<p><strong>ಮೈಸೂರು:</strong> ಸಾಂಪ್ರದಾಯಿಕ ಮೈಸೂರು ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಕಲಾ ಶಾಲೆಯ ವಿದ್ಯಾರ್ಥಿಗಳಿಗೆ ಶಿಬಿರಗಳನ್ನು ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದು ಪುರಾತತ್ವ ಹಾಗೂ ವಸ್ತು ಸಂಗ್ರಹಾಲಯದ ನಿರ್ದೇಶಕ ಡಾ.ಆರ್.ಗೋಪಾಲ್ ಅಭಿಪ್ರಾಯಪಟ್ಟರು.<br /> <br /> ಇಲ್ಲಿನ ವಸ್ತು ಪ್ರದರ್ಶನ ಆವರಣದಲ್ಲಿರುವ ಪುರಾತತ್ವ ಹಾಗೂ ವಸ್ತು ಸಂಗ್ರಹಾಲಯದಲ್ಲಿ ಎಂ.ಗಿರಿಜಾ ಅವರ ಮೈಸೂರು ಸಾಂಪ್ರದಾಯಿಕ ಚಿತ್ರಗಳು, ರಾಗಚಿತ್ರಗಳು ಹಾಗೂ ಗಂಜೀಫಾ ಚಿತ್ರಗಳ ಪ್ರದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ಶೈಲಿಯ ಕಲೆಯನ್ನು ಉಳಿಸಿ ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಈ ಕಲಾ ಗ್ಯಾಲರಿಯನ್ನು ಆರಂಭಿಸಿದ್ದು, ಮೈಸೂರು ಶೈಲಿಯ ಚಿತ್ರಕಲಾ ಪ್ರದರ್ಶ ನಕ್ಕೆ ಗ್ಯಾಲರಿಯನ್ನು ಉಚಿತವಾಗಿ ನೀಡಲು ತೀರ್ಮಾನಿಸ ಲಾಗಿದೆ ಎಂದರು.<br /> <br /> ಈ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಯಾವುದೇ ಸೌಲಭ್ಯ ನೀಡಲು ಸಿದ್ಧವಿರುವುದಾಗಿ ಹೇಳಿದ ಇದಕ್ಕೆ ಬೇಕಾದ ಸೌಲಭ್ಯ, ಪ್ರೋತ್ಸಾಹ ನೀಡಲು ಇಲಾಖೆ ಪ್ರೋತ್ಸಾಹ ನೀಡಲಿದೆ ಎಂದು ಹೇಳಿದರು. <br /> <br /> ಭಾರತೀಯ ಕಲೆ ಚರಿತ್ರೆಯ ಪೂರ್ವ ದಿಂದಲೂ ಆರಂಭವಾದ ಕಲೆ. ಮನುಷ್ಯನ ಸಂಸ್ಕೃತಿ ಅನಾದಿ ಕಾಲ ದಿಂದಲೂ ಬೆಳೆದು ಬಂದಿದೆ. ವಿಜಯ ನಗರ ಸಾಮ್ರಾಜ್ಯ ಪತನವಾದ ನಂತರ ಮೈಸೂರು ಅರಸರು ಈ ಕಲೆಯನ್ನು ಪ್ರೋತ್ಸಾಹಿಸಿದರು. ನಂತರದ ದಿನಗಳಲ್ಲಿ ಮೈಸೂರು ಶೈಲಿಯ ಚಿತ್ರ ಕಲಾವಿದರ ಕೊರತೆ ಇದ್ದ ಕಾರಣ ಪ್ರಸಿದ್ಧಿ ಪಡೆಯಲಿಲ್ಲ. ಕಲಾವಿದರ ಕೊರತೆ ಯಿಂದ ತಂಜಾವೂರು ಶೈಲಿ ಪ್ರಸಿದ್ಧ ವಾಗಲು ಕಾರಣವಾಯಿತು ಎಂದು ಅವರು ಹೇಳಿದರು.<br /> <br /> ಕಾರ್ಯಕ್ರಮ ಉದ್ಘಾಟಿಸಿದ ದಕ್ಷಿಣ ವಲಯ ಐಜಿಪಿ ಎ.ಎಸ್.ಎನ್.ಮೂರ್ತಿ ಮಾತನಾಡಿ `ಯಾವುದೇ ಕಲೆಯನ್ನು ಪ್ರೋತ್ಸಾಹಿಸಿದರೆ ಆ ಕಲೆ ಉಳಿಯಲು ಸಾಧ್ಯ. ಮುಖ್ಯವಾಗಿ ಯುವಕರಿಗೆ ಈ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ನಮಗೆ ತಿಳಿಸಬೇಕು. ಪ್ರೋತ್ಸಾಹ ಇಲ್ಲದಿದ್ದರೆ ಕಲೆಗಾರರು ಬೆಳೆಯುವುದು ಕಷ್ಟ ಎಂದ ಅವರು ಗಿರಿಜಾ ಅವರು ಒಳ್ಳೆಯ ಕಲಾವಿದರು. ಗಿರಿಜಾ ಅವರು ಅನೇಕರಿಗೆ ಕಲೆಯನ್ನು ಕಲಿಸಿದ್ದಾರೆ ಎಂದು ತಿಳಿಸಿದರು.