<p><strong>ಕೋಲ್ಕತ್ತ (ಐಎಎನ್ಎಸ್):</strong> ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಎಡ ಪಂಥೀಯರ ನಡುವಿನ ರಾಜಕೀಯ ಸಮರ ದಿನೇ ದಿನೇ ರಂಗೇರುತ್ತಿದ್ದು, ಮಂಗಳವಾರ ನಡೆದ ಸಮಾರಂಭದಲ್ಲಿ ಸಚಿವರೊಬ್ಬರು `ಸಿಪಿಎಂ ದ್ವೇಷಿಸುವುದನ್ನು ಕಲಿಯಿರಿ~ ಎಂದು ತೃಣಮೂಲ ಕಾರ್ಯಕರ್ತರಿಗೆ ಬಹಿರಂಗ ಪಾಠ ಮಾಡಿದ್ದಾರೆ. <br /> <br /> `ಸಿಪಿಎಂ~ಗೆ ಸಾಮಾಜಿಕವಾಗಿ ಬಹಿಷ್ಕಾರ ಹಾಕಿ. ಆ ಪಕ್ಷದ ಕಾರ್ಯಕರ್ತರೊಂದಿಗೆ ಬೆರೆಯಬೇಡಿ. ಒಂದು ವೇಳೆ ಎಡ ಪಂಥೀಯರು ನಿಮ್ಮನ್ನು ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಆಹ್ವಾನಿಸಿದರೆ ಖಂಡಿತ ಅಲ್ಲಿಗೆ ಹೋಗಬೇಡಿ. ಅವರನ್ನು ನೀವು ಸಂಪೂರ್ಣ ಸಾಮಾಜಿಕವಾಗಿ ಬಹಿಷ್ಕರಿಸದಿದ್ದರೆ ಅವರು ಅಧಿಕಾರದಲ್ಲಿದ್ದಾಗ ಮಾಡಿದ ಅನ್ಯಾಯಕ್ಕೆ ಸೇಡು ತೀರಿಸಿಕೊಂಡಂತೆ ಆಗುವುದಿಲ್ಲ~ ಎಂದು ಆಹಾರ ಪೂರೈಕೆ ಸಚಿವ ಜ್ಯೋತಿಪ್ರಿಯ ಮುಲ್ಲಿಕ್ ಸಲಹೆ ನೀಡಿದ್ದಾರೆ.<br /> <br /> ಸಚಿವರ ಈ `ನೀತಿಪಾಠ~ ಇಲ್ಲಿಗೇ ನಿಂತಿಲ್ಲ. `ಕಮ್ಯುನಿಸ್ಟರೊಂದಿಗೆ ಊಟ ಮಾಡಬೇಡಿ, ಕುಳಿತುಕೊಳ್ಳಬೇಡಿ. ಅವರನ್ನು ದ್ವೇಷಿಸುವ ಮನೋಭಾವ ಬೆಳೆಸಿಕೊಳ್ಳಿ. ಅವರನ್ನು ದ್ವೇಷಿಸದ ಹೊರತು ಸೇಡು ತೀರಿಸಿಕೊಳ್ಳಲು ಆಗದು~ ಎಂದಿದ್ದಾರೆ. <br /> <br /> ತೀಕ್ಷ್ಣ ಪ್ರತಿಕ್ರಿಯೆ: `ಇದು ಸೈದ್ಧಾಂತಿಕ ನೆಲೆ ಇಲ್ಲದ ತೀರಾ ವೈಯಕ್ತಿಕ ದ್ವೇಷದ ಹೇಳಿಕೆ~ ಎಂದು ಸಿಪಿಎಂ ನೇತೃತ್ವದ ಎಡರಂಗ, ಸಚಿವರ ಹೇಳಿಕೆಗೆ ತೀಕ್ಷ್ಣವಾಗಿಪ್ರತಿಕ್ರಿಯಿಸಿದೆ. `ತೃಣಮೂಲ ಕಾಂಗ್ರೆಸ್ ಸಾಮಾಜಿಕ ಸಾಮರಸ್ಯ ಹಾಳು ಮಾಡಲು ಯತ್ನಿಸುತ್ತಿದೆ. ಆದರೆ, ಅದರ ಈ ಯತ್ನ ಯಶ ಕಾಣದು. <br /> <br /> ವೈಯಕ್ತಿಕ ದ್ವೇಷದ ಹೊರತು ಈ ಪಕ್ಷಕ್ಕೆ ಯಾವುದೇ ವಿಶಾಲ ಸೈದ್ಧಾಂತಿಕ ತಳಹದಿ ಇಲ್ಲ ಎನ್ನುವುದು ಈ ಹೇಳಿಕೆಯಿಂದ ಸಾಬೀತಾಗಿದೆ~ ಎಂದು ಸಿಪಿಎಂ ಕೇಂದ್ರ ಸಮಿತಿಯ ಮೊಹಮ್ಮದ್ ಸಲೀಂ ಆರೋಪಿಸಿದ್ದಾರೆ. <br /> ಕಾಂಗ್ರೆಸ್ ಕೂಡಾ ಸಚಿವರ ಈ ಹೇಳಿಕೆಯನ್ನು `ತೀರಾ ವಿಲಕ್ಷಣ ಮತ್ತುಬಾಲಿಶ~ ಎಂದು ಲೇವಡಿ ಮಾಡಿದೆ. <br /> <br /> ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿ ಮಾತ್ರ ಇಂಥ ಹೇಳಿಕೆ ನೀಡಬಲ್ಲ ಎಂದು ಕಾಂಗ್ರೆಸ್ ನಾಯಕ ಅಬ್ದುಲ್ ಮನ್ನಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಟೀಕೆಗಳು ಕೇಳಿಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಸಚಿವರು, ಮಾಧ್ಯಮಗಳು ತಮ್ಮ ಹೇಳಿಕೆಯನ್ನು ತಿರುಚಿವೆ ಎಂದು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ (ಐಎಎನ್ಎಸ್):</strong> ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಎಡ ಪಂಥೀಯರ ನಡುವಿನ ರಾಜಕೀಯ ಸಮರ ದಿನೇ ದಿನೇ ರಂಗೇರುತ್ತಿದ್ದು, ಮಂಗಳವಾರ ನಡೆದ ಸಮಾರಂಭದಲ್ಲಿ ಸಚಿವರೊಬ್ಬರು `ಸಿಪಿಎಂ ದ್ವೇಷಿಸುವುದನ್ನು ಕಲಿಯಿರಿ~ ಎಂದು ತೃಣಮೂಲ ಕಾರ್ಯಕರ್ತರಿಗೆ ಬಹಿರಂಗ ಪಾಠ ಮಾಡಿದ್ದಾರೆ. <br /> <br /> `ಸಿಪಿಎಂ~ಗೆ ಸಾಮಾಜಿಕವಾಗಿ ಬಹಿಷ್ಕಾರ ಹಾಕಿ. ಆ ಪಕ್ಷದ ಕಾರ್ಯಕರ್ತರೊಂದಿಗೆ ಬೆರೆಯಬೇಡಿ. ಒಂದು ವೇಳೆ ಎಡ ಪಂಥೀಯರು ನಿಮ್ಮನ್ನು ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಆಹ್ವಾನಿಸಿದರೆ ಖಂಡಿತ ಅಲ್ಲಿಗೆ ಹೋಗಬೇಡಿ. ಅವರನ್ನು ನೀವು ಸಂಪೂರ್ಣ ಸಾಮಾಜಿಕವಾಗಿ ಬಹಿಷ್ಕರಿಸದಿದ್ದರೆ ಅವರು ಅಧಿಕಾರದಲ್ಲಿದ್ದಾಗ ಮಾಡಿದ ಅನ್ಯಾಯಕ್ಕೆ ಸೇಡು ತೀರಿಸಿಕೊಂಡಂತೆ ಆಗುವುದಿಲ್ಲ~ ಎಂದು ಆಹಾರ ಪೂರೈಕೆ ಸಚಿವ ಜ್ಯೋತಿಪ್ರಿಯ ಮುಲ್ಲಿಕ್ ಸಲಹೆ ನೀಡಿದ್ದಾರೆ.