<p>ಚಿಕ್ಕಮಗಳೂರು: ಶುಶ್ರೂಷಕಿಯರು ಸೇವೆಯಲ್ಲಿ ಸಹನೆ, ಪ್ರೀತಿ ಮೈಗೂಡಿಸಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ರಾಜಪ್ಪ ಸಲಹೆ ನೀಡಿದರು.<br /> <br /> ನಗರದ ಆಶ್ರಯ ನರ್ಸಿಂಗ್ ಕಾಲೇಜಿನ ನೂತನ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಸೇವಾ ಮನೋಭಾವ ಇರುವವರು ಮಾತ್ರ ಈ ವೃತ್ತಿ ನಿರ್ವಹಿಸಲು ಸಾಧ್ಯ ಎಂದು ಹೇಳಿದರು. ರಕ್ತನಿಧಿ ಕೇಂದ್ರದ ವೈದ್ಯ ಶಿವದತ್ ಮಾತನಾಡಿ, ವೈದ್ಯರ ಸೇವೆ ಯಶಸ್ವಿಯಾಗ ಬೇಕಾದರೆ ಶುಶ್ರೂಷಕಿಯರ ಪಾತ್ರ ಮುಖ್ಯವಾಗಿದೆ ಎಂದರು. <br /> <br /> ಪ್ರಮಾಣ ಪತ್ರಕ್ಕಾಗಿ ತರಬೇತಿ ಮಾಡದೆ ಭವಿಷ್ಯ ರೂಪಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.<br /> <br /> ನೋವಿನಿಂದ ಬರುವ ರೋಗಿಗಳಿಗೆ ಪ್ರೀತಿಯಿಂದ ಸೇವೆ ಮಾಡಲು ವೈದ್ಯರಿಗಿಂತ ಶುಶ್ರೂಷಕಿಯರ ಪಾತ್ರ ಬಹಳವಾಗಿರುತ್ತದೆ ಎಂದು ವೈದ್ಯ ಸಂತೋಷ್ ತಿಳಿಸಿದರು. ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಅವರಿಗೆ ಮಾನಸಿಕ ಸ್ಥೈರ್ಯ ನೀಡಬೇಕಾಗುತ್ತದೆ ಎಂದು ಹೇಳಿದರು.<br /> <br /> ಆಶ್ರಯ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಿ.ಎಲ್.ವಿಜಯಕುಮಾರ್, ಪ್ರಾಂಶುಪಾಲರಾದ ಫಿಲೋಮಿನಾ ಪಿರೇರಾ, ಆಶ್ರಯ ಎಜುಕೇಶನ್ ಟ್ರಸ್ಟ್ ನಿರ್ದೇಶಕಿ ಶುಭಾ ವಿಜಯ, ರಂಜಿತಾ, ವಿಜಯಕುಮಾರ್, ರಜನಿ, ಟ್ಯೂಟರ್ ಅಶ್ವಿನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಮಗಳೂರು: ಶುಶ್ರೂಷಕಿಯರು ಸೇವೆಯಲ್ಲಿ ಸಹನೆ, ಪ್ರೀತಿ ಮೈಗೂಡಿಸಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ರಾಜಪ್ಪ ಸಲಹೆ ನೀಡಿದರು.<br /> <br /> ನಗರದ ಆಶ್ರಯ ನರ್ಸಿಂಗ್ ಕಾಲೇಜಿನ ನೂತನ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಸೇವಾ ಮನೋಭಾವ ಇರುವವರು ಮಾತ್ರ ಈ ವೃತ್ತಿ ನಿರ್ವಹಿಸಲು ಸಾಧ್ಯ ಎಂದು ಹೇಳಿದರು. ರಕ್ತನಿಧಿ ಕೇಂದ್ರದ ವೈದ್ಯ ಶಿವದತ್ ಮಾತನಾಡಿ, ವೈದ್ಯರ ಸೇವೆ ಯಶಸ್ವಿಯಾಗ ಬೇಕಾದರೆ ಶುಶ್ರೂಷಕಿಯರ ಪಾತ್ರ ಮುಖ್ಯವಾಗಿದೆ ಎಂದರು. <br /> <br /> ಪ್ರಮಾಣ ಪತ್ರಕ್ಕಾಗಿ ತರಬೇತಿ ಮಾಡದೆ ಭವಿಷ್ಯ ರೂಪಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.<br /> <br /> ನೋವಿನಿಂದ ಬರುವ ರೋಗಿಗಳಿಗೆ ಪ್ರೀತಿಯಿಂದ ಸೇವೆ ಮಾಡಲು ವೈದ್ಯರಿಗಿಂತ ಶುಶ್ರೂಷಕಿಯರ ಪಾತ್ರ ಬಹಳವಾಗಿರುತ್ತದೆ ಎಂದು ವೈದ್ಯ ಸಂತೋಷ್ ತಿಳಿಸಿದರು. ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಅವರಿಗೆ ಮಾನಸಿಕ ಸ್ಥೈರ್ಯ ನೀಡಬೇಕಾಗುತ್ತದೆ ಎಂದು ಹೇಳಿದರು.<br /> <br /> ಆಶ್ರಯ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಿ.ಎಲ್.ವಿಜಯಕುಮಾರ್, ಪ್ರಾಂಶುಪಾಲರಾದ ಫಿಲೋಮಿನಾ ಪಿರೇರಾ, ಆಶ್ರಯ ಎಜುಕೇಶನ್ ಟ್ರಸ್ಟ್ ನಿರ್ದೇಶಕಿ ಶುಭಾ ವಿಜಯ, ರಂಜಿತಾ, ವಿಜಯಕುಮಾರ್, ರಜನಿ, ಟ್ಯೂಟರ್ ಅಶ್ವಿನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>