<p><strong>ಮಂಡ್ಯ:</strong> ಸಕ್ಕರೆ ನಗರ ಮಂಡ್ಯಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಜೆಟ್ನಲ್ಲಿ ಸಿಹಿಗಿಂತ ಕಹಿಯೇ ಜಾಸ್ತಿಯಾಗಿದೆ.<br /> ಬೆಂಗಳೂರು -ಮೈಸೂರು ಮಧ್ಯದಲ್ಲಿ ಬರುವ ಪಟ್ಟಣಗಳ ಸಂಚಾರ ಒತ್ತಡವನ್ನು ನಿವಾರಿಸಲು ಮೇಲು ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನಾ ವರದಿ ತಯಾರಿಸಲು ಬಜೆಟ್ನಲ್ಲಿ ಸಿದ್ದ ರಾಮಯ್ಯ ಅವರು ಸೂಚಿಸಿದ್ದಾರೆ.<br /> <br /> ಮಂಡ್ಯದಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಯೋಜನಾ ವರದಿಯನ್ನು ತಯಾರಿಸಲಾಗಿದೆ. ಅದನ್ನು ಮುಖ್ಯಮಂತ್ರಿಗಳಿಗೂ ನೀಡಿ, ಈ ಪ್ರಸ್ತಾವನೆಗೆ ಬಜೆಟ್ನಲ್ಲಿ ಅನುಮೋದನೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಕೋರಿದ್ದರು. ಆದರೆ, ಈಗ ಯೋಜನಾ ವರದಿಗೆ ತಯಾರಿಸಲು ಹೇಳಿರುವುದರಿಂದ ಜಾರಿ ಮತ್ತಷ್ಟು ವಿಳಂಬವಾಗಲಿದೆ.<br /> <br /> ಕಾವೇರಿ ಕೊಳ್ಳದ ಆಧುನೀಕರಣಕ್ಕೆ 500 ಕೋಟಿ ರೂಪಾಯಿ ಒದಗಿ ಸಿದ್ದಾರೆ. ಇದರಲ್ಲಿ ಪೂರಿಗಾಲಿ ಏತ ನೀರಾವರಿ, ರಾಜಪರಮೇಶ್ವರಿ, ರಾಮ ಸ್ವಾಮಿ ನಾಲೆಗಳು ಇರುವುದರಿಂದ ಇದರ ಲಾಭ ಜಿಲ್ಲೆಗೂ ಒಂದಷ್ಟು ಆಗಲಿದೆ.<br /> <br /> ವಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಹೊರಾವರಣ ಕೇಂದ್ರವನ್ನು ಮಂಡ್ಯದಲ್ಲಿ ಆರಂಭಿಸಲು 30 ಕೋಟಿ ರೂಪಾಯಿ ನೀಡಲಾಗಿದೆ. ಇದರಿಂದ ಮಂಡ್ಯ ಸೇರಿದಂತೆ ಈ ವಿಭಾಗದ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿ ನಿಯರಿಗೆ ಒಂದಷ್ಟು ನೆರವಾಗಬಹುದು. ಈಗಾಗಲೇ ಶೈಕ್ಷಣಿಕ ವರ್ಷ ಕೊನೆಯ ಘಟ್ಟದಲ್ಲಿರುವುದರಿಂದ ಮುಂದಿನ ವರ್ಷದಿಂದಲೇ ಆರಂಭ ಸಾಧ್ಯವಾಗಬಹುದು.<br /> <br /> ನನಸಾಗದ ಸ್ವತಂತ್ರ ವಿಶ್ವವಿದ್ಯಾಲಯ ಕನಸು: ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ದಶಕಗಳೇ ಕಳೆದಿವೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿ.ಸಿ. ಫಾರ್ಮ್ ಮಂಡ್ಯದಲ್ಲಿದೆ. ಸ್ವತಂತ್ರ ವಿಶ್ವವಿದ್ಯಾಲಯವಿಲ್ಲ. ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯ ಸಂದರ್ಭದಲ್ಲಿ ಮಂಡ್ಯದ ಹೆಸರು ಮುಂಚೂಣಿಯಲ್ಲಿತ್ತು. ಕೊನೆ ಗಳಿಗೆಯಲ್ಲಿ ಕೈತಪ್ಪಿತ್ತು. ಎರಡು ಕೇಂದ್ರಗಳ ಜೊತೆಗೆ ಮತ್ತೊಂದು ಬಂದಿದೆ.<br /> <br /> <strong>ಬೃಹತ್ ಮಂಡ್ಯ:</strong> ನಗರದ ಹೊರವಲಯದ ಗ್ರಾಮಗಳನ್ನೂ ಸೇರಿಸಿಕೊಂಡು ಬೃಹತ್ ಮಂಡ್ಯ ನಿರ್ಮಿಸುವ ಪ್ರಸ್ತಾಪ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಈ ಬಜೆಟ್ನಲ್ಲಿ ಚಾಲನೆ ನೀಡಲಾಗುವುದು ಎಂದೇ ನಿರೀಕ್ಷಿಸ ಲಾಗಿತ್ತು.<br /> <br /> ಜಿಲ್ಲೆಯ ರೈತರ ಜೀವನಾಡಿಗಳಾದ ಮೈಷುಗರ್, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನಃಶ್ಚೇತನ ಬಗೆಗೆ ಪ್ರಸ್ತಾಪವಿಲ್ಲ. ಯಾವುದೇ ಆರ್ಥಿಕ ನೆರವನ್ನೂ ಘೋಷಿಸಿಲ್ಲ.<br /> <br /> ಮಂಡ್ಯದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಾಣದ ಪ್ರಸ್ತಾವನೆಯನ್ನೂ ನೀಡಲಾಗಿತ್ತು. ಅದರ ಬಗೆಗೂ ಪ್ರಸ್ತಾಪವಾಗಿಲ್ಲ.</p>.<p><strong>ಪ್ರತಿಕ್ರಿಯೆ</strong><br /> ಎಸ್. ನಂಜುಂಡಸ್ವಾಮಿ ಅವರ ಅಮೃತ ಭೂಮಿಗೆ ಐದು ಕೋಟಿ ನೀಡಿರುವುದು. ಒಂದು ರೂಪಾಯಿಗೆ ಅಕ್ಕಿ ಕೊಡತ್ತಿರುವುದು ಸ್ವಾಗತಾರ್ಹ. ರೈತರ ಬೆಳೆದೆ ಧಾನ್ಯಗಳ ಬೆಲೆ ನಿಗದಿಯ ಬಗೆಗೆ ಇನ್ನಷ್ಟು ಸ್ಪಷ್ಟ ನಿರ್ಧಾರ ಕೈಗೊಳ್ಳಬೆಕಿತ್ತು. ಸಕ್ಕರೆ ಕಾರ್ಖಾನೆಗಳ ಪುನಃಶ್ಚೇತನಕ್ಕೆ ಮುಂದಾಗದಿರುವುದು ಸರಿಯಲ್ಲ.<br /> ಕೋಣಸಾಲೆ ನರಸರಾಜು<br /> ಜಿಲ್ಲಾ ಘಟಕದ ಅಧ್ಯಕ್ಷ ರೈತ ಸಂಘ</p>.<p>ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಒತ್ತು ನೀಡಿರುವುದು ಸ್ವಾಗತಾರ್ಹ. ಮಹಿಳಾ ವಿಶ್ವವಿದ್ಯಾಲಯದ ಹೊರಾವರಣ ಕೇಂದ್ರ ತೆರೆಯುತ್ತಿರುವುದು ಸ್ವಾಗತಾರ್ಹ.