<br /> <br /> ಸಚಿವರ ಈ `ನೀತಿಪಾಠ~ ಇಲ್ಲಿಗೇ ನಿಂತಿಲ್ಲ. `ಕಮ್ಯುನಿಸ್ಟರೊಂದಿಗೆ ಊಟ ಮಾಡಬೇಡಿ, ಕುಳಿತುಕೊಳ್ಳಬೇಡಿ. ಅವರನ್ನು ದ್ವೇಷಿಸುವ ಮನೋಭಾವ ಬೆಳೆಸಿಕೊಳ್ಳಿ. ಅವರನ್ನು ದ್ವೇಷಿಸದ ಹೊರತು ಸೇಡು ತೀರಿಸಿಕೊಳ್ಳಲು ಆಗದು~ ಎಂದಿದ್ದಾರೆ. <br /> <br /> ತೀಕ್ಷ್ಣ ಪ್ರತಿಕ್ರಿಯೆ: `ಇದು ಸೈದ್ಧಾಂತಿಕ ನೆಲೆ ಇಲ್ಲದ ತೀರಾ ವೈಯಕ್ತಿಕ ದ್ವೇಷದ ಹೇಳಿಕೆ~ ಎಂದು ಸಿಪಿಎಂ ನೇತೃತ್ವದ ಎಡರಂಗ, ಸಚಿವರ ಹೇಳಿಕೆಗೆ ತೀಕ್ಷ್ಣವಾಗಿಪ್ರತಿಕ್ರಿಯಿಸಿದೆ. `ತೃಣಮೂಲ ಕಾಂಗ್ರೆಸ್ ಸಾಮಾಜಿಕ ಸಾಮರಸ್ಯ ಹಾಳು ಮಾಡಲು ಯತ್ನಿಸುತ್ತಿದೆ. ಆದರೆ, ಅದರ ಈ ಯತ್ನ ಯಶ ಕಾಣದು. <br /> <br /> ವೈಯಕ್ತಿಕ ದ್ವೇಷದ ಹೊರತು ಈ ಪಕ್ಷಕ್ಕೆ ಯಾವುದೇ ವಿಶಾಲ ಸೈದ್ಧಾಂತಿಕ ತಳಹದಿ ಇಲ್ಲ ಎನ್ನುವುದು ಈ ಹೇಳಿಕೆಯಿಂದ ಸಾಬೀತಾಗಿದೆ~ ಎಂದು ಸಿಪಿಎಂ ಕೇಂದ್ರ ಸಮಿತಿಯ ಮೊಹಮ್ಮದ್ ಸಲೀಂ ಆರೋಪಿಸಿದ್ದಾರೆ. <br /> ಕಾಂಗ್ರೆಸ್ ಕೂಡಾ ಸಚಿವರ ಈ ಹೇಳಿಕೆಯನ್ನು `ತೀರಾ ವಿಲಕ್ಷಣ ಮತ್ತುಬಾಲಿಶ~ ಎಂದು ಲೇವಡಿ ಮಾಡಿದೆ. <br /> <br /> ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿ ಮಾತ್ರ ಇಂಥ ಹೇಳಿಕೆ ನೀಡಬಲ್ಲ ಎಂದು ಕಾಂಗ್ರೆಸ್ ನಾಯಕ ಅಬ್ದುಲ್ ಮನ್ನಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಟೀಕೆಗಳು ಕೇಳಿಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಸಚಿವರು, ಮಾಧ್ಯಮಗಳು ತಮ್ಮ ಹೇಳಿಕೆಯನ್ನು ತಿರುಚಿವೆ ಎಂದು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>