /> <br /> ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ಮಹಿಳೆಯರ ಸ್ವಾವಲಂಬನೆಯ ದಾರಿ ದೀಪಗಳಾಗಿವೆ. ಸ್ವಸಹಾಯ ಸಂಘಗಳ ಸದಸ್ಯೆಯರು ಬ್ಯಾಂಕುಳಲ್ಲಿ ಸಾಲ ಪಡೆದು ಅದನ್ನು ಸದ್ಭಳಕೆ ಮಾಡಿಕೊಂಡು ಸ್ವಾವಲಂಬನೆ ಸಾಧಿಸುತ್ತಿದ್ದಾರೆ. ಪಡೆದ ಸಾಲವನ್ನು ಮರು ಪಾವತಿ ಮಾಡುವಲ್ಲಿಯೂ ಮುಂದೆ ಇದ್ದಾರೆ ಎಂದರು. <br /> <br /> ಸೆಲ್ಕೋ ಸೋಲಾರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹರೀಶ್ ಹಂದೆ, ಆಕಾಶವಾಣಿ ಅಧಿಕಾರಿ ಡಾ. ವಿಜಯ್ ಅಂಗಡಿ , ಅರಸೀಕೆರೆ ಜಯಚಾಮರಾಜೇಂದ್ರ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶೈಲಜಾ, ಉಪನ್ಯಾಸಕಿ ಡಿ.ಆರ್. ಸುಧಾ ಮಾತನಾಡಿದರು.<br /> <br /> ಸಂಪೂರ್ಣ ಗ್ರಾಮ ಯೋಜನೆ ಯಡಿ ನಾಗೇನಹಳ್ಳಿ ಗ್ರಾಮದ 25 ರೈತರಿಗೆ ಕಿಸಾನ್ ಕಾರ್ಡು, ವಿಮಾ ಯೋಜನೆ, ಅಡುಗೆ ಅನಿಲ ಸಂಪರ್ಕ, ಸೋಲಾರ ದೀಪಗಳನ್ನು ನೀಡಲಾಯಿತು.<br /> <br /> ಅರಸೀಕೆರೆ ಕುಸುಮ ಗ್ಯಾಸ್ ಏಜೆನ್ಸಿ ಮಾಲೀಕ ಎಸ್.ಆರ್. ಕಂಠಿ, ಬ್ಯಾಂಕಿನ ನೋಡೆಲ್ ಅಧಿಕಾರಿ ಕೆ. ಶ್ರೆಧರ್ ಪ್ರಾದೇಶಿಕ ವ್ಯವಸ್ಥಾಪಕ ಪಿ.ಎನ್. ಸ್ವಾಮಿ, ಬೆಳಗುಂಬ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಚಂದ್ರಮೋಹನ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅರಸೀಕೆರೆ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮೆರೆಯುತ್ತಿದ್ದಾರೆ ಎಂದು ಕಲ್ಪತರು ಕಾವೇರಿ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷೆ ಟಿ.ಎಲ್. ಅಂಬುಜಾಕ್ಷಿ ಅಭಿಪ್ರಾಯಪಟ್ಟರು. <br /> <br /> ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ಬೆಳಗುಂಬ ಶಾಖೆಯ ಕಲ್ಪತರು ಕಾವೇರಿ ಗ್ರಾಮೀಣ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಅಂತಾ ರಾಷ್ಟ್ರೀಯ ಮಹಿಳಾ ವರ್ಷದ ಅಂಗವಾಗಿ ಈಚೆಗೆ ಆಯೋಜಿಸಿದ್ದ `ಸಂಪೂರ್ಣ ಗ್ರಾಮ~ ನಾಮಫಲಕ ಉದ್ಘಾಟಿಸಿ ಅಚರು ಮಾತನಾಡಿದರು. ಮಹಿಳೆಯರು ಜಾಗೃತರಾಗಿ ಸರ್ವ ರಂಗಗಳಲ್ಲಿಯೂ ದಾಪುಗಾಲು ಇಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.<br /> <br /> ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ಮಹಿಳೆಯರ ಸ್ವಾವಲಂಬನೆಯ ದಾರಿ ದೀಪಗಳಾಗಿವೆ. ಸ್ವಸಹಾಯ ಸಂಘಗಳ ಸದಸ್ಯೆಯರು ಬ್ಯಾಂಕುಳಲ್ಲಿ ಸಾಲ ಪಡೆದು ಅದನ್ನು ಸದ್ಭಳಕೆ ಮಾಡಿಕೊಂಡು ಸ್ವಾವಲಂಬನೆ ಸಾಧಿಸುತ್ತಿದ್ದಾರೆ. ಪಡೆದ ಸಾಲವನ್ನು ಮರು ಪಾವತಿ ಮಾಡುವಲ್ಲಿಯೂ ಮುಂದೆ ಇದ್ದಾರೆ ಎಂದರು. <br /> <br /> ಸೆಲ್ಕೋ ಸೋಲಾರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹರೀಶ್ ಹಂದೆ, ಆಕಾಶವಾಣಿ ಅಧಿಕಾರಿ ಡಾ. ವಿಜಯ್ ಅಂಗಡಿ , ಅರಸೀಕೆರೆ ಜಯಚಾಮರಾಜೇಂದ್ರ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶೈಲಜಾ, ಉಪನ್ಯಾಸಕಿ ಡಿ.ಆರ್. ಸುಧಾ ಮಾತನಾಡಿದರು.<br /> <br /> ಸಂಪೂರ್ಣ ಗ್ರಾಮ ಯೋಜನೆ ಯಡಿ ನಾಗೇನಹಳ್ಳಿ ಗ್ರಾಮದ 25 ರೈತರಿಗೆ ಕಿಸಾನ್ ಕಾರ್ಡು, ವಿಮಾ ಯೋಜನೆ, ಅಡುಗೆ ಅನಿಲ ಸಂಪರ್ಕ, ಸೋಲಾರ ದೀಪಗಳನ್ನು ನೀಡಲಾಯಿತು.<br /> <br /> ಅರಸೀಕೆರೆ ಕುಸುಮ ಗ್ಯಾಸ್ ಏಜೆನ್ಸಿ ಮಾಲೀಕ ಎಸ್.ಆರ್. ಕಂಠಿ, ಬ್ಯಾಂಕಿನ ನೋಡೆಲ್ ಅಧಿಕಾರಿ ಕೆ. ಶ್ರೆಧರ್ ಪ್ರಾದೇಶಿಕ ವ್ಯವಸ್ಥಾಪಕ ಪಿ.ಎನ್. ಸ್ವಾಮಿ, ಬೆಳಗುಂಬ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಚಂದ್ರಮೋಹನ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>