<p><strong>ಮಂಡ್ಯ: </strong>ಕನ್ನಡ ಸಾರಸ್ವತ ಲೋಕದ ಧ್ರುವತಾರೆಯಾಗಿ ಮೆರೆದ ಸಾಹಿತಿ ದಿ. ಸೀತಾಸುತ ಅವರ ಕೃತಿಗಳ ಬಗೆಗೆ ಗಂಭೀರ ವಿಮರ್ಶೆ ಆಗಬೇಕಿದೆ ಎಂದು ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ ಹೇಳಿದರು.<br /> <br /> ನಗರದ ಗಾಂಧಿ ಭವನದಲ್ಲಿ ಭಾನುವಾರ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ಸಾಹಿತಿ ಸೀತಾಸುತ ಅವರ 114ನೇ ಸಂಸ್ಮರಣೆ ಹಾಗೂ ಸೀತಾಸುತ ಮತ್ತು ಡಾ. ವಿ.ಟಿ.ಸುಶೀಲಾ ಜಯರಾಮ್ ಹೆಸರಿನಲ್ಲಿ ನೀಡುವ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಚಿಂತನಾಶೀಲರೂ, ಸಾಹಿತ್ಯ ಉಪಾಸಕರೂ ಆಗಿದ್ದ ಸೀತಾಸುತ ಅವರು, ಸಾಹಿತ್ಯ ಕ್ಷೇತ್ರದಲ್ಲಿ ನೆನಪಿನಲ್ಲಿ ಉಳಿಯುವಂತಹ ಸುಮಾರು 56 ಕೃತಿಗಳನ್ನು ರಚಿಸಿದ್ದಾರೆ. ಆದರೆ, ಈವರೆವಿಗೂ ಈ ಕೃತಿಗಳ ಚರ್ಚೆಯೇ ನಡೆದಿಲ್ಲ. ವಿಚಾರ ಸಂಕಿರಣದ ಮೂಲಕ ಈ ಕೃತಿಗಳ ಮೇಲೆ ಬೆಳಕು ಚೆಲ್ಲುವ ಕೆಲಸವಾಗಬೇಕಿದೆ ಎಂದರು.<br /> <br /> ಯುವಜನರಲ್ಲಿ ಸದ್ಬಾವನೆ ಬಿತ್ತುವ, ವ್ಯಕ್ತಿತ್ವ ರೂಪಿಸುವ ರೀತಿಯಲ್ಲಿರುವ ಸೀತಾಸುತ ಅವರ ಸಾಹಿತ್ಯವನ್ನು ರಾಷ್ಟ್ರಕವಿ ಕುವೆಂಪು ಅವರೇ ಮೆಚ್ಚಿದ್ದರು ಎಂಬುದು ಅಭಿಮಾನದ ಸಂಗತಿ ಎಂದು ಅಭಿಪ್ರಾಯಪಟ್ಟರು.<br /> <br /> ಈ ನೆಲ, ಜಲ, ಭಾಷೆಯ ಸಂರಕ್ಷಣೆ ಮತ್ತು ಸಂವರ್ಧನೆ ಮಾಡುವ ನಿಟ್ಟಿನಲ್ಲಿ ಯುವಜನರು ಕಂಕಣಬದ್ಧರಾಗಿ ಕೆಲಸ ಮಾಡಬೇಕಿದೆ. ಯುವಜನರಿಗೆ ಸೀತಾಸುತರ ಕೃತಿಗಳು ಮಾರ್ಗದರ್ಶಕ ನಂತೆ ಇವೆ ಎಂದು ಬಣ್ಣಿಸಿದರು.<br /> <br /> ವೀರಯೋಧ ಅಭಿಜಿತ್ ಭಂಡಾರಕರ್ (ಮರಣೋತ್ತರ) ಅವರ ಪರವಾಗಿ ಪತ್ನಿ ಶಕುಂತಳ ಭಂಡಾರಕರ್ ಅವರಿಗೆ `ಸೀತಾಸುತ ದೇಶಸೇವಾ ಪ್ರಶಸ್ತಿ~, ಸಾಹಿತಿ ನಾಗತಿಹಳ್ಳಿ ಚಂದ್ರ ಶೇಖರ್ ಅವರಿಗೆ `ಸೀತಾಸುತ ಸಾಹಿತ್ಯ ಸೇವಾ ಪ್ರಶಸ್ತಿ~ ಹಾಗೂ ಡಾ. ಬಿ.