<p><strong>ಬೆಂಗಳೂರು:</strong> ಆಂಬುಲೆನ್ಸ್ಗಳು ಹಾಗೂ ಅಗ್ನಿಶಾಮಕ ವಾಹನಗಳಿಗೆ ಸಿಗ್ನಲ್ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವ ಜಿಪಿಎಸ್ ವ್ಯವಸ್ಥೆಯನ್ನು ನಗರದ ಎಂ.ಎಸ್.ರಾಮಯ್ಯ ಕಾಲೇಜು ಜಂಕ್ಷನ್ ಮತ್ತು ಶೇಷಾದ್ರಿಪುರ ಸಿಗ್ನಲ್ನಲ್ಲಿ ಅಳವಡಿಸಲಾಗಿದೆ.<br /> <br /> ನಾಗರಿಕರ ಸುರಕ್ಷತೆ ದೃಷ್ಟಿಯಿಂದ ವಾಹನ ದಟ್ಟಣೆ ಹೆಚ್ಚಿರುವ ಸಿಗ್ನಲ್ಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲು ಅಗ್ನಿಶಾಮಕ ಇಲಾಖೆ ಹಾಗೂ ಆರೋಗ್ಯ ಇಲಾಖೆ ನಿರ್ಧರಿಸಿದ್ದು, ಇದರ ಭಾಗವಾಗಿ ಸದ್ಯ ಎರಡು ಜಂಕ್ಷನ್ಗಳಲ್ಲಿ ಜಿಪಿಎಸ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇನ್ನು ಮುಂದೆ ಈ ಸಿಗ್ನಲ್ಗಳ ಮೂಲಕ ಸಾಗುವ ತುರ್ತು ವಾಹನಗಳು ಸಿಗ್ನಲ್ಗಾಗಿ ಕಾಯಬೇಕಾದ ಅಗತ್ಯವಿಲ್ಲ.<br /> <br /> ಜಿಪಿಎಸ್ ನೆರವಿನಿಂದ ತುರ್ತು ವಾಹನಗಳು ಒಂದು ಕಿ.ಮೀ ದೂರದಲ್ಲಿ ಬರುವಾಗಲೇ ಸಿಗ್ನಲ್ಗಳಲ್ಲಿ ಸ್ವಯಂಚಾಲಿತವಾಗಿ ದಾರಿ ಮಾಡಿಕೊಡುವ ಈ ಯೋಜನೆಯನ್ನು ಅಮೆರಿಕಾ ಮೂಲದ ‘ವಿಜಿಲೆಂಟ್ ಟೆಕ್ನಾಲಜಿ ಇಂಡಿಯಾ’ ಕಂಪೆನಿ ಅಭಿವೃದ್ಧಿಪಡಿಸಿದೆ. ಇದನ್ನು ಕಳೆದ ತಿಂಗಳು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಅದು ಯಶಸ್ವಿಯಾದ ಹಿನ್ನೆಲೆಯಲ್ಲಿ ಸರ್ಕಾರದ ಅನುಮತಿ ಮೇರೆಗೆ ನಗರದ ಪ್ರಮುಖ ಜಂಕ್ಷನ್ಗಳಲ್ಲಿ ಅಳವಡಿಸಲಾಗುವುದುೆ’ ಎಂದು ಸಂಚಾರ ವಿಭಾಗದ ಎಸಿಪಿ ಕನಕಕುಮಾರ್ ತಿಳಿಸಿದರು.<br /> <br /> ತುರ್ತು ವಾಹನದಲ್ಲಿ ಒಂದು ಜಿಪಿಎಸ್ ಆಧಾರಿತ ಟವರ್ ಹಾಗೂ ಸಿಗ್ನಲ್ಗಳಲ್ಲಿ ಒಂದು ಸಣ್ಣ ಟವರ್ ಅಳವಡಿಸಲಾಗಿರುತ್ತದೆ. ಇವುಗಳ ನಡುವೆ ಸಂಪರ್ಕ ಒದಗಿಸಲು ಜಂಕ್ಷನ್ ಬಳಿ ಯೂನಿಟ್ ಇದೆ. ತುರ್ತು ವಾಹನಗಳನ್ನು ಚಾಲನೆ ಮಾಡಿಕೊಂಡು ಬರುವಾಗ ಟವರ್ ಪೆಟ್ಟಿಗೆಯಲ್ಲಿರುವ ಸ್ವಿಚ್ ಹೊತ್ತಿಸಿದರೆ, ಆ ವಾಹನ ಇರುವ ಸ್ಥಳ, ಎಷ್ಟು ವೇಗದಲ್ಲಿ ಚಲಿಸುತ್ತಿದೆ, ಸಿಗ್ನಲ್ಗೆ ಬರಲು ಎಷ್ಟು ಕಾಲಾವಕಾಶ ಬೇಕಾಗುತ್ತದೆ ಸೇರಿದಂತೆ ಮತ್ತಿತರ ಮಾಹಿತಿಗಳು ಯೂನಿಟ್ನಲ್ಲಿ ಸಂಗ್ರಹವಾಗಿ ಆ ವಾಹನ ಸಿಗ್ನಲ್ಗೆ ಸಮೀಪಿಸುತ್ತಿದ್ದಂತೆ ಸ್ವಯಂಚಾಲಿತವಾಗಿ ಹಸಿರು ದೀಪ ಬೀಳುತ್ತದೆ’ ಎಂದು ವಿಜಿಲೆಂಟ್ ಟೆಕ್ನಾಲಜಿ ಇಂಡಿಯಾದ ನಿರ್ದೇಶಕ ಜಿ.ಎಲ್.