<p><strong>ಶಹಾಬಾದ:</strong> ಸುರಕ್ಷತಾ ಉಪಕರಣ ಕಡ್ಡಾಯವಾಗಿ ಬಳಸುವುದರ ಜೊತೆಗೆ ನಿಯಮಗಳ ಸೂಕ್ತ ಪಾಲನೆ ಹಾಗೂ ಅನುಷ್ಠಾನ ಅಗತ್ಯ. ಸುರಕ್ಷತೆ ಕೇವಲ ಒಂದು ದಿನದ ಆಚರಣೆಯಾಗದೆ ನಿರಂತರ ಬದುಕಿನ ಭಾಗವಾಗಬೇಕು ಎಂದು ಕರ್ನಾಟಕ ಸರ್ಕಾರದ ಕಾರ್ಖಾನೆಗಳ ಸಹಾಯಕ ನಿರ್ದೇಶಕ ವೆಂಕಟೇಶ ರಾಥೋಡ ಒತ್ತಿ ಹೇಳಿದರು. <br /> <br /> ಅಲ್ಸ್ಟಾಂ ಪ್ರಾಜೆಕ್ಟ್ ಇಂಡಿಯಾ ಲಿಮಿಟೆಡ್ ಕಾರ್ಖಾನೆಯ `ರಂಗಮಂದಿರ~ದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡ 41 ನೆ ರಾಷ್ಟ್ರೀಯ ಸುರಕ್ಷತಾ ದಿನದ ಸಮಾರೋಪ ಸಮಾರಂಭದಲ್ಲಿ ಸುರಕ್ಷತಾ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.<br /> <br /> ಅಲ್ಸ್ಟಾಂ ಕಾರ್ಖಾನೆ ನಿರ್ದೇಶಕ ರಾಜೀವ ಘೋಷ್, ಸುರಕ್ಷತಾ ಸಮಿತಿ ಅಧ್ಯಕ್ಷ ಎಸ್.ಆರ್. ಗುರಾಗೋಳ, ಸದಸ್ಯ ಎಂ.ಎಸ್.ಪದ್ಮಾಜಿ ಮಾತನಾಡಿದರು. ಮಾನವ ಸಂಪನ್ಮೂಲ ಇಲಾಖೆ ಮುಖ್ಯಸ್ಥ ವಿ.ಸುರೇಶ, ಇಎಚ್ಎಸ್ ಮುಖ್ಯಸ್ಥ ಸುಧೀರ ಹೂಲಿ, ಸುರಕ್ಷತಾ ಅಧಿಕಾರಿ ಸಿಂಹಾಚಲ, ಎ.ಸುರೇಶ ಉಪಸ್ಥಿತರಿದ್ದರು.<br /> <br /> ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಉದ್ಯೋಗಿಗಳಿಗೆ ಬಹುಮಾನ ವಿತರಿಸಲಾಯಿತು. ನಾಟ್ಯ ನಿಕೇತನ ನೃತ್ಯ ಕೇಂದ್ರದ ಮಕ್ಕಳು ಸುನೀತಾ ಗಣೇಶ ನಿರ್ದೇಶನದ ಸುರಕ್ಷತಾ ನೃತ್ಯ ರೂಪಕಗಳನ್ನು ಹಾಗೂ ಸುಧಾಕರ, ಅಲೆಕ್ಸ್ ಹಾಗೂ ಅಲ್ವಿಸ್ ಸುರಕ್ಷತಾ ಗೀತೆಗಳನ್ನು ಪ್ರಸ್ತುತ ಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಬಾದ:</strong> ಸುರಕ್ಷತಾ ಉಪಕರಣ ಕಡ್ಡಾಯವಾಗಿ ಬಳಸುವುದರ ಜೊತೆಗೆ ನಿಯಮಗಳ ಸೂಕ್ತ ಪಾಲನೆ ಹಾಗೂ ಅನುಷ್ಠಾನ ಅಗತ್ಯ. ಸುರಕ್ಷತೆ ಕೇವಲ ಒಂದು ದಿನದ ಆಚರಣೆಯಾಗದೆ ನಿರಂತರ ಬದುಕಿನ ಭಾಗವಾಗಬೇಕು ಎಂದು ಕರ್ನಾಟಕ ಸರ್ಕಾರದ ಕಾರ್ಖಾನೆಗಳ ಸಹಾಯಕ ನಿರ್ದೇಶಕ ವೆಂಕಟೇಶ ರಾಥೋಡ ಒತ್ತಿ ಹೇಳಿದರು. <br /> <br /> ಅಲ್ಸ್ಟಾಂ ಪ್ರಾಜೆಕ್ಟ್ ಇಂಡಿಯಾ ಲಿಮಿಟೆಡ್ ಕಾರ್ಖಾನೆಯ `ರಂಗಮಂದಿರ~ದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡ 41 ನೆ ರಾಷ್ಟ್ರೀಯ ಸುರಕ್ಷತಾ ದಿನದ ಸಮಾರೋಪ ಸಮಾರಂಭದಲ್ಲಿ ಸುರಕ್ಷತಾ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.<br /> <br /> ಅಲ್ಸ್ಟಾಂ ಕಾರ್ಖಾನೆ ನಿರ್ದೇಶಕ ರಾಜೀವ ಘೋಷ್, ಸುರಕ್ಷತಾ ಸಮಿತಿ ಅಧ್ಯಕ್ಷ ಎಸ್.ಆರ್. ಗುರಾಗೋಳ, ಸದಸ್ಯ ಎಂ.ಎಸ್.ಪದ್ಮಾಜಿ ಮಾತನಾಡಿದರು. ಮಾನವ ಸಂಪನ್ಮೂಲ ಇಲಾಖೆ ಮುಖ್ಯಸ್ಥ ವಿ.ಸುರೇಶ, ಇಎಚ್ಎಸ್ ಮುಖ್ಯಸ್ಥ ಸುಧೀರ ಹೂಲಿ, ಸುರಕ್ಷತಾ ಅಧಿಕಾರಿ ಸಿಂಹಾಚಲ, ಎ.ಸುರೇಶ ಉಪಸ್ಥಿತರಿದ್ದರು.<br /> <br /> ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಉದ್ಯೋಗಿಗಳಿಗೆ ಬಹುಮಾನ ವಿತರಿಸಲಾಯಿತು. ನಾಟ್ಯ ನಿಕೇತನ ನೃತ್ಯ ಕೇಂದ್ರದ ಮಕ್ಕಳು ಸುನೀತಾ ಗಣೇಶ ನಿರ್ದೇಶನದ ಸುರಕ್ಷತಾ ನೃತ್ಯ ರೂಪಕಗಳನ್ನು ಹಾಗೂ ಸುಧಾಕರ, ಅಲೆಕ್ಸ್ ಹಾಗೂ ಅಲ್ವಿಸ್ ಸುರಕ್ಷತಾ ಗೀತೆಗಳನ್ನು ಪ್ರಸ್ತುತ ಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>