ಕೆ. ಸತ್ಯವತಿ ಅವರಿಗೆ ದಿ. ಡಾ .ವಿ.ಟಿ. ಸುಶೀಲಾ ಜಯರಾಮ್ `ವೈದ್ಯಕೀಯ ಸೇವಾ ಪ್ರಶಸ್ತಿ~ ಮತ್ತು ವಿದ್ಯಾರ್ಥಿನಿ ಎಂ.ಪುಷ್ಪಾಗೌಡ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.<br /> <br /> ಪ್ರಶಸ್ತಿ ಪುರಸ್ಕೃತರಿಗೆ ತಲಾ 15 ಸಾವಿರ ನಗದು, ಪ್ರಶಸ್ತಿಫಲಕ, ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.<br /> ವಿದ್ಯಾರ್ಥಿನಿಯರಾದ ಸಮೀಕ್ಷಾ ಮನುಕುಮಾರ್, ಸ್ವಾತಿ ಕಾಂತರಾಜ್ ಹಾಗೂ ಅನುಷಾ ಸತೀಶ್ ಅವರು ಪ್ರಸ್ತುತ ಪಡಿಸಿದ ನೃತ್ಯಗಳು ಗಮನ ಸೆಳೆದವು.<br /> <br /> ಟ್ರಸ್ಟ್ನ ಕೆ.ಎಸ್.ದೊರೆಸ್ವಾಮಿ, ಕೆ.ಎಸ್.ಜಯರಾಮ್, ಡಾ. ಕೆ.ಜೆ. ದಿನೇಶ್, ಡಾ. ಡಿ.ಉಷಾರಾಣಿ ಮತ್ತಿ ತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ: </strong>ಕನ್ನಡ ಸಾರಸ್ವತ ಲೋಕದ ಧ್ರುವತಾರೆಯಾಗಿ ಮೆರೆದ ಸಾಹಿತಿ ದಿ. ಸೀತಾಸುತ ಅವರ ಕೃತಿಗಳ ಬಗೆಗೆ ಗಂಭೀರ ವಿಮರ್ಶೆ ಆಗಬೇಕಿದೆ ಎಂದು ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ ಹೇಳಿದರು.<br /> <br /> ನಗರದ ಗಾಂಧಿ ಭವನದಲ್ಲಿ ಭಾನುವಾರ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ಸಾಹಿತಿ ಸೀತಾಸುತ ಅವರ 114ನೇ ಸಂಸ್ಮರಣೆ ಹಾಗೂ ಸೀತಾಸುತ ಮತ್ತು ಡಾ. ವಿ.ಟಿ.ಸುಶೀಲಾ ಜಯರಾಮ್ ಹೆಸರಿನಲ್ಲಿ ನೀಡುವ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಚಿಂತನಾಶೀಲರೂ, ಸಾಹಿತ್ಯ ಉಪಾಸಕರೂ ಆಗಿದ್ದ ಸೀತಾಸುತ ಅವರು, ಸಾಹಿತ್ಯ ಕ್ಷೇತ್ರದಲ್ಲಿ ನೆನಪಿನಲ್ಲಿ ಉಳಿಯುವಂತಹ ಸುಮಾರು 56 ಕೃತಿಗಳನ್ನು ರಚಿಸಿದ್ದಾರೆ. ಆದರೆ, ಈವರೆವಿಗೂ ಈ ಕೃತಿಗಳ ಚರ್ಚೆಯೇ ನಡೆದಿಲ್ಲ. ವಿಚಾರ ಸಂಕಿರಣದ ಮೂಲಕ ಈ ಕೃತಿಗಳ ಮೇಲೆ ಬೆಳಕು ಚೆಲ್ಲುವ ಕೆಲಸವಾಗಬೇಕಿದೆ ಎಂದರು.