ಗಣೇಶ್ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಆಂಬುಲೆನ್ಸ್ಗಳು ಹಾಗೂ ಅಗ್ನಿಶಾಮಕ ವಾಹನಗಳಿಗೆ ಸಿಗ್ನಲ್ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವ ಜಿಪಿಎಸ್ ವ್ಯವಸ್ಥೆಯನ್ನು ನಗರದ ಎಂ.ಎಸ್.ರಾಮಯ್ಯ ಕಾಲೇಜು ಜಂಕ್ಷನ್ ಮತ್ತು ಶೇಷಾದ್ರಿಪುರ ಸಿಗ್ನಲ್ನಲ್ಲಿ ಅಳವಡಿಸಲಾಗಿದೆ.<br /> <br /> ನಾಗರಿಕರ ಸುರಕ್ಷತೆ ದೃಷ್ಟಿಯಿಂದ ವಾಹನ ದಟ್ಟಣೆ ಹೆಚ್ಚಿರುವ ಸಿಗ್ನಲ್ಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲು ಅಗ್ನಿಶಾಮಕ ಇಲಾಖೆ ಹಾಗೂ ಆರೋಗ್ಯ ಇಲಾಖೆ ನಿರ್ಧರಿಸಿದ್ದು, ಇದರ ಭಾಗವಾಗಿ ಸದ್ಯ ಎರಡು ಜಂಕ್ಷನ್ಗಳಲ್ಲಿ ಜಿಪಿಎಸ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇನ್ನು ಮುಂದೆ ಈ ಸಿಗ್ನಲ್ಗಳ ಮೂಲಕ ಸಾಗುವ ತುರ್ತು ವಾಹನಗಳು ಸಿಗ್ನಲ್ಗಾಗಿ ಕಾಯಬೇಕಾದ ಅಗತ್ಯವಿಲ್ಲ.<br /> <br /> ಜಿಪಿಎಸ್ ನೆರವಿನಿಂದ ತುರ್ತು ವಾಹನಗಳು ಒಂದು ಕಿ.ಮೀ ದೂರದಲ್ಲಿ ಬರುವಾಗಲೇ ಸಿಗ್ನಲ್ಗಳಲ್ಲಿ ಸ್ವಯಂಚಾಲಿತವಾಗಿ ದಾರಿ ಮಾಡಿಕೊಡುವ ಈ ಯೋಜನೆಯನ್ನು ಅಮೆರಿಕಾ ಮೂಲದ ‘ವಿಜಿಲೆಂಟ್ ಟೆಕ್ನಾಲಜಿ ಇಂಡಿಯಾ’ ಕಂಪೆನಿ ಅಭಿವೃದ್ಧಿಪಡಿಸಿದೆ. ಇದನ್ನು ಕಳೆದ ತಿಂಗಳು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಅದು ಯಶಸ್ವಿಯಾದ ಹಿನ್ನೆಲೆಯಲ್ಲಿ ಸರ್ಕಾರದ ಅನುಮತಿ ಮೇರೆಗೆ ನಗರದ ಪ್ರಮುಖ ಜಂಕ್ಷನ್ಗಳಲ್ಲಿ ಅಳವಡಿಸಲಾಗುವುದುೆ’ ಎಂದು ಸಂಚಾರ ವಿಭಾಗದ ಎಸಿಪಿ ಕನಕಕುಮಾರ್ ತಿಳಿಸಿದರು.<br /> <br /> ತುರ್ತು ವಾಹನದಲ್ಲಿ ಒಂದು ಜಿಪಿಎಸ್ ಆಧಾರಿತ ಟವರ್ ಹಾಗೂ ಸಿಗ್ನಲ್ಗಳಲ್ಲಿ ಒಂದು ಸಣ್ಣ ಟವರ್ ಅಳವಡಿಸಲಾಗಿರುತ್ತದೆ. ಇವುಗಳ ನಡುವೆ ಸಂಪರ್ಕ ಒದಗಿಸಲು ಜಂಕ್ಷನ್ ಬಳಿ ಯೂನಿಟ್ ಇದೆ. ತುರ್ತು ವಾಹನಗಳನ್ನು ಚಾಲನೆ ಮಾಡಿಕೊಂಡು ಬರುವಾಗ ಟವರ್ ಪೆಟ್ಟಿಗೆಯಲ್ಲಿರುವ ಸ್ವಿಚ್ ಹೊತ್ತಿಸಿದರೆ, ಆ ವಾಹನ ಇರುವ ಸ್ಥಳ, ಎಷ್ಟು ವೇಗದಲ್ಲಿ ಚಲಿಸುತ್ತಿದೆ, ಸಿಗ್ನಲ್ಗೆ ಬರಲು ಎಷ್ಟು ಕಾಲಾವಕಾಶ ಬೇಕಾಗುತ್ತದೆ ಸೇರಿದಂತೆ ಮತ್ತಿತರ ಮಾಹಿತಿಗಳು ಯೂನಿಟ್ನಲ್ಲಿ ಸಂಗ್ರಹವಾಗಿ ಆ ವಾಹನ ಸಿಗ್ನಲ್ಗೆ ಸಮೀಪಿಸುತ್ತಿದ್ದಂತೆ ಸ್ವಯಂಚಾಲಿತವಾಗಿ ಹಸಿರು ದೀಪ ಬೀಳುತ್ತದೆ’ ಎಂದು ವಿಜಿಲೆಂಟ್ ಟೆಕ್ನಾಲಜಿ ಇಂಡಿಯಾದ ನಿರ್ದೇಶಕ ಜಿ.ಎಲ್.ಗಣೇಶ್ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>