<p><strong>ಬೀದರ್:</strong> ಕೆಳ ಜಾತಿಯವರನ್ನು ಮಠಾಧೀಶರನ್ನಾಗಿ ಮಾಡಿದ ಶ್ರೇಯಸ್ಸು ಸಿದ್ಧಾರೂಢರಿಗೆ ಸಲ್ಲುತ್ತದೆ ಎಂದು ಖ್ಯಾತ ಪ್ರವಚನಕಾರ ಇಬ್ರಾಹಿಂ ಸುತಾರ್ ನುಡಿದರು.<br /> <br /> ಸಿದ್ಧಾರೂಢರ 175ನೇ ಜಯಂತಿ ಉತ್ಸವ ಹಾಗೂ ಗುರುನಾಥಾರೂಢರ ಜನ್ಮ ಶತಮಾನೋತ್ಸವ ನಿಮಿತ್ತ ನಗರದ ಸಿದ್ಧಾರೂಢ ಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸರ್ವಧರ್ಮ ಶಾಂತಿ ಸಮ್ಮೇಳನ ಹಾಗೂ ಜ್ಯೋತಿಯಾತ್ರೆಯ ಸ್ವಾಗತ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.<br /> <br /> ಸಿದ್ಧಾರೂಢರು, ಜಾತಿ, ಭೇದವಿಲ್ಲದೇ ಸೂಕ್ತರನ್ನು ಮಠಮಾನ್ಯಗಳಿಗೆ ನೇಮಕ ಮಾಡಿದ್ದರು ಎಂದು ಬಣ್ಣಿಸಿದರು.<br /> ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶ್ರಮಿಸಿದ್ದರು. ವಿದ್ಯೆಯೇ ಉಪನಿಷತ್ ಎಂದು ಸಾರಿದ್ದರು. 15ನೇ ಶತಮಾನದ ನಿಜಗುಣ ಶಿವಯೋಗಿಗಳ ಷಟ್ಶಾಸ್ತ್ರ ಗ್ರಂಥವನ್ನು ಪ್ರಚಾರಕ್ಕೆ ತಂದದ್ದೇ ಅವರು ಎಂದು ಹೇಳಿದರು. <br /> <br /> ಸಿದ್ಧಾರೂಢರು ದೇವತಾ ಪುರುಷರಾಗಿದ್ದರು ಎಂದು ಸಾನ್ನಿಧ್ಯ ವಹಿಸಿದ್ದ ಶಿವಕುಮಾರ ಸ್ವಾಮೀಜಿ ಹೇಳಿದರು.<br /> `ಶರಣರ ಮಹಿಮೆ ಮರಣದ ನಂತರ ಕಾಣು~ ಎನ್ನುವಂತೆ ಮಹಾತ್ಮರ ಜೀವಿತಾವಧಿಯಲ್ಲಿ ಅವರನ್ನು ಬೈದವರೇ ಹೆಚ್ಚು. ರಾಷ್ಟ್ರಪಿತ ಎಂದು ಕರೆಯಲಾಗುವ ಮಹಾತ್ಮಗಾಂಧೀಜಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ಸಿದ್ಧಾರೂಢರು ಜೀವಂತರಾಗಿದ್ದಾಗಲೂ ಕಲ್ಲಿನಿಂದ ಹೊಡೆದು ಅವರಿಗೆ ಹಿಂಸೆ ನೀಡಲಾಯಿತು ಎಂದು ತಿಳಿಸಿದರು.<br /> <br /> ಗುರುವನ್ನು ನರ ಎಂದವನಿಗೆ ನರಕ ತಪ್ಪದು. ದೇವರ ನಾಮ ಸ್ಮರಣೆ ಮಾಡುವವನೇ ದೊಡ್ಡವ ಎಂದು ಬಣ್ಣಿಸಿದರು. <br /> <br /> ಸಿದ್ಧಾರೂಢರ ಜಯಂತಿ ಮಹೋತ್ಸವ ಕರ್ನಾಟಕಕ್ಕೆ ಮಾತ್ರ ಸಿಮೀತವಾಗದೇ ಇಡೀ ದೇಶದಲ್ಲಿ ಆಚರಿಸುವಂತಾಗಬೇಕು ಎಂದು ಪ್ರಮುಖರಾದ ಮಹೇಂದ್ರ ಸಿಂಘಿ ಹೇಳಿದರು.