<p><strong>ದಾವಣಗೆರೆ: </strong>ಹುಟ್ಟಿದ ಮನುಷ್ಯನಿಗೆ ಹೆಸರು ಇರುವುದಿಲ್ಲ. ನಿಷ್ಕಳಂಕ ಮನುಷ್ಯನಿಗೆ ನಿರ್ದಿಷ್ಟ ಹೆಸರಿಟ್ಟು ನಾಗರಿಕತೆ ರೂಢಿಸಬೇಕಾಗುತ್ತದೆ. ನಾಗರಿಕತೆ ಪಡೆದ ಮನುಷ್ಯ ಸತ್ತ ನಂತರವೂ ಹೆಸರು ಉಳಿಯುವಂತಹ ಪುಣ್ಯ ಕಾರ್ಯಗಳನ್ನು ಮಾಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ನಗರದ ದೇವರಾಜ ಅರಸು ಬಡಾವಣೆಯಲ್ಲಿನ ಅಂಧ ಹೆಣ್ಣು ಮಕ್ಕಳ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರ 61ನೇ ಹುಟ್ಟುಹಬ್ಬ ಆಚರಣೆ ಸಮಾರಂಭದ ನೇತೃತ್ವದ ವಹಿಸಿ ಅವರು ಮಾತನಾಡಿದರು.</p>.<p>ಜನನ-ಮರಣ-ಜೀವನ ಎಂಬ ಮೂರಕ್ಷರಗಳಲ್ಲಿ ಎಡರು- ತೊಡರುಗಳು ಅಧಿಕವಾಗಿರುತ್ತದೆ. ಎಲ್ಲವನ್ನು ಮೆಟ್ಟಿನಿಲ್ಲಲು ಮಹಾತ್ಮರಾದ ಬಸವಣ್ಣ, ಅಲ್ಲಮಪ್ರಭು, ಮಹಾತ್ಮ ಗಾಂಧಿಯಂತಹ ಮಹಾನ್ ವ್ಯಕ್ತಿಗಳ ಜೀವನಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸ್ಥಿತಿವಂತರು ಇಂದು ವಿಲಾಸ ಜೀವನದಲ್ಲಿ ಮೈಮರೆಯದೇ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿಸಿ ಕೊಳ್ಳುವುದರಿಂದ ದೇವರ ಅನುಗ್ರಹ ಪಡೆಯಬಹುದು ಎಂದರು.</p>.<p>ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಸಂಸತ್ ಸದಸ್ಯ ಸಿದ್ದೇಶ್ವರ ಅವರು ಕ್ಷೇತ್ರದಲ್ಲಿ ಸಾಕಷ್ಟು ಪರಿಶ್ರಮಪಟ್ಟು ದುಡಿದಿದ್ದಾರೆ. ಇನ್ನೂ ಸಮಾಜಸೇವೆ ಮಾಡುವಂಥ ಶಕ್ತಿ ಮತ್ತು ಆರೋಗ್ಯವನ್ನು ದೇವರು ಕರುಣಿಸಲಿ ಎಂದರು.</p>.<p>ಇದೇ ಸಂದರ್ಭದಲ್ಲಿ ರೆಡ್ಕ್ರಾಸ್ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಸಿದ್ದೇಶ್ವರ ಅವರ 50ಕ್ಕೂ ಹೆಚ್ಚು ಅಭಿಮಾನಿಗಳು ರಕ್ತದಾನ ಮಾಡಿದರು.</p>.<p>ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಬಸವರಾಜ ನಾಯ್ಕ, ಗಾಯತ್ರಿ ಸಿದ್ದೇಶ್ವರ, ಮೇಯರ್ ಸುಧಾ ಜಯರುದ್ರೇಶ್, `ದೂಡಾ~ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಮೇಯರ್ಗಳಾದ ಎಂ.ಎಸ್. ವಿಠ್ಠಲ್, ಎಚ್.