<p>ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಪಡಿತರ ಚೀಟಿ ಸಮಸ್ಯೆಯನ್ನು ದಶಕಗಳಾದರೂ ಪರಿಹರಿಸಲಾಗಿಲ್ಲ. ಆದರೆ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಕೇಂದ್ರಸರ್ಕಾರದ ವ್ಯಾಪ್ತಿಗೆ ಬರುವ ಅಡುಗೆ ಅನಿಲ ಸಂಪರ್ಕಗಳನ್ನು ಸರಿಪಡಿಸುವ ಕಾತರ! <br /> <br /> ಅನಿಲ ಸಂಪರ್ಕ ಪಡೆದವರ ದಾಖಲೆಗಳ ಪೂರೈಕೆಯಲ್ಲಿನ ಸಂಕೀರ್ಣ ಸಮಸ್ಯೆಗಳ ಅರಿವಿರುವ ಮುಖ್ಯಮಂತ್ರಿಗಳು ಯಾವುದೇ ಅನಿಲ ಸಂಪರ್ಕ ರದ್ದುಗೊಳಿಸದಂತೆ ಆದೇಶಿಸಿದ್ದರೂ ಇದೀಗ ವಿತರಕರು ಸಿಲಿಂಡರ್ಗಳನ್ನು ಪೂರೈಸುತ್ತಿಲ್ಲ. <br /> <br /> ರಾಜ್ಯವು ವಿವಿಧ ಕಾರಣಗಳಿಗೆ ಈಗಾಗಲೇ ವಿದ್ಯುತ್ ಕೊರತೆಯಿಂದ ಬಳಲುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರ ಕಲ್ಲಿದ್ದಲು ಕೊಡದಿರುವುದೇ ಕಾರಣವೆಂದು ಕಿಡಿ ಕಾರುತ್ತಿರುವ ಕರಂದ್ಲಾಜೆಯವರು ಹಾಗೂ ಹೀಗೂ ಸಮರ್ಪಕವಾಗಿ ಅಡುಗೆ ಅನಿಲ ಪೂರೈಸುತ್ತಿರುವ ಕೇಂದ್ರದ ಕೆಲಸದಲ್ಲೇಕೆ ಕೈಹಾಕಬಯಸುತ್ತಿದ್ದಾರೆಯೋ ತಿಳಿಯದು. <br /> <br /> `ಗಂಡ ಹೆಂಡಿರ ಜಗಳದ ಮಧ್ಯೆ ಕೂಸು ಬಡವಾಯಿತು~ ಎನ್ನುವಂತೆ ಈ ಸಚಿವೆಯ ಪ್ರತಿಷ್ಠೆಗಾಗಿ ಸಾಮಾನ್ಯ ನಾಗರಿಕರು ಪರದಾಡುವಂತಾಗಿದೆ. ಬಹುತೇಕ ಜನರು ಅನಿಲ ಒಲೆ ಬಿಟ್ಟು ಬದುಕಲಾಗದ ಸ್ಥಿತಿಗೆ ತಲುಪಿದ್ದಾರೆ. ಪರ್ಯಾಯ ಇಂಧನ ಮೂಲಗಳೂ ದುರ್ಲಭ. <br /> <br /> ಬೆಲೆಯೇರಿಕೆಯ ಬಿಸಿಯಲ್ಲಿ ಬವಳಿ ಬಂದಂತಾಗಿರುವ ನಾಗರಿಕರಿಗೆ ತುತ್ತು ಅನ್ನ ಬೇಯಿಸಿಕೊಳ್ಳಲೂ ತತ್ವಾರ ಮಾಡುತ್ತಿರುವ ಸಚಿವರ ಕ್ರಮ ತರವಲ್ಲ. ಸಚಿವೆಯವರು ಮುಖ್ಯಮಂತ್ರಿಗಳ ಮಾತಿಗೆ ಮನ್ನಣೆ ನೀಡಿ ಜನಸಾಮಾನ್ಯರಿಗೆ ಉಪಕರಿಸಲಿ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಪಡಿತರ ಚೀಟಿ ಸಮಸ್ಯೆಯನ್ನು ದಶಕಗಳಾದರೂ ಪರಿಹರಿಸಲಾಗಿಲ್ಲ. ಆದರೆ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಕೇಂದ್ರಸರ್ಕಾರದ ವ್ಯಾಪ್ತಿಗೆ ಬರುವ ಅಡುಗೆ ಅನಿಲ ಸಂಪರ್ಕಗಳನ್ನು ಸರಿಪಡಿಸುವ ಕಾತರ! <br /> <br /> ಅನಿಲ ಸಂಪರ್ಕ ಪಡೆದವರ ದಾಖಲೆಗಳ ಪೂರೈಕೆಯಲ್ಲಿನ ಸಂಕೀರ್ಣ ಸಮಸ್ಯೆಗಳ ಅರಿವಿರುವ ಮುಖ್ಯಮಂತ್ರಿಗಳು ಯಾವುದೇ ಅನಿಲ ಸಂಪರ್ಕ ರದ್ದುಗೊಳಿಸದಂತೆ ಆದೇಶಿಸಿದ್ದರೂ ಇದೀಗ ವಿತರಕರು ಸಿಲಿಂಡರ್ಗಳನ್ನು ಪೂರೈಸುತ್ತಿಲ್ಲ. <br /> <br /> ರಾಜ್ಯವು ವಿವಿಧ ಕಾರಣಗಳಿಗೆ ಈಗಾಗಲೇ ವಿದ್ಯುತ್ ಕೊರತೆಯಿಂದ ಬಳಲುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರ ಕಲ್ಲಿದ್ದಲು ಕೊಡದಿರುವುದೇ ಕಾರಣವೆಂದು ಕಿಡಿ ಕಾರುತ್ತಿರುವ ಕರಂದ್ಲಾಜೆಯವರು ಹಾಗೂ ಹೀಗೂ ಸಮರ್ಪಕವಾಗಿ ಅಡುಗೆ ಅನಿಲ ಪೂರೈಸುತ್ತಿರುವ ಕೇಂದ್ರದ ಕೆಲಸದಲ್ಲೇಕೆ ಕೈಹಾಕಬಯಸುತ್ತಿದ್ದಾರೆಯೋ ತಿಳಿಯದು. <br /> <br /> `ಗಂಡ ಹೆಂಡಿರ ಜಗಳದ ಮಧ್ಯೆ ಕೂಸು ಬಡವಾಯಿತು~ ಎನ್ನುವಂತೆ ಈ ಸಚಿವೆಯ ಪ್ರತಿಷ್ಠೆಗಾಗಿ ಸಾಮಾನ್ಯ ನಾಗರಿಕರು ಪರದಾಡುವಂತಾಗಿದೆ. ಬಹುತೇಕ ಜನರು ಅನಿಲ ಒಲೆ ಬಿಟ್ಟು ಬದುಕಲಾಗದ ಸ್ಥಿತಿಗೆ ತಲುಪಿದ್ದಾರೆ. ಪರ್ಯಾಯ ಇಂಧನ ಮೂಲಗಳೂ ದುರ್ಲಭ. <br /> <br /> ಬೆಲೆಯೇರಿಕೆಯ ಬಿಸಿಯಲ್ಲಿ ಬವಳಿ ಬಂದಂತಾಗಿರುವ ನಾಗರಿಕರಿಗೆ ತುತ್ತು ಅನ್ನ ಬೇಯಿಸಿಕೊಳ್ಳಲೂ ತತ್ವಾರ ಮಾಡುತ್ತಿರುವ ಸಚಿವರ ಕ್ರಮ ತರವಲ್ಲ. ಸಚಿವೆಯವರು ಮುಖ್ಯಮಂತ್ರಿಗಳ ಮಾತಿಗೆ ಮನ್ನಣೆ ನೀಡಿ ಜನಸಾಮಾನ್ಯರಿಗೆ ಉಪಕರಿಸಲಿ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>