<p>ಶಿರಾ: ತಾಲ್ಲೂಕಿನ ಜನಪದ ದೈವ ಜುಂಜಪ್ಪನ ಮೂಲ ನೆಲೆ ಜುಂಜಪ್ಪನ ಗುಡ್ಡೆಯಲ್ಲಿ ಸಿರಾಸೀಮೆ ವೇದಿಕೆ ಶಿವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಶಿವೋತ್ಸವ ಸಾಂಸ್ಕೃತಿಕ ಜಾತ್ರೆಯಂತೆ ನೆರವೇರಿತು.<br /> <br /> ಶಾಮಿಯಾನ ಕುರ್ಚಿ ರಹಿತವಾಗಿ ಚಿತ್ರಕಲಾವಿದ ರಾಘವೇಂದ್ರ ನಾಯ್ಕ ವಿನ್ಯಾಸಗೊಳಿಸಿದ ಕಲ್ಲಿನ ಕುರ್ಚಿಯ ಸರಳ ವೇದಿಕೆಯಲ್ಲಿ ಆಹೋರಾತ್ರಿ ಸಾಂಸ್ಕೃತಿಕ ಜಾಗರಣೆ ನಡೆಯಿತು.<br /> <br /> ಜುಂಜಪ್ಪನ ಕಥನ ಗಾಯನ, ಕವಿಗೋಷ್ಠಿ, ತತ್ವಪದ, ಭಜನಮೇಳದಿಂದ ಕೂಡಿದ್ದ ಇಡೀ ರಾತ್ರಿಗೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲದೆ ದೂರದ ಊರಿನಿಂದ ಆಗಮಿಸಿದ್ದ ನೂರಾರು ಜನ ಸಾಕ್ಷಿಯಾದರು.<br /> <br /> ಪ್ರೆಸಿಡೆನ್ಸಿ ವಿದ್ಯಾಸಂಸ್ಥೆ ಸಂಸ್ಥಾಪಕ ಎಂ.ಚಿದಾನಂದ್ ಅಧ್ಯಕ್ಷತೆಯಲ್ಲಿ ಶಿರಾ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಎಚ್.ಮಹೇಂದ್ರಪ್ಪ ಶಿವನ ಕುರಿತು ಉಪನ್ಯಾಸ ನೀಡಿದರು.<br /> <br /> ಜನಪದ ವಿದ್ವಾಂಸ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಜುಂಜಪ್ಪನ ಬಗ್ಗೆ ಮಾತನಾಡಿದರು. ಸಾಂಸ್ಕೃತಿಕ ಸಂಘಟಕ ಅಂಕಸಂದ್ರ ಪ್ರೇಮಕುಮಾರ್ ಗುರುಪುತ್ರರಿಗೆ ಶಿವವಸ್ತ್ರ ವಿಭೂತಿ ವಿತರಿಸಿದರು.<br /> <br /> ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತ ಉಗಮ ಶ್ರೀನಿವಾಸ್ ಅವರಿಗೆ ಸಾಂಕೇತಿಕವಾಗಿ ಗಣೆ ನೀಡುವ ಮೂಲಕ ಗೌರವಿಸಲಾಯಿತು. ಸಾಹಿತಿಗಳಾದ ಕೃಷ್ಣಮೂರ್ತಿ ಬಿಳಿಗೆರೆ, ನಟರಾಜ ಬೂದಾಳ್, ಇತಿಹಾಸ ಸಂಶೋಧಕ ಡಾ.ನಂದೀಶ್ವರ್ ಆಗಮಿಸಿದ್ದರು.<br /> <br /> ಜುಂಜಪ್ಪನ ಕಥನ ಗಾಯನದಲ್ಲಿ ಜನಪದ ಕಲಾವಿದ ಕೆ.