ಎನ್. ಗುರುನಾಥ್, ರೆಡ್ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಚಂದ್ರಪ್ಪ, ಕರಿಬಸವರಾಜು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ಹುಟ್ಟಿದ ಮನುಷ್ಯನಿಗೆ ಹೆಸರು ಇರುವುದಿಲ್ಲ. ನಿಷ್ಕಳಂಕ ಮನುಷ್ಯನಿಗೆ ನಿರ್ದಿಷ್ಟ ಹೆಸರಿಟ್ಟು ನಾಗರಿಕತೆ ರೂಢಿಸಬೇಕಾಗುತ್ತದೆ. ನಾಗರಿಕತೆ ಪಡೆದ ಮನುಷ್ಯ ಸತ್ತ ನಂತರವೂ ಹೆಸರು ಉಳಿಯುವಂತಹ ಪುಣ್ಯ ಕಾರ್ಯಗಳನ್ನು ಮಾಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ನಗರದ ದೇವರಾಜ ಅರಸು ಬಡಾವಣೆಯಲ್ಲಿನ ಅಂಧ ಹೆಣ್ಣು ಮಕ್ಕಳ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರ 61ನೇ ಹುಟ್ಟುಹಬ್ಬ ಆಚರಣೆ ಸಮಾರಂಭದ ನೇತೃತ್ವದ ವಹಿಸಿ ಅವರು ಮಾತನಾಡಿದರು.</p>.<p>ಜನನ-ಮರಣ-ಜೀವನ ಎಂಬ ಮೂರಕ್ಷರಗಳಲ್ಲಿ ಎಡರು- ತೊಡರುಗಳು ಅಧಿಕವಾಗಿರುತ್ತದೆ. ಎಲ್ಲವನ್ನು ಮೆಟ್ಟಿನಿಲ್ಲಲು ಮಹಾತ್ಮರಾದ ಬಸವಣ್ಣ, ಅಲ್ಲಮಪ್ರಭು, ಮಹಾತ್ಮ ಗಾಂಧಿಯಂತಹ ಮಹಾನ್ ವ್ಯಕ್ತಿಗಳ ಜೀವನಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸ್ಥಿತಿವಂತರು ಇಂದು ವಿಲಾಸ ಜೀವನದಲ್ಲಿ ಮೈಮರೆಯದೇ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿಸಿ ಕೊಳ್ಳುವುದರಿಂದ ದೇವರ ಅನುಗ್ರಹ ಪಡೆಯಬಹುದು ಎಂದರು.</p>.<p>ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಸಂಸತ್ ಸದಸ್ಯ ಸಿದ್ದೇಶ್ವರ ಅವರು ಕ್ಷೇತ್ರದಲ್ಲಿ ಸಾಕಷ್ಟು ಪರಿಶ್ರಮಪಟ್ಟು ದುಡಿದಿದ್ದಾರೆ. ಇನ್ನೂ ಸಮಾಜಸೇವೆ ಮಾಡುವಂಥ ಶಕ್ತಿ ಮತ್ತು ಆರೋಗ್ಯವನ್ನು ದೇವರು ಕರುಣಿಸಲಿ ಎಂದರು.</p>.<p>ಇದೇ ಸಂದರ್ಭದಲ್ಲಿ ರೆಡ್ಕ್ರಾಸ್ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಸಿದ್ದೇಶ್ವರ ಅವರ 50ಕ್ಕೂ ಹೆಚ್ಚು ಅಭಿಮಾನಿಗಳು ರಕ್ತದಾನ ಮಾಡಿದರು.</p>.<p>ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಬಸವರಾಜ ನಾಯ್ಕ, ಗಾಯತ್ರಿ ಸಿದ್ದೇಶ್ವರ, ಮೇಯರ್ ಸುಧಾ ಜಯರುದ್ರೇಶ್, `ದೂಡಾ~ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಮೇಯರ್ಗಳಾದ ಎಂ.ಎಸ್. ವಿಠ್ಠಲ್, ಎಚ್.ಎನ್. ಗುರುನಾಥ್, ರೆಡ್ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಚಂದ್ರಪ್ಪ, ಕರಿಬಸವರಾಜು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>