<p><strong>ಹುಬ್ಬಳ್ಳಿ:</strong> ಮಹಾನಗರಪಾಲಿಕೆಯ 47ನೇ ವಾರ್ಡಿಗೆ ನಡೆಯಲಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕಡೆಯ ದಿನವಾಗಿದ್ದು, ಬಿಜೆಪಿಯಿಂದ ಸುವರ್ಣಾ ಜಾಧವ, ಕಾಂಗ್ರೆಸ್ನಿಂದ ಲಾಯ್ಡ ಡೊಮೆನಿಕ್ ಆಂಟೊನಿಯಾ ಹಾಗೂ ಜೆಡಿಎಸ್ನಿಂದ ಫತೇಶ್ ಯರಗಟ್ಟಿ ನಾಮಪತ್ರ ಸಲ್ಲಿಸಲಿದ್ದಾರೆ.</p>.<p>ಬಿಜೆಪಿ ಅಭ್ಯರ್ಥಿಯ ಅವಿರೋಧ ಆಯ್ಕೆಗೆ ಸಹಕರಿಸುವಂತೆ ಕೋರಿ ಪಕ್ಷದ ಮುಖಂಡರು ಉಳಿದ ಪಕ್ಷಗಳಿಗೆ ಮನವಿ ಮಾಡಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ನ ಮುಂದಿನ ನಡೆ ಕುತೂಹಲ ಕೆರಳಿಸಿದೆ.</p>.<p>ಜೆಡಿಎಸ್ ಅಭ್ಯರ್ಥಿಯಾಗಿ ಫತೇಶ್ ಆಯ್ಕೆ: 47ನೇ ವಾರ್ಡಿನ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಫತೇಶ್ ಯರಗಟ್ಟಿ ಸ್ಪರ್ಧಿಸಲಿದ್ದಾರೆ.</p>.<p>ಭಾನುವಾರ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಫತೇಶ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ಈ ಹಿಂದೆ ಪಕ್ಷದ ಯುವ ಘಟಕದ ಜಿಲ್ಲಾ ಅಧ್ಯಕ್ಷರಾಗಿ ದುಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ನೀಡಲು ಸಭೆ ತೀರ್ಮಾನಿಸಿತು. ಪಕ್ಷದ ಮುಖಂಡರಾದ ಬಸವರಾಜ ಹೊರಟ್ಟಿ, ಆಲ್ಕೋಡು ಹನುಮಂತಪ್ಪ ಇತರರು ಈ ಸಂದರ್ಭ ಹಾಜರಿದ್ದರು.</p>.<p>ಫತೇಶ್ ಜೊತೆಗೆ ದಿವಂಗತ ಫಿರ್ದೋಸ್ ಕೊಣ್ಣೂರ ಅವರ ಪತ್ನಿ ಹಾಗೂ ಫಿರ್ದೋಸ್ ಸಹೋದರ ಪರ್ವೇಜ್ ಹೆಸರುಗಳು ಟಿಕೆಟ್ ಆಕಾಂಕ್ಷಿತರ ಪಟ್ಟಿಯಲ್ಲಿ ಕೇಳಿಬಂದಿದ್ದವು.</p>.<p><strong>ಬಿಜೆಪಿಯಿಂದ ಮತ್ತೊಮ್ಮೆ ಮನವಿ: </strong>ಉಪ ಚುನಾವಣೆಯಲ್ಲಿ ಸುವರ್ಣಾ ಜಾಧವ ಅವರನ್ನು ಬೆಂಬಲಿಸುವಂತೆ ಕೋರಿ ಬಿಜೆಪಿ ಜಿಲ್ಲಾ (ಮಹಾನಗರ) ಘಟಕದ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಭಾನುವಾರ ಮತ್ತೊಮ್ಮೆ ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾದಳ ಮುಖಂಡರಲ್ಲಿ ಮನವಿ ಮಾಡಿದರು.</p>.<p>`ಕಳೆದ ವರ್ಷ ಅಂಚಟಗೇರಿ ಉಪಚುನಾವಣೆ ಸಂದರ್ಭ ಬಿಜೆಪಿ ಮಾನವೀಯ ದೃಷ್ಟಿಯಿಂದ ಕಾಂಗ್ರೆಸ್ಗೆ ಅವಕಾಶ ಬಿಟ್ಟುಕೊಟ್ಟಿತ್ತು. ಜಾಧವ ಅವರ ಪ್ರಕರಣ ಕೂಡ ಅದೇ ರೀತಿಯದ್ದಾಗಿದ್ದು, ಇಲ್ಲಿ ಪಕ್ಷ ಭೇದ ಮರೆತು ಮಾನವೀಯ ದೃಷ್ಟಿಯಿಂದ ವರ್ತಿಸಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷದ ಮುಖಂಡರಿಗೂ ಮತ್ತೊಮ್ಮೆ ಮನವಿ ಮಾಡಿದ್ದು, ಬೆಂಬಲ ಸಿಗುವ ಭರವಸೆ ಇದೆ~ ಎಂದು ಟೆಂಗಿನಕಾಯಿ ತಿಳಿಸಿದರು.