ರಂಗನಹಳ್ಳಿ ಜುಂಜಣ್ಣ, ಗಣೆ ವಾದಕ ದೊಡ್ಡಟ್ಟಿ ಕರಿಯಣ್ಣ ಪಾಲ್ಗೊಂಡಿದ್ದರು. ಗಣೆಯ ನಿನಾದ ರಾತ್ರಿ ವಾತಾವರಣದಲ್ಲಿ ಅನುರಣಿಸುತ್ತಾ ಇಡೀ ರಾತ್ರಿಗೆ ಅಲೌಕಿಕ ಶೋಭೆ ತುಂಬಿದಂತಿತ್ತು.<br /> <br /> ನಂತರ ನಡೆದ ಕವಿಗೋಷ್ಠಿಯನ್ನು ಚಲನಚಿತ್ರ ನಟ, ಕವಿ ಎಂ.ಎಸ್.ಜಹಾಂಗೀರ್ ಉದ್ಘಾಟಿಸಿದರು. ಕೆ.ಕರಿಸ್ವಾಮಿ, ಆಲೂರು ದೊಡ್ಡನಿಂಗಪ್ಪ, ಹಳ್ಳಿ ಸುರೇಶ್, ಫಿನೀಕ್ಸ್ ರವಿ, ಸುಜಾತಾ ಕುಮಟ, ಸತೀಶ್ ತಿಪಟೂರು, ವಾಣಿ ಸತೀಶ್, ಸುರೇಶ್ ವತ್ಸ, ತಾ.ಸ.ಪುಷ್ಪಾ, ಧನಂಜಯ, ರಾಧಕೃಷ್ಣ ಕವಿತೆ ವಾಚಿಸಿದರು.<br /> <br /> ತಿಪಟೂರು ಕೃಷ್ಣ, ಉಜ್ಜಜ್ಜಿ ರಾಜಣ್ಣ, ಜಗದೀಶ್ ಸೀತಕಲ್, ಶಿರಾಗೇಟ್ ರಾಮಣ್ಣ ಇದ್ದರು. ತದನಂತರ ನಡೆದ ತತ್ವಪದ-- ಹಾಗೂ ಭಜನ ಮೇಳದಲ್ಲಿ ಕಣುಮಣ್ಣ ಹಾಗೂ ಕುಂಬಾರಹಳ್ಳಿ ಬೋರೇಗೌಡರು ನೇತೃತ್ವದ ತಂಡ ಪಾಲ್ಗೊಂಡು ಮುಂಜಾನೆ 7ರವರೆಗೂ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಾ: ತಾಲ್ಲೂಕಿನ ಜನಪದ ದೈವ ಜುಂಜಪ್ಪನ ಮೂಲ ನೆಲೆ ಜುಂಜಪ್ಪನ ಗುಡ್ಡೆಯಲ್ಲಿ ಸಿರಾಸೀಮೆ ವೇದಿಕೆ ಶಿವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಶಿವೋತ್ಸವ ಸಾಂಸ್ಕೃತಿಕ ಜಾತ್ರೆಯಂತೆ ನೆರವೇರಿತು.<br /> <br /> ಶಾಮಿಯಾನ ಕುರ್ಚಿ ರಹಿತವಾಗಿ ಚಿತ್ರಕಲಾವಿದ ರಾಘವೇಂದ್ರ ನಾಯ್ಕ ವಿನ್ಯಾಸಗೊಳಿಸಿದ ಕಲ್ಲಿನ ಕುರ್ಚಿಯ ಸರಳ ವೇದಿಕೆಯಲ್ಲಿ ಆಹೋರಾತ್ರಿ ಸಾಂಸ್ಕೃತಿಕ ಜಾಗರಣೆ ನಡೆಯಿತು.<br /> <br /> ಜುಂಜಪ್ಪನ ಕಥನ ಗಾಯನ, ಕವಿಗೋಷ್ಠಿ, ತತ್ವಪದ, ಭಜನಮೇಳದಿಂದ ಕೂಡಿದ್ದ ಇಡೀ ರಾತ್ರಿಗೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲದೆ ದೂರದ ಊರಿನಿಂದ ಆಗಮಿಸಿದ್ದ ನೂರಾರು ಜನ ಸಾಕ್ಷಿಯಾದರು.<br /> <br /> ಪ್ರೆಸಿಡೆನ್ಸಿ ವಿದ್ಯಾಸಂಸ್ಥೆ ಸಂಸ್ಥಾಪಕ ಎಂ.