<br /> ಸಿದ್ಧಾರೂಢರು ಚಳಕಾಪುರದಲ್ಲಿ ಜನಿಸಿದ್ದು ಜಿಲ್ಲೆಯ ಜನರ ಭಾಗ್ಯ ಎಂದು ಶಾಸಕ ಈಶ್ವರ ಖಂಡ್ರೆ ವರ್ಣಿಸಿದರು.<br /> <br /> ಸಿದ್ಧಾರೂಢರ 175ನೇ ಜಯಂತ್ಯುತ್ಸವ ಪ್ರಯುಕ್ತ ಅವರ ಜನ್ಮಸ್ಥಳ ಚಳಕಾಪುರದಿಂದ ಹುಬ್ಬಳ್ಳಿಯವರೆಗೆ ಶಾಂತಿ ಜ್ಯೋತಿಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶಾಮಾನಂದ ಪೂಜಾರಿ ತಿಳಿಸಿದರು. ಸಿದ್ಧಾರೂಢರು ಜಾತ್ಯತೀತ ಗುರುಗಳಾಗಿದ್ದರು ಎಂದರು.<br /> <br /> ಚನ್ನಬಸಪ್ಪ ಹಾಲಹಳ್ಳಿ ಸ್ವಾಗತಿಸಿದರು. ಗಣೇಶಾನಂದ ಮಹಾರಾಜ ನಿರೂಪಿಸಿದರು. ಇದಕ್ಕೂ ಮುನ್ನ ಸಿದ್ಧಾರೂಢ ಜ್ಯೋತಿಯಾತ್ರೆಗೆ ಭವ್ಯ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.</p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಕೆಳ ಜಾತಿಯವರನ್ನು ಮಠಾಧೀಶರನ್ನಾಗಿ ಮಾಡಿದ ಶ್ರೇಯಸ್ಸು ಸಿದ್ಧಾರೂಢರಿಗೆ ಸಲ್ಲುತ್ತದೆ ಎಂದು ಖ್ಯಾತ ಪ್ರವಚನಕಾರ ಇಬ್ರಾಹಿಂ ಸುತಾರ್ ನುಡಿದರು.<br /> <br /> ಸಿದ್ಧಾರೂಢರ 175ನೇ ಜಯಂತಿ ಉತ್ಸವ ಹಾಗೂ ಗುರುನಾಥಾರೂಢರ ಜನ್ಮ ಶತಮಾನೋತ್ಸವ ನಿಮಿತ್ತ ನಗರದ ಸಿದ್ಧಾರೂಢ ಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸರ್ವಧರ್ಮ ಶಾಂತಿ ಸಮ್ಮೇಳನ ಹಾಗೂ ಜ್ಯೋತಿಯಾತ್ರೆಯ ಸ್ವಾಗತ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.<br /> <br /> ಸಿದ್ಧಾರೂಢರು, ಜಾತಿ, ಭೇದವಿಲ್ಲದೇ ಸೂಕ್ತರನ್ನು ಮಠಮಾನ್ಯಗಳಿಗೆ ನೇಮಕ ಮಾಡಿದ್ದರು ಎಂದು ಬಣ್ಣಿಸಿದರು.<br /> ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶ್ರಮಿಸಿದ್ದರು. ವಿದ್ಯೆಯೇ ಉಪನಿಷತ್ ಎಂದು ಸಾರಿದ್ದರು. 15ನೇ ಶತಮಾನದ ನಿಜಗುಣ ಶಿವಯೋಗಿಗಳ ಷಟ್ಶಾಸ್ತ್ರ ಗ್ರಂಥವನ್ನು ಪ್ರಚಾರಕ್ಕೆ ತಂದದ್ದೇ ಅವರು ಎಂದು ಹೇಳಿದರು. <br /> <br /> ಸಿದ್ಧಾರೂಢರು ದೇವತಾ ಪುರುಷರಾಗಿದ್ದರು ಎಂದು ಸಾನ್ನಿಧ್ಯ ವಹಿಸಿದ್ದ ಶಿವಕುಮಾರ ಸ್ವಾಮೀಜಿ ಹೇಳಿದರು.<br /> `ಶರಣರ ಮಹಿಮೆ ಮರಣದ ನಂತರ ಕಾಣು~ ಎನ್ನುವಂತೆ ಮಹಾತ್ಮರ ಜೀವಿತಾವಧಿಯಲ್ಲಿ ಅವರನ್ನು ಬೈದವರೇ ಹೆಚ್ಚು. ರಾಷ್ಟ್ರಪಿತ ಎಂದು ಕರೆಯಲಾಗುವ ಮಹಾತ್ಮಗಾಂಧೀಜಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ಸಿದ್ಧಾರೂಢರು ಜೀವಂತರಾಗಿದ್ದಾಗಲೂ ಕಲ್ಲಿನಿಂದ ಹೊಡೆದು ಅವರಿಗೆ ಹಿಂಸೆ ನೀಡಲಾಯಿತು ಎಂದು ತಿಳಿಸಿದರು.<br /> <br /> ಗುರುವನ್ನು ನರ ಎಂದವನಿಗೆ ನರಕ ತಪ್ಪದು. ದೇವರ ನಾಮ ಸ್ಮರಣೆ ಮಾಡುವವನೇ ದೊಡ್ಡವ ಎಂದು ಬಣ್ಣಿಸಿದರು. <br /> <br /> ಸಿದ್ಧಾರೂಢರ ಜಯಂತಿ ಮಹೋತ್ಸವ ಕರ್ನಾಟಕಕ್ಕೆ ಮಾತ್ರ ಸಿಮೀತವಾಗದೇ ಇಡೀ ದೇಶದಲ್ಲಿ ಆಚರಿಸುವಂತಾಗಬೇಕು ಎಂದು ಪ್ರಮುಖರಾದ ಮಹೇಂದ್ರ ಸಿಂಘಿ ಹೇಳಿದರು.<br /> ಸಿದ್ಧಾರೂಢರು ಚಳಕಾಪುರದಲ್ಲಿ ಜನಿಸಿದ್ದು ಜಿಲ್ಲೆಯ ಜನರ ಭಾಗ್ಯ ಎಂದು ಶಾಸಕ ಈಶ್ವರ ಖಂಡ್ರೆ ವರ್ಣಿಸಿದರು.<br /> <br /> ಸಿದ್ಧಾರೂಢರ 175ನೇ ಜಯಂತ್ಯುತ್ಸವ ಪ್ರಯುಕ್ತ ಅವರ ಜನ್ಮಸ್ಥಳ ಚಳಕಾಪುರದಿಂದ ಹುಬ್ಬಳ್ಳಿಯವರೆಗೆ ಶಾಂತಿ ಜ್ಯೋತಿಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶಾಮಾನಂದ ಪೂಜಾರಿ ತಿಳಿಸಿದರು. ಸಿದ್ಧಾರೂಢರು ಜಾತ್ಯತೀತ ಗುರುಗಳಾಗಿದ್ದರು ಎಂದರು.<br /> <br /> ಚನ್ನಬಸಪ್ಪ ಹಾಲಹಳ್ಳಿ ಸ್ವಾಗತಿಸಿದರು. ಗಣೇಶಾನಂದ ಮಹಾರಾಜ ನಿರೂಪಿಸಿದರು. ಇದಕ್ಕೂ ಮುನ್ನ ಸಿದ್ಧಾರೂಢ ಜ್ಯೋತಿಯಾತ್ರೆಗೆ ಭವ್ಯ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.</p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>