<p>ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ: ಶುಕ್ರವಾರ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರಿಂದ ಗಾಯಕ ಡಾ. ಶಿವಮೊಗ್ಗ ಸುಬ್ಬಣ್ಣ ಅವರಿಗೆ `ಕುವೆಂಪು ಸಿರಿಗನ್ನಡ~ ಪ್ರಶಸ್ತಿ ಪ್ರದಾನ. <br /> <br /> ಅಧ್ಯಕ್ಷತೆ: ಪ್ರೊ.ಎಂ.ಆರ್.ದೊರೆಸ್ವಾಮಿ. ಅತಿಥಿ: ಜಾನಪದ ವಿದ್ವಾಂಸ ಡಾ.ಚಕ್ಕೆರೆ ಶಿವಶಂಕರ್. ಶಿವಮೊಗ್ಗ ಸುಬ್ಬಣ್ಣ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನವರು. <br /> <br /> ವೃತ್ತಿಯಿಂದ ವಕೀಲರಾದರೂ ಸುಗಮ ಸಂಗೀತವನ್ನು ಸಾಧನೆಯ ಕ್ಷೇತ್ರವಾಗಿಸಿಕೊಂಡು ಹೆಸರು ಮಾಡಿದವರು. ಕುವೆಂಪು ಗೀತೆಗಳ ಗಾಯನ ಸಂದರ್ಭದಲ್ಲಿ ಕಾಣುವ ಅವರ ತನ್ಮಯತೆ ಕುವೆಂಪು ಹೇಳುವ `ಭಾವಸಮಾಧಿಯೊಳಾನಂದದವ ಹೀರಿ~ ಎನ್ನುವ ಮಾತನ್ನು ನೆನಪಿಸುತ್ತದೆ. <br /> <br /> ಸುಗಮ ಸಂಗೀತ ಕ್ಷೇತ್ರದ ಸಾಧನೆಗಾಗಿ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಸುಬ್ಬಣ್ಣ ಕರ್ನಾಟಕ ಸರ್ಕಾರದ `ಸಂತ ಶಿಶುನಾಳ ಪ್ರಶಸ್ತಿ~ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ `ಕರ್ನಾಟಕ ಕಲಾತಿಲಕ~ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.<br /> <br /> ಚಂದ್ರಶೇಖರ ಕಂಬಾರರ `ಕಾಡುಕುದುರೆ~ ಚಿತ್ರದ `ಕಾಡುಕುದರಿ ಓಡಿಬಂದಿತ್ತ~ ಹಾಡಿನ ಗಾಯನಕ್ಕಾಗಿ ಅಖಿಲ ಭಾರತ ಮಟ್ಟದ ಶ್ರೇಷ್ಠ ಗಾಯಕ ಪ್ರಶಸ್ತಿ ಪಡೆದಿದ್ದಾರೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ: ಶುಕ್ರವಾರ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರಿಂದ ಗಾಯಕ ಡಾ. ಶಿವಮೊಗ್ಗ ಸುಬ್ಬಣ್ಣ ಅವರಿಗೆ `ಕುವೆಂಪು ಸಿರಿಗನ್ನಡ~ ಪ್ರಶಸ್ತಿ ಪ್ರದಾನ. <br /> <br /> ಅಧ್ಯಕ್ಷತೆ: ಪ್ರೊ.ಎಂ.ಆರ್.ದೊರೆಸ್ವಾಮಿ. ಅತಿಥಿ: ಜಾನಪದ ವಿದ್ವಾಂಸ ಡಾ.ಚಕ್ಕೆರೆ ಶಿವಶಂಕರ್. ಶಿವಮೊಗ್ಗ ಸುಬ್ಬಣ್ಣ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನವರು. <br /> <br /> ವೃತ್ತಿಯಿಂದ ವಕೀಲರಾದರೂ ಸುಗಮ ಸಂಗೀತವನ್ನು ಸಾಧನೆಯ ಕ್ಷೇತ್ರವಾಗಿಸಿಕೊಂಡು ಹೆಸರು ಮಾಡಿದವರು. ಕುವೆಂಪು ಗೀತೆಗಳ ಗಾಯನ ಸಂದರ್ಭದಲ್ಲಿ ಕಾಣುವ ಅವರ ತನ್ಮಯತೆ ಕುವೆಂಪು ಹೇಳುವ `ಭಾವಸಮಾಧಿಯೊಳಾನಂದದವ ಹೀರಿ~ ಎನ್ನುವ ಮಾತನ್ನು ನೆನಪಿಸುತ್ತದೆ. <br /> <br /> ಸುಗಮ ಸಂಗೀತ ಕ್ಷೇತ್ರದ ಸಾಧನೆಗಾಗಿ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಸುಬ್ಬಣ್ಣ ಕರ್ನಾಟಕ ಸರ್ಕಾರದ `ಸಂತ ಶಿಶುನಾಳ ಪ್ರಶಸ್ತಿ~ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ `ಕರ್ನಾಟಕ ಕಲಾತಿಲಕ~ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.<br /> <br /> ಚಂದ್ರಶೇಖರ ಕಂಬಾರರ `ಕಾಡುಕುದುರೆ~ ಚಿತ್ರದ `ಕಾಡುಕುದರಿ ಓಡಿಬಂದಿತ್ತ~ ಹಾಡಿನ ಗಾಯನಕ್ಕಾಗಿ ಅಖಿಲ ಭಾರತ ಮಟ್ಟದ ಶ್ರೇಷ್ಠ ಗಾಯಕ ಪ್ರಶಸ್ತಿ ಪಡೆದಿದ್ದಾರೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>