ಚಿದಾನಂದ್ ಅಧ್ಯಕ್ಷತೆಯಲ್ಲಿ ಶಿರಾ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಎಚ್.ಮಹೇಂದ್ರಪ್ಪ ಶಿವನ ಕುರಿತು ಉಪನ್ಯಾಸ ನೀಡಿದರು.<br /> <br /> ಜನಪದ ವಿದ್ವಾಂಸ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಜುಂಜಪ್ಪನ ಬಗ್ಗೆ ಮಾತನಾಡಿದರು. ಸಾಂಸ್ಕೃತಿಕ ಸಂಘಟಕ ಅಂಕಸಂದ್ರ ಪ್ರೇಮಕುಮಾರ್ ಗುರುಪುತ್ರರಿಗೆ ಶಿವವಸ್ತ್ರ ವಿಭೂತಿ ವಿತರಿಸಿದರು.<br /> <br /> ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತ ಉಗಮ ಶ್ರೀನಿವಾಸ್ ಅವರಿಗೆ ಸಾಂಕೇತಿಕವಾಗಿ ಗಣೆ ನೀಡುವ ಮೂಲಕ ಗೌರವಿಸಲಾಯಿತು. ಸಾಹಿತಿಗಳಾದ ಕೃಷ್ಣಮೂರ್ತಿ ಬಿಳಿಗೆರೆ, ನಟರಾಜ ಬೂದಾಳ್, ಇತಿಹಾಸ ಸಂಶೋಧಕ ಡಾ.ನಂದೀಶ್ವರ್ ಆಗಮಿಸಿದ್ದರು.<br /> <br /> ಜುಂಜಪ್ಪನ ಕಥನ ಗಾಯನದಲ್ಲಿ ಜನಪದ ಕಲಾವಿದ ಕೆ.ರಂಗನಹಳ್ಳಿ ಜುಂಜಣ್ಣ, ಗಣೆ ವಾದಕ ದೊಡ್ಡಟ್ಟಿ ಕರಿಯಣ್ಣ ಪಾಲ್ಗೊಂಡಿದ್ದರು. ಗಣೆಯ ನಿನಾದ ರಾತ್ರಿ ವಾತಾವರಣದಲ್ಲಿ ಅನುರಣಿಸುತ್ತಾ ಇಡೀ ರಾತ್ರಿಗೆ ಅಲೌಕಿಕ ಶೋಭೆ ತುಂಬಿದಂತಿತ್ತು.<br /> <br /> ನಂತರ ನಡೆದ ಕವಿಗೋಷ್ಠಿಯನ್ನು ಚಲನಚಿತ್ರ ನಟ, ಕವಿ ಎಂ.ಎಸ್.ಜಹಾಂಗೀರ್ ಉದ್ಘಾಟಿಸಿದರು. ಕೆ.ಕರಿಸ್ವಾಮಿ, ಆಲೂರು ದೊಡ್ಡನಿಂಗಪ್ಪ, ಹಳ್ಳಿ ಸುರೇಶ್, ಫಿನೀಕ್ಸ್ ರವಿ, ಸುಜಾತಾ ಕುಮಟ, ಸತೀಶ್ ತಿಪಟೂರು, ವಾಣಿ ಸತೀಶ್, ಸುರೇಶ್ ವತ್ಸ, ತಾ.ಸ.ಪುಷ್ಪಾ, ಧನಂಜಯ, ರಾಧಕೃಷ್ಣ ಕವಿತೆ ವಾಚಿಸಿದರು.<br /> <br /> ತಿಪಟೂರು ಕೃಷ್ಣ, ಉಜ್ಜಜ್ಜಿ ರಾಜಣ್ಣ, ಜಗದೀಶ್ ಸೀತಕಲ್, ಶಿರಾಗೇಟ್ ರಾಮಣ್ಣ ಇದ್ದರು. ತದನಂತರ ನಡೆದ ತತ್ವಪದ-- ಹಾಗೂ ಭಜನ ಮೇಳದಲ್ಲಿ ಕಣುಮಣ್ಣ ಹಾಗೂ ಕುಂಬಾರಹಳ್ಳಿ ಬೋರೇಗೌಡರು ನೇತೃತ್ವದ ತಂಡ ಪಾಲ್ಗೊಂಡು ಮುಂಜಾನೆ 7ರವರೆಗೂ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>