<br /> <br /> ಯುವಜನರಲ್ಲಿ ಸದ್ಬಾವನೆ ಬಿತ್ತುವ, ವ್ಯಕ್ತಿತ್ವ ರೂಪಿಸುವ ರೀತಿಯಲ್ಲಿರುವ ಸೀತಾಸುತ ಅವರ ಸಾಹಿತ್ಯವನ್ನು ರಾಷ್ಟ್ರಕವಿ ಕುವೆಂಪು ಅವರೇ ಮೆಚ್ಚಿದ್ದರು ಎಂಬುದು ಅಭಿಮಾನದ ಸಂಗತಿ ಎಂದು ಅಭಿಪ್ರಾಯಪಟ್ಟರು.<br /> <br /> ಈ ನೆಲ, ಜಲ, ಭಾಷೆಯ ಸಂರಕ್ಷಣೆ ಮತ್ತು ಸಂವರ್ಧನೆ ಮಾಡುವ ನಿಟ್ಟಿನಲ್ಲಿ ಯುವಜನರು ಕಂಕಣಬದ್ಧರಾಗಿ ಕೆಲಸ ಮಾಡಬೇಕಿದೆ. ಯುವಜನರಿಗೆ ಸೀತಾಸುತರ ಕೃತಿಗಳು ಮಾರ್ಗದರ್ಶಕ ನಂತೆ ಇವೆ ಎಂದು ಬಣ್ಣಿಸಿದರು.<br /> <br /> ವೀರಯೋಧ ಅಭಿಜಿತ್ ಭಂಡಾರಕರ್ (ಮರಣೋತ್ತರ) ಅವರ ಪರವಾಗಿ ಪತ್ನಿ ಶಕುಂತಳ ಭಂಡಾರಕರ್ ಅವರಿಗೆ `ಸೀತಾಸುತ ದೇಶಸೇವಾ ಪ್ರಶಸ್ತಿ~, ಸಾಹಿತಿ ನಾಗತಿಹಳ್ಳಿ ಚಂದ್ರ ಶೇಖರ್ ಅವರಿಗೆ `ಸೀತಾಸುತ ಸಾಹಿತ್ಯ ಸೇವಾ ಪ್ರಶಸ್ತಿ~ ಹಾಗೂ ಡಾ. ಬಿ.ಕೆ. ಸತ್ಯವತಿ ಅವರಿಗೆ ದಿ. ಡಾ .ವಿ.ಟಿ. ಸುಶೀಲಾ ಜಯರಾಮ್ `ವೈದ್ಯಕೀಯ ಸೇವಾ ಪ್ರಶಸ್ತಿ~ ಮತ್ತು ವಿದ್ಯಾರ್ಥಿನಿ ಎಂ.ಪುಷ್ಪಾಗೌಡ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.<br /> <br /> ಪ್ರಶಸ್ತಿ ಪುರಸ್ಕೃತರಿಗೆ ತಲಾ 15 ಸಾವಿರ ನಗದು, ಪ್ರಶಸ್ತಿಫಲಕ, ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.<br /> ವಿದ್ಯಾರ್ಥಿನಿಯರಾದ ಸಮೀಕ್ಷಾ ಮನುಕುಮಾರ್, ಸ್ವಾತಿ ಕಾಂತರಾಜ್ ಹಾಗೂ ಅನುಷಾ ಸತೀಶ್ ಅವರು ಪ್ರಸ್ತುತ ಪಡಿಸಿದ ನೃತ್ಯಗಳು ಗಮನ ಸೆಳೆದವು.<br /> <br /> ಟ್ರಸ್ಟ್ನ ಕೆ.ಎಸ್.ದೊರೆಸ್ವಾಮಿ, ಕೆ.ಎಸ್.ಜಯರಾಮ್, ಡಾ. ಕೆ.ಜೆ. ದಿನೇಶ್, ಡಾ. ಡಿ.ಉಷಾರಾಣಿ ಮತ್ತಿ ತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>