</p>.<p><strong>ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಿಸಿದರೆ ಬೆಂಬಲ: ಜೆಡಿಎಸ್</strong></p>.<p>`ಸುವರ್ಣಾ ಅವರು ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿದಲ್ಲಿ ಮಾತ್ರ ಈ ಕುರಿತು ಪರಿಶೀಲಿಸಲಾಗುವುದು~ ಎಂದು ಜೆಡಿಎಸ್ ಮುಖಂಡರು ತಿಳಿಸಿದ್ದಾರೆ.</p>.<p>ಈ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಜೆಡಿಎಸ್ ಜಿಲ್ಲಾ (ನಗರ) ಘಟಕದ ಅಧ್ಯಕ್ಷ ರಾಜಣ್ಣ ಕೊರವಿ `ಸುವರ್ಣಾ ಅವರನ್ನು ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿರುವುದರಿಂದ ನಾವು ಪಕ್ಷದ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸುತ್ತಿದ್ದೇವೆ. ಒಂದು ವೇಳೆ ಸುವರ್ಣಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದಲ್ಲಿ ಅವರನ್ನು ಬೆಂಬಲಿಸಲು ಪರಿಶೀಲಿಸಲಾಗುವುದು~ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಮಹಾನಗರಪಾಲಿಕೆಯ 47ನೇ ವಾರ್ಡಿಗೆ ನಡೆಯಲಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕಡೆಯ ದಿನವಾಗಿದ್ದು, ಬಿಜೆಪಿಯಿಂದ ಸುವರ್ಣಾ ಜಾಧವ, ಕಾಂಗ್ರೆಸ್ನಿಂದ ಲಾಯ್ಡ ಡೊಮೆನಿಕ್ ಆಂಟೊನಿಯಾ ಹಾಗೂ ಜೆಡಿಎಸ್ನಿಂದ ಫತೇಶ್ ಯರಗಟ್ಟಿ ನಾಮಪತ್ರ ಸಲ್ಲಿಸಲಿದ್ದಾರೆ.</p>.<p>ಬಿಜೆಪಿ ಅಭ್ಯರ್ಥಿಯ ಅವಿರೋಧ ಆಯ್ಕೆಗೆ ಸಹಕರಿಸುವಂತೆ ಕೋರಿ ಪಕ್ಷದ ಮುಖಂಡರು ಉಳಿದ ಪಕ್ಷಗಳಿಗೆ ಮನವಿ ಮಾಡಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ನ ಮುಂದಿನ ನಡೆ ಕುತೂಹಲ ಕೆರಳಿಸಿದೆ.</p>.<p>ಜೆಡಿಎಸ್ ಅಭ್ಯರ್ಥಿಯಾಗಿ ಫತೇಶ್ ಆಯ್ಕೆ: 47ನೇ ವಾರ್ಡಿನ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಫತೇಶ್ ಯರಗಟ್ಟಿ ಸ್ಪರ್ಧಿಸಲಿದ್ದಾರೆ.</p>.<p>ಭಾನುವಾರ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಫತೇಶ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ಈ ಹಿಂದೆ ಪಕ್ಷದ ಯುವ ಘಟಕದ ಜಿಲ್ಲಾ ಅಧ್ಯಕ್ಷರಾಗಿ ದುಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ನೀಡಲು ಸಭೆ ತೀರ್ಮಾನಿಸಿತು. ಪಕ್ಷದ ಮುಖಂಡರಾದ ಬಸವರಾಜ ಹೊರಟ್ಟಿ, ಆಲ್ಕೋಡು ಹನುಮಂತಪ್ಪ ಇತರರು ಈ ಸಂದರ್ಭ ಹಾಜರಿದ್ದರು.