<p><strong>ನವದೆಹಲಿ (ಪಿಟಿಐ): </strong>ಭಾರತೀಯ ಸೇನೆಯ ಎರಡು ಮುಂಚೂಣಿ ತುಕಡಿಗಳು ಜ.16-17ರ ನಡುವಿನ ರಾತ್ರಿ ನಡೆಸಿದ ತಾಲೀಮು ಚರ್ಚೆಗೆ ಗ್ರಾಸವಾಗುವ ಸುದ್ದಿಯಾಗುತ್ತದೆಂಬ ಅನುಮಾನ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಅವರಿಗೆ ಮುಂಚೆಯೇ ಇತ್ತು ಎಂಬುದು ಅವರು ಮಾರ್ಚ್ ಮಧ್ಯಬಾಗದಲ್ಲಿ ಇಂಗ್ಲಿಷ್ ನಿಯತಕಾಲಿಕಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ ಕಂಡುಬಂದಿದೆ.<br /> <br /> `ನಮ್ಮ ಸೇನಾ ಪಡೆಗಳು ಏನೇ ತಾಲೀಮು ನಡೆಸಿದರೂ ಈಗ ಅದನ್ನು ದೊಡ್ಡ ಸುದ್ದಿ ಮಾಡುವವರು ಇದ್ದಾರೆ. ತಾಲೀಮನ್ನಲ್ಲದೇ ಬೇರೆ ಏನಾದರೂ ಪೂರ್ವಸನ್ನದ್ಧತೆಯಲ್ಲಿ ತೊಡಗಿದರೂ ಅದನ್ನು ತಾಲೀಮು ಎಂದೇ ಬಿಂಬಿಸುವವರು ಇದ್ದಾರೆ. <br /> <br /> ತಮ್ಮದೇ ದುರುದ್ದೇಶಗಳನ್ನು ಸಾಧಿಸಿಕೊಳ್ಳಲು ಈಗ ಸುದ್ದಿ ಮಾಡುವವರು ಅಧಿಕವಾಗುತ್ತಿದ್ದಾರೆ~ ಎಂದು ವಿಕೆ ಸಿಂಗ್ ಅವರು ಮಾರ್ಚ್ 13ರಂದು ನಿಯತಕಾಲಿಕಕ್ಕೆ ನೀಡಿದ್ದ ಸಂದರ್ಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.<br /> ಪತ್ರಕರ್ತರಿಗೆ ಏನಾದರೂ ರೋಚಕವಾಗಿದ್ದನ್ನು ಹೇಳಿ ನೋಡಿ. ಅದು ಮುಖಪುಟದಲ್ಲಿ ಪ್ರಕಟವಾಗುತ್ತದೆ.<br /> <br /> ಅದರಲ್ಲಿ ಸತ್ಯಾಂಶವಿದೆಯೇ ಎಂದು ಯಾರೂ ಯೋಚಿಸುವ ಗೋಜಿಗೆ ಹೋಗುವುದಿಲ್ಲ. <br /> ಆದರೆ ಅಂತಹ ಸುದ್ದಿ ಯಾರಾದರೊಬ್ಬರನ್ನು ಕಷ್ಟಕ್ಕೆ ಸಿಲುಕಿಸಿರುತ್ತದೆ ಎಂದೂ ಸಿಂಗ್ ಸಂದರ್ಶನದಲ್ಲಿ ಹೇಳಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಭಾರತೀಯ ಸೇನೆಯ ಎರಡು ಮುಂಚೂಣಿ ತುಕಡಿಗಳು ಜ.16-17ರ ನಡುವಿನ ರಾತ್ರಿ ನಡೆಸಿದ ತಾಲೀಮು ಚರ್ಚೆಗೆ ಗ್ರಾಸವಾಗುವ ಸುದ್ದಿಯಾಗುತ್ತದೆಂಬ ಅನುಮಾನ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಅವರಿಗೆ ಮುಂಚೆಯೇ ಇತ್ತು ಎಂಬುದು ಅವರು ಮಾರ್ಚ್ ಮಧ್ಯಬಾಗದಲ್ಲಿ ಇಂಗ್ಲಿಷ್ ನಿಯತಕಾಲಿಕಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ ಕಂಡುಬಂದಿದೆ.<br /> <br /> `ನಮ್ಮ ಸೇನಾ ಪಡೆಗಳು ಏನೇ ತಾಲೀಮು ನಡೆಸಿದರೂ ಈಗ ಅದನ್ನು ದೊಡ್ಡ ಸುದ್ದಿ ಮಾಡುವವರು ಇದ್ದಾರೆ. ತಾಲೀಮನ್ನಲ್ಲದೇ ಬೇರೆ ಏನಾದರೂ ಪೂರ್ವಸನ್ನದ್ಧತೆಯಲ್ಲಿ ತೊಡಗಿದರೂ ಅದನ್ನು ತಾಲೀಮು ಎಂದೇ ಬಿಂಬಿಸುವವರು ಇದ್ದಾರೆ. <br /> <br /> ತಮ್ಮದೇ ದುರುದ್ದೇಶಗಳನ್ನು ಸಾಧಿಸಿಕೊಳ್ಳಲು ಈಗ ಸುದ್ದಿ ಮಾಡುವವರು ಅಧಿಕವಾಗುತ್ತಿದ್ದಾರೆ~ ಎಂದು ವಿಕೆ ಸಿಂಗ್ ಅವರು ಮಾರ್ಚ್ 13ರಂದು ನಿಯತಕಾಲಿಕಕ್ಕೆ ನೀಡಿದ್ದ ಸಂದರ್ಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.<br /> ಪತ್ರಕರ್ತರಿಗೆ ಏನಾದರೂ ರೋಚಕವಾಗಿದ್ದನ್ನು ಹೇಳಿ ನೋಡಿ. ಅದು ಮುಖಪುಟದಲ್ಲಿ ಪ್ರಕಟವಾಗುತ್ತದೆ.<br /> <br /> ಅದರಲ್ಲಿ ಸತ್ಯಾಂಶವಿದೆಯೇ ಎಂದು ಯಾರೂ ಯೋಚಿಸುವ ಗೋಜಿಗೆ ಹೋಗುವುದಿಲ್ಲ. <br /> ಆದರೆ ಅಂತಹ ಸುದ್ದಿ ಯಾರಾದರೊಬ್ಬರನ್ನು ಕಷ್ಟಕ್ಕೆ ಸಿಲುಕಿಸಿರುತ್ತದೆ ಎಂದೂ ಸಿಂಗ್ ಸಂದರ್ಶನದಲ್ಲಿ ಹೇಳಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>