<br /> ಮೀರಾ ಶಿವಲಿಂಗಯ್ಯ<br /> ಅಧ್ಯಕ್ಷೆ, ಕಸಾಪ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ಸಕ್ಕರೆ ನಗರ ಮಂಡ್ಯಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಜೆಟ್ನಲ್ಲಿ ಸಿಹಿಗಿಂತ ಕಹಿಯೇ ಜಾಸ್ತಿಯಾಗಿದೆ.<br /> ಬೆಂಗಳೂರು -ಮೈಸೂರು ಮಧ್ಯದಲ್ಲಿ ಬರುವ ಪಟ್ಟಣಗಳ ಸಂಚಾರ ಒತ್ತಡವನ್ನು ನಿವಾರಿಸಲು ಮೇಲು ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನಾ ವರದಿ ತಯಾರಿಸಲು ಬಜೆಟ್ನಲ್ಲಿ ಸಿದ್ದ ರಾಮಯ್ಯ ಅವರು ಸೂಚಿಸಿದ್ದಾರೆ.<br /> <br /> ಮಂಡ್ಯದಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಯೋಜನಾ ವರದಿಯನ್ನು ತಯಾರಿಸಲಾಗಿದೆ. ಅದನ್ನು ಮುಖ್ಯಮಂತ್ರಿಗಳಿಗೂ ನೀಡಿ, ಈ ಪ್ರಸ್ತಾವನೆಗೆ ಬಜೆಟ್ನಲ್ಲಿ ಅನುಮೋದನೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಕೋರಿದ್ದರು. ಆದರೆ, ಈಗ ಯೋಜನಾ ವರದಿಗೆ ತಯಾರಿಸಲು ಹೇಳಿರುವುದರಿಂದ ಜಾರಿ ಮತ್ತಷ್ಟು ವಿಳಂಬವಾಗಲಿದೆ.<br /> <br /> ಕಾವೇರಿ ಕೊಳ್ಳದ ಆಧುನೀಕರಣಕ್ಕೆ 500 ಕೋಟಿ ರೂಪಾಯಿ ಒದಗಿ ಸಿದ್ದಾರೆ. ಇದರಲ್ಲಿ ಪೂರಿಗಾಲಿ ಏತ ನೀರಾವರಿ, ರಾಜಪರಮೇಶ್ವರಿ, ರಾಮ ಸ್ವಾಮಿ ನಾಲೆಗಳು ಇರುವುದರಿಂದ ಇದರ ಲಾಭ ಜಿಲ್ಲೆಗೂ ಒಂದಷ್ಟು ಆಗಲಿದೆ.<br /> <br /> ವಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಹೊರಾವರಣ ಕೇಂದ್ರವನ್ನು ಮಂಡ್ಯದಲ್ಲಿ ಆರಂಭಿಸಲು 30 ಕೋಟಿ ರೂಪಾಯಿ ನೀಡಲಾಗಿದೆ. ಇದರಿಂದ ಮಂಡ್ಯ ಸೇರಿದಂತೆ ಈ ವಿಭಾಗದ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿ ನಿಯರಿಗೆ ಒಂದಷ್ಟು ನೆರವಾಗಬಹುದು. ಈಗಾಗಲೇ ಶೈಕ್ಷಣಿಕ ವರ್ಷ ಕೊನೆಯ ಘಟ್ಟದಲ್ಲಿರುವುದರಿಂದ ಮುಂದಿನ ವರ್ಷದಿಂದಲೇ ಆರಂಭ ಸಾಧ್ಯವಾಗಬಹುದು.<br /> <br /> ನನಸಾಗದ ಸ್ವತಂತ್ರ ವಿಶ್ವವಿದ್ಯಾಲಯ ಕನಸು: ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ದಶಕಗಳೇ ಕಳೆದಿವೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿ.ಸಿ. ಫಾರ್ಮ್ ಮಂಡ್ಯದಲ್ಲಿದೆ. ಸ್ವತಂತ್ರ ವಿಶ್ವವಿದ್ಯಾಲಯವಿಲ್ಲ. ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯ ಸಂದರ್ಭದಲ್ಲಿ ಮಂಡ್ಯದ ಹೆಸರು ಮುಂಚೂಣಿಯಲ್ಲಿತ್ತು. ಕೊನೆ ಗಳಿಗೆಯಲ್ಲಿ ಕೈತಪ್ಪಿತ್ತು. ಎರಡು ಕೇಂದ್ರಗಳ ಜೊತೆಗೆ ಮತ್ತೊಂದು ಬಂದಿದೆ.<br /> <br /> <strong>ಬೃಹತ್ ಮಂಡ್ಯ:</strong> ನಗರದ ಹೊರವಲಯದ ಗ್ರಾಮಗಳನ್ನೂ ಸೇರಿಸಿಕೊಂಡು ಬೃಹತ್ ಮಂಡ್ಯ ನಿರ್ಮಿಸುವ ಪ್ರಸ್ತಾಪ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಈ ಬಜೆಟ್ನಲ್ಲಿ ಚಾಲನೆ ನೀಡಲಾಗುವುದು ಎಂದೇ ನಿರೀಕ್ಷಿಸ ಲಾಗಿತ್ತು.<br /> <br /> ಜಿಲ್ಲೆಯ ರೈತರ ಜೀವನಾಡಿಗಳಾದ ಮೈಷುಗರ್, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನಃಶ್ಚೇತನ ಬಗೆಗೆ ಪ್ರಸ್ತಾಪವಿಲ್ಲ. ಯಾವುದೇ ಆರ್ಥಿಕ ನೆರವನ್ನೂ ಘೋಷಿಸಿಲ್ಲ.<br /> <br /> ಮಂಡ್ಯದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಾಣದ ಪ್ರಸ್ತಾವನೆಯನ್ನೂ ನೀಡಲಾಗಿತ್ತು. ಅದರ ಬಗೆಗೂ ಪ್ರಸ್ತಾಪವಾಗಿಲ್ಲ.</p>.<p><strong>ಪ್ರತಿಕ್ರಿಯೆ</strong><br /> ಎಸ್. ನಂಜುಂಡಸ್ವಾಮಿ ಅವರ ಅಮೃತ ಭೂಮಿಗೆ ಐದು ಕೋಟಿ ನೀಡಿರುವುದು. ಒಂದು ರೂಪಾಯಿಗೆ ಅಕ್ಕಿ ಕೊಡತ್ತಿರುವುದು ಸ್ವಾಗತಾರ್ಹ. ರೈತರ ಬೆಳೆದೆ ಧಾನ್ಯಗಳ ಬೆಲೆ ನಿಗದಿಯ ಬಗೆಗೆ ಇನ್ನಷ್ಟು ಸ್ಪಷ್ಟ ನಿರ್ಧಾರ ಕೈಗೊಳ್ಳಬೆಕಿತ್ತು. ಸಕ್ಕರೆ ಕಾರ್ಖಾನೆಗಳ ಪುನಃಶ್ಚೇತನಕ್ಕೆ ಮುಂದಾಗದಿರುವುದು ಸರಿಯಲ್ಲ.<br /> ಕೋಣಸಾಲೆ ನರಸರಾಜು<br /> ಜಿಲ್ಲಾ ಘಟಕದ ಅಧ್ಯಕ್ಷ ರೈತ ಸಂಘ</p>.<p>ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಒತ್ತು ನೀಡಿರುವುದು ಸ್ವಾಗತಾರ್ಹ. ಮಹಿಳಾ ವಿಶ್ವವಿದ್ಯಾಲಯದ ಹೊರಾವರಣ ಕೇಂದ್ರ ತೆರೆಯುತ್ತಿರುವುದು ಸ್ವಾಗತಾರ್ಹ.<br /> ಮೀರಾ ಶಿವಲಿಂಗಯ್ಯ<br /> ಅಧ್ಯಕ್ಷೆ, ಕಸಾಪ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>