</p>.<p>ಫತೇಶ್ ಜೊತೆಗೆ ದಿವಂಗತ ಫಿರ್ದೋಸ್ ಕೊಣ್ಣೂರ ಅವರ ಪತ್ನಿ ಹಾಗೂ ಫಿರ್ದೋಸ್ ಸಹೋದರ ಪರ್ವೇಜ್ ಹೆಸರುಗಳು ಟಿಕೆಟ್ ಆಕಾಂಕ್ಷಿತರ ಪಟ್ಟಿಯಲ್ಲಿ ಕೇಳಿಬಂದಿದ್ದವು.</p>.<p><strong>ಬಿಜೆಪಿಯಿಂದ ಮತ್ತೊಮ್ಮೆ ಮನವಿ: </strong>ಉಪ ಚುನಾವಣೆಯಲ್ಲಿ ಸುವರ್ಣಾ ಜಾಧವ ಅವರನ್ನು ಬೆಂಬಲಿಸುವಂತೆ ಕೋರಿ ಬಿಜೆಪಿ ಜಿಲ್ಲಾ (ಮಹಾನಗರ) ಘಟಕದ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಭಾನುವಾರ ಮತ್ತೊಮ್ಮೆ ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾದಳ ಮುಖಂಡರಲ್ಲಿ ಮನವಿ ಮಾಡಿದರು.</p>.<p>`ಕಳೆದ ವರ್ಷ ಅಂಚಟಗೇರಿ ಉಪಚುನಾವಣೆ ಸಂದರ್ಭ ಬಿಜೆಪಿ ಮಾನವೀಯ ದೃಷ್ಟಿಯಿಂದ ಕಾಂಗ್ರೆಸ್ಗೆ ಅವಕಾಶ ಬಿಟ್ಟುಕೊಟ್ಟಿತ್ತು. ಜಾಧವ ಅವರ ಪ್ರಕರಣ ಕೂಡ ಅದೇ ರೀತಿಯದ್ದಾಗಿದ್ದು, ಇಲ್ಲಿ ಪಕ್ಷ ಭೇದ ಮರೆತು ಮಾನವೀಯ ದೃಷ್ಟಿಯಿಂದ ವರ್ತಿಸಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷದ ಮುಖಂಡರಿಗೂ ಮತ್ತೊಮ್ಮೆ ಮನವಿ ಮಾಡಿದ್ದು, ಬೆಂಬಲ ಸಿಗುವ ಭರವಸೆ ಇದೆ~ ಎಂದು ಟೆಂಗಿನಕಾಯಿ ತಿಳಿಸಿದರು.</p>.<p><strong>ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಿಸಿದರೆ ಬೆಂಬಲ: ಜೆಡಿಎಸ್</strong></p>.<p>`ಸುವರ್ಣಾ ಅವರು ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿದಲ್ಲಿ ಮಾತ್ರ ಈ ಕುರಿತು ಪರಿಶೀಲಿಸಲಾಗುವುದು~ ಎಂದು ಜೆಡಿಎಸ್ ಮುಖಂಡರು ತಿಳಿಸಿದ್ದಾರೆ.</p>.<p>ಈ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಜೆಡಿಎಸ್ ಜಿಲ್ಲಾ (ನಗರ) ಘಟಕದ ಅಧ್ಯಕ್ಷ ರಾಜಣ್ಣ ಕೊರವಿ `ಸುವರ್ಣಾ ಅವರನ್ನು ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿರುವುದರಿಂದ ನಾವು ಪಕ್ಷದ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸುತ್ತಿದ್ದೇವೆ. ಒಂದು ವೇಳೆ ಸುವರ್ಣಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದಲ್ಲಿ ಅವರನ್ನು ಬೆಂಬಲಿಸಲು ಪರಿಶೀಲಿಸಲಾಗುವುದು~ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>