<br /> ಪತ್ರಕರ್ತ ರವೀಂದ್ರಭಟ್ಟ ಮಾತನಾಡಿ ದರು. ಕನ್ನಡ ಬಳಗದ ರಂಗಧಾಮಯ್ಯ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಸಾಂಪ್ರದಾಯಿಕ ಮೈಸೂರು ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಕಲಾ ಶಾಲೆಯ ವಿದ್ಯಾರ್ಥಿಗಳಿಗೆ ಶಿಬಿರಗಳನ್ನು ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದು ಪುರಾತತ್ವ ಹಾಗೂ ವಸ್ತು ಸಂಗ್ರಹಾಲಯದ ನಿರ್ದೇಶಕ ಡಾ.ಆರ್.ಗೋಪಾಲ್ ಅಭಿಪ್ರಾಯಪಟ್ಟರು.<br /> <br /> ಇಲ್ಲಿನ ವಸ್ತು ಪ್ರದರ್ಶನ ಆವರಣದಲ್ಲಿರುವ ಪುರಾತತ್ವ ಹಾಗೂ ವಸ್ತು ಸಂಗ್ರಹಾಲಯದಲ್ಲಿ ಎಂ.ಗಿರಿಜಾ ಅವರ ಮೈಸೂರು ಸಾಂಪ್ರದಾಯಿಕ ಚಿತ್ರಗಳು, ರಾಗಚಿತ್ರಗಳು ಹಾಗೂ ಗಂಜೀಫಾ ಚಿತ್ರಗಳ ಪ್ರದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ಶೈಲಿಯ ಕಲೆಯನ್ನು ಉಳಿಸಿ ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಈ ಕಲಾ ಗ್ಯಾಲರಿಯನ್ನು ಆರಂಭಿಸಿದ್ದು, ಮೈಸೂರು ಶೈಲಿಯ ಚಿತ್ರಕಲಾ ಪ್ರದರ್ಶ ನಕ್ಕೆ ಗ್ಯಾಲರಿಯನ್ನು ಉಚಿತವಾಗಿ ನೀಡಲು ತೀರ್ಮಾನಿಸ ಲಾಗಿದೆ ಎಂದರು.<br /> <br /> ಈ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಯಾವುದೇ ಸೌಲಭ್ಯ ನೀಡಲು ಸಿದ್ಧವಿರುವುದಾಗಿ ಹೇಳಿದ ಇದಕ್ಕೆ ಬೇಕಾದ ಸೌಲಭ್ಯ, ಪ್ರೋತ್ಸಾಹ ನೀಡಲು ಇಲಾಖೆ ಪ್ರೋತ್ಸಾಹ ನೀಡಲಿದೆ ಎಂದು ಹೇಳಿದರು. <br /> <br /> ಭಾರತೀಯ ಕಲೆ ಚರಿತ್ರೆಯ ಪೂರ್ವ ದಿಂದಲೂ ಆರಂಭವಾದ ಕಲೆ. ಮನುಷ್ಯನ ಸಂಸ್ಕೃತಿ ಅನಾದಿ ಕಾಲ ದಿಂದಲೂ ಬೆಳೆದು ಬಂದಿದೆ. ವಿಜಯ ನಗರ ಸಾಮ್ರಾಜ್ಯ ಪತನವಾದ ನಂತರ ಮೈಸೂರು ಅರಸರು ಈ ಕಲೆಯನ್ನು ಪ್ರೋತ್ಸಾಹಿಸಿದರು. ನಂತರದ ದಿನಗಳಲ್ಲಿ ಮೈಸೂರು ಶೈಲಿಯ ಚಿತ್ರ ಕಲಾವಿದರ ಕೊರತೆ ಇದ್ದ ಕಾರಣ ಪ್ರಸಿದ್ಧಿ ಪಡೆಯಲಿಲ್ಲ. ಕಲಾವಿದರ ಕೊರತೆ ಯಿಂದ ತಂಜಾವೂರು ಶೈಲಿ ಪ್ರಸಿದ್ಧ ವಾಗಲು ಕಾರಣವಾಯಿತು ಎಂದು ಅವರು ಹೇಳಿದರು.<br /> <br /> ಕಾರ್ಯಕ್ರಮ ಉದ್ಘಾಟಿಸಿದ ದಕ್ಷಿಣ ವಲಯ ಐಜಿಪಿ ಎ.ಎಸ್.ಎನ್.ಮೂರ್ತಿ ಮಾತನಾಡಿ `ಯಾವುದೇ ಕಲೆಯನ್ನು ಪ್ರೋತ್ಸಾಹಿಸಿದರೆ ಆ ಕಲೆ ಉಳಿಯಲು ಸಾಧ್ಯ. ಮುಖ್ಯವಾಗಿ ಯುವಕರಿಗೆ ಈ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ನಮಗೆ ತಿಳಿಸಬೇಕು. ಪ್ರೋತ್ಸಾಹ ಇಲ್ಲದಿದ್ದರೆ ಕಲೆಗಾರರು ಬೆಳೆಯುವುದು ಕಷ್ಟ ಎಂದ ಅವರು ಗಿರಿಜಾ ಅವರು ಒಳ್ಳೆಯ ಕಲಾವಿದರು. ಗಿರಿಜಾ ಅವರು ಅನೇಕರಿಗೆ ಕಲೆಯನ್ನು ಕಲಿಸಿದ್ದಾರೆ ಎಂದು ತಿಳಿಸಿದರು.<br /> ಪತ್ರಕರ್ತ ರವೀಂದ್ರಭಟ್ಟ ಮಾತನಾಡಿ ದರು. ಕನ್ನಡ ಬಳಗದ ರಂಗಧಾಮಯ್ಯ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>